ಆಶ್ರಮದಲ್ಲಿ ಕಳೆದ ದಿನಗಳು


Team Udayavani, Jan 18, 2019, 12:30 AM IST

9.jpg

ನನ್ನ ಜೀವನದಲ್ಲಿ ಕಳೆದ ಅತ್ಯುತ್ತಮ ಕ್ಷಣಗಳಲ್ಲಿ ಆಶ್ರಮದಲ್ಲಿ ಕಳೆದ ಸಮಯವೂ ಒಂದಾಗಿದೆ. ಹೆತ್ತು, ಹೊತ್ತು, ಎತ್ತಿ ಮುದ್ದಾಡಿ ಕಷ್ಟಪಟ್ಟು ಬೆಳೆಸಿದ ಮಕ್ಕಳೇ ಮುಂದಿನ ದಿನ ತನ್ನ ಸ್ವಾರ್ಥಕ್ಕಾಗಿ ಯಾವ ಆಲೋಚನೆಯನ್ನೂ ಮಾಡದೆ ತಮ್ಮ ಹೆತ್ತವರನ್ನೇ ಆಶ್ರಮಕ್ಕೆ ಕಳುಹಿಸಿ ಬಿಡುತ್ತಾರೆ. ಆದರೆ, ಅಲ್ಲಿಯ ಪಾಲಕರಾದವರು ಮಾತ್ರ ಅವರನ್ನು ತಮ್ಮ ಹೆತ್ತವರಂತೆಯತೇ ನೋಡಿಕೊಳ್ಳುತ್ತಾರೆ. ತಮ್ಮ ಸ್ವಂತ ಮಕ್ಕಳಿಗಿಂತಲೂ ಆಶ್ರಮದ ಮಂದಿಗೆ ಹೆಚ್ಚು ಪ್ರೀತಿಯನ್ನು ಕೊಡುತ್ತಾರೆ. ಆದರೂ, ಹೆತ್ತವರ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ತನ್ನ ಮಕ್ಕಳು ತನ್ನನ್ನು ನೋಡಿಕೊಳ್ಳಲಿಲ್ಲವೆಂಬ ಕೊರಗು ಇದ್ದೇ ಇರುತ್ತದೆ.

ತಂದೆತಾಯಿ ತಮ್ಮ ಮಕ್ಕಳು ಅರಿತೋ ಅಥವಾ ಅರಿಯದೆಯೋ ಮಾಡಿದ ತಪ್ಪುಗಳನ್ನು ಮಕ್ಕಳಿಗೆ ತಿಳಿಹೇಳಿ ಕ್ಷಮಿಸಿಬಿಡುತ್ತಾರೆ. ತಮ್ಮ ಮಕ್ಕಳಲ್ಲಿ ಯಾವತ್ತೂ ಬೇಧಭಾವ ಮಾಡುವುದಿಲ್ಲ. ಅವರಿಗೆ ಒಂಚೂರು ನೋವಾಗದಂತೆ ನೋಡಿಕೊಳ್ಳುತ್ತಾರೆ. ತಮಗೆ ಎಷ್ಟು ಕಷ್ಟವಾದರೂ ಪರವಾಗಿಲ್ಲ ಮಕ್ಕಳ ಸಂತೋಷವೇ ನಮ್ಮ ಸಂತೋಷ ಎಂದು ತಮ್ಮ ಜೀವಮಾನವನ್ನೇ ಮಕ್ಕಳಿಗೋಸ್ಕರ ಮುಡಿಪಾಗಿಡುತ್ತಾರೆ. ಆದರೆ, ಅವರ ವೃದ್ಧಾಪ್ಯದ ದಿನಗಳಲ್ಲಿ ಮಕ್ಕಳು ಮಾತ್ರ ಅವರ ನೆರಳಾಗುವುದಿಲ್ಲ. 

ನಾನು ಒಮ್ಮೆ ನಮ್ಮ ಕಾಲೇಜಿನ ರೋವರ್  ರೇಂಜರ್ ಗ್ರೂಪಿನೊಂದಿಗೆ ವೃದ್ಧಾಶ್ರಮಕ್ಕೆ ಭೇಟಿ ನೀಡಿ¨ªೆ. ಅಲ್ಲಿ ಅಜ್ಜ-ಅಜ್ಜಿಯರೊಂದಿಗೆ ಕಳೆದ ಸಮಯ ನನ್ನ ಜೀವನದಲ್ಲಿ ಮರೆಯಲು ಅಸಾಧ್ಯ. ಅಲ್ಲಿ ಅವರ ಚುರುಕು ಸ್ವಭಾವ, ಮಕ್ಕಳ ಬಗೆಗಿನ ಪ್ರೀತಿ ಹಾಗೂ ಮುದಿ ಹುಚ್ಚುತನಕ್ಕೆ ಒಳಗಾದವರನ್ನು ನೋಡಿ ಒಮ್ಮೆ ಬೆಚ್ಚಿಬಿಟ್ಟಿದ್ದೆ. ಅಲ್ಲಿ ಅವರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಅಂತ ಹೇಳಬಹುದು. ಅಲ್ಲಿ  ಹೋದಾಗ ಅವರ ಪ್ರತಿನಿತ್ಯದ ದಿನಚರಿಯನ್ನು ನಮಗೆ ತಿಳಿಸಿದರು. ಅವರು ನಮ್ಮೊಂದಿಗೆ ಚಿಕ್ಕ ಮಕ್ಕಳ ರೀತಿ ಆಡುತ್ತಿದ್ದರು. ಅವರ ಕಥೆ-ವ್ಯಥೆಗಳನ್ನು ಕೇಳಿದಾಗ ಮನಸ್ಸಿಗೆ ಖೇದವೆನಿಸಿತು. ನಾವು ಎಷ್ಟೇ ದೊಡ್ಡ ಸಾಧನೆ ಮಾಡಿದರೂ ತಂದೆ-ತಾಯಿಯನ್ನು ನೋಡಿಕೊಳ್ಳಲಾಗದವನ ಜೀವನ ಜೀವನವೇ ಅಲ್ಲ. ಅಲ್ಲಿ ಕಳೆದ ನಾಲ್ಕು ದಿನಗಳು ನನ್ನ ಜೀವನದಲ್ಲಿ ಮರೆಯಲಾಗದ ನೆನಪನ್ನು ತಂದಿದೆ. ಅಲ್ಲಿ ಹಿರಿಯರಿಂದ ಕಲಿತುಕೊಂಡ ವಿಷಯಗಳು, ಮೌಲ್ಯಗಳು ಅನೇಕ. ಇನ್ನಾದರೂ ವೃದ್ಧಾಶ್ರಮಗಳ ಸಂಖ್ಯೆ ಕ್ಷೀಣಿಸಲಿ. ಮಕ್ಕಳು ತಮ್ಮ ಹೆತ್ತವರಿಂದ ಮೌಲ್ಯಗಳನ್ನು ಕಲಿಯಲಿ. 
                
ಆಕರ್ಷ ಆರ್‌. ಆರಿಗ 
ದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಪದವಿ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

arrested

ಮಹಾದೇವ್‌ ಆ್ಯಪ್‌ ಕೇಸು: ನಟ ಸಾಹಿಲ್‌ ಖಾನ್‌ ಬಂಧನ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.