ಭಾವಪರವಶಗೊಳಿಸಿದ ತ್ರಿಜನ್ಮ ಮೋಕ್ಷ 


Team Udayavani, Oct 12, 2018, 6:00 AM IST

z-11.jpg

ಅಂದು ಹಿರಣ್ಯಾಕ್ಷ ಮಾಡಿದಂತೆ ಇಂದು ಪೃಕೃತಿಯಿಂದ ಮಳೆ ಬೆಳೆ ಪಡೆದು ಪ್ರತ್ಯುಪಕಾರವಾಗಿ ಮಾನವ ಮಾಡುತ್ತಿರುವುದೇನು? ಪ್ರಕೃತಿ ಮುನಿದರೆ ಮನುಕುಲ ಉಳಿದೀತೇ? ಪ್ರೇಕ್ಷಕರ ಮನಸ್ಸಿನಲ್ಲಿ ಆ ದೃಶ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು.

ಬೈಂದೂರು ಸೇನೇಶ್ವರ ದೇಗುಲದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರ “ತ್ರಿಜನ್ಮ ಮೋಕ್ಷ’ ಪ್ರಸಂಗ ವೀಕ್ಷಕರ ಕಣ್ಮನಗಳಿಗೆ ತಂಪೆರೆಯಿತು.ವಿಶಾಲ ಕಾಯ, ಬೀಭತ್ಸ ಮುಖ ಮುದ್ರೆಯ ಹಿರಣ್ಯಾಕ್ಷ-ಹಿರಣ್ಯಕಶಿಪುವಿನ ವೈಶಿಷ್ಟ್ಯಮಯ ಭಂಗಿ (ಗಣೇಶ ಶೆಟ್ಟಿ ಆರಣ್‌ ಮತ್ತು ಗೋವಿಂದ ಭಟ್‌ ನಿಡ್ಲೆ), ಸುರ ಸುಂದರಾಂಗಿಯಂತೆ ಮನ ಸೆಳೆವ ಅತ್ಯಾಕರ್ಷಕ ವಸ್ತ್ರಾಲಂಕಾರಗೊಂಡ ಕಯಾದು (ಕೆದಿಲ ಜಯರಾಮ ಭಟ್‌) ಪ್ರೇಕ್ಷಕರನ್ನು ಹಿಡಿದಿರಿಸಿದರು. ವರಾಹವತಾರಿ ವಿಷ್ಣುವಿನ (ಪದ್ಮನಾಭ ಶೆಟ್ಟಿ) ಹಾವಭಾವಗಳು ಪ್ರಶಂಸೆಗೆ ಪಾತ್ರವಾಯಿತು. 

ಹಿರಣ್ಯಕಶಿಪುವಿನ ಸರಸ,ಪುತ್ರ ವಾತ್ಸಲ್ಯ, ವಿಷ್ಣು ದ್ವೇಷದ ಜತೆಯಲ್ಲಿ ಆತನ ವ್ಯಕ್ತಿತ್ವದ ಆದರ್ಶಗಳನ್ನೊಳಗೊಂಡ ಬಹುಮುಖ ವ್ಯಕ್ತಿತ್ವವನ್ನು ತೆರೆದಿಡುವ ಪ್ರಾಮಾಣಿಕ ಪ್ರಯತ್ನ ಪ್ರಶಂಸನೀಯವಾಯಿತು. ಪ್ರಹ್ಲಾದನ (ಗೌತಮ ಶೆಟ್ಟಿ) ಮೋಹಕ ವ್ಯಕ್ತಿತ್ವ, ನಾರದನ (ಕುಂಬ್ಳೆ ಶ್ರೀಧರ ರಾವ್‌) ಪ್ರೌಢಿಮೆ ಭೇಷ್‌ ಎನಿಸಿಕೊಂಡಿತು. ಪ್ರಹ್ಲಾದನ ಗುರುಕುಲ ವಿದ್ಯಾಭ್ಯಾಸದ ದೃಶ್ಯಗಳಲ್ಲಿ ಬಂದ ಸಹಪಾಠಿಗಳ ತುಂಟತನ ನಗೆಗಡಲಲ್ಲಿ ತೇಲಿಸಿತು. 

