ನಾನು ಮಾತಾಡುವ ಮೊದಲೇ ಪೀರಿಯಡ್‌ ಮುಗೀತು…


Team Udayavani, Jul 23, 2019, 5:00 AM IST

i-15

ಇನ್ನು ನಾಲ್ಕೈದು ನಿಮಿಷ ಕಾದರೆ ಸಾಕು, ನನ್ನ ಸರತಿ ಬಂದೇ ಬಿಡುತ್ತದೆ ಅನ್ನೋ ಥ್ರಿಲ್‌… ನೋಡನೋಡುತ್ತಿದ್ದಂತೆ ಆದದ್ದು ಬೇರೆಯೇ. ಪಿರಿಯಡ್‌ ಮುಗಿದ ಸೂಚಕವಾಗಿ ಬೆಲ್‌ ಹೊಡೆಯಿತು. ನನ್ನೊಳಗಿನ ಉತ್ಸಾಹದ ಗಾಳಿ ತುಂಬಿದ ಬಲೂನ್‌ ಒಡೆದೇ ಹೋಯಿತು. ಅಯ್ಯೋ, ಸಂಸ್ಕೃತದಲ್ಲಿ ಪಡೆದ ಅಂಕಗಳ ಬಗ್ಗೆ ಹೇಳಿಕೊಳ್ಳಲು ಆಗಲೇ ಇಲ್ಲ ಎಂದು ನಾನು ಪೇಚಾಡುತ್ತಿದ್ದಾಗಲೇ ಮುಂದಿನ ಪೀರಿಯಡ್‌ ಶುರುವಾಗಿಬಿಟ್ಟಿತ್ತು.

ನಾಲ್ಕು ದಶಕಗಳ ಹಿಂದಿನ ಮಾತು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕೇವಲ ಅಂಕಗಳ ಆಧಾರದಲ್ಲಿ ಸೀಟು ದೊರೆತಾಗ ಏನೋ ಸಾಧಿಸಿದ ತೃಪ್ತಿ. ಅಪ್ಪ ಕಾಲೇಜಿಗೆಂದು ಎರಡು ಜೊತೆ ಬಾಂಬೆಡೈಯಿಂಗ್‌ ಬಟ್ಟೆಯ ಲಂಗ ಜಂಪರ್‌ ಕೊಡಿಸಿದ್ದರು. ಕಾಲೇಜಿನ ಮೊಟ್ಟ ಮೊದಲ ದಿನ ಚಿusನಲ್ಲಿ ಕಾಲೇಜ್‌ ತಲುಪಿದ್ದು ಮರೆಯಲಾರದ ಅನುಭವ. ಕ್ಲಾಸ್‌ ರೂಮ್‌ ತುಂಬಾ ಗಿಜಿಗಿಜಿ. ಸಲ್ವಾರ್‌ ಕಮೀಜ…,ಬೆಲ್‌ ಬಾಟಮ್‌,ಮಿಡಿ ಟಾಪ್‌, ಪ್ಯಾಂಟ್‌ ಶರ್ಟ್‌ನಿಂದ ಹಿಡಿದು ನನ್ನಂತೆ ಲಂಗ ಬ್ಲೌಸ್‌ವರೆಗೂ ವಸ್ತ್ರ ವೈವಿಧ್ಯದಲ್ಲಿ ಹುಡುಗಿಯರು ಆಗಮಿಸಿದ್ದರು. ಕೇಶವಿನ್ಯಾಸದ ವಿಷಯಗಳ ಬಂದರೆ

ಪೋನಿಟೈಲ…, ಎರಡು ಜುಟ್ಟು, ಬಾಬ…, ಒಂದು ಜಡೆ, ಎರಡು ಜಡೆ , ಕೈಯಲ್ಲಿ ಪುಸ್ತಕ ಹಿಡಿದು ಬಂದವರಿಂದ ಜಂಬದ ಚೀಲ ಏರಿಸಿಬಂದವರೆಗೂ ಇದ್ದವರನ್ನೆಲ್ಲ ಕ್ಲಾಸಿನಲ್ಲಿ ಕಂಡಾಗ ಬೆರಗಾಗಿದ್ದೆ. ಅರೆನಗರ ಪ್ರದೇಶದ, ಇಂಗ್ಲಿಷ್‌ ಮಾತನಾಡಲು ಬಾರದ ಹುಡುಗಿ ಮತ್ತು ಕೊಂಚ ಹೆಚ್ಚು ಮಡಿವಂತಿಕೆಯ ಹಿನ್ನೆಲೆಯಿಂದ ಬಂದಿದ್ದ ನಾನು ಇವನ್ನೆಲ್ಲಾ ಅರಗಿಸಿಕೊಳ್ಳಲು ಕಷ್ಟವೇ ಆಯಿತು. ಜೊತೆಗೆ ನನ್ನ ಸ್ವಭಾವಕ್ಕೆ ತಕ್ಕುದಾದ ಸ್ನೇಹಿತರು ಸಿಗುವರೋ ಇಲ್ಲವೋ ಎಂಬ ಆತಂಕ ಕೂಡ ಇತ್ತು. ಸ್ಕೂಲ್‌ನಲ್ಲಿ ಎರಡು ಸಾಲು ಹುಡುಗಿಯರಾದರೆ ಒಂದು ಸಾಲು ಹುಡುಗರದ್ದು. ಪ್ರತಿ ವಿಷಯಕ್ಕೂ ಹಾಜರಾತಿ, ಹೈಸ್ಕೂಲಿನಲ್ಲಿ ಒಂದು ಪೀರಿಯಡ್‌ ಅಂದರೆ 45 ನಿಮಿಷ ಇರುತ್ತಿತ್ತು. ಕಾಲೇಜಿನಲ್ಲಿ ಒಂದು ಪೀರಿಯಡ್‌ನ‌ ಅವಧಿ ಅವಧಿ 55 ನಿಮಿಷಕ್ಕೆ ವಿಸ್ತಾರಗೊಂಡಿದ್ದು ವಿಶೇಷ ಅನಿಸಿತ್ತು.

