ಅತ್ಯಾಚಾರವೆಸಗಿ ದರೋಡೆ ಮಾಡುತ್ತಿದ್ದ ಮೂವರ ಬಂಧನ


Team Udayavani, Jun 16, 2018, 11:35 AM IST

arrest2.jpg

ಬೆಂಗಳೂರು: ಮದ್ಯ ವಯಸ್ಸಿನ ಮಹಿಳೆಯರನ್ನು ಪರಿಚಯಸಿಕೊಂಡು ಮೌಲ್ಯಯುತ ವಸ್ತುಗಳನ್ನು ಕೊಡಿಸುವ ನೆಪದಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರವೆಸಗುತ್ತಿದ್ದ ಮೂವರ ತಂಡವನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹಾಸನದ ಚನ್ನರಾಯಪಟ್ಟಣ ತಾಲೂಕಿನ ಜೆ.ಕೆ.ಭರತ್‌ (24), ಮಂಡ್ಯ ಕೆ.ಆರ್‌.ಪೇಟೆ ತಾಲೂಕಿನ ಪ್ರಮೋದ್‌ (21) ಮತ್ತು ತುಮಕೂರಿನ ಕುಣಿಗಲ್‌ ತಾಲೂಕಿನ ಹರೀಶ್‌ (26) ಬಂಧಿತರು. ಆರೋಪಿಗಳು ತಮಗೆ ಪರಿಚಯವಾದ ಮಹಿಳೆಯರು ಹಾಗೂ ವೇಶ್ಯಾವಾಟಿಕೆ ನಡೆಸುವ ಮಹಿಳೆಯರನ್ನು ಟಾರ್ಗೆಟ್‌ ಮಾಡಿಕೊಂಡು ಅತ್ಯಾಚಾರವೆಸಗುತ್ತಿದ್ದರು. ಬಳಿಕ ಮಹಿಳೆಯರ ಬಳಿ ಇರುವ ನಗದು, ಚಿನ್ನ ದರೋಡೆ ಮಾಡಿ ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಭರತ್‌ ಆಟೋ ಚಾಲಕನಾಗಿದ್ದು, ಪ್ರಮೋದ್‌ ಮತ್ತು ಹರೀಶ್‌ ಕ್ಯಾಬ್‌ ಡ್ರೈವರ್‌ಗಳಾಗಿದ್ದಾರೆ. ಒಂದು ವರ್ಷದ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಐಷಾರಾಮಿ ಜೀವನ ನಡೆಸುವ ಆಸೆಯಿಂದ ದರೋಡೆಗೆ ಇಳಿದಿದ್ದರು. ದೇವನಹಳ್ಳಿ, ಯಲಹಂಕ, ಮಾದನಾಯಕನಹಳ್ಳಿ ಭಾಗದಲ್ಲಿ ಪರಿಚಯವಾದ ಮಹಿಳೆಯರನ್ನು ಪುಸಲಾಯಿಸಿ, ಕೆ.ಆರ್‌.ಪೇಟೆ ಮತ್ತು ಹಾಸನದ ಹಿರೇಸಾವೆ ಭಾಗದ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರವೆಸಗಿ ದರೋಡೆ ಮಾಡುತ್ತಿದ್ದರು.

ಇತ್ತೀಚೆಗೆ ತಮಗೆ ಪರಿಚಯವಾದ ಮಾದನಾಯಕನಹಳ್ಳಿಯ ಮಹಿಳೆಯನ್ನು ಆರೋಪಿ ಪ್ರಮೋದ್‌, ಇತರೆ ಆರೋಪಿಗಳ ಜತೆ ತನ್ನ ಕಾರಿನಲ್ಲಿ ಕೆ.ಆರ್‌.ಪೇಟೆ ತಾಲೂಕಿನ ಹುಬ್ಬನಹಳ್ಳಿ ಗ್ರಾಮಕ್ಕೆ ಕರೆದೊಯ್ದಿದ್ದ. ಬಳಿಕ ಹನುಮನಹಳ್ಳಿಯ ಗುಂಡ ಎಂಬಾತನೂ ಸೇರಿ ಒಟ್ಟು ನಾಲ್ವರು ಆ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತರ ಆಕೆ ಬಳಿಯಿದ್ದ ಮೊಬೈಲ್‌, ಚಿನ್ನದ ಸರ, ಒಂದು ಜತೆ ಓಲೆ ಕಸಿದುಕೊಂಡಿದ್ದು, ಹೀರೆಸಾವೆ ಬಸ್‌ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಯಾರೊಬ್ಬರಿಗೇ ಮಹಿಳೆ ಪರಿಚಯವಾದರೂ ಮೂವರೂ ಆತ್ಮೀಯತೆ ಬೆಳೆಸಿಕೊಳ್ಳುತ್ತಿದ್ದರು. ಬಳಿಕ ಅವರ ವೈಫ‌ಲ್ಯಗಳನ್ನು ತಿಳಿದುಕೊಂಡು ಆರೇಳು ತಿಂಗಳು ಅವರೊಂದಿಗೆ ವಾಟ್ಸ್‌ಆ್ಯಪ್‌ ಚಾಟಿಂಗ್‌, ಫೋನ್‌ ಕರೆ ಮಾಡಿ ದುಬಾರಿ ವಸ್ತುಗಳನ್ನು ಕೊಡಿಸುವ ಆಮಿಷವೊಡುತ್ತಿದ್ದರು. ನಂತರ ಒಂದು ದಿನ ನಿಗದಿ ಮಾಡಿ, ತಮ್ಮೊಂದಿಗೆ ಕರೆದೊಯ್ಯುತ್ತಿದ್ದರು.

