ನಿಪ ಅಲ್ಲ ಫಿಫಾ ಫ‌ುಟ್‌ಬಾಲ್‌ ಜ್ವರ!


Team Udayavani, Jun 16, 2018, 12:16 PM IST

1-bb.jpg

ವಿಶ್ವದೆಲ್ಲೆಡೆ ಈಗ ಫ‌ುಟ್‌ಬಾಲ್‌ ಜ್ವರ. ನೆಚ್ಚಿನ ತಂಡ,ಆಟಗಾರರ ಪರ ಅಭಿಮಾನಿಗಳ ಕೂಗು ಮುಗಿಲು ಮುಟ್ಟಿದೆ. ಗೆಲ್ಲುವುದು ಯಾವುದೇ ತಂಡವಾಗಿರಬಹುದು. ಆದರೆ ಪ್ರತಿ ತಂಡಗಳಿಗೂ ಅದರದ್ದೇ ಆದ ಅಭಿಮಾನಿ ಬಳಗವೊಂದಿದೆ. ಅವರೆಲ್ಲರು ವಿಶ್ವ ಫ‌ುಟ್‌ಬಾಲ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. 

ಭಾರತ ವಿಶ್ವ ಕೂಟದಲ್ಲಿ ಪಾಲ್ಗೊಳ್ಳದೆ ಇರಬಹುದು. ಆದರೆ ಭಾರತೀಯರ ಹೃದಯ ಸಿಂಹಾಸನದಲ್ಲಿ ಫ‌ುಟ್‌ಬಾಲ್‌ ಮೇಲೆ ಅಪಾರ ಪ್ರೀತಿ ಕಾಣುತ್ತದೆ. ಅದರಲ್ಲೂ ಕೋಲ್ಕತಾ, ಕೇರಳ ಮತ್ತು ಗೋವಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಫ‌ುಟ್‌ಬಾಲ್‌ ಆಸಕ್ತಿ ಹೊಂದಿದ್ದಾರೆ. ತಮ್ಮ ಮನೆ, ಅಂಗಡಿ, ರಸ್ತೆ, ನಿಂತ ಹಳೆ ಗಾಡಿಗಳು, ಗೋಡೆ ಇನ್ನಿತರ ವಸ್ತುಗಳ ಮೇಲೆ ನೆಚ್ಚಿನ ಆಟಗಾರ, ದೇಶದ ಬಣ್ಣದ ಹಚ್ಚಿ ತಮ್ಮ ಅಗಾದ ಪ್ರೀತಿಯನ್ನು ತೋರ್ಪಡಿಸಿದ್ದಾರೆ. 

ಫ‌ುಟ್‌ಬಾಲ್‌ನ ಮೆಕ್ಕಾ ಕೋಲ್ಕತಾ: ಕೋಲ್ಕತಾವನ್ನು ಫ‌ುಟ್‌ಬಾಲ್‌ನ ಮೆಕ್ಕಾ ಎಂದು ಕರೆಯುತ್ತಾರೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫ‌ುಟ್‌ಬಾಲ್‌ ಅಭಿಮಾನಿಗಳ ಕ್ರೇಜ್‌ ಹೊಂದಿರುವ ಏಕೈಕ ಸ್ಥಳ. ಪ್ರಸ್ತುತ ಕೋಲ್ಕತಾದ ಬೀದಿಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಚಿತ್ರವನ್ನು ಬಣ್ಣದಲ್ಲಿ ಚಿತ್ರಿಸಿದ್ದಾರೆ. ರಸ್ತೆ ಯುದ್ದಕ್ಕೂ ನೇಮಾರ್‌,  ಮೆಸ್ಸಿ, ರೊನಾಲ್ಡಿನೊ ರಂತಹ ದಿಗ್ಗಜ ಆಟಗಾರರ ಅಂದದ ಫೋಟೋಗಳು ರಾರಾಜಿಸುತ್ತಿದೆ. ಜತೆಗೆ ಗಾಳಿಪಟ ತಯಾರಿಸುವ ಕಲಾವಿದರು ಬ್ಯುಸಿ. ವಿವಿಧ ಬಣ್ಣಗಳ, ತಂಡಗಳ, ಆಟಗಾರರ ಹೆಸರಿನ ಗಾಳಿ ಪಟಗಳು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 

