ನೆಚ್ಚಿನ ಕ್ರೀಡಾಗುರುವಿಗೆ…


Team Udayavani, May 10, 2019, 5:50 AM IST

25

ಶಾಲಾ ಜೀವನದಲ್ಲಿ ಓದು-ಬರಹ ಎಷ್ಟು ಮುಖ್ಯವಾಗುತ್ತದೆಯೋ, ಅಷ್ಟೇ ಮುಖ್ಯ ಕ್ರೀಡೆ ಸಹ. ಕ್ರೀಡೆ ಎಂಬುದು ಕೇವಲ ವಿದ್ಯಾರ್ಥಿಯ ಮನೋವಿಕಾಸನಕ್ಕೆ ಪೂರಕವಾಗದೆ ಆತನನ್ನು ಚಟುವಟಿಕೆಯಿಂದಿಡಲು ಸಹ ನೆರವಾಗುತ್ತದೆ. ನನ್ನ ವಿದ್ಯಾರ್ಥಿ ಜೀವನದ ಆಟದ ಅವಧಿಯ ಬಗ್ಗೆ ಹೇಳಹೊರಟರೆ ನೆನಪುಗಳ ಸರಮಾಲೆಯೇ ಇದೆ. ಆಟದ ಮೈದಾನಕ್ಕೆ ಪಾದಾರ್ಪಣೆ ಮಾಡಿದ ಕೂಡಲೇ ನಮ್ಮಲ್ಲಿದ್ದ ಉತ್ಸಾಹ, ಅದೇ ರೀತಿ ಆಟದ ಮೈದಾನದಿಂದ ನಿರ್ಗಮಿಸಬೇಕಾದರೆ ಆಗುತ್ತಿದ್ದ ನೋವು ಹೇಳತೀರದು. ಯಾವ ಅವಧಿಯನ್ನು ಮರೆತರೂ ಆಟದ ಅವಧಿ ಮರೆಯುತ್ತಿರಲಿಲ್ಲ. ಹೈಸ್ಕೂಲ್‌ವರೆಗಿನ ನನ್ನ ಶೈಕ್ಷಣಿಕ ಜೀವನದಲ್ಲಿ ಕ್ರೀಡೆ ಒಂದು ಅವಿಭಾಜ್ಯ ಅಂಗವಾಗಿ ಬೆರೆತುಹೋಗಿತ್ತು. ಅದರಲ್ಲಿಯೂ ಹಿರಿಯ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ ನಾನು ಹಾಗೂ ನನ್ನ ಸಹಪಾಠಿ ಮಿತ್ರರೆಲ್ಲ ಸೇರಿ ಆಡುತ್ತಿದ್ದ ಆಟ ಲಗೋರಿ. ಅದೆಷ್ಟೇ ಸುಡುಬಿಸಿಲಿದ್ದರೂ ಆ ಸೂರ್ಯನ ಕಿರಣಗಳಿಗೆ ಸವಾಲೊಡ್ಡಿ ಇನ್ನೇನು “ಈ ಸಲ ಕಪ್‌ ನಮೆª’ ಎನ್ನುವಷ್ಟು ಖುಷಿಯಿಂದ ಆಡುತ್ತಿದ್ದೆವು.

