ಶಿವಳ್ಳಿ ತುಳು ಭಾಷೆಯ ಪ್ರಥಮ ತಾಳಮದ್ದಳೆ 


Team Udayavani, Jan 18, 2019, 12:30 AM IST

5.jpg

ತುಳು ಭಾಷೆಯಲ್ಲಿ ಮೊದಲ ಯಕ್ಷಗಾನ ಕೃತಿ ಹತ್ತೂಂಭತ್ತನೆಯ ಶತಮಾನದ ಉತ್ತರಾರ್ಧ(1880)ದಲ್ಲಿ ಪೆರುವಡಿ ಸಂಕಯ್ಯ ಭಾಗವತರಿಂದ ನಡೆಯಿತು ಎನ್ನುತ್ತವೆ ಮಾಹಿತಿಗಳು. ಅನಂತರ ತುಳು ಭಾಷೆಯಲ್ಲಿ ಸಾಕಷ್ಟು ಕೃತಿಗಳ ರಚನೆಯಾಗಿದೆ, ರಂಗಸ್ಥಳದಲ್ಲಿ ಪ್ರದರ್ಶಿತವಾಗಿ ಯಶಸ್ಸಿನ ತುತ್ತ ತುದಿಗೇರಿವೆ. ಆದರೆ ಸಾಮಾನ್ಯ ತುಳುವಿಗಿಂತ ವಿಭಿನ್ನವಾದ ರೀತಿಯ ಶಿವಳ್ಳಿ ಬ್ರಾಹ್ಮಣರ ಭಾಷೆಯಲ್ಲಿ ಪ್ರಪ್ರಥಮ ಬಾರಿಗೆ ಕೃತಿ ರಚನೆ ಮಾಡಿ ಅದೇ ಭಾಷೆಯಲ್ಲಿ ಅರ್ಥಗಾರಿಕೆಯನ್ನೂ ಪ್ರದರ್ಶಿಸುವ ಅಚ್ಚುಕಟ್ಟಾದ ತಾಳ ಮದ್ದಳೆಯೊಂದು ಬೆಳ್ತಂಗಡಿ ತಾಲೂಕಿನ ಭಂಡಾರಿಗೋಳಿಯಲ್ಲಿ ನಡೆಯಿತು.

ಅನುಭವಿ ಅರ್ಥಧಾರಿಗಳಾದ ಶಿಕ್ಷಕ ಬಳಂಜ ರಾಮಕೃಷ್ಣ ಭಟ್ಟರು ಅರ್ಜುನನು ಶಿವನೊಂದಿಗೆ ಹೋರಾಡಿ ಭಕ್ತಿಯಿಂದ ಗೆದ್ದು ಪಾಶುಪತಾಸ್ತ್ರವನ್ನು ಸಂಪಾದಿಸುವ ಕಿರಾತಾರ್ಜುನೀಯ ಪ್ರಸಂಗದಿಂದ ಕತೆಯನ್ನು ಆರಂಭಿಸಿದ್ದಾರೆ. ಬಳಿಕ ಇಂದ್ರನಗರಿಗೆ ಹೋದ ಅರ್ಜುನನು ಊರ್ವಶಿಯು ನರ್ತಿಸುವ ಕಾಲದಲ್ಲಿ ಅವಳ ದೇಹ ಸೌಷ್ಟವವನ್ನು ನೋಡುವುದರಲ್ಲಿ ತಲ್ಲೀನನಾಗುತ್ತಾನೆ. ಇದನ್ನು ಗಮನಿಸಿದ ಇಂದ್ರನು ಏಕಾಂತದಲ್ಲಿರುವ ಅರ್ಜುನನಿಗೆ ಸುಖ ನೀಡುವುದಕ್ಕಾಗಿ ಊರ್ವಶಿಯನ್ನು ಕಳುಹಿಸುತ್ತಾನೆ. ಅರ್ಜುನನು ಅವಳನ್ನು ಭೋಗದ ಕಾಮಿನಿಯೆಂದು ತಿಳಿಯದೆ ತನ್ನ ವಂಶದ ಹಿರಿಯನಾದ ಪುರೂರವನಿಗೆ ಅವಳು ಸತಿಯಾಗಿದ್ದಳೆಂಬ ಕಾರಣ ನೀಡಿ, ನೀನು ಮಾತೃಸ್ವರೂಪಿಯಾದ ಕಾರಣ ನನಗೆ ಗ್ರಾಹ್ಯಳಲ್ಲ ಎಂದು ನಿರಾಕರಿಸುತ್ತಾನೆ.

ಆದರೆ ಊರ್ವಶಿಯು ದೇವಲೋಕದ ಗಣಿಕೆಯರು ಸದಾಕಾಲ ಷೋಡಶಿಯರೇ ಆಗಿರುತ್ತಾರೆ, ಅವರಿಗೆ ಇಂತಹ ಸಂಬಂಧಗಳ ಲೇಪವಿರುವುದಿಲ್ಲ. ನನ್ನನ್ನು ಸೇರು ಎಂದು ಹೇಳಿದಾಗಲೂ ಅರ್ಜುನನು ನಿರಾಕರಿಸುತ್ತಾನೆ. ಕ್ರೋಧದಿಂದ ಊರ್ವಶಿಯು ಅವನಿಗೆ ಒಂದು ವರ್ಷದ ಕಾಲ ಷಂಡನಾಗಿರುವಂತೆ ಶಾಪ ನೀಡುತ್ತಾಳೆ. ಮುಂದೆ ಅಜ್ಞಾತವಾಸದ ಅವಧಿಯಲ್ಲಿ ಬೃಹನ್ನಳೆಯಾಗಿ ವಿರಾಟನ ಅಂತಃಪುರದಲ್ಲಿರಲು ಅರ್ಜುನನಿಗೆ ಈ ಶಾಪವೇ ವರವಾಗಿ ಪರಿಣಮಿಸುತ್ತದೆ.