ಶೃಂಗಾರಗೊಂಡಿದೆ ಗೋವಾ: ಗೋವಾದಲ್ಲೂ ಫ‌ುಟ್‌ಬಾಲ್‌ ಕ್ರೇಜ್‌ ಕಡಿಮೆಯೇನಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಎಲ್ಲರು ಫ‌ುಟ್‌ಬಾಲ್‌ ಅನ್ನು ಅಪ್ಪಿಕೊಂಡಿದ್ದಾರೆ. ವಿಶ್ವ ಸಮರ ನೋಡಲು ಸಜ್ಜಾಗಿರುವ ಅವರು ಮಕ್ಕಳಲ್ಲಿ ಫ‌ುಟ್‌ಬಾಲ್‌ ಕುರಿತಂತೆ ವಿಶೇಷ ಕಾರ್ಯಗಾರ ನಡೆಸಿ ಜಾಗೃತಿ ನಡೆಸುವ ಕಾರ್ಯ ನಡೆಸುತ್ತಿದ್ದಾರೆ. 

ಕೇರಳದಲ್ಲಿ ಫಿಫಾ ಜ್ವರ: ಕೇರಳದಲ್ಲಿ ನಿಪ ಜ್ವರದ ಆತಂಕವನ್ನು ಕಿತ್ತು ಬಿಸಾಕಿರುವ ಅಲ್ಲಿನ ಫ‌ುಟ್‌ಬಾಲ್‌ ಅಭಿಮಾನಿಗಳು ರಸ್ತೆಯ ಉದ್ದಗಲ, ಹಲಸಿನ ಮರ, ಆಟೋ ರಿಕ್ಷಾ. ರಸ್ತೆಯ ಗೋಡೆಗಳಲ್ಲಿ ತಮ್ಮ ನೆಚ್ಚಿನ ಫ‌ುಟ್‌ಬಾಲ್‌ ಆಟಗಾರರ ಚಿತ್ರವನ್ನು ಬರೆದಿದ್ದಾರೆ. ಕಟೌಟ್‌ ಫ್ಲೆಕ್ಸ್‌ಗಳಲ್ಲಿ ತಮ್ಮ ನೆಚ್ಚಿನ ಆಟಗಾರರ ಫೋಟೋವನ್ನು ಹಾಕಿ ಅಭಿಮಾನಿಗಳು ಗೆದ್ದು ಬರಲಿ ಎಂದು ಶುಭ ಹಾರೈಸಿದ್ದಾರೆ. ದೇವರ ನಾಡಿನ ಹೆಚ್ಚಿನ ಅಭಿಮಾನಿಗಳು ಬ್ರೆಜಿಲ್‌, ಪೋರ್ಚುಗಲ್‌ ತಂಡಗಳನ್ನು ಬೆಂಬಲಿಸುವ ಫೋಟೊಗಳು ರಸ್ತೆಯಲ್ಲಿ ಕಾಣಬಹುದಾಗಿದೆ. 

ವಿಶ್ವದಾದ್ಯಂತ ಸಂಭ್ರಮ
ಬ್ರೆಜಿಲ್‌ನ ಪ್ರಮುಖ ನಗರದಲ್ಲಿ ಅಭಿಮಾನಿಗಳು ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ರಸ್ತೆಯಲ್ಲಿ ನೆಚ್ಚಿನ ಆಟಗಾರನ ಚಿತ್ರವನ್ನು ಕಾಣಬಹುದು. ಜತೆಗೆ ನೇಯ್ಮರ್‌ ಸೇರಿದಂತೆ ಪ್ರಮುಖ ಆಟಗಾರರ ಕಟೌಟ್‌ಗಳು ರಾರಾಜಿಸುತ್ತಿವೆ. ರಿಯೋ ಡಿ ಜನೈರೋವಂತೂ ಅಲಂಕಾರದಿಂದ ಜಾತ್ರೆಯಂತೆ ಕಾಣುತ್ತಿದೆ. 

ಜನಪ್ರಿಯ ಮೆಸ್ಸಿ ಕಟ್ಟಿಂಗ್‌

ಅರ್ಜೆಂಟೀನಾ ತಂಡದ ಲಯೋನೆಲ್‌ ಮೆಸ್ಸಿ ಹೇರ್‌ಕಟ್ಟಿಂಗ್‌ ಸರ್ಬಿಯಾದಲ್ಲಿ ಫೇಮಸ್‌ ಆಗಿದೆ. ಸರ್ಬಿಯಾದ ಬಾರ್ಬರ್‌ ಮರಿಯೋ ಹವಾಲಾ ತಮ್ಮ ಕೈಚಳಕವನ್ನು ಅಭಿಮಾನಿಗಳ ತಲೆ ಮೇಲೆ ಕೆತ್ತಿದ್ದಾರೆ. 

ಹೇಮಂತ್‌ ಸಂಪಾಜೆ 

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.