ಅಮ್ಮನ ಸಂಶೋಧನೆ, ಸೋಯಾ ಮಂಚೂರಿ 


Team Udayavani, May 30, 2018, 12:31 PM IST

soya.jpg

“ಅಮ್ಮಾ, ಇವತ್ತೇನಾದ್ರು ಸ್ಪೆಷಲ್‌ ಮಾಡಮ್ಮ’ ಅಂತ ಗೋಗರೆದರೆ, ನಾನು ಲಗೋರಿ ಆಡಿ ಬರೋದೊÅಳಗೆ ಏನಾದ್ರೂ ಒಂದು ಹೊಸ ತಿಂಡಿ ರೆಡಿ ಇರುತ್ತಿತ್ತು. ಎಷ್ಟೋ ಸಲ, ಅಡಿಗೆಮನೆಯ ಘಮಘಮ ಪರಿಮಳಕ್ಕೆ ಆಟವನ್ನು ಅರ್ಧಕ್ಕೇ ಬಿಟ್ಟು ಬಂದದ್ದಿದೆ. ಏನೇ ಮಾಡಿ ಕೊಟ್ಟರೂ ಅದರಲ್ಲಿ ತರಕಾರಿ ಹುಡುಕಿ, ಹೆಕ್ಕಿ ಪಕ್ಕಕ್ಕಿಡುವ ನನಗೆ ಬೈದು ಹೈರಾಣಾಗಿದ್ದ ಅಮ್ಮ ಕೊನೆಗೆ, ತರಕಾರಿ ಹಾಕದೆ ಹೇಗೆ ಪೌಷ್ಟಿಕಾಂಶಗಳನ್ನು ನನ್ನ ದೇಹದೊಳಗೆ ತುಂಬಿಸೋದು ಅನ್ನೋ ಸಂಶೋಧನೆಯಲ್ಲಿ ತೊಡಗಿದ್ದಳು. ಕೊನೆಗೆ ಅಂಥಾ ಒಂದು ಅಡುಗೆಯನ್ನು ಮಾಡಿಯೂಬಿಟ್ಟಳು. ಅದುವೇ ಸೋಯಾ ಮಂಚೂರಿ. 

ನನ್ನಮ್ಮ ಅಡಿಗೆ ಮಾಡುವ ಕ್ರಮವೇ ಒಂಥರಾ ಚಂದ. ಅಚ್ಚುಕಟ್ಟು ಹಾಗೂ ಫ‌ಟಾಫ‌ಟ್‌. ಮನೆಗೆ ಬಂದ ಅತಿಥಿಗಳೆÇÉಾ ಅಮ್ಮ ಮಾಡಿದ ಕಾಫಿಯಿಂದ ಹಿಡಿದು, ಬಿಸಿಬೇಳೆಬಾತಿನವರೆಗೆ ಎಲ್ಲವನ್ನೂ ಚಪ್ಪರಿಸಿ, “ಸತ್ಯವತೀದು ಅಡುಗೆಯಂದ್ರೆ ಅಡುಗೆ!’ ಅಂದಾಗ, ಸತ್ಯವತಿ ನನ್ನಮ್ಮ ಅಂತ ಬೀಗುತ್ತಿ¨ªೆ. ಈಗ, ರೂಮಿನಲ್ಲಿ ಗೆಳತಿಯರಿಗೆ ಮಾಡಿ ಕೊಡುವ ಸೋಯಾ ಮಂಚೂರಿಗೆ ಅಮ್ಮನ ಕೈರುಚಿಯೇ ಇದೆ. 

ಸೋಯಾ ಮಂಚೂರಿ ಮಾಡುವ ವಿಧಾನ:
ಬೇಕಾಗುವ ಸಾಮಗ್ರಿ:
ಸೋಯಾಬೀನ್‌, ಮೈದಾಹಿಟ್ಟು, ಖಾರದಪುಡಿ, ಉಪ್ಪು, ಹಸಿಮೆಣಸು, ಶುಂಠಿ, ಈರುಳ್ಳಿ, ಎಣ್ಣೆ, ಟೊಮೆಟೊ ಸಾಸ್‌, ಸೋಯಾ ಸಾಸ್‌.

ಮಾಡುವ ವಿಧಾನ: ಸೋಯಾಬೀನ್‌ ಅನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ. ಮೈದಾ ಹಿಟ್ಟಿಗೆ ನೀರು, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕದಡಿ (ದೋಸೆ ಹಿಟ್ಟಿನ ಹದಕ್ಕೆ). ಕತ್ತರಿಸಿದ ಹಸಿಮೆಣಸು, ಶುಂಠಿ ಹಾಗೂ ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ. ನೆನೆಸಿದ ಸೋಯಾಬೀನ್‌ ಅನ್ನು ಒಂದೊಂದಾಗಿ ಮೈದಾ ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ, ಹುರಿದ ಹಸಿಮೆಣಸಿನ ಕಾಯಿ, ಶುಂಠಿ ಹಾಗೂ ಈರುಳ್ಳಿಯ ಜೊತೆ ಕರಿದ ಸೋಯಾಬೀನ್‌ಗೆ, ಟೊಮೆಟೊ ಸಾಸ್‌ ಮತ್ತು ಸೋಯಾ ಸಾಸ್‌ ಹಾಕಿ, ಬಾಣಲೆಯಲ್ಲಿ ಚೆನ್ನಾಗಿ ಮಗುಚಿ (ಖಾರ ಬೇಕಿದ್ದರೆ ಸ್ವಲ್ಪ ಖಾರದ ಪುಡಿಯನ್ನು ಸೇರಿಸಬಹುದು) 

– ಸಹನಾ ಕಾರಂತ್‌, ಕೊಪ್ಪ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.