ಚಳಿ ಬಿಡಿಸೋ 5 ಆಸನಗಳು 


Team Udayavani, Jan 3, 2018, 2:00 PM IST

03-35.jpg

ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಹಕರಿಸುವ 5 ಯೋಗಾಸನ ಭಂಗಿಗಳು ಇಲ್ಲಿವೆ. “ಮೈಮೇಲಿಂದ ಬೆಡ್‌ಶೀಟ್‌ ತೆಗೆಯಲು ಮನಸ್ಸೇ ಬಾರದ ಈ ಚಳಿಗಾಲದ ದಿನಗಳಲ್ಲಿ ಯೋಗಾಸನವೇ?’ ಎಂದು ಹೌಹಾರದಿರಿ! ಈ 5 ಆಸನಗಳನ್ನು ಬೆಳಗ್ಗೆ ಅಭ್ಯಾಸ ಮಾಡಿದ್ದೇ ಆದರೆ ಮೈ ಬೆಚ್ಚಗಿರುವುದು ಮಾತ್ರವಲ್ಲ, ಕೀಲು ನೋವು, ಸಂಧಿ ನೋವುಗಳಿಂದ ಮುಕ್ತಿಯನ್ನೂ ಪಡೆಯಬಹುದು. ಅಂದಹಾಗೆ ಪರಿಣತ ಯೋಗಪಟುಗಳ ಉಪಸ್ಥಿತಿಯಲ್ಲಿ ಅಭ್ಯಾಸ ಮಾಡಿದರೆ ಇನ್ನೂ ಒಳ್ಳೆಯದು.

1. ಉತ್ತನಾಸನ
ತುಂಬಾ ಸರಳವಾದ ಈ ಆಸನದಿಂದ ತೊಡೆಯ ಮಾಂಸಖಂಡ ಮತ್ತು ಹೊಟ್ಟೆ ಭಾಗದಲ್ಲಿರುವ ಮಾಂಸಖಂಡಗಳು ಶಕ್ತಿಯುತವಾಗುತ್ತವೆ. ಮೊದಲು ನೇರವಾಗಿ ನಿಂತುಕೊಳ್ಳಬೇಕು. ಕೈಗಳನ್ನು ಬದಿಯಲ್ಲಿ ನೀಡಿಕೊಳ್ಳಿ. ಈಗ ಮುಂದಕ್ಕೆ ಬಾಗಿ. ಕೈಗಳು ನೆಲ ಮುಟ್ಟುವಂತಿರಲಿ. ಮುಂದಕ್ಕೆ ಬಾಗುವ ಮುನ್ನ ಜೋರಾಗಿ ಉಸಿರೆಳೆದುಕೊಳ್ಳಿ. ಮುಂದಕ್ಕೆ ಬಾಗುವಾಗ ಉಸಿರು ಬಿಡಿ. ಕೆಲ ನಿಮಿಷಗಳವರೆಗೆ ಬಗ್ಗಿಕೊಂಡೇ ಇರಿ. ಆಮೇಲೆ ಹಿಂದಿನ ಭಂಗಿಗೆ, ಅಂದರೆ ನೇರವಾಗಿ ನಿಂತುಕೊಂಡ ಭಂಗಿಗೆ ವಾಪಸ್ಸಾಗಿ.

