ಕಪಟನಾಟಕ ಪಾತ್ರಧಾರಿಯ ಫೇಸ್ ಬುಕ್ ಲವ್!
Team Udayavani, Aug 23, 2019, 11:25 AM IST
ಹುಲಿರಾಯನಾಗಿ ವರ್ಷದ ಹಿಂದಷ್ಟೇ ಅಬ್ಬರಿಸಿದ್ದ ಬಾಲು ನಾಗೇಂದ್ರ ಈಗ ಕಪಟನಾಟಕ ಪಾತ್ರಧಾರಿಯಾಗಿ ಅವತಾರವೆತ್ತಿದ್ದಾರೆ. ತನ್ನ ಟೈಟಲ್ನಿಂದಲೇ ಗಮನ ಸೆಳೆದಿರೋ ಈ ಸಿನಿಮಾ ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಲಿರಿಕಲ್ ವೀಡಿಯೋ ಒಂದರ ಮೂಲಕ ಎಲ್ಲ ಕಡೆ ಹರಿದಾಡುತ್ತಾ, ಎಲ್ಲರನ್ನೂ ಸೆಳೆದುಕೊಂಡಿದೆ. ಅದರಲ್ಲಿನ ವಿಭಿನ್ನ ಪ್ರಯೋಗ ಮತ್ತು ಕ್ರಿಯಾಶೀಲತೆಯ ಕಾರಣದಿಂದ ಚಿತ್ರತಂಡವೂ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದಯಾಕೆ ಅಂತ ಗೊತ್ತಿಲ್ಲ ಕಂಡ್ರಿ, ನನ್ನನ್ನು ನೋಡಿ ನಕ್ಬಿಟ್ಳು ಸುಂದ್ರಿ ಎಂಬ ಲಿರಿಕಲ್ವೀ ಡಿಯೋಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಅದು ಆರಂಭದಲ್ಲಿಯೇ ವ್ಯಾಪಕ ಮೆಚ್ಚುಗೆಗಳನ್ನೂ ಪಡೆದುಕೊಂಡಿತ್ತು. ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಬಿಟ್ಟಿದೆ. ಅದಕ್ಕೆ ಕಾರಣವಾಗಿರೋದು ಫೇಸ್ಬುಕ್ ಥೀಮ್ನಲ್ಲಿ ಈ
ಲಿರಿಕಲ್ ವೀಡಿಯೋ ಸಾಂಗ್ ಅನ್ನು ರೂಪಿಸಿರೋ ರೀತಿ.
ಈ ವೀಡಿಯೋ ಸಾಂಗ್ ಅನ್ನು ಫೇಸ್ ಬುಕ್ ಮಾದರಿಯಲ್ಲಿಯೇ ಅನಾವರಣಗೊಳ್ಳುವಂತೆ ರೂಪಿಸಲಾಗಿದೆ. ಫೇಸ್ಬುಕ್ನಲ್ಲಿ ಯಾವುದೇ ಪೋಸ್ಟ್ ಹಾಕುವಾಗ ಅಲ್ಲಿ ಅಕ್ಷರಗಳು ಮೂಡಿಕೊಳ್ಳೋ ಜಾಗದಲ್ಲಿ ಈ ಹಾಡಿನ ಸಾಲುಗಳು ಕಾಣಿಸುತ್ತವೆ. ಅದಕ್ಕೆ ಸಂಬಂಧಿಸಿದ ಫೋಟೋಗಳೇ ಪೋಸ್ಟ್ ಆಗೋ ಜಾಗದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಚಿತ್ರದ ತಾಂತ್ರಿಕ ವರ್ಗದ ವಿವರಗಳನ್ನೂ ಕೂಡಾ ಅವರವರ ಫೇಸ್ಬುಕ್ ಖಾತೆಗಳ ಮೂಲಕವೇ ಹೇಳಲಾಗಿದೆ. ಕನ್ನಡ ಚಿತ್ರರಂಗದಲ್ಲಿಯೇ ಇದೊಂದು ಹೊಸಾ ಬಗೆಯ ಪ್ರಯತ್ನ. ಇದನ್ನು ಎಲ್ಲರೂ ಮೆಚ್ಚಿ ಕೊಂಡಾಡುತ್ತಿದ್ದಾರೆ. ಅದರ ಜೊತೆಗೇ ಈ ಹಾಡೂ ಕೂಡಾ ಟ್ರೆಂಡಿಂಗ್ ನಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Yash: “ಯಶ್ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ
Kantara -1: ರಿಷಬ್ ಶೆಟ್ಟಿ ʼಕಾಂತಾರ-1ʼ ಗೆ ಖ್ಯಾತ ಮಾಲಿವುಡ್ ನಟ ಜಯರಾಂ ಎಂಟ್ರಿ?
ನಟ ʼಪ್ರಜ್ವಲ್ ದೇವರಾಜ್ ಇನ್ನಿಲ್ಲʼ ಎನ್ನುವ ಪೋಸ್ಟರ್ ವೈರಲ್: ನಿಜಕ್ಕೂ ಆಗಿದ್ದೇನು?
Ragini dwivedi; ಡಬ್ಬಿಂಗ್ ಮುಗಿಸಿದ ಬಿಂಗೋ
Sahara Movie; ಮಂಡ್ಯ ಹುಡುಗಿ ಕ್ರಿಕೆಟರ್ ಆದ ಕಥೆ…
MUST WATCH
ಹೊಸ ಸೇರ್ಪಡೆ
ಹೊರಬಿತ್ತು ಅಂಬಾನಿ ಪುತ್ರನ ವೆಡ್ಡಿಂಗ್ ಕಾರ್ಡ್: ಎಲ್ಲಿ,ಯಾವಾಗ,ವಿಶೇಷಗಳೇನು? ಇಲ್ಲಿದೆ ವಿವರ
Jammu ಭೀಕರ ಬಸ್ ಅವಘಡ : 21 ಮಂದಿ ಮೃತ್ಯು, ಹಲವರಿಗೆ ಗಾಯ
Lok Sabha Election 2024: ಸ್ವಾಭಿಮಾನದ ಕಿಚ್ಚು; ಯಾರಿಗೆ ನಷ್ಟ-ಲಾಭ !
ಹಾನಗಲ್ಲ:ಕಳಪೆ ಬಿತ್ತನೆ ಬೀಜ ತಡೆಗೆ ಕ್ಯೂಆರ್ ಕೋಡ್
Actor Yash: “ಯಶ್ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