ದೇಶಿ ಕ್ರೀಡೆ ಉಳಿಸಿ-ಬೆಳೆಸಿ
Team Udayavani, Feb 2, 2019, 11:32 AM IST
ಶಹಾಪುರ: ತಾಲೂಕಿನ ಕಾಡಂಗೇರಾ (ಬಿ) ಗ್ರಾಮದಲ್ಲಿ ಶರಣ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಪ್ರಯುಕ್ತ ಆಯೋಜಿಸಿದ್ದ ಗ್ರಾಮೀಣ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಗ್ರಾಪಂ ಸದಸ್ಯ ಹಣಮಂತ ಉಲಟಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕ ಸದೃಢತೆ ಜಾಗೃತವಾಗಲಿದೆ. ಶರಣರ ಹೆಸರಲ್ಲಿ ದೇಶಿ ಕ್ರೀಡೆ ಕಬಡ್ಡಿ ಪಂದ್ಯಾವಳಿ ನಡೆಸುತ್ತಿರುವುದು ಶ್ಲಾಘನೀಯ. ದೇಶಿ ಕ್ರೀಡೆ ನಶಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಅವುಗಳಿಗೆ ಮಹತ್ವ ನೀಡಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದರು.
ಶರಣ ಮಡಿವಾಳ ಮಾಚಿದೇವರು ಸಮಾಜ ಸುಧಾರಕರು. ವಚನ ಭಂಡಾರ ರಕ್ಷಿಸಿದ ಕೀರ್ತಿ ಮಾಚಿದೇವರಿಗೆ ಸಲ್ಲುತ್ತದೆ. ಅಂದು ಅವರು ವಚನಗಳನ್ನು ರಕ್ಷಿಸದಿದ್ದರೆ, ಇಂದು ಬಸವಣ್ಣ, ಅಕ್ಕ ಮಹಾದೇವಿ ಯಾರೊಬ್ಬರ ಶರಣರ ಹೆಸರು ಕಂಡು ಬರುತ್ತಿರಲಿಲ್ಲ. ಅವರ ಸೇವೆ ಅಮೋಘ ಎಂದರು.
ಬಸವಾದಿ ಶರಣರ ಬಟ್ಟೆ ತೊಳೆಯುವ ಕಾಯಕ ಮಾಡಿದ ಮಾಚಿದೇವ ಪರಶಿವನ ಅನುಗ್ರಹದಿಂದ ಜನಿಸಿದ ವೀರಭದ್ರ ಇನ್ನೊಂದು ರೂಪವಾಗಿದ್ದಾನೆ. ಅಲ್ಲದೇ ಬದುಕಿನಲ್ಲಿ ಶರಣರ ವಿಚಾರಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ದೇವಿಂದ್ರಪ್ಪ ಬಂಗಾರಿ, ಸಿದ್ದಪ್ಪ ದುಗನೂರು, ಸಿದ್ದಪ್ಪ ಸುಕಲಿ, ಹುಚ್ಚಪ್ಪ ಗಳ್ಳೆನೋರ, ಸಿದ್ದಯ್ಯ ಕಾವಲಿ, ಸಿದ್ರಾಮ ಗೋಡಿಹಾಳ, ಶಿವರಾಜ ಗೋಡಿಹಾಳ, ರಂಗಯ್ಯ ಗೋಡಿಹಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ
Koppala: ಬಾಡಿಗೆ ಮನೆಯಲ್ಲಿ ವಾಸವಿದ್ದ ಮೂವರ ನಿಗೂಢ ಸಾವು… ಪೊಲೀಸರು ದೌಡು
Riyan Parag ಯೂಟ್ಯೂಬ್ ಹಿಸ್ಟರಿ ಲೀಕ್: ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್ʼ ಎಂದು ಸರ್ಚ್
ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ, ಇಲ್ಲವಾದರೆ.. ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ
Lost Control: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಕಾರು