ಪರೀಕ್ಷೆ ಅಂದ್ರೆ ಮಕ್ಕಳಿಗೇಕೆ ನಡುಕ?


Team Udayavani, Feb 7, 2018, 3:55 PM IST

exam.jpg

ಮಮತಾಳಿಗೆ ಆತಂಕ ಮತ್ತು ಉದ್ವಿಗ್ನತೆಯಿಂದಾಗಿ ಪರೀಕ್ಷೆಯ ಭಯ. ಜೀವನದಲ್ಲಿ ತುಂಬಾ ಸಾಧಿಸುವ ಆಕಾಂಕ್ಷೆಯುಳ್ಳ ಬುದ್ಧಿವಂತ ಹುಡುಗಿ. ಕಲಿಕಾ ಸಮಸ್ಯೆ ಇಲ್ಲ. ನೆನಪಿನ ಶಕ್ತಿ ಚೆನ್ನಾಗಿದೆ. ಏಕಾಗ್ರತೆಗೂ ಕೊರತೆ ಇಲ್ಲ. ಆದರೆ, ಉದ್ವಿಗ್ನತೆಯಿಂದಾಗಿ ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಶಾರೀರಿಕ ಆರೋಗ್ಯದಲ್ಲಿ ಮತ್ತು ವರ್ತನೆಯಲ್ಲಿ ವ್ಯತ್ಯಾಸಗಳು ಕಾಣಿಸುತ್ತವೆ. ಪರೀಕ್ಷೆ ಬರೆಯುವಾಗ, ಕಲಿತದ್ದು ನೆನಪಿಗೆ ಬರುವುದಿಲ್ಲ. ಮೈ- ಕೈ ಬೆವರಿ, ಎದೆಯಲ್ಲಿ ತಳಮಳ. ಪ್ರಶ್ನೆ ಪತ್ರಿಕೆಯನ್ನು ನೋಡಿದರೆ ಕಣ್ಣಾಲಿಗಳು ತುಂಬಿ ಬರುತ್ತವೆ. ವಾಂತಿ ಬರುವ ಹಾಗಾಗಿ, ಅತೀವ ಬಾಯಾರಿಕೆ, ಸಂಕಟ ಮತ್ತು ಸುಸ್ತು. ಪರೀಕ್ಷೆ ಬಂದರೆ ಮನೆಯವರಿಗೆÇÉಾ, ಆಕೆಗೆ ಏನಾಗುವುದೋ ಎಂಬ ಭಯ ಕಾಡುತ್ತದೆ.

ಪರೀಕ್ಷೆ ಬರುತ್ತಿದ್ದಂತೆ ಆಕೆಯ ಆಲೋಚನೆಗಳು ನಕಾರಾತ್ಮಕವಾಗುತ್ತವೆ. ರಾತ್ರಿಯೆÇÉಾ ನಿದ್ದೆಗೆಟ್ಟು ಓದಿ ಸುಸ್ತಾಗುತ್ತಾಳೆ. ಓದಿದ್ದನ್ನು ಪದೇಪದೆ ಮನನ ಮಾಡಿಕೊಳ್ಳಬೇಕು ಎನಿಸುತ್ತದೆ. ಓದಿದ್ದು ಸಾಕು ನಿಲ್ಲಿಸು ಎಂದು ಹೇಳಿದರೂ ಕೇಳುವುದಿಲ್ಲ. ಆದರೂ, ತಯಾರಿಗೆ ತಕ್ಕ ಅಂಕಗಳು ಬರುವುದಿಲ್ಲ ಎಂದು ಬೇಜಾರು. ಅಣ್ಣ ಮೋಹನ ಕಡಿಮೆ ಓದಿದರೂ ಹೆಚ್ಚಿನ ಅಂಕ ತೆಗೆಯುತ್ತಾನೆ ಎಂದು ಹೊಟ್ಟೆಕಿಚ್ಚು ಬೇರೆ. ಅವನೇನಾದರೂ ಇವಳ ತಯಾರಿಯ ಬಗ್ಗೆ ರೇಗಿಸಿದರೆ ಮುಗಿಯಿತು. ರಾತ್ರಿಯೆಲ್ಲ ಅತ್ತು ಅತ್ತು ಕಣ್ಣೆÇÉಾ ಬಾತುಕೊಳ್ಳುತ್ತದೆ. “ನೀನೂ ಬುದ್ಧಿವಂತೆ ಕಣಮ್ಮಾ’ ಎಂದು ಹೊಗಳಿದರೆ ಕೋಪ ಬರುತ್ತದೆ. ಸಮಾಧಾನ ಮಾಡಿದರಂತೂ ಕಿರುಚಾಡಿ ಬಿಡುತ್ತಾರೆ.

