ಪ್ರೊ ಕಬಡ್ಡಿ: ಗುಜರಾತ್‌ ಫೈನಲ್‌ಗೆ


Team Udayavani, Jan 4, 2019, 12:30 AM IST

gujarat-fortunegiants-final.jpg

ಮುಂಬೈ: ಪ್ರೊ ಕಬಡ್ಡಿ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಯುಪಿ ಯೋಧಾ ತಂಡವನ್ನು  38 - 31 ಅಂತರದಿಂದ ಸೋಲಿಸಿದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಫೈನಲ್‌ ಹಂತಕ್ಕೆ ಪ್ರವೇಶಿಸಿದೆ. ಜ.5ಕ್ಕೆ ಮುಂಬೈನಲ್ಲಿ ನಡೆಯಲಿರುವ ಪ್ರಶಸ್ತಿ ಹಣಾಹಣಿಯಲ್ಲಿ ಗುಜರಾತ್‌ ಬಲಿಷ್ಠ ಬೆಂಗಳೂರು ಬುಲ್ಸ್‌ ತಂಡವನ್ನು ಎದುರಿಸಲಿದೆ.

ಗುಜರಾತ್‌ಗೆ ಅರ್ಹ ಗೆಲುವು: ಗುರುವಾರ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ “ಎ’ ಗುಂಪಿನ ಅಗ್ರಸ್ಥಾನಿ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ಸಾಮರ್ಥ್ಯಕ್ಕೆ ಆಟ ಪ್ರದರ್ಶಿಸಿ ಮೆರೆಯಿತು. ಗುಜರಾತ್‌ ಪರ ಸಚಿನ್‌ (10 ಅಂಕ)  ರೈಡಿಂಗ್‌ನಿಂದ ಮಿಂಚಿದರು. ತಂಡದ ಪ್ರಮುಖ ರೈಡರ್‌ ಕೆ.ಪ್ರಪಂಚನ್‌ (5 ಅಂಕ) ಅಷ್ಟೊಂದು ಯಶಸ್ಸು ಕಾಣಲಿಲ್ಲ. ಆದರೆ ಹೆಚ್ಚುವರಿ ಆಟಗಾರ ರೋಹಿತ್‌ ಗುಲಿಯಾ (5 ಅಂಕ) ಗಮನಾರ್ಹ ರೈಡಿಂಗ್‌ ಪ್ರದರ್ಶಿಸಿ ಅಚ್ಚರಿ ಮೂಡಿಸಿದರು. ಸುನೀಲ್‌ ಕುಮಾರ್‌ (3 ಅಂಕ) ಹಾಗೂ ಹಡಿ ಒಶ್‌ಟೊರಾಕ್‌ (3 ಅಂಕ) ಅಮೋಘ ಟ್ಯಾಕಲ್‌ ನಡೆಸಿ ತಂಡವನ್ನು ಒಟ್ಟು ಅಂಕಗಳಿಕೆಯನ್ನು ಹೆಚ್ಚು ಮಾಡಿದರು. ಕೊನೆ ಹಂತದಲ್ಲಿ ಯುಪಿ ಯೋಧಾ ಪ್ರಬಲ ಪೈಪೋಟಿ ನೀಡಿದರೂ ಗುಜರಾತ್‌ ಅರ್ಹ ಜಯ ಸಾಧಿಸಿತು. ಗುಜರಾತ್‌ ಲೀಗ್‌ ಹಂತದಿಂದಲೇ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಈ ತಂಡವು “ಬಿ’ ಗುಂಪಿನ ಅಗ್ರ ಸ್ಥಾನಿ ಬೆಂಗಳೂರು ಬುಲ್ಸ್‌ ಅನ್ನು ಎದುರಿಸಲು ಸಜ್ಜಾಗಿದೆ.

