ಹಣ್ಣಿನ ಮಕ್ಕಳು!

ಲಾಭ ತರುವ ಜಪಾನಿ ಬೆಳೆ!

Team Udayavani, Aug 26, 2019, 3:03 AM IST

haninna-makaa

ಮೂಲತಃ ಜಪಾನ್‌ ದೇಶದ ದೇಶಿ ತಳಿ ವಿಜಯಪುರದಂಥ ಬರಡು ಭೂಮಿಯ ವಾತಾವರಣದಲ್ಲಿ, ಸಾವಯವ ಪದ್ಧತಿಯ ನೆರಳಿನಲ್ಲಿ ಹುಲುಸಾಗಿ ಬೆಳೆದು, ಫ‌ಲ ನೀಡುತ್ತಿದೆ. ವಿದೇಶಿ ತಳಿಯಾದರೂ ಅನ್ನದಾತರ ಬದುಕಿಗೆ ಆರ್ಥಿಕತೆಯ ಬಲ ನೀಡಬಲ್ಲುದು ಎಂಬುದನ್ನು ಕೃಷಿಕ ಬಸವರಾಜ ಸಾಬೀತುಪಡಿಸುತ್ತಿದ್ದಾರೆ.

ವಿಜಯಪುರ ನಗರದಿಂದ ಅಥಣಿ ರಸ್ತೆಗೆ ಹೊಂದಿಕೊಂಡಂತೆ ಅಂದಾಜು 19 ಕಿ.ಮೀ. ಅಂತರದ ರತ್ನಾಪುರ ಕ್ರಾಸ್‌ ಹತ್ತಿರ ಬಸವರಾಜ ರಾಣಗಟ್ಟಿ ಎನ್ನುವವರ ಜಮೀನಿದೆ. ಅವರು ಡ್ರ್ಯಾಗನ್‌ ಫ್ರೂಟ್‌ ಬೆಳೆಯನ್ನು ತೆಗೆದಿರುವುದು ಇಲ್ಲೇ. ವಿದೇಶಿ ಬೆಳೆಯನ್ನು ಸಾವಯವ ಪದ್ಧತಿ ಬಳಸಿ 2 ಎಕರೆ ಪೂರ್ತಿ ಬೆಳೆದು ಈ ಭಾಗದ ರೈತರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಕಂಬದ ಮ್ಯಾಲೆ ಡ್ರ್ಯಾಗನ್‌: ಕಂಬದಿಂದ ಕಂಬಕ್ಕೆ 7 ಅಡಿ ಅಂತರ, ಸಾಲಿನಿಂದ ಸಾಲಿಗೆ 11 ಅಡಿ ಅಂತರದಲ್ಲಿ ಸಿಮೆಂಟ್‌ ಕಂಬಗಳನ್ನು ನೆಟ್ಟಿದ್ದಾರೆ. ಒಂದು ಸಿಮೆಂಟ್‌ ಕಂಬದ ನಾಲ್ಕು ದಿಕ್ಕಿನಲ್ಲಿ ನಾಲ್ಕು ಡ್ರ್ಯಾಗನ್‌ ಸಸಿಗಳನ್ನು ನೆಟ್ಟಿದ್ದಾರೆ. ಒಂದು ಎಕರೆಗೆ 520 ಸಿಮೆಂಟ್‌ ಕಂಬಗಳನ್ನು ನೆಟ್ಟಿದ್ದು, 2080 ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಿಗೆ ಹನಿ ನೀರಾವರಿ ಮೂಲಕ ನೀರು ಸರಬರಾಜು ಮಾಡಿದ್ದಾರೆ. ಚೆನ್ನಾಗಿ ಕೊಳೆತ ಸೆಗಣಿ ಗೊಬ್ಬರ, 100 ಕೆ.ಜಿ. ಬೇವಿನ ಹಿಂಡಿ, 100 ಕೆ.ಜಿ. ಕರಂಜಿ ಹಿಂಡಿ, 20 ಕೆ.ಜಿ ಮೆಗಾ ಚಾರ್ಜ್‌- ಎ.ಜಿ. ಮತ್ತು 5 ಕೆ.ಜಿ. ಪೋರೆಟ್‌ ಸಸಿ ನೆಡುವ ಮೊದಲು ಹಾಕಬೇಕು.

