ಹೋಟೆಲ್‌ ಹೆಸರು ಮೂರ್ತಿ, ಊರ್‌ ತುಂಬಾ ಕೀರ್ತಿ!


Team Udayavani, Apr 8, 2019, 10:20 AM IST

hotel

ಮೂರ್ತಿ ಹೋಟೆಲ್‌ ಫೇಮಸ್‌ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದಹೋಟೆಲ್‌. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ, ಚಿಕ್ಕನಾಯಕನಹಳ್ಳಿಯ ಜನರಿಗೂ ಇಷ್ಟವಾಯಿತು. ಇದರೊಂದಿಗೆ ಮೂರ್ತಿಯವರ ಜೀವನವೂ ಸುಧಾರಿಸಿತು.

ತಾಲೂಕುಗಳಲ್ಲಿ ಈಗಲೂ ಕೆಲವು ಹೋಟೆಲ್‌ಗ‌ಳು ಕಡಿಮೆ ದರದಲ್ಲಿಉತ್ತಮ ತಿಂಡಿ, ಊಟ ಒದಗಿಸುತ್ತಾ, ಹಳ್ಳಿ ಜನರ ಹಸಿವು ನೀಗಿಸುತ್ತಿವೆ. ಕೆಲವರಿಗೆ ಈ ಹೋಟೆಲ್‌ ಗಳಲ್ಲಿ ತಿಂದ್ರೇನೇ ಸಮಾಧಾನ. ಅಂತಹ ಹೋಟೆಲೊಂದು ಚಿಕ್ಕನಾಯಕನಹಳ್ಳಿಯಲ್ಲಿದೆ. ಹೇಳ್ಳೋಕೆ ತಾಲೂಕು ಕೇಂದ್ರವಾದ್ರೂ ನೋಡೋಕೆ ಹಳ್ಳಿಯಂತೆ ಇರುವ ಚಿಕ್ಕನಾಯಕನಹಳ್ಳಿಯಲ್ಲಿ “ಮೂರ್ತಿ ಹೋಟೆಲ್‌’ ಹೆಸರುವಾಸಿ. ನೋಡೋಕೆ ಮನೆಯಂತೆ ಕಾಣುವ ಈ ಹೋಟೆಲ್‌ಗೆ ಯಾವುದೇ ನಾಮಫ‌ಲಕವಿಲ್ಲ. ಮಾಲೀಕನ ಹೆಸರೇ ಈ ಹೋಟೆಲಿನ ಐಡೆಂಟಿಟಿ
ಕಾರ್ಡು.

ಕೋ-ಅಪರೇಟಿವ್‌ ಬ್ಯಾಂಕ್‌ನಲ್ಲಿ ತಾತ ಮಾಡಿದ್ದ 150 ರೂ. ಸಾಲ 750 ರೂ.ಗೆ ಬೆಳೆದು ಇದ್ದ ಮನೆ ಹರಾಜಿಗೆ ಬಂದಿತ್ತು. ಈ ಸಾಲ ತೀರಿಸಲು ನಾಲ್ಕನೇ ತರಗತಿಗೆ ಶಾಲೆ ಬಿಟ್ಟ ಮೂರ್ತಿ, ಹೆಂಚಿನ ಕಾರ್ಖಾನೆಯಲ್ಲಿ ಕೆಲಸಕ್ಕೆ
ಸೇರಿಕೊಂಡರು. ಆದರೆ, ಬರುತ್ತಿದ್ದ ಕೂಲಿ ಹಣ ಮನೆಗೆ ಸಾಕಾಗುತ್ತಿರಲಿಲ್ಲ. 12ನೇ ವಯಸ್ಸಿಗೆ ತಂದೆ, ತಾಯಿ ತೀರಿಕೊಂಡ ನಂತರ, ಮನೆಯನ್ನು ತೊರೆದ ಮೂರ್ತಿ ರಾಮನಗರದ ಲಿಂಗಾಯತರ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಇಲ್ಲಿ ಅಡುಗೆ ಮಾಡುವುದನ್ನು ಚೆನ್ನಾಗಿ ಕಲಿತು ನಂತರ ಹೊಸದುರ್ಗ ತಾಲೂಕಿನ ಚೌಳುಕಟ್ಟೆಯಲ್ಲಿ ತಮ್ಮ ಸ್ನೇಹಿತರ ಸಹಕಾರದೊಂದಿಗೆ ಹೋಟೆಲ್‌ ಆರಂಭಿಸಿದ್ದರು. ಹೋಟೆಲ್‌ ಚೆನ್ನಾಗಿ ನಡೆಯಿತು. ಇಲ್ಲಿ ಬಂದ ಲಾಭದಲ್ಲಿ ತಾತನ ಸಾಲವನ್ನುತೀರಿಸಿದರು. ಆದರೆ, ಸ್ನೇಹಿತನೇ ಮಾಡಿದ ಮೋಸದಿಂದ ಅಲ್ಲಿಂದ ಹೋಟೆಲ್‌ ಖಾಲಿ ಮಾಡಿ ತಿಪಟೂರಿನ ಕೆ.ಜಿ.ಹಳ್ಳಿಯ ಭಾವಿ ಬಳಿ ಹೊಸದೊಂದು ಹೋಟೆಲ್‌ ಆರಂಭಿಸಿದ್ದರು. ಇಲ್ಲಿಯೂ ಹೋಟೆಲ್‌ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ, ಯಾವುದೋ ಕುಂಟು ನೆಪ ಇಟ್ಟುಕೊಂಡು ಸ್ಥಳೀಯರೇ ಗಲಾಟೆ ಮಾಡಿ, ಅಲ್ಲಿಯೂ ತೆರವು ಮಾಡಿಸಿದರು. ನಂತರ ಸ್ವಸ್ಥಳ ಚಿಕ್ಕನಾಯಕನಹಳ್ಳಿಗೆ ಬಂದ ಮೂರ್ತಿ, ತನ್ನ ಪತ್ನಿ ದೊಡ್ಡಮ್ಮ ಅವರ ಸಹಕಾರದೊಂದಿಗೆ 1963ರಲ್ಲಿ ವೆಂಕಟೇಶ್ವರ ಕಾμ ಕ್ಲಬ್‌ ಎಂಬ ಹೆಸರಿನೊಂದಿಗೆ ಹೋಟೆಲ್‌ ಆರಂಭಿಸಿದ್ರು. ಹೋಟೆಲ್‌ ಕೆಲಸದಲ್ಲಿ ಮೂರ್ತಿಯವರಿಗೆ ಐವರು ಪುತ್ರಿಯರೂ ಸಾಥ್‌ ನೀಡುತ್ತಿದ್ದರು. ಈಗ ಮೂರ್ತಿ ಅವರ ಪುತ್ರ ನಾಗರಾಜ್‌ ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ.


