ಕಾಲೇಜಿನಲ್ಲಿ ಮೊದಲ ದಿನ 


Team Udayavani, Feb 1, 2019, 12:30 AM IST

x-11.jpg

ಅದು ಬಿಎಸ್ಸಿಯ ಮೊದಲ ದಿನ. ಏಳು ವರ್ಷಗಳ ನಂತರ ನಾನು ನನ್ನ ಊರಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುತ್ತಿದ್ದೆ. ನನ್ನಲ್ಲಿ ಅಳುಕಿತ್ತು. ಏಕೆಂದರೆ, ನನ್ನ ಏಳು ವರ್ಷದ ಸ್ನೇಹಿತರೆಲ್ಲರೂ ಬೆಂಗಳೂರು, ಮೈಸೂರು, ಹಾಸನ ಹೀಗೆ ಬೇರೆ ಬೇರೆ ಊರುಗಳಿಗೆ ವಿದ್ಯಾಭ್ಯಾಸಕ್ಕಾಗಿ ತೆರಳಿದ್ದರು. ಹಾಗಾಗಿ, ಆ ಸ್ನೇಹಿತರಾರೂ ಇಲ್ಲಿ ಸಿಗಲಾರರು ಎಂಬುದು ಖಚಿತವಾಗಿತ್ತು. ಪ್ರಾಥಮಿಕ ಶಾಲೆಯ ಸ್ನೇಹಿತರು ಸಿಗಬಹುದೆಂಬ ಆಶಾಭಾವ ನನ್ನಲ್ಲಿತ್ತು. ಆದರೆ, ಅವರನ್ನು ಗುರುತು ಹಿಡಿಯಲು ವಿಫ‌ಲವಾದರೆ… ಎಂಬ ಭಯವೂ ಇತ್ತು. ಹೀಗೆ, ಇದನ್ನೆಲ್ಲ ಯೋಚಿಸುತ್ತ  ಕಾರಿಡಾರ್‌ನಲ್ಲಿ ನಡೆಯುತ್ತಿದ್ದೆ. 

ಕ್ಲಾಸ್‌ರೂಮ್‌ ಬಾಗಿಲಿಗೆ ಇನ್ನೂ ಬೀಗ ಜಡಿದಿತ್ತು. ಹಾಗಾಗಿ, ಒಮ್ಮೆ ಕಾಲೇಜು ನೋಡೋಣ ಎಂದೆನಿಸಿ ಮುಂದೆ ಮುಂದೆ ಸಾಗಿದೆ. ಅಲ್ಲಲ್ಲಿ ವಿದ್ಯಾರ್ಥಿಗಳ ತಂಡ ಕಾಣತೊಡಗಿತು. ನನಗೂ ಆ ತಂಡಗಳನ್ನು ಸೇರಬೇಕೆಂದೆನಿಸಿತು. ಆದರೆ, ಒಬ್ಬರದ್ದೂ ಪರಿಚಯ ಇರಲಿಲ್ಲ. ನನ್ನ ಹಾಗೆ ಬೇರೆ ಯಾರಾದರೂ ಇದ್ದಾರೆಯೇ ಎಂಬುದನ್ನು ಹುಡುಕಿ ಅವರೊಂದಿಗೆ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಬೇಕೆಂದು ನಿರ್ಧರಿಸಿದೆ. ಆಗಲೇ ನನಗೆ ಚಿರಪರಿಚಿತ ಎಂದೆನಿಸುವ ಒಂದು ನಗು ಕೇಳಿಸಿತು. ಹಿಂದೆ ತಿರುಗಿದರೆ ಗೆಳತಿ ರಮ್ಯಾ ತನ್ನ ಸ್ನೇಹಿತರೊಂದಿಗೆ ಮಾತಿನಲ್ಲಿ ತಲ್ಲೀನಳಾಗಿದ್ದಳು. 