ಇಷ್ಟೆಲ್ಲ ಕಾತರದಿಂದ ಕಾಯುತ್ತಿದ್ದ ಆಟದ ಅವಧಿಯ ಬಗ್ಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ನನ್ನ ಹಾಗೂ ಹಲವು ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಎಂಬ ಜ್ಯೋತಿ ಬೆಳಗಿಸಿ ಕ್ರೀಡೆಯತ್ತ ಮತ್ತಷ್ಟು ಒಲವು ಮೂಡುವಂತೆ ಮಾಡಿದವರು ನನ್ನ ನೆಚ್ಚಿನ ಗುರು ವಿನ್ಸೆಂಟ್‌ ಸರ್‌. ಅದೇನೋ ತಿಳಿಯೇ ಅವರ ಬಗ್ಗೆ ಹೇಳಲು ಪದಗಳೇ ಸಾಲದು ಎಂದೆ‌ನಿಸಿದ್ದುಂಟು. ಕೈಯಲ್ಲಿ ವಿಜಲ್‌ ಹಿಡಿದುಕೊಂಡು ಅವರು ಬಂದಾಗ ತುಸು ಭಯ ಆವರಿಸಿ ದೂರದಲ್ಲಿರುವ ಹಿಮಾಲಯ ಸೇರಿಬಿಡುತ್ತಿದ್ದೆವು. ಅವರೂ ನನಗೆ ಹೊಡೆದ ನೆನಪು ನನ್ನ ಬಳಿ ಇಲ್ಲವಾದರೂ, ಅವರು ಬೇರೆ ವಿದ್ಯಾರ್ಥಿಗಳಿಗೆ ಬೈಯುವಾಗಲೋ ಅಥವಾ ಆ ವಿಜಲ್‌ನ ಮಾರುದ್ದದ ದಾರದಿಂದ ಪೆಟ್ಟು ಕೊಡುವಾಗ ಆ ವಿದ್ಯಾರ್ಥಿಯ ಜಾಗದಲ್ಲಿ ನಾನಿರಬೇಕಾಗಿತ್ತು ಎಂದು ದಿಗಿಲಾಗುತ್ತಿತ್ತು. ನಿಜ ಹೇಳಬೇಕೆಂದರೆ, ವಿನ್ಸೆಂಟ್‌ ಸರ್‌ ಅವರ ಬುದ್ಧಿಮಾತುಗಳಿಗೆ ಕಿವಿಗೊಡದ ಸಂದರ್ಭಗಳನ್ನು ನೆನೆದಾಗ ನನ್ನ ತಪ್ಪಿನ ಅರಿವಾಗುತ್ತಿತ್ತು. ಬೇಸರವಾಗುವ ಸಂದರ್ಭಗಳನ್ನು ಸೃಷ್ಟಿಮಾಡುತ್ತಿದ್ದುದ‌ªಕ್ಕೆ ಕ್ಷಮೆಯಿರಲಿ ಎಂದು ಈಗ ಬೇಡಿಕೊಳ್ಳುವೆ.

ಶಾಲಾ ಕಾರ್ಯಕ್ರಮಗಳ ಬಗ್ಗೆ ಮಾತೇ ಬೇಡ, ಅದೆಷ್ಟು ಸಡಗರ-ಸಂಭ್ರಮ. ಅದರಲ್ಲಿಯೂ ವಾರ್ಷಿಕ ಕ್ರೀಡಾಕೂಟದ ದಿನ ನಿಗದಿಯಾಗುತ್ತಿದ್ದಂತೆ ನಮ್ಮಲ್ಲಿ ಆನಂದದ ಸಾಗರವೇ ಉಕ್ಕಿ ಹರಿಯುತ್ತಿತ್ತು. ಆ ದಿನ ಬೆಳಗ್ಗಿನಿಂದ ಮಧ್ಯಾಹ್ನದವರೆಗಿನ ಆಟೋಟ ಸ್ಪರ್ಧೆಗಳನ್ನು ಕಣ್ತುಂಬಿಸಿಕೊಂಡು ನಮ್ಮಲ್ಲಿದ್ದ ಶಕ್ತಿ, ನಿಶ್ಶಕ್ತಿಯಾಗುವ ಹೊತ್ತಿಗೆ ವೇದಿಕೆಯಲ್ಲಿದ್ದ ಶಿಕ್ಷಕರೋರ್ವರು ರಿಲೇ ಓಟ ಪ್ರಾರಂಭವಾಗುವ ಸೂಚನೆ ನೀಡಿದ್ದೇ ತಡ ನಮ್ಮಲ್ಲಿ ನೂರು ಆನೆಗಳ ಶಕ್ತಿ ಬಂದಷ್ಟು ಖುಷಿಯಾಗುತ್ತಿತ್ತು. ಇವೆಲ್ಲದರ ಜೊತೆಗೆ ವಿನ್ಸೆಂಟ್‌ ಸರ್‌ ನೀಡುತ್ತಿದ್ದ ಕಮೆಂಟರಿ ಕೇಳಲು ಕಾಯುತ್ತಿದ್ದ ನಮಗೆ ಇನ್ನೆಲ್ಲಿಲ್ಲದ ಆನಂದ.

