ದೃಶ್ಯ ಕಾವ್ಯವಾದ ಅಂಬೆಯ ಒಡಲಾಳ

ಕುಸುಮ ಸಾರಂಗ ವಿದ್ಯಾರ್ಥಿಗಳ ಪ್ರಸ್ತುತಿ

Team Udayavani, Jun 21, 2019, 5:00 AM IST

10

ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವೆನಿಸಿದೆ.

ಅಂಬೆಯ ಪಾತ್ರವನ್ನು ಕೇಂದ್ರವಾಗಿರಿಸಿ ಪಿತೃಪ್ರಧಾನ ವ್ಯವಸ್ಥೆಯ ರಾಜಕಾರಣವನ್ನು ಡಾ| ಜಯಪ್ರಕಾಶ ಮಾವಿನಕುಳಿ ಅಭಿಯಾನ ನಾಟಕ ರೂಪದಲ್ಲಿ ರಚಿಸಿದ್ದಾರೆ.ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ಕುಸುಮಸಾರಂಗ ವಿದ್ಯಾರ್ಥಿಗಳು ಕಾಲೇಜಿನಲ್ಲಿ 27ನೇ ಪ್ರಸ್ತುತಿಯಾಗಿ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿದರು. ದಾಕ್ಷಾಯಿಣಿ ಭಟ್‌ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಾಶಿರಾಜನ ಕುಮಾರಿ ಅಂಬೆ ಸ್ವಯಂವರಕ್ಕೆ ಬಂದ ಸಾಲ್ವನನ್ನು ಪ್ರೀತಿಸುತ್ತಾಳೆ. ಸ್ವಯಂವರದಲ್ಲಿ ಸಾಲ್ವರಾಜನಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ನುಗ್ಗಿದ ಭೀಷ್ಮ ಇತರೆಲ್ಲ ರಾಜಕುಮಾರರ ಜತೆಗೆ ಸಾಲ್ವನನ್ನೂ ಸೋಲಿಸುತ್ತಾನೆ. ಅಂಬೆಯ ವಿರೋಧ ಲೆಕ್ಕಿಸದೇ ಆಕೆಯ ಇಬ್ಬರು ತಂಗಿಯರ ಜೊತೆಗೆ ಬಲವಂತವಾಗಿ ಹಸ್ತಿನಾವತಿಗೆ ಹೊತ್ತೋಯ್ಯುತ್ತಾನೆ. ಮಲತಮ್ಮ ವಿಚಿತ್ರವೀರ್ಯನಿಗೆ ಆಕೆಯನ್ನು ವಿವಾಹ ಮಾಡಲು ತೀರ್ಮಾನಿಸುತ್ತಾಳೆ. ಆಕೆ ಸಾಲ್ವನನ್ನು ತಾನು ಪ್ರೀತಿಸುತ್ತಿದ್ದು ಕನ್ಯತ್ವವನ್ನು ಸಹ ಕಳೆದುಕೊಂಡಿದ್ದೇನೆಂದು ರಾಣಿ ಸತ್ಯವತಿಗೆ ಹೇಳುತ್ತಾಳೆ. ಕಾಡಿ ಬೇಡಿ ಬಿಡುಗಡೆ ಪಡೆದು ಸಾಲ್ವನಲ್ಲಿಗೆ ಹೋದ ಅಂಬೆ ಅಲ್ಲಿಯೂ ಅವಮಾನಿತಳಾಗುತ್ತಾಳೆ. ಮತ್ತೆ ಹಸ್ತಿನಾವತಿಗೆ ಬಂದ ಅಂಬೆ ಹೊತ್ತು ತಂದ ಭೀಷ್ಮನೇ ತನ್ನನ್ನು ಮದುವೆಯಾಗಬೇಕೆಂದು ಆಗ್ರಹಿಸುತ್ತಾಳೆ. ಆಜನ್ಮ ಬ್ರಹ್ಮಚಾರಿ ಪ್ರತಿಜ್ಞೆ ಮುರಿಯಲು ನಿರಾಕರಿಸಿದ ಭೀಷ್ಮ ಅಂಬೆಯನ್ನು ತಿರಸ್ಕರಿಸುತ್ತಾನೆ. ಅವಮಾನದ ಬೆಂಕಿಯಲ್ಲಿ ಬೆಂದುಹೋದ ಅಂಬೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುವ ಮೂಲಕ ನಾಟಕ ಅಂತ್ಯವಾಗುತ್ತದೆ.

