ಮನೆಯೇ ಸಂಸ್ಕಾರ ಕಲಿಸುವ ಪಾಠ ಶಾಲೆಯಾಗಲಿ


Team Udayavani, Jul 11, 2019, 5:00 AM IST

w-16

ಕೊಲೆ, ಅತ್ಯಾಚಾರದಂತಹ ಹತ್ತಾರು ಅಪರಾಧ ಕೃತ್ಯಗಳಲ್ಲಿ ಆರೋಪಿ, ಅಪರಾಧಿಗಳಾಗಿ ಬಂಧಿತರಾಗುವವರ ಪ್ರಮಾಣದಲ್ಲಿ ಗಣನೀಯ ಏರಿಕೆ ಕಾಣುತ್ತಿದೆ. ಅದರಲ್ಲೂ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಿ ಜೈಲುಕಂಬಿ ಹಿಂದೆ ಸೇರುತ್ತಿರುವವರ ಪೈಕಿ ಹದಿಹರೆಯದವರೇ ಅಧಿಕ ಅನ್ನುವ ಸಂಗತಿ ಕೂಡ ಆತಂಕಕಾರಿ.

ದೇಶದ ಭವಿಷ್ಯ ಹೊತ್ತಿರುವ ಯುವ ಸಮುದಾಯ ತನ್ನ ದಾರಿ ಮರೆತು, ಬೇರೆಡೆಗೆ ವಾಲುತ್ತಿರುವುದಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ಎಚ್ಚೆತ್ತುಕೊಂಡು ಅದಕ್ಕೊಂದು ಪರಿಹಾರ ಕಂಡುಕೊಳ್ಳಬೇಕಾದ ಅನಿವಾರ್ಯ ಇಂದಿನದು.

ಯುವ ಸಮುದಾಯಕ್ಕೆ ದಾರಿ ತಪ್ಪಲು ಹಲವು ಕಾರಣಗಳು ಇರಬಹುದು. ಮನೆಯಲ್ಲಿ ಸಂಸ್ಕಾರದ ಶಿಕ್ಷಣದ ಕೊರತೆ, ಶಾಲೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣದ ಕೊರತೆ, ಸಂಬಂಧಗಳ ನಡುವೆ ಅವಿಶ್ವಾಸ, ಪ್ರೀತಿ, ನಂಬಿಕೆ ಇಲ್ಲದಿರುವುದು. ಹೀಗೆ ಒಂದು ಪರಿಪೂರ್ಣ ವ್ಯಕ್ತಿತ್ವಕ್ಕೆ ಬೇಕಾದ ಸಂಗತಿಗಳ ಕೊರತೆ ಕೂಡ ಭವಿಷ್ಯಕ್ಕೆ ಕಂಟಕವಾಗಬಲ್ಲುದು. ಅದರ ಜತೆಗೆ ಮೊಬೈಲ್, ಕಂಪ್ಯೂಟರ್‌, ಇಂಟರ್‌ನೆಟ್ ಅತಿ ಬಳಕೆ ಕೂಡ ಅಪರಾಧ ಕೃತ್ಯಗಳನ್ನು ಉತ್ತೇಜಿಸಬಹುದು.

