ಆದರ್ಶ ಕೃಷಿ


Team Udayavani, Dec 24, 2018, 6:00 AM IST

adarsha-3-copy-copy.jpg

ಕನಕಾಂಬರ ಬೆಳೆದು ಯಶಸ್ಸು ಕಂಡಿರುವುದು ಶ್ರೀರಂಗಪಟ್ಟಣದ ರೈತ ಆದರ್ಶರ ಹೆಗ್ಗಳಿಕೆ. ಸಸಿ ಸಾಯೋ ರೋಗ ಇಲ್ಲದೇ ಹೋದರೆ, ಕನಕಾಂಬರದಿಂದ ಭಾರೀ ಲಾಭ ಪಡೆಯಬಹುದು ಎಂಬುದು ಅವರ ಅನುಭವದ ಮಾತು. 

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಮಹದೇವಪುರಕ್ಕೆ ಹೊಂದಿಕೊಂಡಂತೆ ಈ ರೈತನ ಜಮೀನಿದೆ. ಅದರ ತುಂಬ ಬರೀ ಕನಕಾಂಬರ.  ಅದೆಷ್ಟೋ ರೈತರು ಕನಕಾಂಬರ ಬೆಳೆಯಲಾರದೇ ಕೈ ಚೆಲ್ಲಿದರೂ, ಈ ಜಮೀನಿನ ಮಾಲೀಕ ಆದರ್ಶ ಛಲ ಬಿಡದೇ ಯಶಸ್ವಿಯಾಗಿ ಕನಕಾಂಬರ ಬೆಳೆದಿದ್ದಾರೆ. ಜೊತೆಗೆ ನರ್ಸರಿ ಕೂಡ ನಡೆಸುತ್ತಿದ್ದಾರೆ.

ಇವರ ಪ್ರಕಾರ, ಕನಕಾಂಬರ ಬೆಳೆ ವಿಫ‌ಲವಾಗಲು ಮುಖ್ಯ ಕಾರಣ : ಸಸಿ ಸಾಯೋ ರೋಗ. ಇದೊಂದು ತೊಂದರೆ ಇರದೇ ಹೋದರೆ ಕನಕಾಂಬರ ನಿಜಕ್ಕೂ ಬಂಗಾರದಂಥ ಬೆಳೆ ಅನ್ನುತ್ತಾರೆ.

ಈ ಸಮಸ್ಯೆ ಪರಿಹಾರಕ್ಕಾಗಿ ಇವರು ಹತ್ತು ಹಲವು ಪ್ರಯತ್ನ ಮಾಡಿದ್ದಾರೆ, ಹಲವಾರು ಅನುಭವಿಗಳನ್ನು, ತೋಟಗಾರಿಕಾ ವಿಜ್ಞಾನಿಗಳನ್ನು ಭೇಟಿಯಾಗಿದ್ದಾರೆ. ಆದರೆ ಎಲ್ಲೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಆಮೇಲೆ ಸ್ವತಃ ತಾನೇ ಮದ್ದನ್ನು ಕಂಡು ಹಿಡಿದುಕೊಂಡಿದ್ದಾರೆ.  ಅದು ಹೇಗೆ ಎಂಬುದು ಕುರಿತು ಇಲ್ಲಿದೆ ಮಾಹಿತಿ. 

ಗುಣಿ ಪದ್ದತಿಯಲ್ಲಿ ಸಸಿ ನಾಟಿ ಮಾಡುವುದು, ಮೂರೂವರೆ ಅಡಿ ಅಂತರದ ಸಾಲು ಬಿಟ್ಟು, ಒಂದೂವರೆ ಅಡಿಗೆ ಒಂದು ಗುಣಿ ತೆಗೆಯಬೇಕು. ಗುಣಿಯಿಂದ ಹೊರತಗೆದ ಮಣ್ಣು ಹಾಗೂ ಎರೆಹುಳು ಗೊಬ್ಬರ ಮತ್ತು ಬೇವಿನ ಹಿಂಡಿಯನ್ನು ಮಿಶ್ರಣ ಮಾಡಿ ಗುಣಿ ತುಂಬಬೇಕು. ಗುಣಿ ತುಂಬಿದ ಮೇಲೆ ಮಣ್ಣು ಗುಣಿಯಿಂದ ಅರ್ಧ ಅಡಿಯಷ್ಟಾದರೂ ನೆಲಮಟ್ಟದಿಂದ ಮೇಲೆ ಬಂದಿರಬೇಕು.

ಅಂಥ ಒಂದೊಂದು ಗುಡ್ಡೆಯ ಮೇಲೆ ಎರಡು ಅಥವಾ ಮೂರು ಸಸಿ ನೆಡಬೇಕು. ಕನಕಾಂಬರ ಕೃಷಿಯಲ್ಲಿ  ಹನಿ ನೀರಾವರಿ ಅಳವಡಿಸುವುದು ಉತ್ತಮ ವಿಧಾನ. ಇದರಿಂದ ಖಂಡಿತ ಸಸಿ ಸಾಯುವ ರೋಗ ನಿಯಂತ್ರಿಸಬಹುದು ಎನ್ನುತ್ತಾರೆ ಆದರ್ಶ್‌. 
ಬರಿಗೈಯಲ್ಲಿ ಕನಕಾಂಬರ ಕೃಷಿ ಆರಂಭಿಸಿದ ಆದರ್ಶ್‌ ಅದರಿಂದಲೇ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಇವರ ಪ್ರಕಾರ, ಒಂದು ಸಾವಿರ ಗಿಡದಿಂದ ಐದಾರು ದಿನಕ್ಕೊಮ್ಮೆ ಐದರಿಂದ ಹತ್ತು ಕೆ.ಜಿ ಹೂವು ಕೀಳಬಹುದು. ಸರಾಸರಿ ನಾಲ್ಕು ನೂರು ರುಪಾಯಿಗೆ ಒಂದು ಕೆ.ಜಿ ಹೂ ಮಾರಾಟ ಆಗುತ್ತದೆ ಅಂದುಕೊಂಡರೂ, ವಾರಕ್ಕೆ ಮೂರರಿಂದ ನಾಲ್ಕು ಸಾವಿರ ಆದಾಯ ನಿಶ್ಚಿತ. ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದರೆ ಕೇವಲ ಹತ್ತು ಗುಂಟೆಯಲ್ಲಿ ಒಂದು ಸಂಸಾರ ನಡೆಸುವಷ್ಟು ಆದಾಯ ಕನಕಾಂಬರದಿಂದ ಬರುತ್ತದೆ ಎನ್ನುವುದು ಆದರ್ಶರ ಅನುಭವ ಮಾತು. 

– ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.