ಕೇಳಬಯಸುವಿರೇನು ಇವರ ಕಥೆಯ


Team Udayavani, May 24, 2019, 6:00 AM IST

q-13

ಹೆದ್ದಾರಿಯ ಎರಡೂ ಬದಿಯಲ್ಲೂ ಸಾಲು ಸಾಲು ಮರಗಳು.ಅವುಗಳನ್ನು ನೋಡುತ್ತಿದ್ದರೆ ಕಣ್ಣಿಗೇನೋ ಹಬ್ಬ. ಅದೆಷ್ಟು ವರುಷಗಳು ಬೇಕಾಯಿತೋ ಆ ಗಿಡಗಳು ಹೆಮ್ಮರವಾಗಿ ಬೆಳೆಯಲು. ಗಿಡವಾಗಿದ್ದಂಥವು ಇಂದು ಮರವಾಗಿ ಬೆಳೆದು ಜೀವಸಂಕುಲಕ್ಕೆ ಆಶ್ರಯದಾಣವಾಗಿವೆ. ಬಳಲಿ ಬಂದವರಿಗೆ ಜಾತಿ-ಧರ್ಮ ಎಂಬ ಭೇದ-ಭಾವವಿಲ್ಲದೆ ಪ್ರತಿಯೊಂದು ಜೀವಿಗೂ ನಾವಿದ್ದೇವೆ ಬಾ ಎಂದು ಕೈ ಬೀಸಿ ಕರೆಯುತ್ತವೆ.

ಆ ಪ್ರದೇಶದಲ್ಲಿದ್ದ ಸಾಲುಸಾಲು ಮರಗಳನ್ನು ಕಂಡ ಪ್ರತಿಯೊಬ್ಬರಲ್ಲಿಯೂ ಒಮ್ಮೆ ಆಶ್ಚರ್ಯಚಕಿತರಾಗಿ ಸಾಲು ಮರದ ತಿಮ್ಮಕ್ಕ ಏನಾದರೂ ಈ ಮರಗಳನ್ನು ಪಾಲನೆ ಮಾಡಿದ್ದಾರಾ, ಎಂಬ ಪ್ರಶ್ನೆ ಮೂಡಿದರೂ ತಪ್ಪಾಗ‌ಲಾರದು. ಅಷ್ಟೊಂದು ಸುಂದರವಾಗಿತ್ತು ಆ ಪ್ರದೇಶ. ಅಂದ ಹಾಗೆ, ಈ ಪ್ರದೇಶ ಬೇರೆ ಎಲ್ಲಿಯೋ ಇರುವುದಲ್ಲ, ರಾಷ್ಟ್ರೀಯ ಹೆದ್ದಾರಿ 73ರ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಕಂಡುಬರುವ ನಯನಮನೋಹರ ಮರಗಳ ಚಿತ್ರಣವಿದು.

ವಿಪರ್ಯಾಸವೆಂದರೆ, ಇನ್ನು ಮುಂದೆ ಈ ಮರಗಳ ನೆನಪು ಕೇವಲ ನೆನಪಾಗಿಯೇ ಉಳಿಯಬೇಕಷ್ಟೆ. ಮಾನವ ತನ್ನ ಸ್ವಾರ್ಥಕ್ಕಾಗಿ ಏನೆಲ್ಲ ಮಾಡುತ್ತಿರುವಾಗ, ಇನ್ನು ದಷ್ಟಪುಷ್ಟವಾಗಿ ಬೆಳೆದಿರುವ ಈ ಮರಗಳು ಅವನಿಗೆ ಯಾವ ಲೆಕ್ಕ. ಹೆದ್ದಾರಿಯನ್ನು ಅಗಲೀಕರಣ ಮಾಡುವುದರ ಮೂಲಕ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣ ಸಮಯವನ್ನು ಕಡಿಮೆಗೊಳಿಸುವುದು ಈ ಯೋಜನೆಯ ಉದ್ದೇಶ. ಆದರೆ, ರಸ್ತೆ ಅಗಲೀಕರಣ ಎಂಬ ಹೆಸರಿನಲ್ಲಿ ಹೆದ್ದಾರಿಯ ಬದಿಯಲ್ಲಿರುವ ಸಾಲು-ಸಾಲು ಮರ, ಮನೆ, ಅಂಗಡಿ-ಮುಂಗಟ್ಟು, ಗದ್ದೆ-ತೋಟಗಳು ಸರ್ವನಾಶವಾಗಿದೆ. ಇದಕ್ಕೆ ಪ್ರತಿಯಾಗಿ ಸರ್ಕಾರ ಧನಸಹಾಯವನ್ನು ನೀಡಿದೆ. ಆದರೆ, ಶತಮಾನಗಳಿಂದ ಬೆಳೆದು ಬಂದು ಜೀವಸಂಕುಲವನ್ನೇ ರಕ್ಷಿಸುತ್ತಿದ್ದ ಈ ಸಹಸ್ರಾರು ಮರಗಳ ಋಣವನ್ನು ತೀರಿಸಲು ಅದೆಷ್ಟೇ ಧನ ಸೌಲಭ್ಯ ನೀಡಿದರೂ ಸಾಧ್ಯವಿಲ್ಲ.

