ಡೆಡ್‌ ಬಾಡಿ ಇದ್ದ ವಾಹನ ಡ್ರಾಪ್‌ ಕೊಟ್ಟಿತು!


Team Udayavani, Jul 24, 2018, 6:00 AM IST

3.jpg

ಅಂದು ನನ್ನ ಅಪ್ಪನಿಗೆ ಹುಷಾರಿರಲಿಲ್ಲ. ಆ ಸುದ್ದಿ ನನಗೆ ಗೊತ್ತಾಗುವ ಹೊತ್ತಿಗೆ ಗಂಟೆ ರಾತ್ರಿ 12 ಗಂಟೆ ದಾಟಿತ್ತು. ಕೂಡಲೇ ರೂಮಿನಿಂದ ಹೊರಟು, ಪೀಣ್ಯದ ತುಮಕೂರು ರಸ್ತೆ ತಲುಪುವ ಹೊತ್ತಿಗೆ ರಾತ್ರಿ 1 ಆಗಿತ್ತು. ಆದರೆ, ಎಷ್ಟು ಹೊತ್ತು ಕಾದರೂ ಒಂದೂ ರೆಡ್‌ಬಸ್‌ ಬರಲಿಲ್ಲ. ಅವತ್ತು ಭಾನುವಾರವೂ ಆಗಿದ್ದರಿಂದ, ಬಸ್ಸುಗಳ ಸಂಖ್ಯೆ ಕಮ್ಮಿ ಅಂತ ಅಲ್ಲೇ ಯಾರೋ ಹೇಳಿದರು. ಈಗ ಹೇಗೆ ಊರು ತಲುಪೋದು ಅನ್ನೋದೇ ದೊಡ್ಡ ಚಿಂತೆಯಾಗಿತ್ತು. ಬೆಂಗಳೂರಿನಿಂದ ಬಹುದೂರ ಪ್ರಯಾಣ ಆಗಿದ್ದಿದ್ದರೆ, ಬೇರೆ ಖಾಸಗಿ ಬಸ್ಸುಗಳು ನನ್ನನ್ನು ಹತ್ತಿಸಿಕೊಳ್ಳುತ್ತಿದ್ದವೋ ಏನೋ! ಆದರೆ, ಸಮೀಪದ ಗುಬ್ಬಿ ಆಗಿದ್ದರಿಂದ ಒಂದೆರಡು ಬಸ್ಸುಗಳು ನನ್ನನ್ನು ಹತ್ತಿಸಿಕೊಳ್ಳಲು ನಿರಾಕರಿಸಿದ್ದವು. 

  ಅಲ್ಲಾéವುದೋ ಬಸ್ಸು ಬಂದ್ದಾಗೆ ಆಯ್ತು ಅಂತಂದುಕೊಂಡು ಕೈ ಅಡ್ಡಹಾಕಿದೆ. ಆದರೆ, ಆ ಬಸ್ಸಿನ ಮುಂದಿದ್ದಿದ್ದು, ಆ್ಯಂಬುಲೆನ್ಸ್‌ ರೀತಿಯ ವ್ಯಾನ್‌. ಒಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ವೃದ್ಧನ ಪಾರ್ಥೀವ ಶರೀರ ಅದರಲ್ಲಿತ್ತು. ಆ ಶರೀರ, ಕಡೂರನ್ನು ತಲುಪಬೇಕಿತ್ತು. ಅದು ಅಂಬ್ಯುಬುಲೆನ್ಸ್‌ ಅನ್ನೋದಷ್ಟೇ ಗೊತ್ತಿದ್ದಿದ್ದ ನನಗೆ, ಡ್ರೈವರ್‌ ಗಾಡಿ ನಿಲ್ಲಿಸಿ, ನನ್ನನ್ನು ಮೇಲಕ್ಕೆ ಹತ್ತಿಸಿಕೊಂಡಾಗಲೇ, ನನಗೆ ಅದರೊಳಗೆ ಪಾರ್ಥಿವ ಶರೀರ ಇದ್ದ ವಿಚಾರ ಗೊತ್ತಾಗಿದ್ದು. ಡ್ರೈವರ್‌ನ ಪಕ್ಕದಲ್ಲಿ ಗಂಡನನ್ನು ಕಳೆದುಕೊಂಡ ಅಜ್ಜಿ ಕುಳಿತಿದ್ದಳು. ತುಂಬಾ ದುಃಖದಲ್ಲಿದ್ದರು. ಆ ಅಜ್ಜಿಗೆ ಒಂದಿಷ್ಟು ಸಮಾಧಾನ ಹೇಳಲು ಯಾರೂ ಇಲ್ಲವೆಂಬ ಕಾರಣಕ್ಕೆ, ತನ್ನನ್ನು ಹತ್ತಿಸಿಕೊಂಡೆ ಎಂದು ಡ್ರೈವರ್‌ ಪಿಸುಮಾತಿನಲ್ಲಿ ಹೇಳಿದ. ನಾನು ನನ್ನೂರು ಗುಬ್ಬಿ ಬರುವ ತನಕವೂ ಆ ಅಜ್ಜಿಯ ದುಃಖಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದೆ. ಗುಬ್ಬಿ ಬಂದಾಗ, ನಾನು ಇಳಿದೆ. ಆದರೆ, ಇವತ್ತಿಗೂ ಆ ಡ್ರೈವರ್‌, ಆ ಅಜ್ಜಿ ನನಗೆ ಕಾಡುತ್ತಲೇ ಇದ್ದಾರೆ. ಕೆಲವೊಮ್ಮೆ ಯಾಕಾದರೂ, ಆ ವಾಹನವನ್ನು ಹತ್ತಿದೆನೋ ಅಂತಲೂ ಅನ್ನಿಸಿದೆ.

ಮಯೂರ್‌ ಗೌಡ, ಗುಬ್ಬಿ

ಟಾಪ್ ನ್ಯೂಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.