ನಾರೀಕೇಳೆ


Team Udayavani, Sep 12, 2018, 6:00 AM IST

3.jpg

ಮನೆಯಿಂದ ದೂರ ಇರುವವರು ರಜೆ ಸಿಕ್ಕರೆ ಸಾಕು ಪಟಕ್ಕನೆ ಬಸ್ಸು ಹಿಡಿದು ಮನೆಗೆ ಓಡಿಬಿಡುತ್ತಾರೆ. ಆದರೆ ಹಬ್ಬ ಹರಿದಿನಗಳು ಬಂತೆಂದರೆ ರಜೆ ಇದ್ದರೂ ಭಾರದ ಹೆಜ್ಜೆಯೊಂದಿಗೆ ಮನೆಗೆ ಹೋಗುತ್ತಾರೆ. ಅದಕ್ಕೆ ಕಾರಣ ಕೊಬ್ಬರಿ ಎಣ್ಣೆ! ಗಂಡುಮಕ್ಕಳಂತೂ ಅಮ್ಮನ ಕೈಯಲ್ಲಿ ಕೊಬ್ಬರಿ ಎಣ್ಣೆ ಕಂಡ ತಕ್ಷಣ ಮಾರು ದೂರ ಓಡಿಬಿಡುತ್ತಾರೆ. ತಲೆಗೆ ತಂಪು, ಕೂದಲಿಗೆ ಒಳ್ಳೆಯದು ಎಂದೆಲ್ಲಾ ಗೊತ್ತಿದ್ದರೂ ಅದೇಕೋ ತಲೆ ತಟ್ಟಿಸಿಕೊಳ್ಳುವುದೆಂದರೆ ಇಂದಿಗೂ ಅನೇಕರಿಗೆ ವಜ್ಯ. ಕೊಬ್ಬರಿ ಎಣ್ಣೆಯ ಉಪಯೋಗ- ಕೇಶಕ್ಕೆ ಮತ್ತು ಅಡುಗೆ ಮನೆಗೆ ಮಾತ್ರವೇ ಸೀಮಿತವಾಗಿಲ್ಲ. ಅದರ ಇನ್ನೂ ಐದು ಬಹುಪಯೋಗಿ ಗುಣಗಳು ಇಲ್ಲಿವೆ ನೋಡಿ…

1.    ಚರ್ಮದ ಮಾಯಿಶ್ಚರೈಸರ್‌
ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್‌ ಇ ಅಧಿಕವಾಗಿರುವುದರಿಂದ ಚರ್ಮದ ಆರೋಗ್ಯಕ್ಕೆ ಒಳ್ಳೆಯದು. ಒಣ ಚರ್ಮದವರು ನಿಯಮಿತವಾಗಿ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡರೆ, ತ್ವಚೆ ಮೃದುವಾಗುತ್ತದೆ.

2.    ಮೇಕಪ್‌ ತೆಗೆಯಲು
ಭರತನಾಟ್ಯ ಪ್ರದರ್ಶನಕ್ಕೆ ಹಚ್ಚಿದ ಗಾಢ ಮೇಕಪ್‌ ಇರಲಿ, ಕಣ್ಣಿಗೆ ಹಚ್ಚಿದ ಮಸ್ಕಾರ ಇರಲಿ; ಒಂದೆರಡು ಹನಿ ಕೊಬ್ಬರಿ ಎಣ್ಣೆ ಹಾಕಿ ಮೆಲ್ಲಗೆ ಉಜ್ಜಿದರೆ ಸಾಕು. ಚರ್ಮಕ್ಕೆ ಚೂರೂ ಹಾನಿಯಾಗದಂತೆ ಮೇಕಪ್‌ ಅನ್ನು ಅಳಿಸಿ ಹಾಕುತ್ತದೆ. ದುಬಾರಿ ಮೇಕಪ್‌ ರಿಮೂವರ್‌ಗಳನ್ನು ಖರೀದಿಸುವುದೇ ಬೇಡ. 

3.    ಕೂದಲಿನ ಮಾಸ್ಕ್
ನಿಮ್ಮ ಸೊಂಪಾದ ಕಪ್ಪು ಕೂದಲಿನ ರಹಸ್ಯ ಏನೆಂದು ಅಮ್ಮ, ಅಜ್ಜಿ, ಅತ್ತೆಯನ್ನು ಕೇಳಿ ನೋಡಿ. ಅವರೆಲ್ಲ ಹೇಳುವ ಮಂತ್ರ ಕೊಬ್ಬರಿ ಎಣ್ಣೆ ಎಂದೇ! ವಾರಕ್ಕೆರಡು ಬಾರಿ ಕೂದಲಿನ ಬುಡಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ, ಮಸಾಜ್‌ ಮಾಡಿ, 20-30 ನಿಮಿಷ ಬಿಟ್ಟು ಸ್ನಾನ ಮಾಡಿ.

4.    ಚರ್ಮಕ್ಕೆ ವಯಸ್ಸೇ ಆಗಲ್ಲ
ಚರ್ಮ ಸುಕ್ಕುಗಟ್ಟಿ, ಮುಖ ವಯಸ್ಸಾದಂತೆ ಕಾಣುವುದನ್ನು ತಡೆಯಲು ಕೊಬ್ಬರಿ ಎಣ್ಣೆ ಸಹಕಾರಿ. ಚರ್ಮದ ರಂಧ್ರದೊಳಕ್ಕೆ ಸೇರುವ ಎಣ್ಣೆ, ತ್ವಚೆಯನ್ನು ತೇವಗೊಳಿಸುವುದಷ್ಟೇ ಅಲ್ಲದೆ ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಸ್ಕಿನ್‌ಕೇರ್‌ ಕ್ರೀಂಗಳಲ್ಲಿ ಕೊಬ್ಬರಿಎಣ್ಣೆಯ ಅಂಶವಿರುತ್ತದೆ. 

5.    ಮೊಡವೆ ತಡೆಯಲು
ಹದಿಹರೆಯದವರನ್ನು ಕಾಡುವ ಮೊಡವೆ ಸಮಸ್ಯೆಗೂ ಕೊಬ್ಬರಿ ಎಣ್ಣೆ ಶಮನಕಾರಿ. ಆ್ಯಂಟಿ ಬ್ಯಾಕ್ಟೀರಿಯಾ ಗುಣ ಹೊಂದಿರುವ ಕೊಬ್ಬರಿ ಎಣ್ಣೆಯನ್ನು ಹಚ್ಚುವುದರಿಂದ ಮೊಡವೆ, ಮೊಡವೆ ಕಲೆ ಕಡಿಮೆಯಾಗುತ್ತದೆ. ಕಜ್ಜಿ, ತುರಿಕೆಯಂಥ ಚರ್ಮದ ಸಮಸ್ಯೆಗಳೂ ಕಾಡುವುದಿಲ್ಲ. 
 

ಟಾಪ್ ನ್ಯೂಸ್

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

supreem

ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.