ನಿನ್ನ ನೆನಪಿನ ಸೆರಗು ಹಿಡಿಯಲೇ?


Team Udayavani, Oct 17, 2017, 8:15 AM IST

17-7.jpg

ನಿನ್ನೊಂದಿಗೆ ಕಳೆದ ಸವಿ ಘಳಿಗೆಯ ಸಿಹಿ ನೆನಪುಗಳನ್ನು ಹಿಡಿದು ಕಟ್ಟಿ ಹಾಕಬೇಕೆಂದರೂ ಆಗುತ್ತಿಲ್ಲ. ಸೆರೆ ಹಿಡಿದು ಸುಟ್ಟು ಹಾಕಬೇಕೆಂದರೆ ಸಿಗುತ್ತಿಲ್ಲ. ನಿನ್ನ ಮರೆತು ಬಾಳುವ ಶಕ್ತಿಯೂ ನನಗಿಲ್ಲ…

ನನ್ನೆದೆಯ ಗೂಡಿನಲ್ಲಿ ಕಡ್ಡಿ ಕಡ್ಡಿ ಕೂಡಿಸಿ, ಗೂಡು ಕಟ್ಟಿ, ಬೀಡು ಬಿಟ್ಟ ಪುಟ್ಟ ಹಕ್ಕಿಯೇ, ನಿನ್ನ ಚಿಲಿಪಿಲಿಯ ಗಾನವು ಸಾವಿರ ವೀಣೆಯ ಗಾನ ಮಾಧುರ್ಯದಂತೆ. ಬರಡಾದ ಬಾಳಲ್ಲಿ ಸದ್ದಿಲ್ಲದೆ ಬಂದು ಪ್ರೀತಿಯ ಸಿರಿ ಬಿತ್ತಿ ಬೆಳೆದವಳೇ, ನಿನ್ನ ಪರಿಚಯವೇ ನನಗೊಂದು ಆಕಸ್ಮಿಕ. ಪರಿಚಯ ಸ್ನೇಹವಾಗಿ, ಸ್ನೇಹವೇ ಪ್ರೀತಿಯತ್ತ ವಾಲಿತು ಅಲ್ವಾ? ರೋಜಾ ಹೂವಿನೊಂದಿಗೆ ಸ್ಪರ್ಧಿಸುವ ಆ ನಿನ್ನ ಮೈ ಕಾಂತಿ, ಕಂಡೂ ಕಾಣದಂತಿದ್ದು ನಿನ್ನ ಚೆಲುವು ಹೆಚ್ಚಿಸುವ ಆ ನಿನ್ನ ಬಿಂದಿ, ಹೊಳೆಯುವ ಆ ನಿನ್ನ ಕಪ್ಪು ಹುಬ್ಬು, ಮಗುವಿನ ಆ ನಿನ್ನ ಕಿಲಕಿಲ ನಗು, ರಸಗುಲ್ಲದಂಥ ಆ ನಿನ್ನ ಗಲ್ಲ, ಬಂಗಾರದ ಬಣ್ಣದ ಆ ನೀಳ ಕೇಶರಾಶಿ… ಹೀಗೆ ನೀನು ಎಲ್ಲದರಲ್ಲಿಯೂ ಪದಗಳಿಗೂ ಸಿಗದ ಚೆಂದದ ಚೆಲುವಿನ ತಾರೆ.

  ನಿನ್ನ ರೂಪವೇ ಲಲಿತವಾದದ್ದು. ನಿನ್ನ ರೂಪಕ್ಕೆ ಮರುಳಾಗಿ ಲೆಕ್ಕವಿಲ್ಲದಷ್ಟು ಲವ್‌ ಅಪ್ಲಿಕೇಷನ್‌ಗಳು ಬಂದರೂ ಅವುಗಳನ್ನು ತಿರಸ್ಕರಿಸಿ ನನ್ನನ್ನು ಪ್ರೀತಿಸಿದೆ. ರೂಪಕ್ಕೆ ಮರುಳಾಗಿ ಪ್ರೀತಿಸಿದವ ನಾನಲ್ಲ. ಇಷ್ಟಪಟ್ಟಿರುವುದನ್ನು ಎಷ್ಟೇ ಕಷ್ಟವಾದರೂ ಪಡೆದೇ ತೀರಬೇಕೆನ್ನುವ ಹುಂಬತನದೊಳಗೆ ಪಡೆದುಕೊಂಡುದಕ್ಕಿಂತ ಕಳೆದುಕೊಂಡುದರ ಪಟ್ಟಿಯೇ ಉದ್ದವಿದೆ.

  ಆದರೂ ನಮ್ಮಿಬ್ಬರ ಪ್ರೀತಿ ಚಂದ್ರನ ಚೆಲುವಿನಂತೆ. ಚಿಪ್ಪಿನೊಳಗಿನ ಮುತ್ತಿನಂತೆ. ನಿನ್ನಾತ್ಮದ ಕುಲುಮೆಯಲಿ ಕರಗಿ ನಿನ್ನೊಲವಿನ ಬಲೆಯೊಳಗೆ ಬಂಧಿಯಾಗಿರುವೆ. ನೀರಿನ ಒಂದೊಂದು ಅಲೆಯೂ, ಮಿನುಗುವ ಒಂದೊಂದು ತಾರೆಯೂ, ಗುಂಯುಡುವ ಒಂದೊಂದು ದುಂಬಿಯೂ ನಮ್ಮ ಪ್ರೀತಿಯ ಸವಿನೆನಪಿನ ಕುರುಹುಗಳನ್ನೇ ಸಾರುತ್ತವೆ.

  ಪ್ರೀತಿ ಅಂದ್ರೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ಮಾಡುವ ನಾಟಕವಲ್ಲ ಎನ್ನುವ ವೇದವಾಕ್ಯವನ್ನು ಹೇಳಿಕೊಟ್ಟ ನೀನೇ, ಉತ್ಕಟ ಪ್ರೀತಿಯ ನಾಟಕವಾಡಿದೆ. ಕಥಾನಾಯಕಿಯಾಗಿ ಅಭಿನಯಿಸಿ ನಾಟಕವನ್ನು ಯಶಸ್ವಿಗೊಳಿಸದೆ ಖಳನಟಿಯಾಗಿ ನಟಿಸಿ ನನ್ನ ಅಮೋಘ ನಾಟಕಕ್ಕೆ ದಾರುಣ ಅಂತ್ಯ ಹಾಡಿದೆ. ನಿನ್ನೊಂದಿಗೆ ಕಳೆದ ಸವಿ ಘಳಿಗೆಯ ಸಿಹಿ ನೆನಪುಗಳನ್ನು ಹಿಡಿದು ಕಟ್ಟಿ ಹಾಕಬೇಕೆಂದರೂ ಆಗುತ್ತಿಲ್ಲ. ಸೆರೆ ಹಿಡಿದು ಸುಟ್ಟು ಹಾಕಬೇಕೆಂದರೆ ಸಿಗುತ್ತಿಲ್ಲ. ನಿನ್ನ ಮರೆತು ಬಾಳುವ ಶಕ್ತಿಯೂ ನನಗಿಲ್ಲ.

ಏಕೆ ಹೀಗಾಯಿತೋ, ನಾನು ಕಾಣೆನೂ….

– ಇಂತಿ ನಿನ್ನವ 
ರಂಗನಾಥ ಎಸ್‌ ಗುಡಿಮನಿ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.