ಯುಪಿಗೆ ಕೈ ಹಿಡಿಯದ ಅದೃಷ್ಟ: ಯುಪಿ ಯೋಧಾ ಪ್ಲೇ ಆಫ್ಗೇರಿದ್ದು ಅದೃಷ್ಟದಿಂದ. “ಬಿ’ ವಲಯದಿಂದ ಅಗ್ರಸ್ಥಾನ ಹೊರತುಪಡಿಸಿದಂತೆ ಉಳಿದ ಸ್ಥಾನಗಳಿಗೆ 4 ತಂಡಗಳ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟಿತ್ತು. ಕೊನೆ ತನಕವೂ ಯಾವ ತಂಡ ಬಿ ಗುಂಪಿನಿಂದ ಮೂರನೇ ಸ್ಥಾನಿಯಾಗಿ ಪ್ಲೇಆಫ್ಗೇರಲಿದೆ ಎನ್ನುವುದು ನಿರ್ಧಾರವಾಗಿರಲಿಲ್ಲ. ಆದರೆ ಪವಾಡ ಎನ್ನುವಂತೆ ಅಂತಿಮ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ ತಂಡವನ್ನು ಸೋಲಿಸಿತು. ಹಾಲಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ತಂಡವನ್ನು ಕೂಟದಿಂದಲೇ ಹೊರದಬ್ಬಿತ್ತು. ಹೀಗಾಗಿ ಕ್ವಾಲಿಫೈಯರ್‌ ಎರಡರಲ್ಲೂ ಯುಪಿ ಪವಾಡ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಎಲ್ಲ ಪ್ರಯತ್ನಗಳು ಕೊನೆಯಲ್ಲಿ ವಿಫ‌ಲವಾಗುವ ಮೂಲಕ ಯುಪಿ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿತು. ಯುಪಿ ಪರ ರೈಡರ್‌ಗಳಾದ ಶ್ರೀಕಾಂತ್‌ ಜಾಧವ್‌ (7 ಅಂಕ) ಹಾಗೂ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ (5 ಅಂಕ) ದೊಡ್ಡ ಆಟ ಪ್ರದರ್ಶಿಸುವಲ್ಲಿ ವಿಫ‌ಲರಾದರು. ಸಚಿನ್‌ ಕುಮಾರ್‌ (5 ಅಂಕ) ಆಲ್‌ರೌಂಡರ್‌ ಆಟದ ಮೂಲಕ ಸ್ವಲ್ಪ ಗಮನ ಸೆಳೆದರು.

ಟಾಪ್ ನ್ಯೂಸ್

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

24-wednesday

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಪೊಲೀಸರಿಂದ ಚಾರ್ಜ್‌ಶೀಟ್‌ ಸಲ್ಲಿಕೆ

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?

BL Santhosh ಬಂಧನಕ್ಕೆ ತಂತ್ರ ಹೂಡಿದ್ದ ಕೆಸಿಆರ್‌?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-w-eewqe

India ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌; ಘೋಷಣೆಯಷ್ಟೇ ಬಾಕಿ

1-wewqewqe

Major League ಕ್ರಿಕೆಟ್‌ ಕೂಟಕ್ಕೆ ಅಧಿಕೃತ ಲಿಸ್ಟ್‌ ‘ಎ’ ಸ್ಥಾನಮಾನ

pragyananda

Norway ಚೆಸ್‌ ಕೂಟ: ಪ್ರಜ್ಞಾನಂದಗೆ ಗೆಲುವು

1-w-eewqe-aaa

French ಓಪನ್‌ ಗ್ರ್ಯಾನ್‌ ಸ್ಲಾಮ್‌ : ಮೊದಲ ಸುತ್ತಿನಲ್ಲಿ ಆ್ಯಂಡಿ ಮರ್ರೆಗೆ ಆಘಾತ

rishab

Rishabh Pant; ಎರಡು ತಿಂಗಳು ಹಲ್ಲುಜ್ಜಲೂ ಆಗಿಲ್ಲ…

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

13-

Madikeri: ಎರಡು ಕಳ್ಳತನ ಪ್ರಕರಣ: ಆರೋಪಿಯ ಬಂಧನ  

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Udupi ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆ ಹೆಚ್ಚಳ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

Monsoon ವಾಡಿಕೆಯಂತೆ ಮುಂಗಾರು ಪ್ರವೇಶ ಸಾಧ್ಯತೆ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ

ಇಂದು ಹೊಸ ಶೈಕ್ಷಣಿಕ ವರ್ಷ ಆರಂಭ; ಮೇ 31ಕ್ಕೆ ಶಾಲಾರಂಭೋತ್ಸವ

24-wednesday

Daily Horoscope: ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸಾಧ್ಯತೆ, ಆರೋಗ್ಯ ವೃದ್ಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.