ಮಕ್ಕಳು ಅನಾವರಣಗೊಳಿಸಿದ ಅಧ್ವಾನಪುರ


Team Udayavani, Jun 1, 2018, 6:00 AM IST

z-2.jpg

ಪ್ರಸ್ತುತ ರಂಗಭೂಮಿಯ ಸಂದರ್ಭದಲ್ಲಿ ಮಕ್ಕಳ ರಂಗಭೂಮಿಯನ್ನು ಬಹಳ ಗಂಭೀರವಾಗಿ ಪರಿಗಣಿಸಿ ನಾಡಿನೆಲ್ಲೆಡೆ ಬೇಸಿಗೆಯ ರಜಾ ಅವಧಿಯಲ್ಲಿ ಮಕ್ಕಳ ರಂಗಶಿಬಿರವನ್ನು ಏರ್ಪಡಿಸಲಾಗುತ್ತಿದೆ. ಬೈಂದೂರಿನ “ಲಾವಣ್ಯ’ ಸಂಸ್ಥೆ ಏರ್ಪಡಿಸಿದ ರಂಗಶಿಬಿರದಲ್ಲಿ ರೂಪುಗೊಂಡ ನಾಟಕ ಅಧ್ವಾನಪುರ. ಎಚ್‌. ಡುಂಡಿರಾಜ್‌ ರಚಿಸಿದ ನಾಟಕದ ವಿನ್ಯಾಸ, ನಿರ್ದೇಶನ, ಸಂಗೀತವನ್ನು ನಿಭಾಯಿಸಿದವರು ವಾಸುದೇವ ಗಂಗೇರ. ರೋಶನ್‌ ಕುಮಾರ್‌ ಸಹ ನಿರ್ದೇಶನವಿತ್ತು. 

ವರ್ತಮಾನದ ರಾಜಕೀಯ ಭಿತ್ತಿಯಲ್ಲಿ ರಾಜಕಾರಣಿಗಳನ್ನು ಐತಿಹಾಸಿಕ ರಾಜ, ಮಂತ್ರಿಗಳಂತೆ ಚಿತ್ರಿಸಿ, ಮಹಾರಾಜರ ಅರ್ಥಾತ್‌ ವರ್ತಮಾನದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳ ಲೋಲುಪತೆಯನ್ನು ಚಿತ್ರಿಸಿ ಜನರ ಅಧ್ವಾನವನ್ನು ಅನಾವರಣಗೊಳಿಸಿದ ನಾಟಕ ಇದಾಗಿದೆ. ರಾಜಕಾರಣಿಗಳು ತಮ್ಮ ಗೋಸುಂಬೆತನವನ್ನು ಪ್ರದರ್ಶಿಸಿ ಹೇಗೆ ಬಣ್ಣ ಬದಲಿಸುತ್ತಾರೆ, ಜನರನ್ನು ಮಂಕಾಗಿಸುತ್ತಾರೆ, ಒಡೆದು ಆಳುತ್ತಾರೆ ಎನ್ನುವುದೇ ಇಲ್ಲಿನ ಕಥಾವಸ್ತು.

ನಾಟಕ ಆದಿಯಿಂದಲೂ ಲವಲವಿಕೆಯಿಂದ ಸಾಗುತ್ತದೆ. ರಾಜನ ತಿಕ್ಕಲುತನ, ವೈಭವ, ಲೋಲುಪತೆಗಳನ್ನು ದೃಶ್ಯಗಳು ಸಮರ್ಥವಾಗಿ ಅಭಿವ್ಯಕ್ತಿಸಿವೆ. ಮಂತ್ರಿಗಳ ಲಾಭಕೋರತನವನ್ನು ಹಂತಹಂತದಲ್ಲೂ ಅಭಿವ್ಯಕ್ತಗೊಳಿಸಲಾಗಿದೆ. ಕಥೆಯಲ್ಲಿನ ಗೊಂಬೆ ಉತ್ತಮ ರಂಗನೆಡೆ ಮತ್ತು ಸಂಭಾಷಣೆಗಳಿಂದ ಶಿಥಿಲಗೊಳ್ಳುವ ಕಥೆಯನ್ನು ಹಾದಿಗೆ ತರುತ್ತದೆ. ಗಂಟೆ ರಾಜ ಜನರಿಗೆ ಭರಪೂರ ಭರವಸೆ ನೀಡಿ ಅಂತಿಮವಾಗಿ ಮದ್ಯದ ಅಮಲಿನಲ್ಲಿ ಅವರನ್ನು ಕೆಡಹುತ್ತಾನೆ.