ಯಾವುದೇ ಕಾರ್ಯಕ್ರಮದ ನಿರೂಪಣೆ ಮಾಡಲು ನನಗೆ ಅವಕಾಶ ದೊರೆತಾಗ ಮೊದಲು ನೆನಪಾಗುತ್ತಿದ್ದದ್ದು ವಿನ್ಸೆಂಟ್‌ ಸರ್‌ ಅವರ ನಿರೂಪಣೆ. ಕಾರ್ಯಕ್ರಮದ ಕೊನೆಯವರೆಗೂ ಎಲ್ಲರ ಗಮನ ಪೂರ್ತಿಯಾಗಿ ಕಾರ್ಯಕ್ರಮದತ್ತ ಸೆಳೆಯುವಂತೆ ಮಾಡುವ ಅವರ ಮಾತುಗಾರಿಕೆಯ ಕಲೆ ನನಗೆ ಸದಾ ಸ್ಫೂರ್ತಿ. ಕೆಲವು ಬಾರಿ ರಾಷ್ಟ್ರೀಯ ಹಬ್ಬಗಳ ದಿನದಂದು ಅವರ ನಿರೂಪಣೆ ಇದ್ದರೆ ಅದರ ಚೆಂದವೇ ಬೇರೆ!

ಈಗಲೂ ವಿನ್ಸೆಂಟ್‌ ಸರ್‌ ವಿದ್ಯಾರ್ಥಿಗಳಿಗೆ ಎಷ್ಟು ಅಚ್ಚುಮೆಚ್ಚು ಎನ್ನುವುದಕ್ಕೆ ಬಹುದೊಡ್ಡ ಸಾಕ್ಷಿ ಹಳೆವಿದ್ಯಾರ್ಥಿಗಳು. ಅವರನ್ನು ಭೇಟಿಯಾಗಲು ಬಂದಾಗ ಹಳೆವಿದ್ಯಾರ್ಥಿಗಳ ಮೊಗದಲ್ಲಿರುತ್ತಿದ್ದ ನಗು, ಮನಸ್ಸಿಗಾಗುತ್ತಿದ್ದ ಆನಂದ ಅಪಾರ. ಅವರು ನಮ್ಮೊಂದಿಗೆ ನಮ್ಮ ಹಾಗೂ ಅವರ ನಡುವಿನ ಗುರು-ಶಿಷ್ಯ ಬಾಂಧವ್ಯದ ಬಗ್ಗೆ ಹೇಳಿಕೊಳ್ಳುವಾಗ ನನಗೆ ತಿಳಿಯದೇ ನನ್ನ ಮೊಗದಲ್ಲೊಂದು ನಗು ಮೂಡುತ್ತಿತ್ತು.

ತಮ್ಮ ಈ ವೃತ್ತಿಜೀವನದಲ್ಲಿ ವಿದ್ಯಾರ್ಥಿಗಳೊಂದಿಗೆ ಸದಾ ಹುರುಪಿನಿಂದ ಇರುತ್ತಿದ್ದ ವಿನ್ಸೆಂಟ್‌ ಸರ್‌ ವಿದ್ಯಾರ್ಥಿಗಳಿಗೆ ಒಬ್ಬ ಸರಿಯಾದ ಮಾರ್ಗದರ್ಶನ ನೀಡುವ ಗುರು ಮಾತ್ರವಾಗದೆ, ಸೋತಾಗ ಧೈರ್ಯ ತುಂಬುವ ದಾತನಾಗಿ, ಬಿದ್ದಾಗ ಕಾಳಜಿ ವಹಿಸುವ ತಾಯಿಯಾಗಿ ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿದ್ದಾರೆ.

ಯಶಸ್ವಿ ಕೆ.
ದ್ವಿತೀಯ ಪಿಯುಸಿ, ಕಪಿತಾನಿಯೋ ಪದವಿಪೂರ್ವ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.