ನೀರುದೋಸೆ ಸ್ಪೆಷಲ್‌ 


Team Udayavani, Mar 15, 2019, 12:30 AM IST

x-56.jpg

ಬೆಳಗಿನ ಹಾಗೂ ಸಂಜೆಯ ತಿಂಡಿಯ ತಯಾರಿ ಗೃಹಿಣಿಯರಿಗೆ ಒಂದು ದೊಡ್ಡ ಸವಾಲೇ ಆಗಿದೆ. ಕೇವಲ ತಿಂಡಿಗಾಗಿ ಹೆಚ್ಚಿನ ಸಮಯವನ್ನು ಮೀಸಲಿರಿಸಲು ಅಸಾಧ್ಯವಾಗಿದೆ. ಕಾರಣ ಹೊರಗಿನ ದುಡಿತದ ಕೈಗಳಿಗೆ ಸಮಯದ ಅಭಾವ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತಯಾರಿಸುವ ತಿಂಡಿ ಎಂದರೆ ನೀರುದೋಸೆ. ಆದರೆ ಒಂದೇ ತೆರನಾದ ತಿಂಡಿ ಬೇಜಾರೆನಿಸುತ್ತದೆ. ಒಮ್ಮೆ ರುಬ್ಬಿಟ್ಟುಕೊಂಡ ನೀರುದೋಸೆ ಹಿಟ್ಟಿನಲ್ಲಿ ವಿಭಿನ್ನ ರೀತಿಯಲ್ಲಿ ತಿಂಡಿ ತಯಾರಿಸಿದಾಗ ತಿನ್ನುವವರಿಗೂ, ಮಾಡುವವರಿಗೂ ಇಷ್ಟವಾಗಿ ಕೆಲಸ ಸಲೀಸಾಗುತ್ತದೆ. ನೀರು ದೋಸೆ ಹಿಟ್ಟಿನಿಂದ ತಯಾರಿಸುವ ವಿಶೇಷ ಹಾಗೂ ಸರಳ ತಿಂಡಿಗಳು ಇಲ್ಲಿವೆ.

ನೀರುದೋಸೆ ಉಸ್ಲಿ
ಬೇಕಾಗುವ ಸಾಮಗ್ರಿ:
ನೀರು ದೋಸೆ- ಎಂಟು, ಈರುಳ್ಳಿ- ಒಂದು, ಹಸಿ ಮೆಣಸಿನಕಾಯಿ- ಎರಡು, ಸಕ್ಕರೆ- ಒಂದು ಚಮಚ, ತೆಂಗಿನ ತುರಿ- ನಾಲ್ಕು ಚಮಚ, ಮೆಣಸಿನ ಹುಡಿ- ಅರ್ಧ ಚಮಚ, ಕರಿಬೇವು- ಎರಡು ಗರಿ, ಅರಸಿನ ಹುಡಿ- ಸ್ವಲ್ಪ, ತುಪ್ಪ- ಎರಡು ಚಮಚ, ಸಾಸಿವೆ- ಒಂದು ಚಮಚ, ಉದ್ದಿನ ಬೇಳೆ- ಒಂದು ಚಮಚ, ರುಚಿಗೆ ಉಪ್ಪು.

ತಯಾರಿಸುವ ವಿಧಾನ: ತೆಂಗಿನ ತುರಿಗೆ ಉಪ್ಪು, ಮೆಣಸಿನ ಹುಡಿ, ಸಕ್ಕರೆ, ಮಿಕ್ಸ್‌ ಮಾಡಿ ಸಣ್ಣಗೆ ಹೆಚ್ಚಿದ ನೀರು ದೋಸೆಯನ್ನು ಮಿಶ್ರಣ ಮಾಡಿಟ್ಟುಕೊಳ್ಳಿ. ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ, ಕಾದೊಡನೆ ಸಾಸಿವೆ, ಉದ್ದಿನಬೇಳೆ ಹಾಕಿ ಸಾಸಿವೆ ಸಿಡಿದಾಗ, ತೆಳ್ಳಗೆ ಕತ್ತರಿಸಿದ ಈರುಳ್ಳಿ, ಹೆಚ್ಚಿದ ಹಸಿ ಮೆಣಸಿನಕಾಯಿ, ಕರಿಬೇವು ಹಾಕಿ, ಅರಸಿನ ಹುಡಿ ಸೇರಿಸಿ ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಮಾಡಿಟ್ಟುಕೊಂಡ ದೋಸೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಬಿಸಿ ಮಾಡಿ ಇಳಿಸಿರಿ. ಸಂಜೆಯ ಕಾಫಿಗೆ ಉತ್ತಮ ತಿಂಡಿ.

