ಆ “ಸತ್ಯ ಹರಿಶ್ಚಂದ್ರ’ ಎಲ್ಲಿ, ಈ “ಸತ್ಯ ಹರಿಶ್ಚಂದ್ರ’ ಎಲ್ಲಿ?


Team Udayavani, Nov 8, 2017, 4:40 PM IST

Sa.ra_.-Govind.jpg

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ! ಅವರ ಅಸಮಾಧಾನಕ್ಕೆ ಕಾರಣ, ಕನ್ನಡ ಚಿತ್ರಗಳಿಗೆ ಹಳೆಯ ಮತ್ತು ಜನಪ್ರಿಯ ಹೆಸರುಗಳನ್ನು ಪುನಃ ಇಡುತ್ತಿರುವುದು. ಈ ಕುರಿತು ಅವರು “ಜನ ಗಣ ಮನ’ ಚಿತ್ರದ ಆಡಿಯೋ ಸಿಡಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಮರುಶೀರ್ಷಿಕೆ ಕುರಿತು ಮಾತನಾಡಿದರು.

ಅದಕ್ಕೆ ಕಾರಣವಾಗಿದ್ದು, ಶರಣ್‌  ಅಭಿನಯದ “ಸತ್ಯ ಹರಿಶ್ಚಂದ್ರ’. ಈ ಶೀರ್ಷಿಕೆ ಕುರಿತಂತೆ ಸಾ.ರಾ.ಗೋವಿಂದು ಮಾತನಾಡಿದರು. “ವರನಟ ಡಾ.ರಾಜ್‌ಕುಮಾರ್‌ ಅಭಿನಯದ “ಸತ್ಯ ಹರಿಶ್ಚಂದ್ರ’ ದಾಖಲೆ ಬರೆದ ಚಿತ್ರ. ಅಂತಹ ಅದ್ಭುತ ಚಿತ್ರದ ಶೀರ್ಷಿಕೆಯನ್ನೇ ಪುನಃ ಶರಣ್‌ ಅಭಿನಯದ ಚಿತ್ರಕ್ಕೆ “ಸತ್ಯಹರಿಶ್ಚಂದ್ರ’ ಅಂತ ಮರುಬಳಕೆ ಮಾಡಿದ್ದು ಎಲ್ಲರಿಗೂ ಗೊತ್ತು.

ಆರಂಭದಲ್ಲಿ “ಸತ್ಯ ಹರಿಶ್ಚಂದ್ರ’ ಶೀರ್ಷಿಕೆ ಇಟ್ಟು ಚಿತ್ರ ಮಾಡುತ್ತಿರುವ ಬಗ್ಗೆ ಸುದ್ದಿ ಹೊರ ಬರುತ್ತಿದ್ದಂತೆಯೇ ರಾಜ್‌ಕುಮಾರ್‌ ಅಭಿಮಾನಿಗಳು, ಸಂಘದ ಪದಾಧಿಕಾರಿಗಳು, ಆ ಶೀರ್ಷಿಕೆ ಕೊಡಬೇಡಿ ಅಂತ ಆಕ್ಷೇಪಿಸಿದ್ದರು. ಒಂದು ಸಂದೇಶವುಳ್ಳ, ಮೌಲ್ಯ ಇರುವಂತಹ ರಾಜ್‌ಕುಮಾರ್‌ ಅವರ “ಸತ್ಯಹರಿಶ್ಚಂದ್ರ’ ಚಿತ್ರದ ಶೀರ್ಷಿಕೆಯನ್ನು, ಕೇವಲ ಒಂದು ಕಾಮಿಡಿ ಕಥೆಗೆ ಇಟ್ಟು ಅವಮಾನಿಸಬೇಡಿ ಎಂದು ಮನವಿ ಮಾಡಿದ್ದರು.

ಆದರೆ, ಅದೇ ಶೀರ್ಷಿಕೆಯಡಿ ಆ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರ ನೋಡಿದ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.ಇನ್ನು ಮುಂದೆ ಅಣ್ಣಾವ್ರ ಸಿನಿಮಾಗಳ ಶೀರ್ಷಿಕೆ ಮರುಬಳಸುವ ಮುನ್ನ ಗಂಭೀರವಾಗಿ ಯೋಚಿಸಬೇಕು ಎಂಬ ಮನವಿಯನ್ನು ಇಟ್ಟಿದ್ದಾರೆ’ ಎಂದರು ಸಾ.ರಾ. ಗೋವಿಂದು. “ಡಾ ರಾಜ್‌ಕುಮಾರ್‌ ಅಭಿನಯಿಸಿದ ಆ “ಸತ್ಯ ಹರಿಶ್ಚಂದ್ರ’ ಎಲ್ಲಿ, ಈ “ಸತ್ಯ ಹರಿಶ್ಚಂದ್ರ’ ಎಲ್ಲಿ? ದೊಡ್ಡ ಯಶಸ್ಸು ಪಡೆದ ಚಿತ್ರದ ಶೀರ್ಷಿಕೆ ಬಳಸಿ, ನಿರೀಕ್ಷೆ ಹುಸಿಗೊಳಿಸುವ ಮೂಲಕ ಅಭಿಮಾನಿಗಳ ಕೋಪಕ್ಕೆ ಚಿತ್ರತಂಡ ಗುರಿಯಾಗಿದೆ.

