ದೇವರೇಕೆ ಹೀಗೆ ಮಾಡಿದ?


Team Udayavani, Jan 4, 2018, 11:13 AM IST

04-15.jpg

ದಟ್ಟವಾದ ಅರಣ್ಯದಲ್ಲಿ ಒಂದು ವಿಶೇಷ ಮರವಿತ್ತು. ಮಾವಿನ ಮರ, ಗಂಧದ ಮರ, ಹಲಸಿನ ಮರಗಳಿಂದ ಈ ವಿಶೇಷ ಮರ ಸುತ್ತುವರಿದಿತ್ತು. ಆ ಮರದ ವಿಶೇಷತೆಯೆಂದರೆ ಅದು ಕುರೂಪಿ ಮರವಾಗಿತ್ತು. ಎಲ್ಲಾ ನೇರಕ್ಕೆ ಬೆಳೆದು, ವಿಸ್ತಾರವಾಗಿ ಹಬ್ಬಿದ್ದರೆ ಇದೊಂದು ಮರ ಮಾತ್ರ ಸೊಟ್ಟಗೆ, ವಿಕಾರವಾಗಿ ಬೆಳೆದಿತ್ತು. ಇದೇ ಕಾರಣಕ್ಕೆ ಸುತ್ತಲಿನ ಮರಗಳೆಲ್ಲಾ ಕುರೂಪಿ ಮರವನ್ನು ಸದಾ ಅಪಹಾಸ್ಯ ಮಾಡುತ್ತಿದ್ದವು. ಆ ಬೇಜಾರು ಕುರೂಪಿ ಮರಕ್ಕೂ ಇತ್ತು. ಮೊದ ಮೊದಲು ಆ ದೇವರು ತನಗೊಬ್ಬನಿಗೆ ಮಾತ್ರ ಏಕೆ ಈ ದುಸ್ಥಿತಿ ತಂದ ಎಂದು ಪ್ರಶ್ನೆ ಹಾಕಿಕೊಳ್ಳುತ್ತಿತ್ತು. ಆದರೆ ನಂತರ ಆ ಕುರಿತು ಚಿಂತಿಸಿ ಫ‌ಲವಿಲ್ಲ ಎಂದರಿತು ಇತರರ ಹೀಯಾಳಿಕೆಗಳಿಗೆ ಬೇಜಾರು ಪಟ್ಟುಕೊಳ್ಳುವುದನ್ನು ನಿಲ್ಲಿಸಿತು.

ಒಂದು ದಿನ ವ್ಯಕ್ತಿಯೊಬ್ಬ ಕಾಡಿಗೆ ಬಂದನು. ಮರಗಳೆಲ್ಲವೂ “ಯಾರಪ್ಪಾ ಈ ದಟ್ಟಾರಣ್ಯಕ್ಕೆ ಬಂದಿರುವವರು’ ಎಂದು ಆಶ್ಚರ್ಯದಿಂದ ಅವನನ್ನೇ ನೋಡಿದವು. ಅವನು ಮರ ಕಡಿಯುವವನಾಗಿದ್ದನು. ಅವನು ತನ್ನ ಚೀಲದಿಂದ ಕೊಡಲಿಯನ್ನು ಹೊರತೆಗೆಯುತ್ತಿದ್ದಂತೆ ಮರಗಳೆಲ್ಲಾ ಹೌಹಾರಿದವು. ಅವನು ಹತ್ತಿರದ ಎಲ್ಲಾ ಮರಗಳನ್ನು ಗಮನಿಸುತ್ತಾ ಹೋದನು. ಸೊಟ್ಟದಾಗಿದ್ದ, ಕುರೂಪಿ ಮರವೂ ಅವನ ಕಣ್ಣಿಗೆ ಬಿತ್ತು. ಇತರೆ ಮರಗಳೆಲ್ಲಾ ಕುರೂಪಿ ಮರವನ್ನು ಕಡಿಯುತ್ತಾನೆಂದುಕೊಂಡು ಹಾಸ್ಯ ಮಾಡಿದವು. ಆದರೆ ಆತ, ಸೊಟ್ಟ ಮರದಿಂದ ತನಗೇನೂ ಉಪಯೋಗವಿಲ್ಲವೆಂದು ಕುರೂಪಿ ಮರವೊಂದನ್ನು ಬಿಟ್ಟು ಅದರ ಸುತ್ತಮುತ್ತಲಿದ್ದ ಮರಗಳನ್ನು ಕಡಿದು ಹಾಕಿದನು. ದೇವರು ಎಲ್ಲವನ್ನೂ ಒಳ್ಳೆಯದಕ್ಕೆ ಮಾಡಿರುತ್ತಾನೆ, ತನ್ನ ಕುರೂಪವೇ ಇಂದು ತನ್ನನ್ನು ಕಾಪಾಡಿತೆಂದು ಕುರೂಪಿ ಮರ ದೇವರಿಗೆ ಕೃತಘ್ನತೆ ಸಲ್ಲಿಸಿತು.

ವೇದಾವತಿ ಹೆಚ್‌. ಎಸ್‌.

ಟಾಪ್ ನ್ಯೂಸ್

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.