ಮತಾಂತರಕ್ಕೆ ನಿಯಮಾವಳಿ
Team Udayavani, Dec 16, 2017, 6:45 AM IST
ಜೋಧ್ಪುರ: ಯಾವುದೇ ಧರ್ಮಕ್ಕೆ ಬದಲಾಗಲು ಬಯಸಿದವರು ತಮ್ಮ ಹೆಸರನ್ನು ನೋಟಿಸ್ ಬೋರ್ಡ್ನಲ್ಲಿ ಒಂದು ವಾರ ಪ್ರದರ್ಶಿಸಬೇಕು ಎಂದು ರಾಜಸ್ಥಾನ ಹೈಕೋರ್ಟ್ ಹೊಸ ನಿಯಮಾವಳಿಯನ್ನು ಹೊರಡಿಸಿದೆ.
ಲವ್ ಜೆಹಾದ್ ಪ್ರಕರಣದ ಅರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹೈಕೋರ್ಟ್ ಈ ನಿಯಮಾವಳಿ ಹೊರಡಿಸಿದೆ. ಅನುಮತಿ ನೀಡುವ ಮೊದಲು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಕೋರ್ಟ್ ಹೇಳಿದೆಯಾದರೂ, ಆಕ್ಷೇಪಣೆ ಸಲ್ಲಿಸಲು ಯಾರು ಅರ್ಹರು ಎಂಬುದನ್ನು ನಿಗದಿಪಡಿಸಿಲ್ಲ. ಈ ನೀತಿಗಳಿಗೆ ಬದ್ಧವಾಗದ ಯಾವುದೇ ವಿವಾಹ ಅಥವಾ ಮತಾಂತರವನ್ನು ಕೋರ್ಟ್ ರದ್ದುಗೊಳಿಸಬಹುದಾಗಿದೆ. ಬಲವಂತವಾಗಿ ಮತಾಂತರ ತಡೆಯಲು ಕೆಲವು ನಿಯಮಾವಳಿಗಳು ಅಗತ್ಯವಿರುತ್ತವೆ. ಯಾಕೆಂದರೆ ಧರ್ಮವು ನಂಬಿಕೆಯದ್ದಾಗಿದೆ. ಅದು ತಾರ್ಕಿಕವಾದದ್ದಲ್ಲ ಎಂದು ನ್ಯಾಯಮೂರ್ತಿ ಗೋಪಾಲ ಕೃಷ್ಣ ವ್ಯಾಸ ಮತ್ತು ವಿರೇಂದರ್ ಕುಮಾರ್ ಮಾಥುರ್ ಹೇಳಿದ್ದಾರೆ.
ರಾಜಸ್ಥಾನ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ 2006 ಜಾರಿಯಾಗುವ ವರೆಗೆ ಈ ನಿಯಮ ಅನ್ವಯವಾಗುತ್ತದೆ ಎಂದಿದೆ ಹೈಕೋರ್ಟ್. ಸದ್ಯ ಈ ವಿಧೇಯಕ ರಾಷ್ಟ್ರಪತಿ ಸಹಿಗಾಗಿ ಕಾಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ
ಭಗವಾನ್ ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ…ದೇವಾಲಯ ಒಡೆಯಲು ಹೈಕೋರ್ಟ್ ಅನುಮತಿ
Special Marriage Act ಅಡಿಯಲ್ಲಿ ಹಿಂದೂ-ಮುಸ್ಲಿಂ ವಿವಾಹ ಮಾನ್ಯವಲ್ಲ: ಹೈಕೋರ್ಟ್
ಹೊರಬಿತ್ತು ಅಂಬಾನಿ ಪುತ್ರನ ವೆಡ್ಡಿಂಗ್ ಕಾರ್ಡ್: ಎಲ್ಲಿ,ಯಾವಾಗ,ವಿಶೇಷಗಳೇನು? ಇಲ್ಲಿದೆ ವಿವರ
Jammu ಭೀಕರ ಬಸ್ ಅವಘಡ : 21 ಮಂದಿ ಮೃತ್ಯು, ಹಲವರಿಗೆ ಗಾಯ
MUST WATCH
ಹೊಸ ಸೇರ್ಪಡೆ
Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!
Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ
Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ
Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ
Mangaluru ನಮಾಜ್ ಪ್ರಕರಣ: ಬಿ ರಿಪೋರ್ಟ್ ಸಲ್ಲಿಕೆ; ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