ಆರೋಗ್ಯಕರ ಸ್ಮೂದಿಗಳು


Team Udayavani, Mar 23, 2018, 7:30 AM IST

18.jpg

ಬಿಸಿಲಿನ ಧಗೆ ಏರುತ್ತಿದೆ. ಎಷ್ಟು ನೀರು ಕುಡಿದರೂ ಬಾಯಾರಿಕೆ ನೀಗದು. ಹೆಚ್ಚು ಖಾರ, ಮಸಾಲೆ ಪದಾರ್ಥಗಳನ್ನು ಕಡಿಮೆ ಮಾಡಿ ಮನೆಯಲ್ಲಿಯೇ ಆರೋಗ್ಯಕರ ಸ್ಮೂದಿಗಳನ್ನು ಮಾಡಿ ಕುಡಿದರೆ ಆರೋಗ್ಯಕ್ಕೂ ಹಿತ, ಮನಸ್ಸಿಗೂ ಹಿತ.

ಅಂಜೂರ ಸ್ಮೂದಿ 
ಬೇಕಾಗುವ ಸಾಮಗ್ರಿ:
1 ಕಪ್‌ ನೀರಿನಲ್ಲಿ ನೆನೆಸಿದ ಅಂಜೂರು, 1 ಕಪ್‌ ಹಾಲು, 2 ಚಮಚ ಜೇನುತುಪ್ಪ .
ತಯಾರಿಸುವ ವಿಧಾನ: ಅಂಜೂರ, ಹಾಲು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಜೇನುತುಪ್ಪ ಹಾಕಿ ಸರಿಯಾಗಿ ಬೆರೆಸಿ ಸ್ವಲ್ಪ ಹೊತ್ತು ಫ್ರಿಜ್‌ನಲ್ಲಿಟ್ಟು ಸವಿಯಿರಿ.

ದಂಟಿನ ಸೊಪ್ಪಿನ ಸ್ಮೂದಿ 
ಬೇಕಾಗುವ ಸಾಮಗ್ರಿ:
1/4 ಕಪ್‌ ಸಣ್ಣಗೆ ಹೆಚ್ಚಿದ ದಂಟಿನ ಸೊಪ್ಪು , 1 ಏಲಕ್ಕಿ, ಸಣ್ಣ ತುಂಡು ಶುಂಠಿ, 1/2 ಕಪ್‌ ತೆಂಗಿನಹಾಲು, 1/4 ಕಪ್‌ ಶೋಧಿಸಿದ ಬೆಲ್ಲದ ನೀರು ಯಾ ಸಕ್ಕರೆ.

 ತಯಾರಿಸುವ ವಿಧಾನ: ದಂಟಿನ ಸೊಪ್ಪು , ಏಲಕ್ಕಿ, ಶುಂಠಿ ಸೇರಿಸಿ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿ. ನಂತರ ಶೋಧಿಸಿ ಬೆಲ್ಲದ ನೀರು ಸೇರಿಸಿ ಸರಿಯಾಗಿ ಕಲಕಿ ನಂತರ ಗ್ಲಾಸಿಗೆ ಹಾಕಿ ಸವಿಯಿರಿ.

ಸ್ಟ್ರಾಬೆರಿ ಸ್ಮೂದಿ
 ಬೇಕಾಗುವ ಸಾಮಗ್ರಿ:
1/2 ಕಪ್‌ ಸಣ್ಣಗೆ ಹೆಚ್ಚಿದ ಸ್ಟ್ರಾಬೆರಿ ಹಣ್ಣು , 1/2 ಕಪ್‌ ಸಕ್ಕರೆ, 1 ಕಪ್‌ ಹಾಲು, 2 ಪುದೀನಾ ಎಲೆ, ಸಣ್ಣ ತುಂಡು ಲಿಂಬೆ ಚೂರು.

ತಯಾರಿಸುವ ವಿಧಾನ: ಸ್ಟ್ರಾಬೆರಿ ಹಣ್ಣಿನ ಚೂರು, ಸಕ್ಕರೆ, ಹಾಲು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಪುದೀನಾ ಎಲೆ, ವೃತ್ತಾಕಾರದ ಲಿಂಬೆ ಚೂರು ಗ್ಲಾಸಿಗೆ ಸಿಕ್ಕಿಸಿ ಸರ್ವ್‌ ಮಾಡಿ.

ಮೆಂತೆ ಸೊಪ್ಪಿನ ಸ್ಮೂದಿ
ಬೇಕಾಗುವ ಸಾಮಗ್ರಿ:
1 ಕಪ್‌ ಹಾಲು, ಸಣ್ಣಗೆ ತುಂಡು ಮಾಡಿದ 1/2 ಕಪ್‌ ಮೆಂತೆಸೊಪ್ಪು , 2 ಚಮಚ ಜೇನುತುಪ್ಪ , 1/2 ಕಪ್‌ ತೆಂಗಿನ ಹಾಲು, 1/4 ಚಮಚ ಜೀರಿಗೆ.