ಅಯ್ಯೋ! ನಮಗಿನ್ನಿರುವುದು ಕೇವಲ ಕೆಲವೇ ದಿನಗಳು. ನಾವು ಕೊನೆ ಕಾಣುತ್ತಿದ್ದೇವೆ. ಈ ನೀಚ ಮನುಜ ತನ್ನ ಸ್ವಾರ್ಥಕ್ಕಾಗಿ ನಮ್ಮ ಸಂಕುಲವನ್ನೇ ನಾಶ ಮಾಡುತ್ತಿದ್ದಾನೆ- ಎಂದು ಮರಗಳು ರೋದಿಸುತ್ತಿದ್ದರೆ, ಅವುಗಳ ಮೂಕ ವೇದನೆಯನ್ನು ಕೇಳುವವರು ಯಾರೂ ಇಲ್ಲ. ದಿನಕ್ಕೆ ಸುಮಾರು 5-6 ಮರಗಳು ನೆಲಕ್ಕೆ ಉರುಳುತ್ತಿದ್ದವು. ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ಸಾಗಿಸುತ್ತಿರುವುದನ್ನು ಕಂಡರೆ ಕರುಣೆ ಇದ್ದವರಿಗೆ ಒಮ್ಮೆ ಎದೆಗೆ ಚೂರಿ ಹಾಕಿದ ಅನುಭವವಾಗದೇ ಇರದು. ಮರಗಳನ್ನು ಕಡಿಯಲು ಮುಂದಾಗಿರುವ ಸರ್ಕಾರ ಗಿಡಗಳನ್ನು ನೆಡುವ ಬಗ್ಗೆಯಾಗಲಿ, ಪರಿಸರ ಸಂರಕ್ಷಣೆಗಾಗಲಿ ಯಾವುದೇ ಪರ್ಯಾಯ ಕ್ರಮವನ್ನೂ ಕೈಗೊಂಡಿಲ್ಲ.

ಮಾನವ ಎಷ್ಟು ಕ್ರೂರಿ ಅಲ್ಲವೆ? ತನ್ನ ಸುಖಕ್ಕಾಗಿ ಯಾರನ್ನೂ, ಹೇಗೆ ಬೇಕಾದರೂ ಪಳಗಿಸುತ್ತಾನೆ. ನಗರ ಪ್ರದೇಶದಲ್ಲಂತೂ ಮರಗಳ ಸುಳಿವೇ ಇಲ್ಲ ! ಇನ್ನು ಹಳ್ಳಿಯಲ್ಲಿದ್ದ ಮರಗಳ ಮೇಲೂ ಅವನ ವಕ್ರ ದೃಷ್ಟಿ ಬಿದ್ದು ಅವುಗಳೂ ಇಂದು ನಾಶದ ಅಂಚಿನಲ್ಲಿದೆ. ಅಂದು ರಾಜನಾಗಿದ್ದ ಅಶೋಕ ತನ್ನ ಪ್ರಜೆಗಳ ಹಿತಾಸಕ್ತಿಗೆಂದು ರಸ್ತೆಯ ಬದಿಯಲ್ಲಿ ಮರಗಳನ್ನು ಬೆಳೆಸಿದ್ದರು. ಆದರೆ, ಇಂದು ಜನರ ಆಸಕ್ತಿಗಾಗಿಯೇ ಮರಗಳ ನಾಶವಾಗುತ್ತಿದೆ. ಎಂಥ ಕಾಲ ಬಂತು ನೋಡಿ! ಸ್ವಾರ್ಥಕ್ಕಾಗಿಯೋ, ನಗರಾಭಿವೃದ್ಧಿ ಯೋಜನೆಗಾಗಿಯೋ ಈ ಥರ ಏಕಾಏಕಿ ಬೇಕಾ ಬಿಟ್ಟಿ ಮರಗಳನ್ನು ಕಡಿಯುವ ಮೊದಲು ಸ್ವಲ್ಪ ಮಟ್ಟಿನ ಚಿಂತನೆ ನಡೆಸಿ ಮರಗಿಡಗಳನ್ನು ಬೆಳೆಸಿ ಉಳಿಸುವ ಕೆಲಸವಾಗ ಬೇಕು.

ಸುಷ್ಮಾ ಎಂ. ಎಸ್‌.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಕಾಲೇಜು, ನೆಹರುನಗರ, ಪುತ್ತೂರು

ಟಾಪ್ ನ್ಯೂಸ್

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

Foreign Cruise: ಕ್ರೂಸ್‌ ರಿವೇರಾ ಮಂಗಳೂರಿಗೆ

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌

ತುಳು ಮಾನ್ಯತೆಗೆ ಶ್ರಮಿಸಿದ ಡಾ| ಆಚಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Israel captures Hamas last stronghold rafah

Hamas ಕೊನೇ ಬಲಿಷ್ಠ ನೆಲೆ ಇಸ್ರೇಲ್‌ ವಶಕ್ಕೆ! ರಫಾ ಪೂರ್ವಭಾಗಕ್ಕೆ ನುಗ್ಗಿದ ಇಸ್ರೇಲ್‌ ಪಡೆ

We will make crores of people millionaires: Rahul Gandhi

Election; ಕೋಟ್ಯಂತರ ಜನರನ್ನು ನಾವು ಲಕ್ಷಾಧಿಪತಿ ಮಾಡುತ್ತೇವೆ: ರಾಹುಲ್‌ ಗಾಂಧಿ

Get rid of hate mongers, vote for Congress: Sonia gandhi

Election; ದ್ವೇಷದ ಪ್ರತಿಪಾದಕರನ್ನು ತೊಲಗಿಸಿ, ಕಾಂಗ್ರೆಸ್‌ಗೆ ಮತ ನೀಡಿ: ಸೋನಿಯಾ ಗಾಂಧಿ

ಕರಾವಳಿಯ ವಿವಿಧೆಡೆ ಮಳೆ; ಮಾನ್ಯ: ಸಿಡಿಲು ಬಡಿದು ಗಾಯ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Vande Bharat ರೈಲು ಆರಂಭ: ಕಾಸರಗೋಡು ನಿಲ್ದಾಣದ ಆದಾಯದಲ್ಲಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.