ರಮ್ಯಾ ನನ್ನ ಐದನೇ ತರಗತಿಯ ಸ್ನೇಹಿತೆ. ಹೇಗೆ ಬದಲಾಗಿ ಬಿಟ್ಟಿದ್ದಾಳೆ ಈಕೆ ಎಂದು ಅಂದುಕೊಳ್ಳುತ್ತ ಅವಳೆಡೆಗೆ ನಡೆದೆ. ಏನೂ ಹೇಳದೆ ಅವಳೆದುರು ನಿಂತರೆ ಆಕೆ ನನ್ನನ್ನು ನೋಡಿ ಗುರುತು ಹಿಡಿದೇ ಬಿಟ್ಟಳು. ಏಳು ವರ್ಷಗಳ ನಂತರದ ಭೇಟಿ ಇಬ್ಬರನ್ನೂ ಖುಷಿಯಲ್ಲಿ ತೇಲಾಡಿಸಿಬಿಟ್ಟಿತು. ಅವಳ ಬಳಿ ಇತರ ಸಹಪಾಠಿಗಳ ಬಗ್ಗೆ ವಿಚಾರಿಸಿದೆ. ಕೆಲವರು ಅದೇ ಕಾಲೇಜು ಎಂದು ತಿಳಿದು ಖುಷಿ ಪಟ್ಟೆ. ಅವರೆಲ್ಲರೂ ಬಿ.ಕಾಂ. ಆಯ್ಕೆ ಮಾಡಿಕೊಂಡಿದ್ದರು. ನನ್ನ ತರಗತಿಯಲ್ಲಿ ಅವರು ಸಿಗದಿದರೂ ಕಾಲೇಜಿನಲ್ಲಿ, ಬಸ್ಸಿನಲ್ಲಿ ಸಿಗುವವರು ಎಂದೆನಿಸಿ ನಿರಾಳವಾದೆ. ಭಯ ತುಂಬಿದ್ದ ನನ್ನ ಮನಸ್ಸು ಹಗುರಾಗಿ ಉತ್ಸಾಹದಿಂದ ತುಂಬಿತ್ತು. ಅವಳಲ್ಲಿ ಮಾತನಾಡಿ ನಂತರ ನನ್ನ ತರಗತಿಯ ಕಡೆಗೆ ನಡೆದೆ. ತರಗತಿಯಲ್ಲಿ ಅದಾಗಲೇ ಮೂವರು ಕುಳಿತುಕೊಂಡು ಒಬ್ಬೊಬ್ಬರನ್ನು ಪರಿಚಯಿಸಿಕೊಳ್ಳುತ್ತಿದ್ದರು. ನನ್ನನ್ನು ಕಂಡವರೇ “ಹಾಯ್‌’ ಎಂದರು. ನಾನೂ “ಹಾಯ್‌’ ಎಂದು ಅವರನ್ನು ಪರಿಚಯಿಸಿಕೊಂಡೆನು. ಮೊದಲ ದಿನವೇ ಅವರು ನನಗೆ ಸ್ನೇಹಿತರಾಗಿಬಿಟ್ಟರು. ಈಗ ಬಿಎಸ್ಸಿ ಸೇರಿ ಒಂದೂವರೆ ವರ್ಷಗಳು ಕಳೆದು ಹೋಗಿದೆ. ಈಗ ನನಗೂ ಸ್ನೇಹಿತರ ದೊಡ್ಡ ಗುಂಪು ಇದೆ. ಈಗ ಬಿಎಸ್ಸಿ ಮುಗಿಯುವುದೇ ಬೇಡ ಎಂದು ಅನಿಸುತ್ತದೆ. ಕಾಲೇಜಿನಲ್ಲಿ ಕಳೆಯುವ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಅದು ಬರೀ ಕಲಿಕೆಯಲ್ಲಿ ಕೂಡಿರದೆ ವಿವಿಧ ಮನರಂಜನೆ, ಚಟುವಟಿಕೆಗಳಲ್ಲಿ ತುಂಬಿರುತ್ತದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಕಾಲೇಜು ದಿನಗಳು ಬಹಳ ಮಹತ್ವದ್ದಾಗಿರುತ್ತವೆ. 

ಸಹನಾ ರೈ  
ದ್ವಿತೀಯ ಬಿ. ಎಸ್ಸಿ., 
ವಿವೇಕಾನಂದ ಕಾಲೇಜು, ಪುತ್ತೂರು 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.