ಶಿರ್ಲಾಲು ಸೂಡಿ ಬಸದಿಯ ಪುನಃ ನಿರ್ಮಾಣ ಸಂಕಲ್ಪ


Team Udayavani, Jul 9, 2018, 6:00 AM IST

0807ajke01.jpg

ಅಜೆಕಾರು:ಪಶ್ಚಿಮ ಘಟ್ಟ ತಪ್ಪಲಿನ ಕಾನನದ ನಡುವೆ ಇರುವ ಪುಟ್ಟ ಗ್ರಾಮ ಶಿರ್ಲಾಲು ಸೂಡಿ. ಇಲ್ಲಿನ ತಾಣದ ಬೆಟ್ಟು ಎಂಬಲ್ಲಿ ಸುಮಾರು ಎರಡು ಶತಮಾನಗಳಿಂದ ಯಾವುದೇ ಪೂಜೆ ಕಾರ್ಯಕ್ರಮ ನಡೆಯದೇ ಜನರ ಮನದಿಂದ ಕಣ್ಮರೆಯಾಗಿದ್ದ ಬಸದಿಯೊಂದು ಗೋಚರಕ್ಕೆ ಬಂದಿದ್ದು ಇದರ  ಪುನರ್‌ ನಿರ್ಮಾಣದ ಸಂಕಲ್ಪವನ್ನು ಸ್ಥಳೀಯರು ಮಾಡಿದ್ದಾರೆ.

ಸುಮಾರು 300 ವರ್ಷಗಳ ಹಿಂದೆ ನಿರ್ಮಾಣಗೊಂಡು ಸ್ಥಳೀಯರ ಆರಾಧ್ಯ ಆರಾಧನ ಕೇಂದ್ರವಾಗಿ ವೈಭವದಿಂದ ಧಾರ್ಮಿಕ ಚಟುವಟಿಕೆ ನಡೆಯುತ್ತಿದ್ದ ಈ ಬಸದಿಯಲ್ಲಿ 200 ವರ್ಷಗಳಿಂದ ಯಾವುದೇ ಧಾರ್ಮಿಕ ಕಾರ್ಯ ನಡೆದಿಲ್ಲ. ಅನಂತರದ ದಿನಗಳಲ್ಲಿ ಬಸದಿ ಶಿಥಿಲಗೊಂಡು ಸಂಪೂರ್ಣವಾಗಿ ಕುಸಿದು ಬಿದ್ದು ಗಿಡ ,ಮರ, ಪೊದೆಗಳಿಂದ ಆವೃತವಾಗಿ ಕಣ್ಮರೆಯಾಗಿತ್ತು.

ಬಸದಿಯ ಗರ್ಭಗುಡಿ ಕುಸಿದು ಬಿದ್ದು ಕೇವಲ ಗೋಡೆಯ ಮುರಕಲ್ಲುಗಳು ಅವಶೇಷವಾಗಿ ಕಂಡುಬಂದರೆ, ಬಸದಿಯ ಹೊರಭಾಗದಲ್ಲಿ ಕಲ್ಕುಡ ದೈವದ ಕಲ್ಲು ಪಾಳುಬಿದ್ದ ಸ್ಥಿತಿಯಲ್ಲಿದೆ.ಬಸದಿಗೆ ಸಂಬಂಧಪಟ್ಟಂತೆ ಸುಮಾರು 20 ಅಡಿ ಆಳದ ತೀರ್ಥಬಾವಿ ಪಾಳುಬಿದ್ದಿದೆ.ಇದರ ಸುತ್ತಲೂ ಗಡಿ ಕಲ್ಲುಗಳಿದ್ದು ಹಿಂದೆ ವೈಭವದಿಂದ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಕುರುಹು ಗೋಚರಿಸುತ್ತಿವೆ.

