ಶಾಲೆಯ ದಾರಿಯಲ್ಲಿ ಕಲಿತ ಪಾಠಗಳು


Team Udayavani, Feb 22, 2019, 12:30 AM IST

14.jpg

ಎಲ್ಲರ ಜೀವನದಲ್ಲೂ ಬಾಲ್ಯ ಎಂಬುದು ಮರು ಕಳಿಸಲಾಗದ ಅತ್ಯಮೂಲ್ಯ ನೆನಪುಗಳನ್ನು ಹೊತ್ತ ವಿಶೇಷ ಕಾಲಘಟ್ಟ. ಸಾಮಾನ್ಯವಾಗಿ ನಮ್ಮ ಪೀಳಿಗೆಯವರಿಗೆ ಬಾಲ್ಯ ಎಂದಾಕ್ಷಣ ನೆನಪಿಗೆ ಬರುವುದು ಶಾಲೆ. ಶಾಲೆಗೆ ಹೋಗಲು ಮನಸ್ಸಿಲ್ಲದಿದ್ದರೂ ಗೆಳೆಯರೊಡನೆ ಸೇರಿ ಆಟವಾಡಲೋ ಅಥವಾ ಯಾವುದೋ ಹುಚ್ಚುಸಾಹಸಗಳಿಗೆ ಕೈ ಹಾಕಲೋ ಹೋಗುತ್ತಿದ್ದವರು ಕೆಲವರಾದರೆ, ಮನೆಯವರ ಒತ್ತಾಯಕ್ಕೆ ಮತ್ತು ಶಾಲೆಯಲ್ಲಿ ಶಿಕ್ಷಕರು ಹಿಡಿಯುವ ಬೆತ್ತದ ಕೋಲಿನ ಭಯಕ್ಕೆ ಹೋಗುವವರು ಹಲವರು. ಸಾಮಾನ್ಯವಾಗಿ ಎಲ್ಲರ ಬಾಲ್ಯದಲ್ಲಿಯೂ ಶಾಲೆಯಲ್ಲಿ ಕಳೆದ ದಿನಗಳೇ ಹೆಚ್ಚು ಅನುಭವ ಕೊಟ್ಟರೆ, ನನಗೆ ಶಾಲೆಯಿಂದ ಮನೆಗೆ ಹೋಗುತ್ತಿದ್ದ ದಾರಿ ಕೊಟ್ಟ ಅನುಭವವೇ ಹೆಚ್ಚು.

ನಮ್ಮದು ಹಳ್ಳಿಗಾಡಿನಲ್ಲಿರುವ ಊರು. ಐದನೆಯ ತರಗತಿಯವರೆಗೆ ಓದಲು ಮನೆಯ ಹತ್ತಿರವೇ ಶಾಲೆ ಇತ್ತು. ಮತ್ತೆ ಕನಿಷ್ಠ ಮೂರು ಕಿ. ಮೀ. ಊರಿನ ಮೂಲೆಯಲ್ಲಿರುವ ಶಾಲೆಗೆ ನಡೆದುಕೊಂಡೇ ಸಾಗಬೇಕಿತ್ತು. ದಿನಕ್ಕೆ 6 ಬಾರಿ ಇದೇ ದಾರಿಯಲ್ಲಿ ಬಸ್ಸು ಓಡಾಡುತ್ತಿತ್ತು. ಆದರೆ, ಅದು ಕೂಡ ನಮ್ಮ ಅನುಕೂಲಕ್ಕೆ ತಕ್ಕಂತೆ ಇರಲಿಲ್ಲ. ಯಾರ ಬಳಿಯಾದರೂ ಡ್ರಾಪ್‌ ಕೇಳ್ಳೋಣವೆಂದರೂ ತಮ್ಮ ದಿನನಿತ್ಯದ ಕೆಲಸಗಳಿಗೆ ಅಥವಾ ಪೇಟೆಗೆ ಎಂದು ನಮಗೆ ಅಭಿಮುಖವಾಗಿ ಚಲಿಸುವ ವಾಹನಗಳ ಸಂಖ್ಯೆಯೇ ಜಾಸ್ತಿಯಾಗಿರುತ್ತಿತ್ತು. ಬೆಳಿಗ್ಗೆ ಶಾಲೆಗೆ ಹೋಗುವಾಗ ಹೆಚ್ಚಾಗಿ ಒಬ್ಬನೇ ಹೋಗಬೇಕಾಗುತ್ತಿತ್ತು. ಆದರೆ, ಬರುವಾಗ ಮಾತ್ರ ಒಂದಿಷ್ಟು ಮಂದಿ ಸ್ನೇಹಿತರೊಡಗೂಡಿಯೇ ಬರುತ್ತಿದ್ದೆವು.

