ಕಲಾ ವೈಭವದ ಚರ್ಚ್‌!


Team Udayavani, Jun 15, 2019, 9:33 AM IST

church

ವಿಜಯಪುರದ ಐತಿಹಾಸಿಕ ಗಗನಮಹಲ್ ಹಿಂದಿರುವ ಈ ಚರ್ಚ್‌ ದ್ವಾರದ ಮೇಲಿನ ಕಮಾನಿನಲ್ಲಿ ‘ಸಿಎಸ್‌ಐ ಆಲ್ ಸೇಂಟ್ಸ ಚರ್ಚ್‌’ ಎಂದು ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಆ ಚರ್ಚಿಗೆ ‘ಆಂಗ್ಲಿಕನ್‌ ಚರ್ಚ್‌’ ಎಂಬ ಇನ್ನೊಂದು ಅಡ್ಡ ಹೆಸರೂ ಇದೆ. 400 ವರ್ಷದಷ್ಟು ಹಳೆಯದು ಇದು. ಆಗಿನ ಕಾಲದಲ್ಲಿ ಆಂಗ್ಲ ಭಾಷೆಯಲ್ಲಿ ಪ್ರಾರ್ಥನೆ ಸಲ್ಲಿಸಲು, ಉನ್ನತ ಅಧಿಕಾರಿಗಳು ಆ ಚರ್ಚಿಗೆ ಬರುತಿದ್ದರಂತೆ. ಅಷ್ಟೇ ಅಲ್ಲ, ಅದು ಉನ್ನತ ಅಧಿಕಾರಿಗಳಿಗೆ ಮಾತ್ರ ಈ ಚರ್ಚ್‌ ಮೀಸಲಾಗಿತ್ತಂತೆ.

‘ಈ ಚರ್ಚಿನ ಕೆಲವು ಭಾಗಗಳು ಶಿಥಿಲಾವಸ್ಥೆಯನ್ನು ತಲುಪಿವೆ. ಮುಟ್ಟಿದರೆ ಸಾಕು; ಗೋಡೆಯ ಗಿಲಾಯಿ  ಬಣ್ಣ ಉದುರುತ್ತದೆ. ಹಾಗಾಗಿ, ಚರ್ಚಿನ ಆಯುಷ್ಯ ಮುಗಿಯುತ್ತಿರಬಹುದೇ?’ ಹೀಗಂತ ಅನುಮಾನ ಪಡುವ ಅವಶ್ಯಕತೆ ಇಲ್ಲ. ಅದರ ನವಿರಾದ ಕೆತ್ತನೆ, ಅದಕ್ಕೆ ಲೇಪಿಸಿದ ಬಣ್ಣದ ತಾಜಾತನ ಇನ್ನೂ ಮಾಸಿಲ್ಲ. ಅದನ್ನು ವೀಕ್ಷಣೆಗೆ ಮುಕ್ತವಾಗಿಟ್ಟರೆ ಎಲ್ಲಿ ಹಾಳಾಗಿ ಹೋಗುವುದೋ ಎಂಬ ಭಯ, ಆ ಚರ್ಚಿನ ಪಾದ್ರಿ ರೆವೆರಂಡ್‌ ಬಾಲರಾಜ ಸುಚಿತ್‌ಕುಮಾರ ಅವರಿಗಿದೆ.

ಈ ಚರ್ಚ್‌ ಪ್ರವೇಶದ್ವಾರದಲ್ಲಿ ಒಂದು ಬಹುಭಾರವಾದ ಕಲಾಕೃತಿ ಇದೆ. ಅದನ್ನು ನಿರ್ಮಿಸಲು ಯಾವ ಲೋಹ/ಶಿಲೆಯನ್ನು ಬಳಸಿದ್ದಾರೆ ಎಂಬುದು ಗೊತ್ತಿಲ್ಲ. ಅದನ್ನು ಸುಂದರವಾದ ಕಟ್ಟಿಗೆಯ ಚೌಕಟ್ಟಿನಲ್ಲಿಡಲಾಗಿದೆ. ಅದು ಪ್ರವೇಶದ್ವಾರಕ್ಕೆ ಪರದೆಯಂತೆ ನಿಂತುಕೊಂಡಿದೆ. ಅದನ್ನು ಕಟ್ಟಿಗೆಯ ಬಂಧನದಿಂದ ಬಿಡಿಸಿ, ನೇತುಹಾಕಿ ಬಾರಿಸಿದರೆ ಮನಮೋಹಕ ಧ್ವನಿ ಹೊರಡುತ್ತದೆ. ಅಲುಗಿಸಲೂ ಆಗದಷ್ಟು ಭಾರವಿರುವ ಅದನ್ನು ನೇತುಹಾಕು­ವುದು ಸಾಧ್ಯವಾಗದ ಮಾತು. ಈಗಂತೂ ಅದರ ಧ್ವನಿಯನ್ನು ಕೇಳಿದವರು ಯಾರೂ ಇಲ್ಲ. ಈ ಕಲಾಕೃತಿಯನ್ನು ತಮ್ಮ ದೇಶಕ್ಕೆ ಕೊಂಡೊಯ್ಯುವ ಹಲವು ಪ್ರಯತ್ನಗಳನ್ನು ಬ್ರಿಟಿಷರು ಮಾಡಿದ್ದರು ಎನ್ನುತ್ತಾರೆ ಬಾಲರಾಜ.