ಸೂಡಿ ಮನೆತನದ ಆಡಳಿತಕ್ಕೊಳಪಟ್ಟ ಈ ಬಸದಿಯಲ್ಲಿ ಭಗವಾನ್‌ ಶ್ರೀ ಆದಿನಾಥ ಸ್ವಾಮಿ, ಮಹಾಮಾತೆ ಶ್ರೀ ಪದ್ಮಾವತಿ ದೇವಿ ಆರಾಧಿಸಿಕೊಂಡು ಬರಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಸೂಡಿ ಮನೆತನ, ಸ್ಥಳೀಯ ಗಾಮಸ್ಥರಿಗೆ ಸಂಕಷ್ಟ ಎದುರಾದಾಗ ದೈವಜ್ಞರ ಆರೂಢ ಪಶ್ನೆಯಲ್ಲಿ ಕಂಡುಕೊಂಡಂತೆ ಬಸದಿ ಪುನರ್‌ ನಿರ್ಮಾಣದ ಸಂಕಲ್ಪ ಮಾಡಲಾಗಿದೆ.

ಬಸದಿಗೆ ಸಂಬಂಧಪಟ್ಟು ಹಿಂದೆ ಸುಮಾರು 400 ಎಕರೆ ಜಾಗ ಇದ್ದರೆ ಈಗ 25 ಸೆಂಟ್ಸ್‌ ಜಾಗ ಇದ್ದು ಅದರಲ್ಲಿ ಬಸದಿ ನಿರ್ಮಾಣ ಕಾರ್ಯ ನಡೆಯಲಿದೆ. 

40 ಲ.ರೂ. ವೆಚ್ಚದಲ್ಲಿ ಪುನರ್‌ ನಿರ್ಮಾಣ
ಪುನರ್‌ ನಿರ್ಮಾಣದ ಪೂರ್ವಭಾವಿಯಾಗಿ ನಡೆಯಬೇಕಾದ ಎಲ್ಲ ಧಾರ್ಮಿಕ ಕಾರ್ಯ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಹಿಂದೆ ಬಸದಿ ಇದ್ದ ಜಾಗದಲ್ಲಿಯೇ ಆಯಾ ಅಳತೆಗೆ ಅನುಗುಣವಾಗಿ ಬಸದಿ ನಿರ್ಮಿಸುವ ಸಲುವಾಗಿ ಸಮಿತಿ , ಟ್ರಸ್ಟ್‌ ರಚಿಸಲಾಗಿದೆ. ಜು. 15ರಂದು ಪೂಜೆಯೊಂದಿಗೆ ಉತVನನ ಕಾರ್ಯ ಆರಂಭವಾಗಲಿದ್ದು  ಅನಂತರ ಸುಮಾರು 40 ಲ.ರೂ. ವೆಚ್ಚದಲ್ಲಿ ವಾಸ್ತು ಪ್ರಕಾರವಾಗಿ ಬಸದಿ ನಿಮಾರ್ಣಗೊಳ್ಳಲಿದೆ .

ಟಾಪ್ ನ್ಯೂಸ್

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Kapu ಎಟಿಎಂಗೆ ಹಣ ಡ್ರಾ ಮಾಡಲು ಬಂದವರು ಕುಸಿದು ಬಿದ್ದು ವ್ಯಕ್ತಿ ಸಾವು

Kapu ಮೂಳೂರು: ಲಾರಿಯಿಂದ ಬಿದ್ದು ಗಾಯ

Kapu ಮೂಳೂರು: ಲಾರಿಯಿಂದ ಬಿದ್ದು ಗಾಯ

Mandarthi: ಮಳೆಗಾಲದ ಯಕ್ಷಗಾನ

Mandarthi: ಜೂ.18 ರಂದು ಮಳೆಗಾಲದ ಯಕ್ಷಗಾನ ಸೇವೆ ಆಟಕ್ಕೆ ಚಾಲನೆ

udupi-1

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-24–monday

Daily Horoscope: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳಿಂದ ತೊಂದರೆ, ಉದ್ಯಮದಲ್ಲಿ ಪ್ರಗತಿ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Renuka Swamy Case;ಸ್ಥಳ ಮಹಜರು ವೇಳೆ ಮುಗುಳು ನಕ್ಕ ಪವಿತ್ರಾ ಗೌಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Monsoon ಮಳೆ ಅಧಿಕ ಸರಿದ ಬರದ ಕಾರ್ಮೋಡ

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

Government ಪೊಲೀಸ್‌ ವರ್ಗ: ಹೊಸ ನೀತಿ ಶೀಘ್ರ?

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

PM Vishwakarma Yojana: ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ನೋಂದಣಿ ಆಗಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.