2. ಕಪಾಲಭಾತಿ
ಟಿ.ವಿ.ಯಲ್ಲಿ ಈ ಯೋಗಾಸನವನ್ನು ನೋಡಿಯೇ ಇರುತ್ತೀರಿ. ಬಾಬಾ ರಾಮ್‌ದೇವ್‌ ಅವರಿಗೆ ಜನಪ್ರಿಯತೆ ತಂದುಕೊಟ್ಟ ಆಸನವೆಂದರೆ ಇದೇ. ಮೊದಲು ಪದ್ಮಾಸನ ಹಾಕಿ ಚಾಪೆ ಮೇಲೆ ಕುಳಿತುಕೊಳ್ಳಿ. ಕೈಗಳನ್ನು ಹಸ್ತ ಮೇಲೆ ಬರುವಂತೆ ಮಂಡಿ ಮೇಲಿಡಿ. ಈಗ ದೀರ್ಘ‌ವಾಗಿ ಉಸಿರೆಳೆದುಕೊಳ್ಳಿ. ನಂತರ ಜೋರಾಗಿ, ಬಲವಂತವಾಗಿ ಉಸಿರನ್ನು ಹೊರಬಿಡಿ. ಹೊರಬಿಡುವಾಗ ಹೊಟ್ಟೆಯನ್ನು ಒಳಗೆಳೆದುಕೊಳ್ಳಬೇಕು. ಒಮ್ಮೆಗೇ 20 ಬಾರಿ ಇದನ್ನು ಪುನರಾವರ್ತಿಸಬೇಕು. ಕೊಂಚ ಬಿಡುವಿನ ನಂತರ ಮತ್ತೆ ಮುಂದುವರಿಸಿ. ಈ ಆಸನವನ್ನು ಒಟ್ಟು ಮೂರು 3 ಸೆಟ್‌ ಮಾಡಬೇಕು.

3. ವೀರಭದ್ರಾಸನ
ಮೂರು ನಾಲ್ಕು ಅಡಿ ಅಂತರ ಬರುವಂತೆ ಕಾಲನ್ನು ಅಗಲಿಸಿ ನಿಲ್ಲಿ. ಎರಡೂ ಕೈಗಳನ್ನು ತೋಳಿನ ಲೆವೆಲ್‌ಗೆ ಚಾಚಿರಿ. ಪಾದವನ್ನು ಬಲ ಬದಿಗೆ ಪಾಯಿಂಟ್‌ ಮಾಡಿ, ಎಡಗಾಲಿನ ಪಾದ ಮುಂದಕ್ಕೆ ಚಾಚಿರಲಿ. ಬಲಗಾಲಿನ ಮಂಡಿಯೂರಿ, ಚಾಚಿರುವ ಬಲಗೈಯತ್ತ ಮುಖ ಮಾಡಿ. ಕೆಲ ನಿಮಿಷಗಳವರೆಗೆ ಇದೇ ಭಂಗಿಯಲ್ಲಿ ನಿಲ್ಲಿ. ನಂತರ ಎದ್ದು ನಿಂತು ಎಡಬದಿಯಲ್ಲಿ  ಪುನರಾವರ್ತಿಸಿ.

4.ಸುಕಿರಂದ್ರಾಸನ
ಚಾಪೆ ಮೇಲೆ ಬೆನ್ನಡಿ ಮಾಡಿ ಮಲಗಿ. ಮಂಡಿಯನ್ನು ಬಾಗಿಸಿ ಪಾದವನ್ನು ನೆಲಕ್ಕೆ ಊರಿ. ಬಲಗಾಲೆತ್ತಿ, ಪಾದವನ್ನು ಎಡ ತೊಡೆಯ ಮೇಲಿಡಿ. ಎಡಗಾಲಿನ ತೊಡೆಯನ್ನು ಕೈಗಳಲ್ಲಿ ಹಿಡಿದುಕೊಳ್ಳಿ. ಕೆಲ ನಿಮಿಷಗಳವರೆಗೆ ಹಾಗೇ ಇರಿ.

5. ಆಂಜನೇಯಾಸನ 
ಮೊದಲು ಅಂಬಾರಿಯಂತೆ ಕೈಕಾಲುಗಳನ್ನು ನೆಲಕ್ಕೆ ಊರಿ. ಬಲಗಾಲನ್ನು ಕೈಗಳ ನಡುವೆ ತನ್ನಿ. ಎಡಗಾಲನ್ನು ನೆಲದ ಮೇಲೆ ನೇರಕ್ಕೆ ಚಾಚಿ. ಕೆಲ ನಿಮಿಷಗಳ ಬಳಿಕ ಇನ್ನೊಂದು ಕಾಲಿಗೂ ಪುನರಾವರ್ತಿಸಿ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.