ನೀರು ದೋಸೆ ಖೀರು (ಪಾಯಸ)
ಬೇಕಾಗುವ ಸಾಮಗ್ರಿ:
ತೆಂಗಿನಕಾಯಿ ಹಾಲು- ಎರಡು ಕಪ್‌, ನೀರು ದೋಸೆ- ನಾಲ್ಕು, ಬೆಲ್ಲ- ಎರಡು ತುಂಡು, ತುಪ್ಪ- ಒಂದು ಚಮಚ, ಏಲಕ್ಕಿ- ಎರಡು.

ತಯಾರಿಸುವ ವಿಧಾನ: ತೆಂಗಿನಕಾಯಿ ಹಾಲಿಗೆ ಬೆಲ್ಲ ಹಾಕಿ ಚೆನ್ನಾಗಿ ಕುದಿ ಬಂದಾಗ ಸಣ್ಣಗೆ ಹೆಚ್ಚಿದ ನೀರು ದೋಸೆಯನ್ನು ಹಾಕಿ ಐದು ನಿಮಿಷ ಕುದಿಸಿ,ಏಲಕ್ಕಿ ಹಾಕಿ ಇಳಿಸಿರಿ.ಸರ್ವಿಂಗ್‌ ಬೌಲ್‌ಗೆ ಹಾಕಿ ಒಂದು ಚಮಚ ತುಪ್ಪದೊಂದಿಗೆ ಅಲಂಕರಿಸಿ ಸವಿಯಿರಿ.

ಈರುಳ್ಳಿ ಮಿಕ್ಸ್ಡ್ ದೋಸೆ
ಬೇಕಾಗುವ ಸಾಮಗ್ರಿ:
ನೀರು ದೋಸೆ ಹಿಟ್ಟು- ಎರಡು ಕಪ್‌, ಈರುಳ್ಳಿ- ಒಂದು, ಹೆಚ್ಚಿದ ಕೊತ್ತಂಬರಿ ಸೊಪ್ಪು- ಕಾಲು ಕಪ್‌, ತುಪ್ಪಸ್ವಲ್ಪ.

ತಯಾರಿಸುವ ವಿಧಾನ: ಈರುಳ್ಳಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಿಟ್ಟಿಗೆ ಸೇರಿಸಿ, ಹದವಾಗಿಸಿ ಕಾದ ತವಾದಲ್ಲಿ ತೆಳ್ಳಗೆ ಹರಡಿ ಮುಚ್ಚಿಡಿ. ಮೇಲಿನಿಂದ ಸ್ವಲ್ಪ ತುಪ್ಪಹಾಕಿ ಗರಿ ಗರಿಯಾಗಿ ಕಾಯಿಸಿ ತೆಗೆಯಿರಿ. ಬಿಸಿ ಬಿಸಿ ದೋಸೆ ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ರುಚಿ.

ಸಿಹಿ ದೋಸೆ
ಬೇಕಾಗುವ ಸಾಮಗ್ರಿ:
ನೀರು ದೋಸೆ ಹಿಟ್ಟು- ಒಂದು ಕಪ್‌, ತೆಂಗಿನ ತುರಿ- ಒಂದು ಕಪ್‌, ತುರಿದ ಬೆಲ್ಲ- ಕಾಲು ಕಪ್‌, ತುಪ್ಪ.

