“ಬಾಳೆ’ಯಿಂದ ಹೊಸ ಬಾಳು


Team Udayavani, Jun 18, 2018, 4:12 PM IST

bale.jpg

ಪೇಟೆಯಲ್ಲಿದ್ದು ದುಡಿಯುತ್ತಿದ್ದರೂ ಹುಟ್ಟೂರಿನಲ್ಲಿ ಏನಾದರೂ ಕೃಷಿ ಮಾಡಬೇಕೆಂಬ ಹಂಬಲ ನಾರಾಯಣ ಹೆಗಡೆಯವರನ್ನು ಕಾಡುತ್ತಲೇ ಇತ್ತು. ನಾಲ್ಕಾರು ಮಂದಿಯ ಸಲಹೆ ಪಡೆದು, ತಂದೆ ಬಿಟ್ಟು ಹೋಗಿರುವ ಜಮೀನಿನಲ್ಲಿ ಬಾಳೆ ಬೆಳೆಯಲು ನಿರ್ಧರಿಸಿದರು. 

ಒಂದು ಕಾಲದಲ್ಲಿ ಅಪ್ಪ ತೋಟ ಮಾಡಬೇಕು ಎಂದು ಬಯಸಿದ್ದ ಸ್ಥಳ ಅದಾಗಿತ್ತು. ಅಪ್ಪನ ಅಗಲಿಕೆಯ ನಂತರವೂ ಅಲ್ಲಿ ಜಾಗ ಖಾಲಿ ಇತ್ತು. ಅಲ್ಲೊಂದು ಇಲ್ಲೊಂದು ತೆಂಗಿನ ಮರಗಳು, ಒಂದು ನೀರಿನ ಟ್ಯಾಂಕಿ ಬಿಟ್ಟರೆ ಇನ್ನೇನೂ ಇರಲಿಲ್ಲ. ಕುರುಚಲು ಗಿಡಗಳು, ಮಣ್ಣಿನ ದಿನ್ನೆಗಳು, ಬೇಲಿಯೂ ಇರದ ತೋಟವಾಗಿತ್ತದು.  ಇದ್ದ ಒಬ್ಬ ಮಗ ಬೆಂಗಳೂರು ಸೇರಿಯಾಗಿತ್ತು. 

ಆದರೆ, ಯಾವತ್ತು ಯೋಗ ಗುರು ಬಾಬಾ ರಾಮದೇವ ಅವರು ಕಟ್ಟಿದ ಪತಂಜಲಿ ಕಂಪನಿಯಲ್ಲಿ ನೌಕರಿಗೆ  ಸೇರಿಕೊಂಡರೋ ಅಲ್ಲಿಗೆ ಇವರ ಬದುಕಿಗೂ ಹೊಸ ತಿರುವು ನೀಡಿತ್ತು. ರಾಮದೇವ್‌ ಅವರು ಪತಂಜಲಿ ಸಂಸ್ಥೆಯನ್ನು ಕಟ್ಟಿದ ರೀತಿ, ಅವರ ಸ್ವದೇಶಿ ಅಭಿಮಾನ ಇವರಲ್ಲೂ ಮೂಲ ನೆಲೆಯ ಸಂವೇದನೆ ಜಾಗೃತಗೊಳ್ಳಲು ಕಾರಣವಾಯಿತು. ನಾವೂ ಏನಾದರೂ ಸಾಧನೆ ಮಾಡಬೇಕು ಅನ್ನಿಸಿತು. ಆಗ ಅಪ್ಪನ ಖಾಲಿ ಜಾಗವೂ ನೆನಪಾಯಿತು. ಊರಿಗೆ ಬಂದು ಆ ಜಾಗ ನೋಡಿದರೆ ಯಥಾ ಪ್ರಕಾರ ಕುರುಚಲು ಗಿಡಗಳು ನಕ್ಕವು. ಮನೆಯ ಸಮೀಪವೇ ಇರುವ ಮೂರೂಕಾಲು ಎಕರೆ ಭೂಮಿಯಲ್ಲಿ ಏನಾದರೂ ಕೃಷಿ ಮಾಡಬೇಕು ಎಂದು ಮನಸ್ಸು ಹಂಬಲಿಸಿತು. 

ಗೆಳೆಯ ಸುಬ್ರಹ್ಮಣ್ಯ ಹೆಗಡೆ ಗುಳೇಬಯಲು, ಜಿ.ವಿ.ಹೆಗಡೆ ಮುಂಡಗೆರೆ ಅವರ ಸಹಕಾರ ಕೇಳಿದರು. ಶಿರಸಿಯ ತೋಟಗಾರಿಕಾ ಇಲಾಖೆಗೂ ಹೋಗಿ ಮಾಹಿತಿ ಪಡೆದರು. ಬನವಾಸಿಯಿಂದ ಜಿ9 ಟಿಶ್ಯು ಬಾಳೆ ಸಸಿಯನ್ನೂ ತಂದರು. ಅದಕ್ಕೂ ಮೊದಲು ಇಲ್ಲಿನ ಭೂಮಿಯನ್ನು ಸ್ವತ್ಛಗೊಳಿಸಿ, ಇರುವ ಮರಗಳನ್ನು ಹಾಗೆ ಬಿಟ್ಟು 3 ಅಡಿ ಅಗಲದ ಕಾಲುವೆ ತೋಡಿಸಿದರು. ದಡ್ಡಿ ಗೊಬ್ಬರ, ಕೋಳಿ ಗೊಬ್ಬರ ಹಾಕಿ ಭೂಮಿ ಹದಗೊಳಿಸಿ ಸಸಿಯ ನಾಟಿಗೆ ಸಿದ್ಧಗೊಳಿಸಿಕೊಂಡರು. 12 ಅಡಿ ಅಗಲ 9 ಅಡಿ ಉದ್ದದ ಅಂತರದಲ್ಲಿ ಒಂದಕ್ಕೆ 12ರೂ.ಕೊಟ್ಟು ತಂದ 2000 ಬಾಳೆ ಸಸಿಗಳನ್ನು ನಾಟಿ ಮಾಡಿದರು. ನಡುವೆ 1200 ಅಡಿಕೆ ಸಸಿ ಕೂಡ ಹಾಕಿದರು. ಬೋರ್‌ ವೆಲ್‌ ತೋಡಿಸಿ ಮೈಕ್ರೋ ಜೆಟ್‌ ಕೂಡ ಅಳವಡಿಸಿದರು. 