ಹರಿಯನ್ನು ಅರಸುತ್ತಾ ಬಂದ ಹಿರಣ್ಯಾಕ್ಷನಿಗೆ ನಾರದರು ಭೂದೇವಿಯನ್ನು (ಪುತ್ತೂರು ಗಂಗಾಧರ ಜೋಗಿ) ಹಿಡಿದಿಟ್ಟರೆ ಆಕೆಯ ಪತಿಯಾದ ನಾರಾಯಣ ಬಂದೇ ಬರುತ್ತಾನೆ ಎನ್ನುವ ಸಲಹೆ ನೀಡುತ್ತಾರೆ. ಹಿರಣ್ಯಾಕ್ಷ ಭೂದೇವಿಯನ್ನು ಅಟ್ಟಿಕೊಂಡು ಅಟ್ಟಾಡಿಸುತ್ತಾನೆ. ಲೋಕ ಕಂಟಕ ರಾಕ್ಷಸರು ಅಂದೂ ಇದ್ದರು, ಅಸುರಿ ಪ್ರವೃತ್ತಿಯ ದಾನವರೂ ಇಂದೂ ಇದ್ದಾರೆ. ಭಯವಿಹ್ವಲಳಾದ ಭೂದೇವಿ ಆರ್ತನಾದ ಮಾಡುತ್ತಾ ಓಡುತ್ತಿರುವ ಆ ಅದ್ಭುತ ದೃಶ್ಯ ಆ ಕ್ಷಣ ಪ್ರಜ್ಞಾವಂತ ವೀಕ್ಷಕರ ಮನಸ್ಸಿನಲ್ಲಿ ತಳಮಳ ಉಂಟುಮಾಡಿದ್ದರಲ್ಲಿ ಸಂದೇಹವಿಲ್ಲ. ಅಂದು ಹಿರಣ್ಯಾಕ್ಷ ಮಾಡಿದಂತೆ ಇಂದು ಪೃಕೃತಿಯಿಂದ ಮಳೆ ಬೆಳೆ ಪಡೆದು ಪ್ರತ್ಯುಪಕಾರವಾಗಿ ಮಾನವ ಮಾಡುತ್ತಿರುವುದೇನು? ಪ್ರಕೃತಿ ಮುನಿದರೆ ಮನುಕುಲ ಉಳಿದೀತೇ? ಪ್ರೇಕ್ಷಕರ ಮನಸ್ಸಿನಲ್ಲಿ ಆ ದೃಶ್ಯ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿತು. ಅಷ್ಟೊಂದು ಪರಿಣಾಮಕಾರಿಯಾಗಿತ್ತು ಆ ದೃಶ್ಯ! ಹಿರಣ್ಯಾಕ್ಷ ಇಂದಿನ ಪೃಕೃತಿ ನಾಶಗೈಯ್ಯುತ್ತಿರುವ ದುರುಳರಂತೆ ಕಂಡ. 

    ಕರುಣಾಕರ ಶೆಟ್ಟಿಯವರ ಭಾಗವತಿಕೆಯ ಯಕ್ಷಗಾನ ಪ್ರಸಂಗಕ್ಕೆ ಪಡ್ರೆ ಶ್ರೀಧರ್‌ ಅವರ ಚೆಂಡೆ ಮತ್ತು ಗಣಪತಿ ನಾಯ್ಕ… ಅವರ ಮದ್ದಳೆ ಅಂದ ಹೆಚ್ಚಿಸಿತು. ಭಾಗವತರ ಭಾವಪರವಶ ಹಾಡುಗಾರಿಕೆ ಯಕ್ಷಗಾನ ಪ್ರೇಮಿಗಳ ಮನ ಗೆದ್ದಿತು.

ಬೈಂದೂರು ಚಂದ್ರಶೇಖರ ನಾವಡ 

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.