ಯುವರಾಜನಾಗ ಹೊರಟ ನಿರ್ದೇಶಕ ಗೊಂಬೆಯೊಡನೆ ಸೇರಿ ಭ್ರಷ್ಟತೆ ರಹಿತವಾದ ಹೊಸ ನಾಡನ್ನು ನೈಜ ಪ್ರಜಾಪ್ರಭುತ್ವದ ಸ್ಥಾಪನೆಯ ಆಶಯದೊಂದಿಗೆ ನಿರ್ಮಿಸ ಹೊರಡುವಲ್ಲಿ ನಾಟಕ ಕೊನೆಗಾಣುತ್ತದೆ. ಉತ್ತಮ ರಂಗ ಚಲನೆ, ದೃಶ್ಯ ಸಂಯೋಜನೆ, ಅಭಿನಯ ನಾಟಕದ ಪ್ಲಸ್‌ ಪಾಯಿಂಟ್‌. ಪ್ರಸಾದನ, ಧ್ವನಿ, ಬೆಳಕು ನಾಟಕಕ್ಕೆ ಬಲ ಒದಗಿಸಿವೆ. ನಾಟಕದಲ್ಲಿ ಆಗಾಗ ಕಾಣಿಸಿಕೊಳ್ಳುವ ನೃತ್ಯಗಳು ನಾಟಕಕ್ಕೆ ಪೂರಕವಾಗಿವೆ. ಮಧುರ ಧ್ವನಿಯ ಹಿನ್ನೆಲೆ ಸಂಗೀತವು ವೈವಿದ್ಯತೆಯೊಂದಿಗೆ ನಾಟಕಕ್ಕೆ ಶಕ್ತಿ ತುಂಬಿದೆ.

ಮೂಲಕಥೆಯ ಕಿರು ಎಳೆಯನ್ನಷ್ಟೇ ಆಧಾರವಾಗಿಸಿಕೊಂಡು ಪ್ರದರ್ಶನದ ಅನುಕೂಲತೆಗೆ ಅನುಸಾರವಾಗಿ ನಿರ್ದೇಶಕರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ರಾಜನ ಲೋಲುಪತೆಯ ಅಭಿವ್ಯಕ್ತಿಗಾಗಿ ಬಳಸಿದ ಅಶ್ಲೀಲ ಅರ್ಥ ಧ್ವನಿಸುವ ವಾಗ್ಬಾಣಗಳು ಹಾವಭಾವಗಳು ಸೌಜನ್ಯದ ಸೀಮೆಯನ್ನು ಮೀರಿ ಮುಜುಗರಕ್ಕೆ ಎಡೆಮಾಡಿವೆ. ಮಕ್ಕಳ ಮನೋಭೂಮಿಕೆಗೆ ಅನುಕೂಲವಲ್ಲದ ಕಥಾವಸ್ತುವನ್ನು ಆಯ್ಕೆ ಮಾಡಿದ್ದರಲ್ಲಿ ನಿರ್ದೇಶಕರು ಮಿತಿಗೊಳಗಾಗಿದ್ದಾರೆ. ಕೆಲ ಹಾಡುಗಳು ಮೂಲ ಕಥಾವಸ್ತುವಿನೊಂದಿಗೆ ಬೆರೆಯದೆ, ರಂಜನೆಯನ್ನು ನೀಡಿದವೇ ಹೊರತು ಕಥಾ ಸಂವಹನಕ್ಕೆ ಪೂರಕವಾಗದೆ ಹೋದವು. ಒಟ್ಟಿನಲ್ಲಿ ನಲವತ್ತಕ್ಕೂ ಹೆಚ್ಚು ಮಕ್ಕಳು ನಟನೆಯ ಪಾಠಗಳನ್ನು ಅಲ್ಪಾವಧಿಯ ಶಿಬಿರದಲ್ಲಿ ಲವಲವಿಕೆಯಿಂದ ಕಲಿತುಕೊಳ್ಳುವ ಮೂಲಕ ಶಿಬಿರ ಸಾರ್ಥಕ ಎನಿಸಿದೆ..

 ಮಂಜುನಾಥ ಶಿರೂರು 

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.