ಹೆಚ್ಚು-ಕಡಿಮೆ ಈ ಸುತ್ತಮುತ್ತಲಿನ ಗುಡ್ಡಗಾಡಿನ ಸಂಪೂರ್ಣ ಪರಿಚಯವಿದ್ದ ನಮಗೆ ಯಾವ ಗುಡ್ಡದಲ್ಲಿ ಯಾವ ಗಿಡಮರಗಳಿವೆಯೆಂದೂ, ಯಾವ ಸೀಸನ್‌ನಲ್ಲಿ ಯಾವ ಹಣ್ಣುಗಳು ದೊರಕುತ್ತವೆಯೆಂದೂ ತಿಳಿದಿದ್ದೆವು. ಈ ನೈಸರ್ಗಿಕ ಸಂಪತ್ತಿನ ನೈಜ ಫ‌ಲಾನುಭವಿಗಳು ನಾವಾಗಿದ್ದೆವು ಎಂದರೆ ತಪ್ಪಾಗಲಾರದು. ಇದೇ ಕಾರಣದಿಂದಾಗಿ ಸಾಯಂಕಾಲ ಮನೆ ಸೇರುವ ಸಮಯ ಕೆಲವೊಮ್ಮೆ 7 ಗಂಟೆ ಆಗಿರುತ್ತಿತ್ತು. ಬೋಳುಗುಡ್ಡದ ಮೇಲೆ ಯಾವುದೇ ದಟ್ಟ ಮರಗಳ ಅಡೆತಡೆಗಳಿಲ್ಲದೇ ಇರುವುದರಿಂದ ಬೆಳಕು ಚೆನ್ನಾಗಿ ಹರಿದಿರುತ್ತಿತ್ತು. ಯಾರಿಗೇ ಕತ್ತಲಾದರೂ ನಾವು ಮಾತ್ರ ಮರಗಳಲ್ಲಿರುವ ನೆಲ್ಲಿಕಾಯನ್ನೋ, ಚೂರಿ ಹಣ್ಣನ್ನೋ ಅಥವಾ ಇನ್ನಾವುದೋ ಗಿಡದ ಫ‌ಸಲನ್ನು ತಿಂದು ಮಿಕ್ಕಿದ್ದನ್ನು ಬ್ಯಾಗಿಗೆ ತುರುಕಿಕೊಳ್ಳುವ ಭರದಲ್ಲಿ ಕತ್ತಲಿನ ಅರಿವಾಗುವುದು ರಸ್ತೆಗಿಳಿದ ಬಳಿಕವೇ!

ಒಮ್ಮೆಲೆ ಕತ್ತಲಾದ ಅನುಭವ. ರಸ್ತೆಯಲ್ಲಿ ಓಡಾಡುವ ವಾಹನಗಳ ಹೆಡ್‌ಲೈಟ್‌ ಆನ್‌ ಆಗಿರುತ್ತಿತ್ತು. ನಾವು ಮಾತ್ರ ಮನೆಯವರಿಂದ ಬರುವ ಬೈಗುಳವನ್ನು ಎದುರಿಸಲು ತಯಾರಿ ನಡೆಸುತ್ತ ಸಾಗುತ್ತಿದ್ದೆವು. ನನಗಂತೂ ಮೊದಲೇ ತಂದೆ ಎಂದರೆ ಭಯ. ತಡವಾದುದಕ್ಕೆ ಕಾರಣ ಕೇಳಿದಾಗ ನನ್ನಲ್ಲಿ ಯಾವುದೇ ಧನಾತ್ಮಕ ಕಾರಣಗಳಿಲ್ಲದೇ ಹೋದುದರಿಂದ ಸ್ವಲ್ಪ ಜಾಸ್ತಿಯೇ ಭಯದಿಂದ ಮನೆ ತಲುಪಿದೆ. ಮನೆಯ ಬಾಗಿಲ ಬಳಿಯೇ ನಿಂತು ನನ್ನ ಬರುವಿಕೆಗಾಗಿಯೇ ಅಪ್ಪ ಕಾಯುತ್ತಿದ್ದರು. ನಾನು ಅಂಗಳದ ತುದಿಯಲ್ಲೇ ನಿಂತೆ. ಅವರ ಕೋಪ ಕಣ್ಣಿನಲ್ಲೇ ಗೋಚರಿಸುತ್ತಿತ್ತು. ಅದಾಗ ತಾನೆ ಊರಿಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬೆಲ್ಲ ಗಾಳಿಸುದ್ದಿಗಳು ಹರಿದಾಡುತ್ತಿದ್ದರಿಂದ ನಮ್ಮ ತಂದೆ ಸ್ವಲ್ಪ ಜಾಸ್ತಿಯೇ ಕುಪಿತರಾಗಿದ್ದರು. “”ಬೇರೆ ಮಕ್ಕಳು ಬೇಗ ಮನೆ ಸೇರಿದ್ದಾರೆ. ನಿನಗೇನು ಲೇಟು” ಎಂದು ಗದರಿ ನನಗೆ ಮನೆಯ ಒಳಗೆ ಪ್ರವೇಶವನ್ನೇ ನಿಕಾರಿಸಿ ಬಿಟ್ಟರು. ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಮೌನ ವ್ಯಕ್ತಪಡಿಸಿದೆ. ಅಮ್ಮನ ಬಳಿ ನನ್ನನ್ನು ಒಳಗೆ ಸೇರಿಸಬೇಡವೆಂದು ಹೇಳಿ ಯಾವುದೋ ಕೆಲಸಕ್ಕೆ ಹೊರಟರು. ಅವರ ದಿನಚರಿಯ ಪ್ರಕಾರ ಸಣ್ಣಪುಟ್ಟ ವೈರಿಂಗ್‌ ಕೆಲಸ ಎಂದು ಹೇಳಿ ಹೊರಟರೆ ಬರುವುದು ರಾತ್ರಿ 10 ಗಂಟೆ. ಅಷ್ಟರೊಳಗೆ ಅಮ್ಮನ ಮನವೊಲಿಸಿ ಒಳಗೆ ಬಂದು ಎಲ್ಲ ಚಟುವಟಿಕೆಗಳನ್ನು ಮುಗಿಸಿ ಮಲಗಿ ಬಿಡುವುದು ನನಗೆ ಕಷ್ಟವಾಗಲಿಲ್ಲ. ಇದೇ ರೀತಿಯ ಸನ್ನಿವೇಶ ಮತ್ತೆ ಮರುಕಳಿಸಿದ್ದುಂಟು.