ಈ ಹಿಂದೆ ವೇಶ್ಯಾವಾಟಿಕೆ ನಡೆಸುವ ಮಹಿಳೆಯರನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ಹಾಸನದ ಹೀರೆಸಾವೆ ಬಳಿಯ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅತ್ಯಾಚಾರವೆಸಗಿ, ದರೋಡೆ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಇನ್ನು ಕೆಲ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂಬುದು ತಿಳಿದು ಬಂದಿದ್ದು. ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.

ಬಂಧನಕ್ಕೆ ನೆರವಾದ ಸಂತ್ರಸ್ತೆ: ಸದ್ಯ ದೂರು ನೀಡಿರುವ ಸಂತ್ರಸ್ತೆಯನ್ನು ಪರಿಚಯಿಸಿಕೊಂಡಿದ್ದ ಆಟೋ ಚಾಲಕ ಭರತ್‌, ಮತ್ತೂಮ್ಮೆ ಆಟೋ ಬೇಕಿದ್ದರೆ ಕರೆ ಮಾಡುವಂತೆ ಮೊಬೈಲ್‌ ನಂಬರ್‌ ಕೊಟ್ಟಿದ್ದ. ಬಳಿಕ ಸಂತ್ರಸ್ತೆಯನ್ನು ಕೆಲಸದ ನಿಮಿತ್ತ ಸಾಕಷ್ಟು ಬಾರಿ ಡ್ರಾಪ್‌ ಮಾಡಿದ್ದ. ಈ ಮಧ್ಯೆ ಸಂತ್ರಸ್ತೆ ಆರೋಪಿ ಬಳಿ ಸೆಕೆಂಡ್‌ ಹ್ಯಾಂಡ್‌ ದ್ವಿಚಕ್ರ ವಾಹನ ಬೇಕಿದೆ ಎಂದು ಕೇಳಿದ್ದರು. ಕೆಲ ದಿನಗಳ ಬಳಿಕ ಕರೆ ಮಾಡಿದ ಆರೋಪಿ ವಾಹನ ರೆಡಿಯಿದೆ,

ಹಣ ತೆಗೆದುಕೊಂಡು ಬನ್ನಿ ಎಂದು ಹೇಳಿದ್ದ. ಹಾಗೇ ಇತರೆ ಸಹಚರರಿಗೆ ಈ ವಿಚಾರ ತಿಳಿಸಿದ್ದ. ನಂತರ ಆರೋಪಿ ಪ್ರಮೋದ್‌, ಮಹಿಳೆಯನ್ನು ಕಾರಿನಲ್ಲಿ ಕೆ.ಆರ್‌.ಪೇಟೆಗೆ ಕರೆದೊಯ್ದಿದ್ದು, ಮೂವರು ದೌರ್ಜನ್ಯವೆಸಗಿದ್ದರು. ಘಟನೆ ನಂತರ ಪೊಲೀಸರಿಗೆ ದೂರು ನೀಡಿದ್ದ ಮಹಿಳೆ, ಆರೋಪಿ ಭರತ್‌ ನೀಡಿದ್ದ ಮೊಬೈಲ್‌ ಸಂಖ್ಯೆಯನ್ನು ಪೊಲೀಸರಿಗೆ ನೀಡಿದ್ದರು. ಈ ಸಂಖ್ಯೆಯ ನೆಟ್‌ವರ್ಕ್‌ ಹಾಗೂ ಮಹಿಳೆ ನೀಡಿದ ಆಟೋ ಸಂಖ್ಯೆ ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಟಾಪ್ ನ್ಯೂಸ್

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

putturPuttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Puttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

1

Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಯದಿರಿ

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !

Pen Drive Case; ಏರ್‌ಪೋರ್ಟ್‌ನಲ್ಲಿ ಪ್ರಜ್ವಲ್‌ಗೆ “ಸ್ವಾಗತಿ’ಸಲು ಎಸ್‌ಐಟಿ ಸಿದ್ದತೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

4

Arrested: ಬೀದಿಬದಿ ಮಲಗಿದ್ದವರ ಹತ್ಯೆ: ಸರಣಿ ಹಂತಕನ ಸೆರೆ

7

Rave Party: ನಟಿ ಹೇಮಾ ಸೇರಿ 8 ಮಂದಿಗೆ ನೋಟಿಸ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

Train; ಜೂನ್‌ ತಿಂಗಳ ಮೊದಲ ವಾರದಲ್ಲಿ ರೈಲು ವ್ಯತ್ಯಯ

putturPuttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Puttur ಅಡಿಕೆ ಸಿಪ್ಪೆಯಲ್ಲಿ ಬೆಳೆಯಿತು ಅಣಬೆ ಕೃಷಿ!

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!

Madikeri ಅಪಾಯ ಆಹ್ವಾನಿಸುವ ಪ್ರವಾಸಿಗರ ಸೆಲ್ಫಿ , ರೀಲ್ಸ್‌ ಗೀಳು!

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Kundapura ಎಸ್‌ಐ ವ್ಯತಿರಿಕ್ತ ಹೇಳಿಕೆ; ಚಾಲಕ ನಿರ್ದೋಷಿಯೆಂದ ಕೋರ್ಟ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Mangaluru ರಸ್ತೆಯಲ್ಲಿಯೇ ನಮಾಜ್‌: ವೀಡಿಯೋ ವೈರಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.