ಭೂಮಿ ಇದ್ದದ್ದು ಇಳಿಜಾರು ಪ್ರದೇಶ ಆಗಿದ್ದರಿಂದ ಇಲ್ಲಿ ಬಾಳೆ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದ್ದರು. ಈಗ ಅವರೆಲ್ಲಾ ಹುಬ್ಬೇರಿಸುವಂತಾಗಿದೆ. ಏಕೆಂದರೆ, ಕೇವಲ 8 ತಿಂಗಳಿಗೆ ಫ‌ಸಲು ಕಚ್ಚಿದೆ.

ಈ ಸಾಧನೆ ಮಾಡಿದ್ದು ಶಿರಸಿ ತಾಲೂಕಿನ ಸಾಲಕಣಿ ಪಂಚಾಯ್ತಿ ವ್ಯಾಪ್ತಿಯ ಮಣ್ಣೀಮನೆಯ ಗಣೇಶ ನಾರಾಯಣ ಹೆಗಡೆ. ಓದಿದ್ದು ಬಿ.ಎ. ಕೆಲಸ ಮಾಡುವದು ಬೆಂಗಳೂರಿನ ಪತಂಜಲಿ ಕಂಪೆನಿಯಲ್ಲಿ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಹುದ್ದೆಯಲ್ಲಿ ಕೆಲಸ ಮಾಡುತ್ತಾರೆ. ಹದಿನೈದು ದಿನಕ್ಕೊಮ್ಮೆ ಶನಿವಾರ ರವಿವಾರ ಊರಿಗೆ ಬಂದು ತೋಟ ನೋಡಿಕೊಳ್ಳುತ್ತಾರೆ. ಇಲ್ಲಿ ನಿರಂತರವಾಗಿ ಕೆಲಸ ಮಾಡಲು ರವಿ ಮುಕ್ರಿ ಹಾಗೂ ಅನಿತಾ ಮುಕ್ರಿ ಜೊತೆಯಾಗಿದ್ದಾರೆ. ಕಾಲ ಕಾಲಕ್ಕೆ ರೋಗಕ್ಕೆ ಔಷಧ ಹಾಕುತ್ತ, ಯೂರಿಯಾ ಡೆಎಪಿ, ಎಂಒಪಿ ರಾಸಾಯನಿಕ ಗೊಬ್ಬರ ಕೊಡುತ್ತ, ಕೋಳಿ ಗೊಬ್ಬರವನ್ನೂ ಕೊಟ್ಟು ಬೆಳಸುತ್ತಿದ್ದಾರೆ. ಈಗಾಗಲೇ ಈ ತೋಟಕ್ಕೆ ಸುಮಾರು 10 ಲಕ್ಷ ರೂ. ಖರ್ಚು ಬಂದಿದ್ದು, ಪ್ರತಿ ಗೊನೆಗಳೂ 50ರಿಂದ 60 ಕೇಜಿ ತೂಗುವ ಲಕ್ಷಣಗಳಿವೆ. 

ಈಗ ಮಾರುಕಟ್ಟೆಯಲ್ಲಿ 11ರಿಂದ 12 ರೂ. ಅಂದು ಕೊಂಡರೂ ಕೋಯ್ಲಿಗೆ 6 ಲಕ್ಷ ರೂ. ಬಾಳೆ ದರ ಏರಿದರೆ ಲಾಭ. ಇದರ ನಡುವೆ ಅರ್ಧ ಎಕರೆ ಕಬ್ಬು ಕೂಡ ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಗಣೇಶ.

ಆರಂಭದ ದಿನಗಳಲ್ಲಿ ಬೆಂಗಳೂರಿನಿಂದ ಬಂದು ಕೃಷಿ ಮಾಡಿ ವಾಪಸ್‌ 450 ಕಿಮಿ ಪ್ರಯಾಣ ಮಾಡುವುದು ಸಾಧ್ಯನಾ ಎಂಬ ಪ್ರಶ್ನೆ ಇತ್ತು. ಆದರೆ, ಅಷ್ಟು ದೂರದಿಂದ ಬಂದು ಹೋದರೂ ತೋಟ ನೋಡಿದರೆ ಮನಸ್ಸು ನಿರಾಳ ಆಗುತ್ತದೆ ಎನ್ನುತ್ತಾರೆ. ಊರಲ್ಲೇ ಇದ್ದು ಸಾಧನೆ ಮಾಡಲಾಗದ ಅನೇಕರಿಗೆ ದೂರದಿಂದ ಬಂದು ಗಣೇಶ ಮಾಡಿದ ಸಾಧನೆ ಬೆರಗು ತರುತ್ತಿದೆ. ಪೇಟೆಯಲ್ಲಿ ನೌಕರಿ ಮಾಡುತ್ತಲೂ ಹಳ್ಳಿಯತ್ತ ಮುಖ ಮಾಡಲು ಸಾಧ್ಯ ಎಂಬುದಕ್ಕೆ ಇವರೊಂದು  ಉದಾಹರಣೆ.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.