ನಾವು ಶಾಲೆಯಲ್ಲಿ ಎಷ್ಟೇ ಮುಗ್ಧರೆನಿಸಿಕೊಂಡರೂ ದಾರಿಯಲ್ಲಿ ಮಾಡುತ್ತಿದ್ದ ಕಿಡಿಗೇಡಿ ಕೆಲಸಗಳಿಗೆ ಎತ್ತಿದ ಕೈ. ಶಾಲೆಗೆ ಹೋಗುವ ರಸ್ತೆಯ ಬದಿಯ ತೋಡಿನಂಚಿನಲ್ಲಿದ್ದ ಸುಮಾರು ಸೊಂಟದೆತ್ತರದ ಕಿ.ಮೀ. ಮೈಲಿಗಲ್ಲನ್ನು ತುಳಿದು ತುಳಿದು ಒಂದು ತಿಂಗಳ ಸತ‌ತ ಪ್ರಯತ್ನದಿಂದ ನೆಲಸಮ ಮಾಡಿದ್ದೆವು. ಇದರಿಂದ ಯಾವುದೋ ದೊಡ್ಡ ಸಾಹಸ ಮಾಡಿದ ತೃಪ್ತಿ ನಮ್ಮಲ್ಲಿತ್ತು ಬಿಟ್ಟರೆ ಮತ್ತಾವ ದುರುದ್ದೇಶಗಳಿರಲಿಲ್ಲ. 

ಮೊನ್ನೆ ತಾನೆ ವೋಟಿಗೆಂದು ವರ್ಷಗಳ ನಂತರ ಈ ದಾರಿಯಲ್ಲಿ ಶಾಲೆಗೆ ಹೋದಾಗ ಹಳೆ ನೆನಪುಗಳು ಮರುಕಳಿಸಿದವು. ಶಾಲೆಯ ಮಕ್ಕಳಿಂದ ಹಿಡಿದು ಶಿಕ್ಷಕರವರೆಗೂ ಬದಲಾಗಿದ್ದರು. ಅಂತೆಯೇ ಶಾಲೆಯ ವಾತಾವರಣ ಕೂಡ ಬದಲಾಗಿತ್ತು. ಶಾಲೆ ಬಿಟ್ಟು ಎಷ್ಟೋ ವರ್ಷಗಳ ಬಳಿಕ ಅನಿವಾರ್ಯಕ್ಕಾಗಿ ಭೇಟಿ ಕೊಟ್ಟು ನಾನು ಕೂಡ ಬದಲಾಗಿದ್ದು ಅರಿವಿಗೆ ಬಂತು!

ಮಧು ಎಂ.ಎಸ್‌.
ಅಂತಿಮ ಬಿ.ಕಾಂ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಪು, ಉಡುಪಿ

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.