ಮನೆಯಲ್ಲೇ ದೊರೆಯಲಿ ಸಂಸ್ಕಾರ
ಅವಿಭಕ್ತ ಕುಟುಂಬ ಹೆಚ್ಚಾಗಿದ್ದ ಸಂದರ್ಭದಲ್ಲಿ ಪ್ರತಿ ಮನೆಯು ಸಂಸ್ಕಾರದ ಶಿಕ್ಷಣ ನೀಡುವ ಪಾಠ ಶಾಲೆಗಳಾಗಿತ್ತು. ನಡೆತೆ, ಆಚಾರ, ವಿಚಾರ, ಸಮಾಜದಲ್ಲಿ ನಾವು ಇರಬೇಕಾದ ರೀತಿಗಳು ಇವುಗಳೆಲ್ಲವು ಎಳೆಯ ಪ್ರಾಯದಿಂದಲೇ ದೊರಕುತ್ತಿದ್ದವು. ಮಕ್ಕಳ ಆಗು ಹೋಗುಗಳ ಬಗ್ಗೆ ಹೆತ್ತವರಿಗೆ ಇದ್ದ ಕಾಳಜಿಯಷ್ಟೇ ಮನೆಯಲ್ಲಿನ ಇತರರಿಗೂ ಇತ್ತು. ಸಣ್ಣ ತಪ್ಪು ಮಾಡಿದಾಗ ಎಚ್ಚರಿಸುವ, ತಿದ್ದುವ ಪ್ರಯತ್ನ ನಡೆಯುತ್ತಿತ್ತು. ದೈನಂದಿನ ಕಾರ್ಯಚಟುವಟಿಕೆಗಳ ಬಗ್ಗೆ ವಿಚಾರಿಸಿ, ಸರಿಯೋ, ತಪ್ಪೋ ಎಂದು ವಿಮರ್ಶಿಸುವ ಮನೆಯೆಂಬ ಪಾಠಶಾಲೆ ಈಗ ಅಪರೂಪ.

ಈಗ ಕಾಲವನ್ನು ನಮಗೆ ಬೇಕಾದ ಹಾಗೆ ಬದಲಾಯಿಸಿದ್ದೇವೆ. ಅವಿಭಕ್ತ ಕುಟುಂಬ ಪದ್ಧತಿ ಬದಲಾಗಿ ವಿಭಕ್ತ ಕುಟುಂಬಗಳೇ ಹೆಚ್ಚಿವೆ. ಅಪ್ಪ-ಅಮ್ಮ, ಮಕ್ಕಳು ಮಾತ್ರ ಮನೆಯಲ್ಲಿರುವ ಚಿಕ್ಕ ಸಂಸಾರ, ಚೊಕ್ಕ ಸಂಸಾರ ಎಂಬ ಒಕ್ಕಣೆ. ಇಲ್ಲಿ ಪರಸ್ಪರ ಮಾತಿಲ್ಲದಷ್ಟು ಬ್ಯುಸಿ. ರಾತ್ರಿ ಮನೆಗೆ ಬಂದು, ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗುವ ಆತುರವೇ ಹೆಚ್ಚಿನ ವಿಭಕ್ತ ಕುಟುಂಬ ಇಂದಿನ ಸ್ಥಿತಿ.

ಹೆತ್ತವರಿಗೆ ಕಚೇರಿಗೆ ಹೊರಡುವ ಧಾವಂತ, ಮಕ್ಕಳಿಗೆ ಶಾಲೆಗೆ ತಯಾರಿ ಆಗುವ ಆತುರ. ಸಂಜೆ ಮನೆಗೆ ಬಂದು ಅಪ್ಪ, ಅಮ್ಮ ಮನೆ ವ್ಯವಹಾರದಲ್ಲಿ ಮುಳುಗಿದರೆ, ಮಕ್ಕಳು ಹೋಂ ವರ್ಕ್‌ ನೆಪದಲ್ಲಿ ತುಟಿಪಿಟಿಕ್‌ ಅನ್ನದಷ್ಟು ಮೌನವಾಗಿ ಬಿಡುತ್ತಾರೆ. ಹೀಗಾಗಿ ಮಕ್ಕಳಿಗೆ ಎಳೆಯ ಪ್ರಾಯದಲ್ಲಿ ಸಿಗಬೇಕಾದ ಸಂಸ್ಕಾರ ಪಾಠ ದೊರೆಯದು. ಮನೆಮಂದಿಗೆ ಜತೆಯಾಗಿ ಕುಳಿತು ಚರ್ಚಿಸಲು, ಪರಸ್ಪರ ಮಾತುಕತೆ ನಡೆಸುವ ಸಂದರ್ಭಗಳಿಗೆ ಟಿ.ವಿ.ಶೋಗಳು ಬ್ರೇಕ್‌ ಹಾಕಿ ಅದೆಷ್ಟೋ ವರ್ಷಗಳು ಕಳೆದಿವೆ. ಹೀಗಾಗಿ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬ ಸಂಸ್ಕಾರದ ಪಾಠಗಳು ದೊರೆಯದೆ ಯುವ ಮನಸ್ಸು ತಾವು ಹೋದದ್ದೆ ದಾರಿ ಎಂಬಂತೆ ಹೆಜ್ಜೆ ಇಡುತ್ತಿರುವುದು ಕೂಡ ಯುವ ಸಮುದಾಯ ದಾರಿತಪ್ಪಲು ಕಾರಣಗಳಲ್ಲಿ ಒಂದು.