ತಯಾರಿಸುವ ವಿಧಾನ: ತೆಂಗಿನ ತುರಿಗೆ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನೀರು ದೋಸೆ ಹಿಟ್ಟನ್ನು ಕಾದ ತವಾದಲ್ಲಿ ಸ್ವಲ್ಪ ದಪ್ಪಗೆ ಹರಡಿಕೊಂಡು ಬೆಂದ ನಂತರ ಮೇಲಿನಿಂದ ಸ್ವಲ್ಪ ತುಪ್ಪಹಾಕಿ ಅದರ ಮೇಲೆ ತೆಂಗಿನಕಾಯಿ ಮಿಶ್ರಣವನ್ನು ತೆಳ್ಳಗೆ ಇಡೀ ದೋಸೆಯ ಮೇಲೆ ಹರಡಿಕೊಂಡು ಪುನಃ ಮೇಲಿನಿಂದ ತುಪ್ಪ ಹಾಕಿ ಅರ್ಧ ವೃತ್ತಾಕಾರವಾಗಿ ಮಡಚಿಕೊಂಡು ಗರಿ ಗರಿಯಾಗಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಪುಟಾಣಿ ಮಕ್ಕಳಿಗೆ ಇಷ್ಟವಾದ ತಿಂಡಿ. 

 ಸಿಹಿ ಉಂಡೆ
ಬೇಕಾಗುವ ಸಾಮಗ್ರಿ:
ದೋಸೆ ಹಿಟ್ಟು- ಒಂದೂವರೆ ಕಪ್‌, ತೆಂಗಿನ ತುರಿ- ಅರ್ಧ ಕಪ್‌, ಬೆಲ್ಲ- ಕಾಲು ಕಪ್‌, ತುಪ್ಪ ಮೂರು ಚಮಚ, ಕರಿಬೇವು- ಒಂದು ಗರಿ, ಸಾಸಿವೆ- ಒಂದು ಚಮಚ, ಉದ್ದಿನ‌ ಬೇಳೆ- ಅರ್ಧ ಚಮಚ.

ತಯಾರಿಸುವ ವಿಧಾನ: ಹಿಟ್ಟನ್ನು ನೀರು ಸೇರಿಸಿ ಹದಗೊಳಿಸಿ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಕಾದೊಡನೆ ದೋಸೆ ಹಿಟ್ಟನ್ನು ಹಾಕಿ ಹದ ಉರಿಯಲ್ಲಿ  ಗಟ್ಟಿಗೆ ಕಾಯಿಸಿಕೊಂಡು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ ಉಗಿಯಲ್ಲಿ ಇಪ್ಪತ್ತು ನಿಮಿಷ ಬೇಯಿಸಿ ಇಳಿಸಿ. ತೆಂಗಿನ ತುರಿಗೆ ಬೆಲ್ಲ ಸೇರಿಸಿ ಕಲಸಿಕೊಂಡು ಮಾಡಿಟ್ಟ ಉಂಡೆಗಳನ್ನು ಹಾಕಿ ಮಿಶ್ರಣ ಮಾಡಿ.ಇನ್ನೊಂದು ಬಾಣಲೆಯಲ್ಲಿ ತುಪ್ಪಹಾಕಿ ಕಾದ ನಂತರ ಸಾಸಿವೆ, ಉದ್ದಿನ ಬೇಳೆ ಹಾಕಿ ಸಾಸಿವೆ ಸಿಡಿದಾಗ ಕರಿಬೇವು ಹಾಕಿ ಮಿಶ್ರಣವನ್ನೂ ಹಾಕಿ ಐದು ನಿಮಿಷ ಬಿಸಿ ಮಾಡಿ ಇಳಿಸಿರಿ. ಆಕರ್ಷಕ ಸಿಹಿ ಉಂಡೆ ರೆಡಿ. 

ವಿಜಯಲಕ್ಷ್ಮಿ ಕೆ. ಎನ್‌.

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.