ನಾಗರಾಜ್‌ ಕೂಡ ಎಲೆಕ್ಟ್ರಿಕಲ್‌ ಡಿಪ್ಲೋಮಾ ಮಾಡಿ ಬೆಂಗಳೂರಿನಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದರು. ತಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರಿಂದ ಕೆಲಸ ಬಿಟ್ಟು, ತಂದೆ ಕಟ್ಟಿಕೊಟ್ಟಿದ್ದ ಹೋಟೆಲ್‌ ಅನ್ನು
ಮುಂದುವರಿಸಿಕೊಂಡು ಅದೇ ರುಚಿ, ಅದೇ ತಿಂಡಿಯನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ. ಜೀವನ ರೂಪಿಸಿದ ರಾಮನಗರ ಹೋಟೆಲ್‌ ಮೂರ್ತಿ ಹೋಟೆಲ್‌ ಫೇಮಸ್‌ ಆಗಲು ಕಾರಣ ಅಲ್ಲಿ ಸಿಗುತ್ತಿದ್ದ ತಟ್ಟೆ ಇಡ್ಲಿ, ತುಪ್ಪ ಹಾಗೂ ಕಾಯಿ ಚಟ್ನಿ. ಹೋಟೆಲ್‌ನ ಗಂಧಗಾಳಿಯೇ
ಗೊತ್ತಿಲ್ಲದ ಮೂರ್ತಿಯ ಬದುಕು ರೂಪಿಸಿದ್ದು ರಾಮನಗರದಲ್ಲಿ ಕೆಲಸಕ್ಕೆ ಇದ್ದ ಹೋಟೆಲ್‌. ಇಲ್ಲಿ ಮಾಡುತ್ತಿದ್ದ ಇಡ್ಲಿ, ತುಪ್ಪ, ಹುಣಸೆಹಣ್ಣಿನ ಚಿತ್ರಾನ್ನ ಚಿಕ್ಕನಾಯಕನಹಳ್ಳಿಯ ಜನರಿಗೂ ಇಷ್ಟವಾಯಿತು. ಇದರೊಂದಿಗೆ ಮೂರ್ತಿಯವರ ಜೀವನವೂ ಸುಧಾರಿಸಿತು. ವಿಶೇಷ ತಿಂಡಿ ಇಡ್ಲಿ, ಚಿತ್ರಾನ್ನ ಈ ಹೋಟೆಲ್‌ನ ವಿಶೇಷ ತಿಂಡಿ ಅಂದ್ರೆ ತಟ್ಟೆ ಇಡ್ಲಿ. ಇದರ ಜತೆ ಕೊಡುವ ತುಪ್ಪ, ಪಲ್ಯ, ತೆಂಗಿನಕಾಯಿ ಚಟ್ನಿ ಗ್ರಾಹಕರಿಗೆ ರುಚಿಸಿದೆ. ಇದರ ಜೊತೆ ಎರಡು ಬೋಂಡಾ ಹಾಕಿಕೊಂಡರೆ ದರ 40 ರೂ., 2 ಇಡ್ಲಿ ಆದ್ರೆ 25 ರೂ. ಮಾತ್ರ, ಇನ್ನು ಹುಣಿಸೆಹಣ್ಣು, ಮೆಂತ್ಯಾ ಹಾಕಿ ಮಾಡುವ ಚಿತ್ರಾನ್ನ, ಮನೆಯ ತಿಂಡಿಯನ್ನು ನೆನಪಿಸುತ್ತೆ. ಫ‌ಲಾವ್‌, ಪೂರಿ, ಬಜ್ಜಿ ಹೀಗೆ ಎರಡು ಮೂರು ಬಗೆಯ ತಿಂಡಿ ಇಲ್ಲಿ ಸಿಗುತ್ತದೆ. ಬೆಲೆ 30 ರೂ. (ಈರುಳ್ಳಿ ಬೋಂಡಾ ಸೇರಿ).

ಹೋಟೆಲ್‌ ಸಮಯ: ಬೆಳಗ್ಗೆ 7.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ. ರಜೆ ಇರುವುದಿಲ್ಲ.
ಹೋಟೆಲ್‌ ವಿಳಾಸ: ಬನಶಂಕರಿ ದೇವಸ್ಥಾನ ರಸ್ತೆ, ಸಿವಿಲ್‌ ಬಸ್‌ ನಿಲ್ದಾಣದ ಒಳಭಾಗ. ಚಿಕ್ಕನಾಯಕನಹಳ್ಳಿ ಪಟ್ಟಣ.

 ಭೋಗೇಶ ಆರ್‌.ಮೇಲುಕುಂಟ

ಟಾಪ್ ನ್ಯೂಸ್

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ, ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.