ಇನ್ನು ಮುಂದೆ ಅಣ್ಣಾವ್ರು ಅಭಿನಯಿಸಿದ “ಬಬ್ರುವಾಹನ’, “ಮಯೂರ’, “ಭಕ್ತ ಕುಂಬಾರ’ ಸೇರಿದಂತೆ ಇತರೆ ಮೌಲ್ಯವುಳ್ಳ ಚಿತ್ರಗಳ ಶೀರ್ಷಿಕೆ ಮರುಬಳಕೆ ಮಾಡಲು ಬಿಡದಿರಲು ಮಂಡಳಿ ನಿರ್ಧರಿಸಲಿದೆ. ಅಲ್ಲದೆ, ಸೂಕ್ತ, ಕಥೆ, ನಟ, ನಿರ್ದೇಶಕ ಮತ್ತು ಒಳ್ಳೆಯ ತಂಡವಿದ್ದರೆ ಮಾತ್ರ, ಆ ಶೀರ್ಷಿಕೆಗೆ ಅವರು ಅರ್ಹರೋ ಇಲ್ಲವೋ ಎಂಬುದನ್ನು ಅರಿತು, ಆ ಬಳಿಕ ಮಂಡಳಿ ಗಂಭೀರವಾಗಿ ಶೀರ್ಷಿಕೆಗೆ ಅನುಮತಿ ಕೊಡಬೇಕೋ ಬೇಡವೋ ಎಂದು ಪರಿಗಣಿಸಲಿದೆ’ ಎನ್ನುತ್ತಾರೆ ಸಾ.ರಾ.ಗೋವಿಂದು.

ಟಾಪ್ ನ್ಯೂಸ್

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Parameshwar

Channagiri ಠಾಣೆ ಧ್ವಂಸ, ಆದಿಲ್ ಸಾವಿನ ಪ್ರಕರಣಗಳ ಹೆಚ್ಚಿನ ತನಿಖೆ: ಡಾ| ಜಿ. ಪರಮೇಶ್ವರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ

Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ

Kantara -1: ರಿಷಬ್‌ ಶೆಟ್ಟಿ ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

Kantara -1: ರಿಷಬ್‌ ಶೆಟ್ಟಿ ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್‌ ನಟ ಜಯರಾಂ ಎಂಟ್ರಿ?

ನಟ ʼಪ್ರಜ್ವಲ್‌ ದೇವರಾಜ್‌ ಇನ್ನಿಲ್ಲʼ ಎನ್ನುವ ಪೋಸ್ಟರ್‌ ವೈರಲ್:‌ ನಿಜಕ್ಕೂ ಆಗಿದ್ದೇನು?

ನಟ ʼಪ್ರಜ್ವಲ್‌ ದೇವರಾಜ್‌ ಇನ್ನಿಲ್ಲʼ ಎನ್ನುವ ಪೋಸ್ಟರ್‌ ವೈರಲ್:‌ ನಿಜಕ್ಕೂ ಆಗಿದ್ದೇನು?

bingo movie voice dubbing

Ragini dwivedi; ಡಬ್ಬಿಂಗ್‌ ಮುಗಿಸಿದ ಬಿಂಗೋ

Sahara Movie; ಮಂಡ್ಯ ಹುಡುಗಿ ಕ್ರಿಕೆಟರ್‌ ಆದ ಕಥೆ…

Sahara Movie; ಮಂಡ್ಯ ಹುಡುಗಿ ಕ್ರಿಕೆಟರ್‌ ಆದ ಕಥೆ…

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Norway Chess tournamen: ನಂ. ವನ್‌ ಕಾರ್ಲ್ಸನ್‌ ಕೆಡಹಿದ ಪ್ರಜ್ಞಾನಂದ

Norway Chess tournamen: ನಂ. ವನ್‌ ಕಾರ್ಲ್ಸನ್‌ ಕೆಡಹಿದ ಪ್ರಜ್ಞಾನಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.