ಅರ್ಜುನನಾಗಿ ಮಧೂರು ಮೋಹನ ಕಲ್ಲೂರಾಯರು ಸಮರ್ಥ ಪಾತ್ರ ಪೋಷಣೆ, ಮಾತಿನ ವರಸೆಗಳಿಂದ ಗಮನ ಸೆಳೆದರು. ಈಶ್ವರನಾಗಿ ಸುವರ್ಣಕುಮಾರಿಯವರದು ಹೆಣ್ತನದ ಅಳುಕಿಲ್ಲದೆ ಪುರುಷ ಪ್ರಧಾನವಾದ ಪಾತ್ರವನ್ನು ಮಾತಿನ ಗತ್ತು ಪಾತ್ರದ ಘನತೆಯನ್ನು ಮೇಲ್ಮಟ್ಟಕ್ಕೇರಿಸಿತು. ರಾಮಕೃಷ್ಣ ಭಟ್ಟರ ಊರ್ವಶಿ ಪಾತ್ರದ ಶೃಂಗಾರ ಭಾವದ ಪ್ರಕಟನೆಯಂತೂ ಕೇಳುಗರ ಮನವನ್ನು ಮುದಗೊಳಿಸಿತು. ಊರ್ವಶಿ ಕೇಳಿದ ಕಾಲೋಚಿತ ಪ್ರಶ್ನೆಗಳಿಗೆ ಬಿರುದೆಂತೆಂಬರ ಗಂಡ ಅರ್ಜುನನ ಬಳಿ ಉತ್ತರವಿರಲಿಲ್ಲ. ವಿಭಿನ್ನವಾದ ಶಿವಳ್ಳಿ ಭಾಷೆಯಲ್ಲಿ ಮೊದಲ ಬಾರಿಗೆ ಈ ಪಾತ್ರಗಳ ಅಭಿವ್ಯಕ್ತಿ ಪ್ರಕಟವಾಗುತ್ತಿದೆಯೆಂಬ ಭಾವ ಎಲ್ಲಿಯೂ ವ್ಯಕ್ತವಾಗಲಿಲ್ಲ.

ಇನ್ನು ಪ್ರಸಂಗವನ್ನು ಕಳೆಗಟ್ಟಿಸಿದ್ದು ಹಿಮ್ಮೇಳ. ಮಧುರವಾದ ಶರಧಿಯೇ ಹರಿದು ಬಂದಂತಹ ರಾಗ ರಸ ಪ್ರೌಢಿಮೆಯಿಂದ ಮನ ಗೆದ್ದ ವಾಸುದೇವ ಕಲ್ಲೂರಾಯರ ಭಾಗವತಿಕೆಯ ಭಾವ ಪ್ರಕ್ಷಕರನ್ನು ಸೆರೆ ಹಿಡಿದದ್ದು ಸುಳ್ಳಲ್ಲ. ಕೇದಾರಗೌಳ ರಾಗದಲ್ಲಿ, “ಮದನಾರಿನೊಟ್ಟುದ ಯುದೊœಡು ಗೆಂದ್ಯೆ ಮದನನ ಬಾಣೊಡು ಜಾದಂಪೆನಾ'(ಮದನಾರಿಯೊಂದಿಗಿನ ಯುದ್ಧದಲ್ಲಿ ಗೆದ್ದವನು ಮದನನ ಬಾಣಕ್ಕೆ ಏನೆನ್ನುವನೋ)ಸೌರಾಷ್ಟ್ರ ರಾಗದ “ಎಲ ಎಲ ಭಂಡೆರ ಗಂಡ, ಹೇಡಿಳೆ ಅರಸ'(ಎಲ ಎಲ ಭಂಡರ ಗಂಡ, ಹೇಡಿಗಳ ಅರಸ) ಪದ್ಯಗಳು ಚಪ್ಪಾಳೆ ಗಿಟ್ಟಿಸಿದವು. ರಾಮಪ್ರಕಾಶ ಕಲ್ಲೂರಾಯರ ಮೃದಂಗ, ಸುದರ್ಶನ ಕಲ್ಲೂರಾಯರ ಚೆಂಡೆ ವಾದನವೂ ಪ್ರಸಂಗದ ವೈಭವವನ್ನು ಇನ್ನಷ್ಟು ಹೆಚ್ಚಿಸಿದವು.

 ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

HDK (3)

Prajwal Case; ಮೊದಲು ರಾಹುಲ್ ಗಾಂಧಿಗೆ ನೋಟಿಸ್ ಕೊಡಬೇಕು: ಎಚ್ ಡಿಕೆ ಆಗ್ರಹ

jameer

Pakistan ಜಿಂದಾಬಾದ್ ಅಂದವರನ್ನು ಡಿಶ್ಯುಂ ಡಿಶ್ಯುಂ ಎಂದು ಶೂಟ್ ಮಾಡಬೇಕು: ಜಮೀರ್

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.