ವ್ಯಕ್ತಿತ್ವದಲ್ಲಿನ ಉದ್ವಿಗ್ನತೆಯು ಪರೀಕ್ಷೆಗೆ ಅತೀ ತಯಾರಿ ನಡೆಸಲು ಪ್ರೇರೇಪಿಸುತ್ತದೆ. ಆಲೋಚನೆಗಳು ನಕಾರಾತ್ಮಕವಾಗಿದ್ದು, ತಮ್ಮ ಬಗ್ಗೆ ತಾವೇ ಕೀಳು ಭಾವನೆ ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಸವಾಲು ಎನಿಸುವ ಜೀವನದ ಪ್ರತಿಯೊಂದು ಹಂತವೂ ಸೋಲಿನ ಹೆದರಿಕೆಯನ್ನು ಹುಟ್ಟು ಹಾಕುತ್ತದೆ. ಹೆದರಿಕೆ ಎಷ್ಟಿರಬಹುದೆಂದರೆ, ನೀರಿನಲ್ಲಿ ಮುಳುಗುವ ಹೆದರಿಕೆಯಷ್ಟೇ ಇರುತ್ತದೆ. ಈ ಮಕ್ಕಳು, ತಮ್ಮ ಬಗ್ಗೆಯ ಹೀನ ಭಾವನೆಯಿಂದಾಗಿ, ಆತ್ಮಹತ್ಯೆಗೂ ಪ್ರಯತ್ನಿಸಬಹುದು. ಕೆಲವೊಮ್ಮೆ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಬರಬಹುದು.

ಉದ್ವಿಗ್ನತೆ ಇರುವ ಮಕ್ಕಳಿಗೆ ಶಾರೀರಿಕ ವ್ಯಾಯಾಮ ಅತ್ಯಗತ್ಯ. ಬೆಳಗ್ಗೆ ಎದ್ದು ಚಿಕ್ಕದಾಗಿ ವಾಯುವಿಹಾರಕ್ಕೆ ಹೋಗಬೇಕು. ಪ್ರಕೃತಿಯನ್ನು ಬೆರಗು ಅಥವಾ ವಿಸ್ಮಯದಿಂದ ನೋಡುವುದನ್ನು ಕಲಿಸಬೇಕು. ಯೋಗ ಮತ್ತು ಉಸಿರಾಟದ ತಂತ್ರವನ್ನು ಹೇಳಿ ಕೊಡಬೇಕು. ಅವರು ಮನೆಗೆಲಸ ಮಾಡಬಹುದು. ಯಾವುದೇ ಪ್ರಕಾರದ ನೃತ್ಯ ಕಲಿತರೆ ಒಳ್ಳೆಯದಾಗುತ್ತದೆ. ಇವರಿಗೆ ಚಿಕ್ಕ ಚಿಕ್ಕ ಸಾಧನೆಯ ಮೈಲುಗಲನ್ನು ಹಾಕಿಕೊಟ್ಟು, ಅವರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಅನಗತ್ಯ ಅಭ್ಯಾಸಕ್ಕೆ ಮನೆಯಲ್ಲಿ ಉತ್ತೇಜನ ಕೊಡಬೇಡಿ. ಮನೆಗೆಲಸವನ್ನು ಮಾಡಲು ಬಿಡಿ. ಅಗತ್ಯಗಳನ್ನು ಕೂತಲ್ಲಿಗೇ ಸರಬರಾಜು ಮಾಡಬೇಡಿ.  

– ಡಾ. ಶುಭಾ ಮಧುಸೂದನ್‌, ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.