ಇಂದು, ನಾಳೆ ಬೆಂಗಳೂರಿನಲ್ಲಿ ಐಪಿಎಲ್‌ ಹರಾಜು


Team Udayavani, Jan 27, 2018, 11:56 AM IST

27-44.jpg

ಬೆಂಗಳೂರು: ಉದ್ಯಾನನಗರಿಯಲ್ಲಿ ಶನಿವಾರ 11ನೇ ಆವೃತ್ತಿ ಐಪಿಎಲ್‌ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟು 2 ದಿನ ಕ್ರಿಕೆಟಿಗರ ಹರಾಜು ನಡೆಯಲಿದೆ. ಹರಾಜಿನಲ್ಲಿ ಒಟ್ಟು 578 ಆಟಗಾರರು ಇರಲಿದ್ದಾರೆ. ಸ್ಟಾರ್‌ ನ್ಪೋರ್ಟ್ಸ್-1ರಲ್ಲಿ ಇದು ನೇರ ಪ್ರಸಾರವಾಗಲಿದೆ.

ಈ ಸಲದ ಹರಾಜಿನಲ್ಲಿ ಫ್ರಾಂಚೈಸಿ ಗಳು ಆಲ್‌ರೌಂಡರ್‌ಗಳತ್ತ ಹೆಚ್ಚು ಗಮನ ಕೊಡುವ ಸಾಧ್ಯತೆಯೇ ಹೆಚ್ಚು. ಟಿ20ನಲ್ಲಿ ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಮೂಲಕವೂ ತಂಡಕ್ಕೆ ನೆರವಾಗುವಂಥವರ ಅಗತ್ಯವಿದೆ. ಉಳಿದಂತೆ ಗೌತಮ್‌ ಗಂಭೀರ್‌, ಯುವರಾಜ್‌ ಸಿಂಗ್‌, ರಿಷಭ್‌ ಪಂತ್‌ ಮೇಲೆ ಕೂಡ ನಿರೀಕ್ಷೆ ಇದೆ. ಆದರೆ ಯುವಿ ಇತ್ತೀಚೆಗೆ ಫಾರ್ಮ್ ಕಳೆದುಕೊಂಡಂತಿದ್ದಾರೆ. ಹೀಗಾಗಿ ಇವರು ದೊಡ್ಡ ಮೊತ್ತಕ್ಕೆ ಹರಾಜುಗೊಳ್ಳುವ ಸಾಧ್ಯತೆ ಕಡಿಮೆ.

16 ಆಟಗಾರರಿಗೆ ಬಂಪರ್‌ ಬೆಲೆ?
ಒಟ್ಟು 16 ಆಟಗಾರರ ಮೇಲೆ ಎಲ್ಲರ ಕಣ್ಣಿದೆ. ಇವರು ತಾರಾ ಆಟಗಾರರಾಗಿದ್ದು ಮೂಲಬೆಲೆ 2 ಕೋಟಿ ರೂ. ಹೊಂದಿದ್ದಾರೆ. ಇಂಗ್ಲೆಂಡ್‌ ತಂಡದ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌, ಸ್ಪಿನ್ನರ್‌ ಆರ್‌.ಅಶ್ವಿ‌ನ್‌, ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಮಿಚೆಲ್‌ ಸ್ಟಾರ್ಕ್‌, ಕ್ರಿಸ್‌ ಗೇಲ್‌ ಹಾಗೂ ಡ್ವೇನ್‌ ಬ್ರಾವೊ ಮತ್ತಿತರ ತಾರಾ ಆಟಗಾರರು ಕೂಡ ಇದ್ದಾರೆ. ಸ್ಟೋಕ್ಸ್‌ ಕಳೆದ ಆವೃತ್ತಿಯಲ್ಲಿ 14.5 ಕೋಟಿ ರೂ. ದಾಖಲೆ ಮೊತ್ತಕ್ಕೆ ಮಾರಾಟಗೊಂಡಿದ್ದರು. ಸ್ಪಿನ್ನರ್‌ ಅಶ್ವಿ‌ನ್‌ ಮತ್ತೆ ಚೆನ್ನೈ ತಂಡಕ್ಕೆ ಮರಳುತ್ತಾರೆಯೇ ಎನ್ನುವ ಪ್ರಶ್ನೆ ಇದೆ. ಅವರನ್ನು ಹರಾಜಿನಲ್ಲಿ ಉಳಿಸಿಕೊಳ್ಳಲಿದ್ದೇವೆ ಎನ್ನುವ ಸೂಚನೆಯನ್ನು ಧೋನಿ ನೀಡಿದ್ದಾರೆ.

