ಕೋಟೇಶ್ವರ-ಬೀಜಾಡಿ ಗ್ರಾ.ಪಂ.ಮುಖ್ಯರಸ್ತೆ ಜಲಾವೃತ
Team Udayavani, Jun 9, 2018, 6:25 AM IST
ಕೋಟೇಶ್ವರ: ಕೋಟೇಶ್ವರ ಹಾಗೂ ಬೀಜಾಡಿ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಇಲ್ಲಿನ ಪೇಟೆಯ ಹೃದಯ ಭಾಗದ ಮುಖ್ಯರಸ್ತೆಯು ಭಾರೀ ಮಳೆಯಿಂದ ಜಲಾವೃತಗೊಂಡಿದೆ.
ಎರಡು ಗ್ರಾ.ಪಂ. ಸುಪರ್ದಿಗೆ ಇಲ್ಲಿನ ಪೇಟೆ ಬರುತ್ತದೆ. ಆದರೆ ಪೇಟೆ ಒಳಚರಂಡಿಯ ಹೂಳೆತ್ತದ್ದರಿಂದ ನೀರಿನ ಹರಿವಿಗೆ ತಡೆಯಾಗಿದೆ. ವಿಜಯ ಬ್ಯಾಂಕ್ ಪಕ್ಕ ವರ್ಷಂಪ್ರತಿ ಕೃತಕ ನೆರೆ ಸೃಷ್ಟಿಯಾಗಿ ಪಾದಚಾರಿಗಳು ಸಮಸ್ಯೆ ಅನುಭವಿಸುವಂತಾಗಿದೆ. ಜತೆಗೆ ಮತ್ತೂಂದು ಬದಿ ಚರಂಡಿಯಲ್ಲಿನ ತ್ಯಾಜ್ಯ ತೆಗೆಯದ್ದರಿಂದ ಅವಾಂತರಕ್ಕೆ ಕಾರಣವಾಗಿದೆ.
ದೇಗುಲಕ್ಕೂ ನೀರು
ಇನ್ನು ರಥಬೀದಿಯಲ್ಲಿನ ಇಕ್ಕೆಲಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಪೇಟೆಯ ನೀರು ರಸ್ತೆಯಲ್ಲಿ ಹರಿದು ಕೋಟಿಲಿಂಗೇಶ್ವರ ದೇಗುಲದ ಒಳಪೌಳಿಗೆ ನೇರವಾಗಿ ನುಗ್ಗುತ್ತಿದೆ. ಇದು ಭಕ್ತರಿಗೆ ಕಿರಿಕಿರಿ ಉಂಟುಮಾಡಿದೆ.
ತ್ಯಾಜ್ಯ ಎಸೆವ ಚಾಳಿ
ಕೋಟೇಶ್ವರ ಮುಖ್ಯರಸ್ತೆಯ ಒಳಚರಂಡಿಗಳಲ್ಲಿನ ತ್ಯಾಜ್ಯ ವಿಲೇವಾರಿಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಪೇಟೆಯಲ್ಲಿನ ವ್ಯಾಪಾರ ಹಾಗೂ ವ್ಯವಹಾರಸ್ಥರು ಚರಂಡಿ ನಿರ್ಮಾಣಕ್ಕೆ ಸಹಕರಿಸಬೇಕು. ತ್ಯಾಜ್ಯ ವಿಲೇವಾರಿ ಮಾಡಿದರೂ, ತ್ಯಾಜ್ಯ ಎಸೆವ ಚಾಳಿ ಮುಂದುವರಿದಿದೆ.
– ಜಾನಕಿ ಬಿಲ್ಲವ,
ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷರು
ಪಂಚಾಯತ್ಗೆ ಮಾಹಿತಿ
ಬೀಜಾಡಿ ವ್ಯಾಪ್ತಿಯ ಕೋಟೇಶ್ವರ ಪೇಟೆಯ ಒಳಚರಂಡಿಯಲ್ಲಿನ ತ್ಯಾಜ್ಯ ವಿಲೇವಾರಿ ಮಾಡಿ ಕೃತಕ ನೆರೆ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪಂಚಾಯತ್ಗೆ ಮಾಹಿತಿ ನೀಡಲಾಗಿದೆ. ಅಧ್ಯಕ್ಷರ ಅನುಮತಿ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು
– ರವೀಂದ್ರ ದೊಡ್ಮನೆ,
ಬೀಜಾಡಿ ಗ್ರಾಮ ಪಂಚಾಯತ್ ಸದಸ್ಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಗ್ಯಾಂಗ್ವಾರ್ ಪ್ರಕರಣ: ಮತ್ತಿಬ್ಬರ ಪತ್ತೆಗೆ ಮುಂದುವರಿದ ಶೋಧ
Udupi ಪ್ರತ್ಯೇಕ ಪ್ರಕರಣ: ಆನ್ಲೈನ್ ಮೂಲಕ ಲಕ್ಷಾಂತರ ರೂ.ವಂಚನೆ
Manipal: ಸಿಟಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
MLC Election ಪ್ರಚಾರ ಪತ್ರದಲ್ಲಿ ಬಿಜೆಪಿಯ ಉದಯ ಕುಮಾರ್ ಶೆಟ್ಟಿ: ಕಾಂಗ್ರೆಸ್ ಎಡವಟ್ಟು
Pangala Case; ಎಲ್ಲಿದ್ದರೂ ತಂದು ನಿಲ್ಲಿಸುತ್ತೇನೆಂದ ದೈವದ ನುಡಿ ನಿಜವಾಯಿತು; ಶರಣಾದ ಆರೋಪಿ
MUST WATCH
ಹೊಸ ಸೇರ್ಪಡೆ
Udupi ಗ್ಯಾಂಗ್ವಾರ್ ಪ್ರಕರಣ: ಮತ್ತಿಬ್ಬರ ಪತ್ತೆಗೆ ಮುಂದುವರಿದ ಶೋಧ
Kadaba ನ್ಯಾಯಾಲಯದಲ್ಲಿ ಖಾಸಗಿ ದೂರು: ಕೊಂಬಾರಿನ ಐವರ ವಿರುದ್ಧ ಪ್ರಕರಣ ದಾಖಲು
Udupi ಪ್ರತ್ಯೇಕ ಪ್ರಕರಣ: ಆನ್ಲೈನ್ ಮೂಲಕ ಲಕ್ಷಾಂತರ ರೂ.ವಂಚನೆ
Kunigal: ಲಕ್ಷ್ಮಿಪುರ ಅರಣ್ಯದಲ್ಲಿ ವ್ಯಕ್ತಿ ಅನುಮಾಸ್ಪದ ಸಾವು…
Bonus ಬಂದಿದೆ ಎಂಬ ಸಂದೇಶ ನಂಬಿ ಒಟಿಪಿ ನೀಡಿ ಲಕ್ಷಾಂತರ ರೂ. ಕಳೆದುಕೊಂಡರು