ಮರೆಯಲಾಗದ ಫ‌ಜೀತಿ


Team Udayavani, Aug 2, 2019, 5:01 AM IST

k-18

ಅಯ್ಯೋ ಗಂಟೆ ಏಳಾಯ್ತು! ಇಷ್ಟೊತ್ತಾದ್ರೂ ಎಚ್ಚರವೇ ಆಗಿಲ್ಲಲ್ವಾ’ ಎನ್ನುತ್ತಾ ಎದ್ದು ಗಡಿಬಿಡಿಯಲ್ಲಿ ಎದ್ದು ಕಾಲೇಜಿಗೆ ರೆಡಿಯಾದೆ. ಅಂಗಳಕ್ಕಿಳಿದು ನಾಲ್ಕು ಹೆಜ್ಜೆ ಮುಂದಿಟ್ಟದ್ದೇ ತಡ ಕ್ಷಣಾರ್ಧದಲ್ಲಿ ಕತ್ತಲಾಗಿ “ಧೋ’ ಎಂದು ಜೋರಾಗಿ ಮಳೆ ಸುರಿಯಲಾರಂಭಿಸಿತು. ಇನ್ನು ತಡವಾದರೆ ಬಸ್ಸು ಸಿಗಲಿಕ್ಕಿಲ್ಲ ಎಂದು ಕೊಡೆ ಬಿಡಿಸಿ ಆ ಗಾಳಿ-ಮಳೆಯಲ್ಲೇ ಹೊರಟುಬಿಟ್ಟೆ.

ಅವಸರವಸರವಾಗಿ ಸಂಚರಿಸುತ್ತಿದ್ದ ವಾಹನಗಳಿಂದಾಗಿ ನನ್ನ ಕೊಡೆ ಗಾಳಿಪಟದಂತಾಗಿತ್ತು. ಮೈಯೆಲ್ಲ ಒದ್ದೆ. ಈ ವರುಣ ಸ್ವಲ್ಪ ವಿರಾಮವಾದರೂ ತೆಗೆದುಕೊಳ್ಳಬಾರದೇ ಎಂದು ಗೊಣಗುತ್ತಿರುವಾಗಲೇ ಅದೆಲ್ಲಿಂದಲೋ ನುಗ್ಗಿ ಬಂದ ಲಾರಿಯ ರಭಸಕ್ಕೆ ಆಗಲೇ ಅರೆಜೀವವಾಗಿದ್ದ ನನ್ನ ಕೊಡೆ ಹೂವಿನಂತೆ ಅರಳಿಬಿಟ್ಟಿತು. ಕಡ್ಡಿಗಳು ಮುರಿದು ಬಿದ್ದವು. ದಾರಿ ತೋಚದೆ ಬೆಪ್ಪಾದ

ನನಗೆ ಪಕ್ಕದಲ್ಲೊಂದು ಪೋಸ್ಟ್ ಆಫೀಸ್‌ ಕಾಣಿಸಿತು. ಸ್ಪೀಡ್‌ ಪೋಸ್ಟ್‌ನಲ್ಲಿ ಬರುವ ಪತ್ರದಂತೆ ಓಡಿಹೋಗಿ ಪೋಸ್ಟ್ ಆಫೀಸು ಸೇರಿಕೊಂಡೆ. ಅಷ್ಟರಲ್ಲಿ ನೋಡನೋಡುತ್ತಿದ್ದಂತೆ ನಾನು ಪ್ರತಿದಿನ ಪ್ರಯಾಣಿಸುವ ಬಸ್ಸು ಕಣ್ಣಮುಂದೆಯೇ ಹೊರಟುಹೋಯಿತು. ಸಿಟ್ಟಿನಲ್ಲಿ ಕಾಲೇಜೂ ಬೇಡ ಏನೂ ಬೇಡ ಮನೆಗೆ ಹಿಂತಿರುಗೋದೇ ವಾಸಿ ಅನ್ನಿಸಿಬಿಟ್ಟಿತು. ಆದರೆ, ಸುರಿಯುವ ಮಳೆ ಏನೂ ಮಾಡದ ಹಾಗೆ ನನ್ನ ಕಟ್ಟಿಹಾಕಿತ್ತು.