ಕುಲದೀಪ್‌, ಚಾಹಲ್‌ ಫೇವರಿಟ್‌
ಟಿ20 ಬ್ಯಾಟ್ಸ್‌ಮನ್‌ಗಳ ಆಟ. ಬೌಲರ್‌ಗಳಿಗೆ ಇಲ್ಲಿ ಮೆರೆಯುವುದು ಕಷ್ಟ ಎನ್ನುವ ಮಾತಿದೆ. ಆದರೆ ಸಿಕ್ಸರ್‌ಗಳ ಮೂಲಕ ಅಬ್ಬರಿಸುತ್ತಿದ್ದ ಬ್ಯಾಟ್ಸ್‌ಮನ್‌ಗಳ ರನ್‌ ವೇಗಕ್ಕೆ ಕಡಿವಾಣ ಹಾಕಿದ ಸ್ಪಿನ್‌ ಬೌಲರ್‌ಗಳಿದ್ದರೆ ಅದು ಕುಲದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಾಹಲ್‌. ಇವರು ಟಿ20ಯಲ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ. ಈ ಬಾರಿ ಹೆಚ್ಚಿನ ಮೊತ್ತಕ್ಕೆ ಮಾರಾಟಗೊಳ್ಳುವ ನಿರೀಕ್ಷೆ ಇದೆ. ಜತೆಗೆ ಅಫ್ಘಾನ್‌ ಸ್ಪಿನ್ನರ್‌ ರಶೀದ್‌ ಖಾನ್‌ ಕೂಡ ಫ್ರಾಂಚೈಸಿಗಳ ಫೇವರಿಟ್‌ ಆಗಿದ್ದಾರೆ.

ಕುತೂಹಲ ಹುಟ್ಟಿಸಿದ ಧೋನಿ ನಡೆ
ಎಂ.ಎಸ್‌.ಧೋನಿ ಈ ಸಲ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಹಿಂದೆ ಯಶಸ್ವಿ ನಾಯಕರಾಗಿ ಚೆನ್ನೈ ಮುನ್ನಡೆಸಿದ್ದ ಕೀರ್ತಿ ಧೋನಿಗಿದೆ. ಮಾಲಿಕರ ಬೆಟ್ಟಿಂಗ್‌ ಪ್ರಕರಣದಿಂದ ನಿಷೇಧಕ್ಕೆ ಒಳಗಾಗಿದ್ದ ಚೆನ್ನೈ ವಾಪಸ್‌ ಆಗಿದೆ. ಚೆನ್ನೈಮೇಲೆ ನಿರೀಕ್ಷೆಗಳ ಮಹಾಪೂರವೇ ಇದೆ. ಸ್ಪಿನ್ನರ್‌ ಅಶ್ವಿ‌ನ್‌ ಜತೆಗೆ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ ಅವರನ್ನೂ ತಂಡದಲ್ಲಿ ಉಳಿಸಿಕೊಳ್ಳುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಆರ್‌ಟಿಎಂ ಉಪಯೋಗಿಸಿ ಬ್ರಾವೊ ಖರೀದಿಸುವ ಸಾಧ್ಯತೆ ಹೆಚ್ಚಿದೆ.