ಈ ಕಟ್ಟಡದ ಕೆಳ ಅಂತಸ್ತಿನಲ್ಲಿ ಸುಂದರವಾದ ವರ್ಣರಂಜಿತ ಪ್ರಾರ್ಥನಾ ಮಂದಿರವಿದೆ. ಜನ ಕುಳಿತುಕೊಳ್ಳಲು ಭಾರವಾದ ಹಾಗೂ ಮಜಬೂತಾದ ಸಾಗುವಾನಿ ಕಟ್ಟಿಗೆಯ 6 ಆಸನಗಳಿವೆ. ಒಂದೊಂದು ಆಸನದಲ್ಲೂ 5 ಜನರಂತೆ 30 ಜನ ಆರಾಮಾಗಿ ಕುಳಿತುಕೊಳ್ಳಬಹುದು. ಅವುಗಳ ಎದುರಿಗಿರುವ ಡೆಸ್ಕ್ಗಳಲ್ಲಿ ಬೈಬಲ್ ಗ್ರಂಥಗಳಿವೆ. ಫಾದರ್‌, ಬಿಷಪ್‌ ಸೇರಿ 35 ಜನ ಏಕಕಾಲದಲ್ಲಿ ಪ್ರಾರ್ಥನೆ ಸಲ್ಲಿಸಬಹುದು.

ಮೇಲಂತಸ್ತಿನಲ್ಲಿ ಅಧಿಕಾರಿಗಳು ವಿಶ್ರಮಿಸಲು ಕೆಲವು ಕೋಣೆಗಳಿವೆ. ಅಲ್ಲಿರುವ ಛಾವಣಿ, ಗೋಡೆ, ಕಂಬಗಳಲ್ಲೂ ನವಿರಾದ ಕೆತ್ತನೆಯ ಕಲಾಕುಸುರಿ ಇದೆ. ಅದೆಲ್ಲ ಆಕರ್ಷಕವಾಗಿದೆ. ಈಗ ಆ ಕೋಣೆಗಳನ್ನು ಯಾರೂ ಬಳಸುತ್ತಿಲ್ಲ. ಅವು ನಿರುಪಯುಕ್ತ ವಸ್ತುಗಳ ಸಂಗ್ರಹಾಗಾರವಾಗಿ ಬಳಕೆಯಾಗುತ್ತಿವೆ.

ಈ ಚರ್ಚ್‌ ಕಟ್ಟಡದ ವಿನ್ಯಾಸವೇ ವಿಶಿಷ್ಟ. ಬಿರುಬಿಸಿಲಿನ ವಿಜಯಪುರದ ಬೇಸಿಗೆಯಲ್ಲೂ ಇದರ ಒಳಾಂಗಣ ತಂಪಾಗಿರುತ್ತದೆ. ಎತ್ತರದ ಛಾವಣಿ, ಕಿಟಕಿಗಳ ವೈಜ್ಞಾನಿಕ ವಿನ್ಯಾಸ ಅಲ್ಲಿರುವ ತಣ್ಣಗಿನ ವಾತಾವರಣಕ್ಕೆ ಕಾರಣವಾಗಿದೆ.

ಕ್ರಿಶ್ಚಿಯನ್‌ ಅಧಿಕಾರಿಗಳ ಪ್ರಾರ್ಥನೆಗಾಗಿ, ಆಗಿನ ಮುಸ್ಲಿಂ ದೊರೆ ಆದಿಲ್ಶಾಹನು ಈ ಚರ್ಚ್‌ ಅನ್ನು ಕೊಡುಗೆಯಾಗಿ ನೀಡಿದನೆಂಬ ಪ್ರತೀತಿ ಇದೆ. ಅಂದಹಾಗೆ, ಈ ಆಂಗ್ಲಿಕನ್‌ ಚರ್ಚಿನಲ್ಲಿ ಈಗ ಕನ್ನಡದಲ್ಲೂ ಪ್ರಾರ್ಥಿಸುವ ಅವಕಾಶವಿದೆ. •

ಸುಭಾಸ ಯಾದವಾಡ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.