ಸದ್ಯಕ್ಕಂತೂ ಮಳೆ ಬಿಡುವ ಲಕ್ಷಣ ಕಾಣಲಿಲ್ಲ. ಏನು ಮಾಡುವುದೆಂದು ತಿಳಿಯದೆ ಕಲ್ಲಿನಂತೆ ನಿಂತುಬಿಟ್ಟೆ. ಒದ್ದೆಯಾದ ಪತ್ರದಂತಿದ್ದ ನನ್ನ ಸ್ಥಿತಿಯನ್ನು ಕಂಡು ಪೋಸ್ಟಾಫೀಸಿನ ಮ್ಯಾನೇಜರ್‌ಗೆ ಕರುಣೆ ಹುಟ್ಟಿತೇನೋ, ನನ್ನನ್ನು ವಿಚಾರಿಸಿ, ಅವರದ್ದೊಂದು ಹಳೆಯ ಕೊಡೆಯನ್ನು ಕೊಟ್ಟು “ನಾಳೆ ಹಿಂತಿರುಗಿಸಿದರೆ ಸಾಕು’ ಅಂದರು. ಮರುಭೂಮಿಯಲ್ಲಿ ಬಳಲಿ ಬಾಯಾರಿದವನಿಗೆ ಒಂದು ತಂಬಿಗೆ ನೀರು ಸಿಕ್ಕಷ್ಟು ಖುಷಿಪಟ್ಟು, ಕೊಡೆ ಬಿಡಿಸಿ ಹೊರಟೆ. ಇನ್ನೇನು ಕೆಲವೇ ನಿಮಿಷ ಬಸ್ಟ್ಯಾಂಡ್‌ ಸೇರುತ್ತೇನೆ ಅನ್ನುವಷ್ಟರಲ್ಲಿ ಯಾರೋ ಗಾಡಿಯವ ಅವಸರದಲ್ಲಿದ್ದ ನನ್ನ ಮೇಲೆ ಕೆಸರೆರಚಿಕೊಂಡು ಹೋದ. ಮೊದಲೇ ಮಳೆಯಲ್ಲಿ ಮಿಂದು ಬೆಂದ ನನ್ನ ಸಿಟ್ಟು ನೆತ್ತಿಗೇರಿತು. ಆತನಿಗೆ ಬಾಯಿಗೆ ಬಂದಂತೆ ಹಿಡಿಶಾಪ ಹಾಕಿದೆ. ಅಂದು ಬೇರೆ ಸೋಮವಾರವಾಗಿದ್ದರಿಂದ ಇನ್ನು ವಾರವಿಡೀ ಯಾವ ಗ್ರಹಚಾರ ಕಾದಿದೆಯೋ ಅನ್ನಿಸಿಬಿಟ್ಟಿತು. ಮೈಕೈ ಒರೆಸಿಕೊಂಡು ಹೇಗೋ ಬಸ್‌ಸ್ಟಾಂಡ್‌ ಸೇರಿದೆ. ಬಸ್ಸಿನ ಸುಳಿವೇ ಇಲ್ಲ. ಈ ಮಳೆ ಯಾಕೆ ಯಾವಾಗಲೂ ನಾನು ಕಾಲೇಜಿಗೆ ಹೊರಡುವ ಸಮಯದಲ್ಲೇ ಸುರಿಯುತ್ತದೆ ಎಂದು ಗೊಣಗುತ್ತಿದ್ದಂತೆ “ಪೋಂ’ ಎಂದು ಸದ್ದು ಮಾಡುತ್ತ ಬಸ್‌ ಬಂದೇ ಬಿಟ್ಟಿತು. ಅದು ನನ್ನ ಮಾಮೂಲಿ ಬಸ್‌ ಅಲ್ಲದ್ದರಿಂದ ಕಂಡಕ್ಟರ್‌ ಕೇಳಿದಷ್ಟು ಕೊಟ್ಟು ಸುಮ್ಮನಾದೆ. ಬೆಳಗ್ಗೆ ಬೆಳಗ್ಗೆ ಯಾರ ಮುಖ ದರ್ಶನ ಮಾಡಿದೆನೋ, ಹೀಗೆಲ್ಲ ಆಗುತ್ತಿದ್ದೆಯಲ್ಲಾ ಎನ್ನುತ್ತಿದ್ದಂತೆ ಬಸ್ಸೂ ಕೆಟ್ಟು ನಿಂತುಬಿಟ್ಟಿತು. ಒಟ್ಟಿನಲ್ಲಿ ಏನೋ ಗ್ರಹಚಾರ ಸರಿಯಿಲ್ಲ ಎಂದುಕೊಳ್ಳುತ್ತಿರುವಾಗಲೇ ಕಂಡಕ್ಟರ್‌ ಎಲ್ಲರನ್ನೂ ಕೆಳಗಿಳಿಸಿ, “ಈಗ ಹಿಂದೆಯೊಂದು ಬಸ್ಸು ಬರುತ್ತಿದೆ. ಟಿಕೆಟ್‌ ತೋರಿಸಿ ಅದರಲ್ಲಿ ಹೋಗಿ’ ಅಂದುಬಿಟ್ಟ. ಪುಣ್ಯಕ್ಕೆ ಬಸ್‌ ಬಂದಿತು. ಕಾಲೇಜಿಗೆ ತಲುಪುವಾಗ ತುಂಬಾ ತಡವಾಗಿತ್ತು.

