ಈ ಸಲ ಸಿಕ್ಕಾಗ ನಾನೇ ಮಾತಾಡಿಸ್ತೀನಿ!


Team Udayavani, Apr 16, 2019, 6:00 AM IST

q-9

ಇನಿಯಾ,
ಒಲವಿನ ಓಲೆಯಿದು, ಹೃದಯದ ಆಸೆಯಿದು, ನನ್ನ ಪ್ರೀತಿ ದೋಣಿಯ ನಾವಿಕ ನೀನಾಗಬೇಕೆಂದು ಕಾಯುತ್ತಿರುವ ಹೂ ಮನಸ್ಸು ನನ್ನದು.

ಪ್ರಥಮ ಪಿಯುಸಿ ಆರಂಭದ ದಿನಗಳವು. ಹೇಳಿ ಕೇಳಿ ಹದಿ ಹರೆಯದ ವಯಸ್ಸು, ನೋಡಿದ್ದೆಲ್ಲ ಬೇಕೆನ್ನುವ ಮನಸ್ಸು. ಆಗ ಸಿಕ್ಕಿದವನು ನೀನು. ಪ್ರೀತಿ, ಪ್ರೇಮ ಅಂದ್ರೆ ಏನು ಅಂತ ತಿಳಿಯದ ಮುಗ್ದೆ ನಾನಾಗಿದ್ದೆ. ತರಗತಿ ಮುಗಿಸಿ ಬರುವಾಗ ಅಚಾನಕ್‌ ಆಗಿ ನನ್ನ ಮುಂದೆ ಬಂದೆ ನೀನು. ಆ ಮೊದಲ ಭೇಟಿಯಲ್ಲೇ ಏನೋ ರೋಮಾಂಚನದ ಅನುಭವ ಆಯ್ತು.

ನೀನಾಗೇ ನನ್ನ ಮಾತಾಡಿಸಿದರೂ, ಏನಂತ ಉತ್ತರಿಸಬೇಕು ಅಂತ ತಿಳಿಯದೆ ತಡಬಡಾಯಿಸಿಬಿಟ್ಟೆ. ನಿನ್ನ ಮಾತು ನನಗೆ ಸಂಗೀತದಂತೆ ಕೇಳಿಸುತ್ತಿತ್ತು. ಅದಕ್ಕೇ ಮೌನವಾಗಿ ಆಲಿಸುತ್ತಾ ನಿಂತೆ. ಅದಕ್ಕಿಂತ ಮುಂಚೆ ಹಿಂದೆಂದೂ ನಾನು ನಿನ್ನನ್ನು ನೋಡಿರಲಿಲ್ಲ. “ಇವನ್ಯಾರು?’ ಅನ್ನೋ ಪ್ರಶ್ನೆ ಕಾಡಿತಾದರೂ, ಯಾವುದೋ ಅಗೋಚರ ಬಾಂಧವ್ಯ ಆ ಪ್ರಶ್ನೆಯನ್ನು ಮರೆಸಿ ಹಾಕಿತು. ನನ್ನ ಅಕ್ಕಪಕ್ಕ ನನಗಿಂತಲೂ ಸುಂದರಿಯರಾದ ಎಷ್ಟೊಂದು ಹುಡುಗಿಯರಿದ್ರೂ ಈ ಶ್ಯಾಮಲ ವರ್ಣದ ಶ್ಯಾಮಲೆಯನ್ನೇ ಯಾಕೆ ನೀನು ಮಾತಾಡಿಸಿದೆ ಅಂತಲೂ ಗೊತ್ತಿಲ್ಲ..

ಪ್ರೀತಿ ಎಂಬ ಭಾವನಾ ಲೋಕಕ್ಕೆ ನನ್ನನ್ನು ಪರಿಚಯಿಸಿದವನು ನೀನೇ. ಅಂದು ನೀನು ನನ್ನ ಪೋನ್‌ ನಂಬರ್‌ ಕೇಳಿದಾಗ, ನಾನು ಕೊಡಲಿಲ್ಲ. ಆದರೆ ನೀನು ಅಲ್ಲಿಂದ ಹೊರಟು ಹೋದ ಮೇಲೆ, ಛೇ! ಎಂಥಾ ಪೆದ್ದಿ ನಾನು. ನಂಬರ್‌ ಕೊಟ್ಟಿದ್ದರೆ ಗಂಟೇನು ಹೋಗ್ತಿತ್ತು ಅಂತ ಅನ್ನಿಸಿತು.

ಅವತ್ತು ನೀನೇನೋ ಮರು ಮಾತಾಡದೆ ಹೋಗಿಬಿಟ್ಟೆ. ಆದ್ರೆ, ನಾನು ಅಂದಿನಿಂದ ಇಂದಿನವರೆಗೆ ನಿನಗೋಸ್ಕರ ಕಾಯ್ತಾ ಇದ್ದೀನಿ. ನಾಲ್ಕು ವರ್ಷದಿಂದ ನಿನ್ನದೇ ಧ್ಯಾನದಲ್ಲಿರುವ ನನಗೆ ನೀನು ಆದಷ್ಟು ಬೇಗ ಮತ್ತೆ ಸಿಗು. ನೀನು ಮೊದಲು ನೋಡಿದಾಗ ನಾನು ಹಾಕಿದ್ದ ಅದೇ ಹಸಿರು ಬಣ್ಣದ ಲಂಗ ದಾವಣಿ ಹಾಕಿ ಅದೇ ಕಾಲೇಜಿನ ಗೇಟ್‌ ಮುಂದೆ ಕಾಯುತ್ತಿರುತ್ತೀನಿ. ಮತ್ತೂಮ್ಮೆ ನನ್ನೆದುರು ಬಾ. ನಾನೇ ಮೊದಲು ಮಾತಾಡಿಸ್ತೀನಿ. ನಂಬರ್‌ ಕೂಡಾ ಕೊಡ್ತೀನಿ. ಸರೀನಾ?

ಇಂತಿ ನಿನ್ನ ಪ್ರೀತಿಯ ಶ್ಯಾಮಲೆ..
ಕಾವ್ಯಾ ಎನ್‌.

ಟಾಪ್ ನ್ಯೂಸ್

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.