ಮಹಾರಾಷ್ಟ್ರ ಹಾಗೂ ಕಾಗವಾಡದಿಂದ ಕೆಂಪು, ಬಿಳಿ ಬಣ್ಣದ ಹಣ್ಣುಗಳ ಎರಡು ತಳಿಗಳ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ತಂದು ನೆಡಲಾಗಿದ್ದು, ಡ್ರ್ಯಾಗನ್‌ ಫ್ರೂಟ್‌ ಸಸಿ 5ರಿಂದ 6 ತಿಂಗಳಲ್ಲಿ 6 ಅಡಿ ಎತ್ತರದ ಸಿಮೆಂಟ್‌ ಕಂಬದ ವರೆಗೂ ಪ್ಲೇಟ್‌ಗಳ ತನಕ ಬೆಳೆದು ಗಿಡವಾಗುತ್ತದೆ. ಅನಂತರ 22 ತಿಂಗಳಲ್ಲಿ ಪ್ಲೇಟ್‌ನಿಂದ ಕಾರಂಜಿಯಾಕಾರದಲ್ಲಿ ವೃತ್ತಾಕಾರವಾಗಿ ಇಳಿಜಾರಾಗಿ ಬೆಳೆದ ಕಾಂಡದಲ್ಲಿ ಮೊದಲಿಗೆ ಹೂವು ಬಿಟ್ಟ ಬಳಿಕ, ನಂತರ ಡ್ರ್ಯಾಗನ್‌ ಫ್ರೂಟ್‌ ಹಣ್ಣಿನ ಇಳುವರಿ ಬರುತ್ತದೆ.

ಖರ್ಚು ಕಡಿಮೆ, ನಿರ್ವಹಣೆಯೂ ಸುಲಭ: ಮಡ್ಡಿ ಜಮೀನಿನ ನೆಲಕ್ಕೆ ಉತ್ತಮ ನೀರಿದ್ದರೆ ಸಾಕು ಡ್ರ್ಯಾಗನ್‌ ಫ್ರೂಟ್‌ ಗಿಡವನ್ನು 25 ವರ್ಷಗಳ ಕಾಲ ಬೆಳೆಯಬಹುದು. ಮಳೆಗಾಲದಲ್ಲಿ ನೀರು ಹೆಚ್ಚಾದರೆ ಕೊಳೆ ರೋಗ ಬರುವ ಸಾಧ್ಯತೆ ಇರುತ್ತದೆ. ಅದೊಂದೇ ಸಮಸ್ಯೆ. ಕೀಟ ಮತ್ತು ಇತರೆ ರೋಗಗಳು ಬಾಧಿಸುವುದು ತುಂಬಾ ಕಡಿಮೆ. ಹೀಗಾಗಿ ಕೊಂಚಮಟ್ಟಿಗೆ ನಿಗಾ ವಹಿಸಿದರೆ ಸಾಕು; ಉತ್ತಮ ಇಳುವರಿ ಪಡೆಯಲು ಸಾಧ್ಯ. ಚೆನ್ನಾಗಿ ನೀರು ಬಸಿದು ಹೋಗುವ ಸಾದಾ ಅಥವಾ ಮಧ್ಯಮ ಜಮೀನು ಮತ್ತು ಅದರ ರಸಸಾರ 6 ರಿಂದ 7.5 ಇರಬೇಕು. ಅಧಿಕ ತಾಪಮಾನವಿರುವ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳನ್ನು ಬಿಟ್ಟು ಇತರೆ ದಿನಗಳಲ್ಲಿ ಈ ಡ್ರ್ಯಾಗನ್‌ ಫ್ರೂಟ್‌ ಸಸಿಗಳನ್ನು ನೆಡಬಹುದು.