ಸಾಮಾಜಿಕ ಜಾಲತಾಣಗಳ ಪ್ರಭಾವ
ಸಾಮಾಜಿಕ ಜಾಲತಾಣ, ಮೊಬೈಲ್, ಇಂಟರ್‌ನೆಟ್ ಅತಿ ಬಳಕೆ ಕೂಡ ಅಪರಾಧ ಕೃತ್ಯ ಹೆಚ್ಚಳಕ್ಕೆ ಮುಖ್ಯ ಕಾರಣ. ಅಕ್ಷರ ಜ್ಞಾನ ಪಡೆಯುವ ಹೊತ್ತಿನಲ್ಲಿ ದುಶ್ಚಟಗಳಿಗೆ ದಾಸರಾಗಿ ಬದುಕನ್ನೇ ಕಳೆದುಕೊಂಡಿರುವ ಅನೇಕ ಘಟನೆಗಳು ಇವೆ. ಇದಕ್ಕೆ ಅಂತರ್ಜಾಲ ಅತಿ ಬಳಕೆ ಕೂಡ ಕಾರಣ. ಶಾಲಾ ಕಾಲೇಜುಗಳಲ್ಲಿ ನೈತಿಕ ಪಾಠ ಮಾಡಿದರೂ, ಅತಿ ಬಳಕೆಯಿಂದ ಆಗಬಹುದಾದ ಅನಾಹುತಗಳ ಬಗ್ಗೆ ವಿವರಿಸಿದರೂ ಮನೆಯೊಳಗೂ ಕೂಡ ಅಷ್ಟೇ ಜಾಗೃತಿ, ಎಚ್ಚರದ ಆವಶ್ಯಕತೆ ಇದೆ. ವಯಸ್ಸಲ್ಲದ ವಯಸ್ಸಿನಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಕೈಗಿಟ್ಟು ಮಕ್ಕಳ ಮನಸ್ಸು ಕೆಡಿಸುವ ಪ್ರವೃತ್ತಿಗೆ ಮನೆಯಿಂದಲೇ ಕಡಿವಾಣ ಬೀಳಬೇಕು..

•ಕಿರಣ್‌ ಕುಂಡಡ್ಕ

ಟಾಪ್ ನ್ಯೂಸ್

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

1-adasdsd

Papua New Guinea; ಭಾರೀ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವು: ವರದಿ

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-exams

Exams: ಪರೀಕ್ಷೆ ಸವಾಲುಗಳು ಮಾತ್ರ ಬದುಕು ಅಲ್ಲ 

8-uv fusion

Life: ಬದುಕಿನ ಮುಂದಿನ ನಿಲ್ದಾಣ ಎಲ್ಲಿಗೊ…

7-uv-fusion

UV Fusion: ನಮ್ಮ ಮುಂದಿನ ನಡೆ…….?

9-uv-fusion

Kind: ಕರುಣೆ ಎಂಬ ಒಡವೆ ತೆಗೆಯದಿರು 

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.