ತಯಾರಿಸುವ ವಿಧಾನ: ಮೆಂತೆಸೊಪ್ಪು ಮತ್ತು ಜೀರಿಗೆಯನ್ನು ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಶೋಧಿಸಿ. ಹಾಲು, ಜೇನುತುಪ್ಪ , ತೆಂಗಿನ ಹಾಲು ಹಾಕಿ ಸರಿಯಾಗಿ ಬೆರೆಸಿ ಗ್ಲಾಸಿಗೆ ಹಾಕಿ ಕುಡಿಯಿರಿ.        

ಸೀಬೆಹಣ್ಣಿನ ಸ್ಮೂದಿ
ಬೇಕಾಗುವ ಸಾಮಗ್ರಿ:
2 ಸೀಬೆ ಹಣ್ಣು, 1 ಕಪ್‌ ಹಾಲು, 1/4 ಕಪ್‌ ಸಕ್ಕರೆ, ಸ್ವಲ್ಪ ಐಸ್‌ ತುಂಡುಗಳು, 2 ಚಮಚ ವೆನಿಲಾ ಐಸ್‌ಕ್ರೀಮ್‌.

ಸ್ಮೂಸೀಬೆಹಣ್ಣು ತುಂಡು ಮಾಡಿ. ಒಳಗಿನ ಬೀಜ ತೆಗೆದು ಹಾಲು, ವೆನಿಲಾ ಐಸ್‌ಕ್ರೀಮ್‌ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಐಸ್‌ತುಂಡು ಸೇರಿಸಿ ಸರಿಯಾಗಿ ಕಲಕಿ. ಗ್ಲಾಸಿಗೆ ಹಾಕಿ ಸವಿಯಿರಿ.

ಮಾವು-ಓಟ್ಸ್‌ ಡಿಲೈಟ್‌ ಸ್ಮೂದಿ
ಬೇಕಾಗುವ ಸಾಮಗ್ರಿ:
1 ಕಪ್‌ ಮಾವಿನಹಣ್ಣಿನ ತುಂಡುಗಳು, 2 ಚಮಚ ಓಟ್ಸ್‌ , 2 ಕಪ್‌ ಹಾಲು, ಸ್ವಲ್ಪ ಮಂಜುಗಡ್ಡೆ ತುಂಡುಗಳು.

ಸ್ಮೂ ಮಾವಿನ ಹಣ್ಣಿನ ತಿರುಳು, ಓಟ್ಸ್‌ , ಹಾಲು, ಮಂಜುಗಡ್ಡೆ ತುಂಡು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ. 

ಹಲಸಿನ ಹಣ್ಣಿನ ಸ್ಮೂದಿ
ಬೇಕಾಗುವ ಸಾಮಗ್ರಿ:
10-12 ಹಲಸಿನ ಹಣ್ಣಿನ ಸೊಳೆ, 4 ಚಮಚ ಹಾಲಿನ ಪುಡಿ, 1 ಕಪ್‌ ಹಾಲು, 2 ಚಮಚ ಜೇನುತುಪ್ಪ.

ತಯಾರಿಸುವ ವಿಧಾನ: ಹಲಸಿನ ಹಣ್ಣಿನ ಸೊಳೆ, ಹಾಲಿನ ಪುಡಿ ಮತ್ತು ಹಾಲು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಜೇನುತುಪ್ಪ ಹಾಕಿ ಸರಿಯಾಗಿ ಬೆರೆಸಿ. ನಂತರ ಗ್ಲಾಸಿಗೆ ಹಾಕಿ ರುಚಿ ನೋಡಿ.

ಮುಳ್ಳುಸೌತೆ-ಕರಬೂಜ-ಕಲ್ಲಂಗಡಿ ಸ್ಮೂದಿ
ಬೇಕಾಗುವ ಸಾಮಗ್ರಿ:
1/2 ಕಪ್‌ ಮುಳ್ಳುಸೌತೆ ತುಂಡುಗಳು, 1/2 ಕಪ್‌ ಕರಬೂಜ ಹಣ್ಣಿನ ತುಂಡುಗಳು, 1/2 ಕಪ್‌ ಕಲ್ಲಂಗಡಿ ಹಣ್ಣಿನ  ತುಂಡುಗಳು, 1/2 ಕಪ್‌ ಹಾಲು, ಚಿಟಿಕಿ ಶುಂಠಿ ಪುಡಿ, ಚಿಟಿಕಿ ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಮುಳ್ಳುಸೌತೆ ಚೂರು, ಕರಬೂಜ ಹಣ್ಣಿನ ತುಂಡುಗಳು, ಕಲ್ಲಂಗಡಿ ಹಣ್ಣಿನ ಚೂರು, ಹಾಲು, ಶುಂಠಿ ಪುಡಿ, ಏಲಕ್ಕಿ ಪುಡಿ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಗ್ಲಾಸಿಗೆ ಹಾಕಿ ಸವಿಯಿರಿ.

ಸರಸ್ವತಿ ಎಸ್‌. ಭಟ್‌

ಟಾಪ್ ನ್ಯೂಸ್

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.