ರಾಜ್ಯಾಧಿಕಾರವನ್ನು ಕಾಪಾಡಿಕೊಳ್ಳಲು ರಾಣಿ ಸತ್ಯವತಿ ಪ್ರಯತ್ನಿಸಿದರೆ. ಕೊಟ್ಟ ವಚನಕ್ಕೆ ಭೀಷ್ಮ ಕಟಿಬದ್ದನಾಗುತ್ತಾನೆ. ಕಾಶಿರಾಜನಿಗೆ ತನ್ನ ಸಿಂಹಾಸನದ ಚಿಂತೆಯಾದರೆ, ಸಾಲ್ವರಾಜನನ್ನು ಅವಮಾನ ಸುಡುತ್ತಿರುತ್ತದೆ. ಎಲ್ಲರ ಸ್ವಾರ್ಥ ಹಿತಾಸಕ್ತಿಯಲ್ಲಿ ಅಂಬೆ ಬಲಿಪಶುವಾಗುತ್ತಾಳೆ. ರಾಜ್ಯಾಧಿಕಾರ, ಧರ್ಮ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಲಿಯಾದ ಸಮಸ್ತ ಮಹಿಳೆಯರ ಪ್ರತಿನಿ ಧಿಯಾಗಿ ಅಂಬೆಯ ಪಾತ್ರ ಮೂಡಿಬಂದಿದೆ. ಅಂಬೆ ಪಾತ್ರಧಾರಿ ಅನಘಾ ಎಂ. ಜಿ. ಕೊನೆಯವರೆಗೂ ತನ್ನ ಹಾವಭಾವಗಳಲ್ಲಿ ಸೇಡನ್ನೇ ಮೈಗೂಡಿಸಿಕೊಂಡಂತೆ ಅಭಿನಯಿಸಿದ್ದಾರೆ. ಏಟಿಗೆ ಎದುರೇಟು, ಉತ್ತರಕ್ಕೆ ಪ್ರತ್ಯುತ್ತರ, ಬಾಣಕ್ಕೆ ತಿರುಗುಬಾಣ, ಮಂತ್ರಕ್ಕೆ ತಿರುಮಂತ್ರ ನೀಡುತ್ತಾ ಪಾತ್ರಕ್ಕೆ ರಂಗು ತುಂಬಿದ್ದಾರೆ.

ನಾಟಕದಲ್ಲಿ ಅಂಬೆ ಹೇಗೆ ಅಸಹಾಯಕಳ್ಳೋ ಹಾಗೆಯೇ ಪುರುಷ ಪಾತ್ರಗಳೂ ಸಹ ಅಸಹಾಯಕವಾಗಿವೆ. ನಾಟಕದ ವಿನ್ಯಾಸದ ಮೇಲೆ ಪ್ರಭುತ್ವ ಸಾಧಿಸಿದ ನಿರ್ದೇಶಕಿ ದಾಕ್ಷಾಯಿಣಿಯವರು ವಸ್ತುವಿನ ತಾರ್ಕಿಕ ನಿರೂಪಣೆಯಲ್ಲೂ ಬದ್ಧತೆೆ ತೋರಿದ್ದಾರೆ.ತಾರ್ಕಿಕ ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವೆನಿಸಿದೆ. ಗುಂಪುಗಳನ್ನು ಬಳಸಿಕೊಂಡ ರೀತಿ, ಗುಂಪಿನಿಂದಲೇ ಪಾತ್ರಗಳು ಹೊರಹೊಮ್ಮಿ ಮತ್ತೆ ಗುಂಪಿನಲ್ಲಿ ಒಂದಾಗುವಂತೆ ಬಳಸಲಾದ ಮಾರ್ಪಾಟು ಸೊಗಸಾಗಿ ಮೂಡಿಬಂದಿದೆ.

ಉದ್ಯಾನವನದಲ್ಲಿ ನಡೆಯುವ ಸರಸ ದೃಶ್ಯ ವೈಭವ ಹಾಗೂ ಸತ್ಯವತಿ-ಶಂತನು ಭೇಟಿಯಾದಾಗ ನಟಿಸುವ ಗುಂಪಿನ ದೃಶ್ಯ, ಸ್ವಯಂವರದಲ್ಲಿ ಭೀಷ್ಮನು ರಾಜಕುಮಾರರೊಂದಿಗೆ ಕಾದಾಡುವ ದೃಶ್ಯಸಂಯೋಜನೆಗಳು. ಜತೆಗೆ ಪೂರಕವಾಗಿ ಹಿನ್ನಲೆ ಆಲಾಪ ಮತ್ತು ಸಂಗೀತ ಸೋಜಿಗವನ್ನು ಹುಟ್ಟುಹಾಕುವಂತಿದೆ. ಸಂಗೀತ ಹಾಗೂ ಬೆಳಕು ನಾಟಕಕ್ಕೆ ಮಾಂತ್ರಿಕತೆಯ ಸ್ಪರ್ಶವನ್ನು ನೀಡಿವೆ.