ದಿಲ್ಲಿ ಪಾಲಾಗುತ್ತಾರೆಯೇ ಗಂಭೀರ್‌?
 ಗೌತಮ್‌ ಗಂಭೀರ್‌ ಹಿಂದಿನ ಆವೃತ್ತಿಗಳಲ್ಲಿ ಬಾಲಿವುಡ್‌ ನಟ ಶಾರುಖ್‌ ಖಾನ್‌ ನೇತೃತ್ವದ ಕೋಲ್ಕತಾ ನೈಟ್‌ರೈಡರ್ ತಂಡದಲ್ಲಿ ಆಡಿದ್ದರು. ಈ ಸಲ ಅವರನ್ನು ಕೆಕೆಆರ್‌ ತಂಡ ಉಳಿಸಿಕೊಳ್ಳುವುದಿಲ್ಲ ಎಂದು ಖಚಿತವಾಗಿದೆ. ಡೆಲ್ಲಿ ಡೇರ್‌ಡೆವಿಲ್ಸ್‌ ತಂಡ ಗಂಭೀರ್‌ ಅವರನ್ನು ಖರೀದಿಸುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಫ್ರಾಂಚೈಸಿಗಳ ಬಳಿ ಉಳಿದ ಹಣ

ಟಾಪ್ ನ್ಯೂಸ್

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

11

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

Bellary; ಸಚಿವ ನಾಗೇಂದ್ರ ವಿರುದ್ಧ ಭುಗಿಲೆದ್ದ ಆಕ್ರೋಶ; ಬಳ್ಳಾರಿಯಲ್ಲಿ ಪ್ರತಿಭಟನೆ

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು

MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು

Desi Swara: ಚೈತ್ರದ ಚುಮುಚುಮು ಚಳಿಯ ಸುಂದರಿ “ಡ್ಯಾಂಡೆಲೈನ್‌’

Desi Swara: ಚೈತ್ರದ ಚುಮುಚುಮು ಚಳಿಯ ಸುಂದರಿ “ಡ್ಯಾಂಡೆಲೈನ್‌’

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

Bengaluru: ಕ್ರಿಮಿನಲ್‌ಗ‌ಳಿಗೆ ಸಿಡಿಆರ್‌ ಮಾರಾಟ; 10 ಸೆರೆ

Desi Swara: ಸೆಲ್ಫಿಗಳ ಹಿಂದಿನ ಮಾನಸಿಕತೆ

Desi Swara: ಸೆಲ್ಫಿಗಳ ಹಿಂದಿನ ಮಾನಸಿಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi, Shah, Dhoni, Shahrukh, Sachin apply for the post of Team India coach!

Team India ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ! ಏನಿದರ ಅಸಲೀಯತ್ತು?

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

1-w-eewqe

India ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌; ಘೋಷಣೆಯಷ್ಟೇ ಬಾಕಿ

1-wewqewqe

Major League ಕ್ರಿಕೆಟ್‌ ಕೂಟಕ್ಕೆ ಅಧಿಕೃತ ಲಿಸ್ಟ್‌ ‘ಎ’ ಸ್ಥಾನಮಾನ

pragyananda

Norway ಚೆಸ್‌ ಕೂಟ: ಪ್ರಜ್ಞಾನಂದಗೆ ಗೆಲುವು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

9-kodachadri

Kodachadri: ಮಳೆಯಲಿ ಕೊಡಚಾದ್ರಿ ಮಡಿಲಲಿ

Desi Swara: ವಾಸವಿ ಕ್ಲಬ್‌ ಮೆರ್ಲಿಯನ್‌ ಸಿಂಗಾಪುರ- ವಾಸವಿ ಜಯಂತಿ ಪೂಜೆ ಸಂಪನ್ನ

Desi Swara: ವಾಸವಿ ಕ್ಲಬ್‌ ಮೆರ್ಲಿಯನ್‌ ಸಿಂಗಾಪುರ- ವಾಸವಿ ಜಯಂತಿ ಪೂಜೆ ಸಂಪನ್ನ

8-ipl

IPL: ಸನ್‌ ರೈಸರ್ಸ್‌ ಆದ ಡೆಕ್ಕನ್‌ ಚಾರ್ಜಸ್‌

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

Mangaluru; ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

11

ಗಣೇಶ ದೇವಸ್ಥಾನ ನಿರ್ಮಿಸಲು ಹಿಂದೂಗಳಿಗೆ ಭೂಮಿಯನ್ನು ದಾನವನ್ನಾಗಿ ನೀಡಿದ ಮುಸ್ಲಿಂ ಜಮಾತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.