ಔಟಾಗದಿದ್ದರೂ ಹೊರ ನಡೆದ ಕೊಹ್ಲಿ


Team Udayavani, Jun 17, 2019, 4:46 PM IST

kohli

ಮ್ಯಾಂಚೆಸ್ಟರ್: ಭಾರತ ತಂಡದ ನಾಯಕ  ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದ ಬ್ಯಾಟಿಂಗ್‌ ವೇಳೆ ಎಡವಟ್ಟು ಮಾಡಿಕೊಂಡರು. ಮೊಹಮ್ಮದ್‌ ಅಮಿರ್‌ ಎಸೆದ 48ನೇ ಓವರ್‌ನ 4ನೇ ಎಸೆತದಲ್ಲಿ ಚೆಂಡು ಬೌನ್ಸ್‌ ಆಯಿತು.

ಅದನ್ನು ಬಾರಿಸಲು ಕೊಹ್ಲಿ ವಿಫ‌ಲವಾದರು. ಚೆಂಡು ಕೀಪರ್‌ ಸರ್ಫಾರಾಜ್ ಕೈಗೆ ಸೇರಿತು. ಪಾಕಿಸ್ತಾನೀಯರು ಅರೆ ಮನಸ್ಸಿನಿಂದ ಮನವಿ ಮಾಡಿದರು. ಅಂಪೈರ್‌ ಅದನ್ನು ಪುರಸ್ಕರಿಸಲಿಲ್ಲ. ಆದರೆ ಅಂಪೈರ್‌ ತೀರ್ಪಿಗೆ ಕಾಯದೇ ಕೊಹ್ಲಿ ಮೈದಾನದಿಂದ ಹೊರನಡೆದರು. ಪುನರ್‌ಪರಿಶೀಲನೆಯಲ್ಲಿ ಔಟಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿತ್ತು.

ಹಾಗಿರುವಾಗ ಅಂಪೈರ್‌ ನಾಟೌಟ್‌ ಕೊಟ್ಟರೂ, ಕೊಹ್ಲಿ ಯಾಕೆ ಹೀಗೆ ಮಾಡಿದರು ಎನ್ನುವುದು ಪ್ರಶ್ನಾರ್ಥಕವಾಗಿದೆ. ಡ್ರೆಸ್ಸಿಂಗ್‌ ಕೋಣೆಯಲ್ಲಿ ತಮ್ಮ ತಪ್ಪಿನಿಂದ ಕೊಹ್ಲಿ ಸಿಟ್ಟಾಗಿದ್ದು ಕಾಣಿಸುತ್ತಿತ್ತು. ಬ್ಯಾಟ್‌ಗೆ ಚೆಂಡು ತಾಕಿದಾಗ ಬರುವ ಒಂದು ಶಬ್ದ ಕೇಳಿಸಿದಂತಾಗಿದ್ದರಿಂದ ಕೊಹ್ಲಿ ಇಂತಹ ನಿರ್ಧಾರ ಮಾಡಿರಬಹುದೆಂದು ಊಹಿಸಲಾಗಿದೆ.

11,000 ರನ್‌ ಕೊಹ್ಲಿ ವಿಶ್ವದಾಖಲೆ

ವಿಶ್ವದಾಖಲೆಗಳ ಮೇಲೆ ವಿಶ್ವದಾಖಲೆ ನಿರ್ಮಿಸುತ್ತಿರುವ ವಿರಾಟ್‌ ಕೊಹ್ಲಿ ಭಾನುವಾರ ಇನ್ನೊಂದು ವಿಶ್ವದಾಖಲೆ ನಿರ್ಮಿಸಿದರು. ಅವರು ಏಕದಿನದಲ್ಲಿ 11,000 ರನ್‌ಗಳನ್ನು ಅತಿ ವೇಗವಾಗಿ ಗಳಿಸಿದ ಆಟಗಾರ ಎನಿಸಿಕೊಂಡರು. ಜೊತೆಗೆ ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ನೆಲಸಮ ಮಾಡಿದರು. ತೆಂಡುಲ್ಕರ್‌ 11,000 ರನ್‌ ಗಳಿಸಲು 276 ಇನಿಂಗ್ಸ್‌ ಬಳಸಿಕೊಂಡಿದ್ದರು. ಇದುವರೆಗೆ 230 ಪಂದ್ಯವಾಡಿರುವ ಕೊಹ್ಲಿ, ಆ ಪೈಕಿ 222 ಇನಿಂಗ್ಸ್‌ಗಳಲ್ಲಿ (ಬ್ಯಾಟಿಂಗ್‌ ಮಾಡಿರುವ ಪಂದ್ಯ ಸಂಖ್ಯೆ) 11,000 ರನ್‌ ಮುಟ್ಟಿದರು. ಪಂದ್ಯಕ್ಕೂ ಮುನ್ನ 10943 ರನ್‌ ಗಳಿಸಿದ್ದ ಅವರಿಗೆ ಈ ವಿಶ್ವದಾಖಲೆ ನಿರ್ಮಿಸಲು ಕೇವಲ 57 ರನ್‌ ಅಗತ್ಯವಿತ್ತು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.