ಎಲ್ಲ ಪಾತ್ರಗಳ ಶೆ„ಲೀಕೃತ ಆಂಗಿಕ ಅಭಿನಯ ನಾಟಕಕ್ಕೆ ವಿಶೇಷತೆಯನ್ನು ಒದಗಿಸಿದೆ. ಭೀಷ್ಮನಾಗಿ ಕೀರ್ತನ್‌, ಸಾಲ್ವನಾಗಿ ಸುಜಿತ್‌ ಹಾಗೂ ಕಾಶಿರಾಜನಾಗಿ ಡಾ| ಗೋವಿಂದ ಎನ್‌. ಎಸ್‌. ಅಭಿನಯ ಪಾತ್ರಕ್ಕೆ ನ್ಯಾಯಸಲ್ಲಿಸಿದ್ದಾರೆ. ಸತ್ಯವತಿ ಪಾತ್ರದಲ್ಲಿ ವರ್ಷಾ ಮಾಯಿಪಜೆ ಅಭಿನಯ ಗಮನಾರ್ಹವಾಗಿತ್ತು. ಉಳಿದೆಲ್ಲ ನಟ ನಟಿಯರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಅಂದಗೊಳಿಸಿದ್ದಾರೆ.ವಸ್ತ್ರವಿನ್ಯಾಸ, ರಂಗಸಜ್ಜಿಕೆ ಸರಳವಾಗಿದ್ದು ಕೇವಲ ರಾಜಲಾಂಛನಗಳನ್ನು ಮಾತ್ರ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Heavy Rain 9 ಜಿಲ್ಲೆಗಳಲ್ಲಿ ಮುಂದುವರಿದ ಮಳೆ

Heavy Rain 9 ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ

MLC Elections; ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ

Bommai BJP

Modi 3ನೇ ಸಲ ಪ್ರಧಾನಿಯಾದ 3 ತಿಂಗಳಲ್ಲಿ ಕಾಂಗ್ರೆಸ್‌ ಇಬ್ಭಾಗ: ಬೊಮ್ಮಾಯಿ ಭವಿಷ್ಯ

1-qwe-ewewe

AAP ನಾಯಕರಿಗೆ 100 ಕೋಟಿ ಕಿಕ್ ಬ್ಯಾಕ್;ಕವಿತಾ ವಿರುದ್ಧ ಇಡಿ ಆರೋಪ

1-qwewewq

Delhi; ಹೊತ್ತಿ ಉರಿದ ತಾಜ್ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು

renukaacharya

Threat ಇವತ್ತೇ ನಿನಗೆ ಕೊನೆಯ ದಿನ; ರೇಣುಕಾಚಾರ್ಯ ಅವರಿಗೆ ವಿದೇಶದಿಂದ ಬೆದರಿಕೆ ಕರೆ

Satish Jaraki

Exit poll ಸಮೀಕ್ಷೆಗಳ ಬಗ್ಗೆ ನಂಬಿಕೆಯಿಲ್ಲ: ಸಚಿವ ಸತೀಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ನಿಮ್ಮ ಮಗುವಿಗೆ Adenoid ಸಮಸ್ಯೆ ಇದೆಯೇ ಇಲ್ಲಿದೆ ಪರಿಹಾರ

udayavani youtube

ಉಳ್ಳಾಲ: ಉರುಮಣೆ ಸಮೀಪ ಬಸ್ಸುಗಳೆರಡರ ಮುಖಾಮುಖಿ ಢಿಕ್ಕಿ; ಸಣ್ಣಪುಟ್ಟ ಗಾಯ

udayavani youtube

ಹೆರ್ಗದಲ್ಲಿ 40 ಅಡಿ ಆಳದ ಬಾವಿಗೆ ಬಿದ್ದ ಕರುವಿನ ರಕ್ಷಣೆ

udayavani youtube

ಇಡ್ಲಿ ವಡೆ, ಶಾವಿಗೆ ಬಾತ್ ಗೆ ಹೆಸರುವಾಸಿಯಾದ ಹೋಟೆಲ್

udayavani youtube

ಒಡವೆ ಖರೀದಿಸುವ ನೆಪದಲ್ಲಿ ಮೂರುವರೆ ಲಕ್ಷ ಮೌಲ್ಯದ ಒಡವೆ ಕದ್ದ ಖತರ್ನಾಕ್ ಅಜ್ಜಿ

ಹೊಸ ಸೇರ್ಪಡೆ

1-dsadads

DD ಸ್ಪೋರ್ಟ್ಸ್ ನಲ್ಲಿ ಟಿ20 ವಿಶ್ವಕಪ್‌, ಒಲಿಂಪಿಕ್ಸ್‌ ನೇರ ಪ್ರಸಾರ

pragyananda

Norway ಚೆಸ್‌ ಟೂರ್ನಿ: ಪ್ರಜ್ಞಾನಂದ ಪರಾಭವ

Heavy Rain 9 ಜಿಲ್ಲೆಗಳಲ್ಲಿ ಮುಂದುವರಿದ ಮಳೆ

Heavy Rain 9 ಜಿಲ್ಲೆಗಳಲ್ಲಿ ಮುಂದುವರಿದ ಮಳೆ

ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ

MLC Elections; ಪರಿಷತ್ತಿನ 6 ಕ್ಷೇತ್ರಗಳಿಗೆ ಚುನಾವಣೆ

police crime

Srirangapatna; ಕಾರಿನಲ್ಲಿ ಜಾನುವಾರು ಸಾಗಾಟ:ಉಸಿರುಗಟ್ಟಿ 6 ಕರುಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.