ಸಂಸ್ಕೃತ ಭಾಷೆಯ ಪಿರಿಯಡ್‌ ಬಂದಾಗ, ವಿದ್ಯಾರ್ಥಿಗಳು ತಮ್ಮ ಹೆಸರು, ಓದಿದ ಶಾಲೆ, sslc ಯಲ್ಲಿ ಸಂಸ್ಕೃತವಿಷಯದಲ್ಲಿ ಗಳಿಸಿದ್ದ ಅಂಕ ಇವಿಷ್ಟನ್ನೂ ಹೇಳಬೇಕೆಂಬ ಅಪ್ಪಣೆ ಉಪನ್ಯಾಸಕರಿಂದ ಬಂತು. ಸರತಿಯಂತೆ ಒಬ್ಬೊಬ್ಬರಾಗಿ ಹೇಳತೊಡಗಿದರು. ನನ್ನ ಸರತಿ ಯಾವಾಗ ಬರುತ್ತದೆ ಅನ್ನೋ ಕುತೂಹಲ. ಒಬ್ಬೊಬ್ಬರದ್ದು ಮುಗಿಯುತ್ತಿದ್ದಂತೆ, ಅದು ಮಗದಷ್ಟು ಏರುತ್ತಲೇ ಇತ್ತು. ನನ್ನ ಲೆಕ್ಕಾಚಾರವೆಲ್ಲ ಮುಖ್ಯವಾಗಿ ಇದ್ದದ್ದು ಗಳಿಸಿದ ಅಂಕಗಳ ಸುತ್ತ. ನನ್ನೊಳಗಿನ ಕಾತುರಕ್ಕೆ ಇನ್ನೊಂದು ಕಾರಣವೂ ಇತ್ತು ಎನ್ನಿ. ಅದೇನೆಂದರೆ, ಅಲ್ಲಿಯವರೆಗೆ ಪರಿಚಯಿಸಿಕೊಂಡವರಲ್ಲಿ ಒಬ್ಬಿಬ್ಬರ ಹೊರತು ಉಳಿದವರೆಲ್ಲ ನನಗಿಂತ ಕಡಿಮೆ ಅಂಕಗಳನ್ನು ಪಡೆದವರೇ ಆಗಿದ್ದರು. ಇವರ ಮುಂದೆ ನನ್ನ ಅಂಕಗಳ ಪ್ರಕಟಣೆಯಾಗಿ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಅನ್ನಿಸಿಕೊಂಡು ಮತ್ತಷ್ಟು ಬೀಗಬಹುದು ಅನ್ನೋದು ನಿಜವಾದ ಲೆಕ್ಕಾಚಾರ.

ಇನ್ನು ನಾಲ್ಕೈದು ನಿಮಿಷ ಕಾದರೆ ಸಾಕು, ನನ್ನ ಸರತಿ ಬಂದೇ ಬಿಡುತ್ತದೆ ಅನ್ನೋ ಥ್ರಿಲ್‌… ನೋಡನೋಡುತ್ತಿದ್ದಂತೆ ಆದದ್ದು ಬೇರೆಯೇ. ಪಿರಿಯಡ್‌ ಮುಗಿದ ಸೂಚಕವಾಗಿ ಬೆಲ್‌ ಹೊಡೆಯಿತು. ನನ್ನೊಳಗಿನ ಉತ್ಸಾಹದ ಗಾಳಿ ತುಂಬಿದ ಬಲೂನ್‌ ಒಡೆದೇ ಹೋಯಿತು. ಅಯ್ಯೋ, ಸಂಸ್ಕೃತದಲ್ಲಿ ಪಡೆದ ಅಂಕಗಳ ಬಗ್ಗೆ ಹೇಳಿಕೊಳ್ಳಲು ಆಗಲೇ ಇಲ್ಲ ಎಂದು ನಾನು ಪೇಚಾಡುತ್ತಿದ್ದಾಗಲೇ ಮುಂದಿನ ಪೀರಿಯಡ್‌ ಶುರುವಾಗಿಬಿಟ್ಟಿತ್ತು. ನಾನು ಅದೇನನ್ನು ಗಮನಿಸದ ಭ್ರಮಾದೀನ ಲೋಕದಲ್ಲಿದ್ದೆ. ಆಗಲೇ ಅರ್ಥಶಾಸ್ತ್ರದ ಉಪನ್ಯಾಸಕರು ‘please note down the syllabus’ ಎಂದಾಗ ಅರ್ಥವಾಗದೇ ಪಿಳಿಪಿಳಿ ಕಣ್ಣು ಬಿಟ್ಟಿದ್ದು ಈಗಲೂ ನೆನಪಿದೆ.

-ಕೆ.ವಿ.ರಾಜಲಕ್ಷ್ಮೀ

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.