ನಾವು ಮಂಜೇಶ್ವರಕ್ಕೆ ಹೋದೆವು!


Team Udayavani, Oct 12, 2018, 6:00 AM IST

z-13.jpg

ನಾವು ಶನಿವಾರದಂದು ಮಂಜೇಶ್ವರಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಂದು ನಾವು 36 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರು ಇದ್ದೆವು. ಎಂಟು ಗಂಟೆಗೆ ನಾವು ಉಜಿರೆಯಿಂದ ಹೊರಟೆವು. ಉಜಿರೆಯಿಂದ ಮಂಗಳೂರಿಗೆ ಎರಡೂವರೆ ಗಂಟೆ ಬೇಕಿತ್ತು. ನಾವು ಬಸ್ಸಿನಲ್ಲಿ ಹಾಡುವುದು, ಕುಣಿಯುವುದು- ಹೀಗೆ ಸಮಯವನ್ನು ಕಳೆಯುತ್ತ 11 ಗಂಟೆಗೆ ಮಂಗಳೂರಿಗೆ ತಲುಪಿದೆವು. ಬಸ್ಸಿನಿಂದ ಇಳಿದು ಸ್ವಲ್ಪ ನಡೆದು ನಾವು 70 ಕ್ಕಿಂತ ಹೆಚ್ಚು ವರ್ಷ ಇತಿಹಾಸವಿರುವ ಗ್ರಂಥಾಲಯಕ್ಕೆ ಹೋದೆವು. ಬಹಳ ಸುಂದರವಾದ ಗ್ರಂಥಾಲಯವಾಗಿತ್ತು ಅದು. ಅಲ್ಲಿ ಇದ್ದ ಅಧ್ಯಾಪಕರ‌ ಪರಿಚಯವಾಯಿತು. ಅವರು ಕಿಟೆಲ್‌ ನಿಘಂಟು ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ಕಲ್ಲಿನ ಬರಹ ಮತ್ತು ತಾಳೆಗರಿ ಬರಹ ಹೆಚ್ಚಾಗಿ ಕಂಡುಬರುತ್ತಿತು. ಕಲ್ಲಿನಲ್ಲಿ ಬರೆದು ಅದನ್ನು ಅಚ್ಚು ಮಾಡುತ್ತಿದ್ದರು. ಹೆಚ್ಚಾಗಿ ಚಿತ್ರಗಳ ಬಳಕೆ ಮಾಡುತ್ತಿದ್ದುದರಿಂದ ಇದಕ್ಕೆ ವಿಚಿತ್ರ ವರ್ತಮಾನ ಸಂಘವೆಂದು ಕರೆಯುತ್ತಾರೆ. ಅಲ್ಲಿ ಮಂಗಳೂರು ಸಮಾಚಾರ್‌ ವೃತ್ತಪತ್ರಿಕೆ ನೋಡಿದೆವು. ವೃತ್ತಪತ್ರಿಕೆಯು ವಾರಕ್ಕೊಮ್ಮೆ ಬರುವ ಪತ್ರಿಕೆಯಾಗಿತ್ತು. ಹೀಗೆ ಒಂದು ಗಂಟೆ ಅಲ್ಲಿ ಕಳೆದದ್ದೇ ಗೊತ್ತಾಗಲಿಲ್ಲ. 

ಮಂಜೇಶ್ವರದ ಬಸ್ಸು ಹಿಡಿದು ಬಸ್ಸಿನಿಂದ ಇಳಿದು ಗೋವಿಂದ ಪೈಯವರ ಮನೆಗೆ 10 ನಿಮಿಷದ ಮಾರ್ಗವಿತ್ತು. ಪೈಯವರ ಮನೆಗೆ ತೆರಳಿದ್ದೆವು. ಬಹಳ ಸುಂದರವಾದ ಮನೆಯಾಗಿತ್ತು.  ಅಲ್ಲಿ ಕೂಡ ಒಬ್ಬರು ಸರ್‌ ಅವರ ಪರಿಚಯವಾಯಿತು. ಆ ಮನೆಯ ಒಳಗೆ ಪೈಯವರ ಮೂರ್ತಿ ಇತ್ತು. ಇವರನ್ನು ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಯುತ್ತಾರೆ. ಇವರಿಗೆ 22 ಭಾಷೆಗಳು ಬರುತ್ತಿದ್ದವು. ಚಿಕ್ಕ ವಯಸ್ಸಿನಲ್ಲಿ ಕವನಗಳನ್ನು ಬರೆದು ಪ್ರಶಸ್ತಿಗೆ ಪಾತ್ರರಾಗಿದ್ದರು. 

ಇವರ ಮನೆಯಲ್ಲಿ ಬರೆದ ಪುಸ್ತಕಗಳ ಕಾಣಲು ಸಿಗುವುದಿಲ್ಲ. ಯಾಕೆಂದರೆ, ಆ ಪುಸ್ತಕಗಳನ್ನು ಉಡುಪಿಯ ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಲ್ಲಿ ಇಂತಹ ಕೆಲವೊಂದು ಮಾಹಿತಿಯನ್ನು ಪಡೆದು ನಂತರ ಮನೆಯ ಒಳಗೆ ಹೋದೆವು. ಒಂದು ಕೊಣೆಯಲ್ಲಿ ಯಕ್ಷಗಾನದ ಸಾಮಗ್ರಿಗಳನ್ನು ನೋಡಿದೆವು. ಅದನ್ನು ನೋಡುತ್ತ ನೋಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಕೊನೆಗೆ ಒಂದು ಗ್ರೂಪ್‌ ಫೊಟೊ ತೆಗೆದೆವು. ಇಲ್ಲಿ ನಾವು ಪಡೆದ ಅಮೂಲ್ಯವಾದ ಮಾಹಿತಿ ಹಾಗೂ ಕಳೆದ ಸಮಯದಿಂದ ಪೈಯವರು ಎಷ್ಟು ದೊಡ್ಡ ವಿದ್ವಾಂಸರೆಂದು ತಿಳಿದುಕೊಳ್ಳುವಂತಾಯಿತು. ಇದೊಂದು ಒಳ್ಳೆಯ ಅನುಭವ.
                                            
ನಿತೀಶ್‌ ಚಾರ್ಮಾಡಿ
ಎಸ್‌.ಡಿ.ಎಂ. ಕಾಲೇಜು, ಉಜಿರೆ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.