ಇಷ್ಟೆಲ್ಲ ನಡೆದ ಮೇಲೆ ಇನ್ನು ಕಾಲೇಜಿನಲ್ಲಿ ಇನ್ನೇನು ಕಾದಿದೆಯೋ ಎನ್ನುತ್ತ ಭಯದಿಂದಲೇ ತರಗತಿಗೆ ಹೊರಟೆ. ಉಪನ್ಯಾಸಕರು ಒಳ್ಳೆಯ ಮನಸ್ಥಿತಿ ಯಲ್ಲಿದ್ದರಿಂದ ಏನೂ ಹೇಳದೆ ಒಳ ಕರೆದರು. ಬೆಂಚಿನಲ್ಲಿ ಕುಳಿತವಳೇ “ಅಬ್ಟಾ’ ಎಂದು ನಿಟ್ಟುಸಿರುಬಿಟ್ಟೆ. ನಡೆದ ಘಟನೆಗಳೆಲ್ಲ ತಲೆಯಲ್ಲಿ ಅಚ್ಚಾದಂತೆ ಕೂತಿತ್ತು. ತರಗತಿ ಮುಗಿದಿದ್ದೇ ತಡ ಸ್ನೇಹಿತರೊಂದಿಗೆ ನನ್ನೆಲ್ಲ ಅಳಲನ್ನು ತೋಡಿಕೊಂಡೆ. ನಾನೇನೋ ಜೋಕ್‌ ಹೇಳಿದಂತೆ ಅವರೆಲ್ಲ ಜೋರಾಗಿ ನಗಲಾರಂಭಿಸಿದರು. ಆದರೆ, ನಾನು ಅನುಭವಿಸಿದ ಫ‌ಜೀತಿ ನನಗೆ ಮಾತ್ರ ತಿಳಿದಿತ್ತು.

ಸಂಜೆ ಮನೆಗೆ ತೆರಳುತ್ತಾ ನನ್ನೆಲ್ಲ ಫ‌ಜೀತಿಗೆ ಕಾರಣಕರ್ತವಾದ ಕೊಡೆಯನ್ನು ರಿಪೇರಿಗೆ ಕೊಟ್ಟು ಹೊರಟೆ. ಮನೆಯೆಲ್ಲ ಅದೇ ಮಾತುಗಳು. ಮರುದಿನ ಮರೆಯದೇ ಪೋಸ್ಟ್ ಆಫೀಸಿಗೆ ತೆರಳಿ ಕೊಡೆಯನ್ನು ಹಿಂದಿರುಗಿಸಿ ಕೃತಜ್ಞತೆ ಸಲ್ಲಿಸಿದೆ. ಇಂದಿಗೂ ಕೆಲವೊಮ್ಮೆ ಅಂದಿನ ನನ್ನ ಪಾಡು ನೆನಪಾಗಿ ನಗು ಬರುತ್ತದೆ.

ದೀಕ್ಷಾ ಕುಮಾರಿ
ತೃತೀಯ ಪತ್ರಿಕೋದ್ಯಮ ವಿಭಾಗ,
ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.