ಮೊದಲ ಇಳುವರಿಯಾಗಿ ಸಿಕ್ಕ ಡ್ರ್ಯಾಗನ್‌ ಹಣ್ಣು ಸುಮಾರು 54 ಕೆ.ಜಿ.ಯಷ್ಟು. ಕೆ.ಜಿ.ಗೆ 150 ರೂ.ಗಳಂತೆ 54 ಕೆಜಿ ಹಣ್ಣುಗಳನ್ನು ಮಾರಾಟ ಮಾಡಿದ್ದು, ವಾರ್ಷಿಕ ಒಂದು ಎಕರೆಗೆ 5- 6 ಟನ್‌ ಡ್ರ್ಯಾಗನ್‌ ಫ್ರೂಟ್‌ ಇಳುವರಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಡ್ರ್ಯಾಗನ್‌ ಹಣ್ಣಿನ ಬೆಲೆ 150 ರು.ನಷ್ಟಿದೆ. ಹೀಗಾಗಿ ಟನ್‌ಗಟ್ಟಲೆ ಬೆಳೆದ ರೈತರಿಗೆ ಲಾಭ ಕಟ್ಟಿಟ್ಟ ಬುತ್ತಿ. ಅಲ್ಲದೆ, ವರ್ಷಗಳು ಕಳೆದಂತೆ ಡ್ರ್ಯಾಗನ್‌ ಫ್ರೂಟಿನ ಇಳುವರಿಯೂ ಹೆಚ್ಚುತ್ತಾ ಸಾಗುತ್ತದೆ ಎನ್ನುವುದು ರಾಣಗಟ್ಟಿಯವರ ಅನುಭವದ ಮಾತು.

ಮಾರಾಟ ಮತ್ತು ಮಾರ್ಗದರ್ಶನ: ಪ್ರಗತಿಪರ ರೈತರಾದ ಬಸವರಾಜ ರಾಣಗಟ್ಟಿಯವರು ಡ್ರ್ಯಾಗನ್‌ ಹಣ್ಣುಗಳನ್ನು ಬೆಳೆಯುತ್ತಿರುವುದಷ್ಟೇ ಅಲ್ಲದೆ ಸಸಿಗಳ ಮಾರಾಟವನ್ನೂ ಮಾಡುತ್ತಾರೆ. ಒಂದು ಸಸಿಗೆ 50 ರು. ಬೆಲೆ ನಿಗದಿ ಪಡಿಸಿದ್ದಾರೆ. ಜೊತೆಗೆ, ರೈತರಿಗೆ ಡ್ರ್ಯಾಗನ್‌ ಫ್ರೂಟ್‌ ಕೃಷಿ ಮಾಡುವ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ, ಮಾರ್ಗದರ್ಶನವನ್ನೂ ಮಾಡುತ್ತಿದ್ದಾರೆ.

ಇರುಳಲಿ ಅರಳುವ ಹೂ…: ಡ್ರ್ಯಾಗನ್‌ ಫ್ರೂಟ್‌ ಹೂವು ಬ್ರಹ್ಮಕಮಲದಂತೆಯೇ ರಾತ್ರಿಯ ವೇಳೆ ಅರಳುತ್ತದೆ. ಸೂರ್ಯನ ಕಿರಣಕ್ಕೆ ಬಾಡಿ ಮುದುಡುವ ಹೂವು, ಚಂದ್ರನ ಬೆಳಕಿಗೆ ಮೊಗ ಅರಳಿ ಮಂದಹಾಸ ಬೀರುತ್ತದೆ.

ಚಿತ್ರ-ಲೇಖನ: ಪರಶುರಾಮ ಶಿವಶರಣ, ವಿಜಯಪುರ

ಟಾಪ್ ನ್ಯೂಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.