ಧರ್ಮಸ್ಥಳ-ಬೆಂಗಳೂರು ಓಡಾಟಕ್ಕೆ 6 ಹೆಚ್ಚುವರಿ ಸ್ಲೀಪರ್‌ ಕೋಚ್‌

ದಸರ ಸಂದರ್ಭ ಓಡಾಟ ನಿರೀಕ್ಷೆ; 1.50 ಕೋ.ರೂ. ವೆಚ್ಚದಲ್ಲಿ ಡಿಪ್ಪೊ ನವೀಕರಣ

Team Udayavani, Sep 7, 2019, 5:23 AM IST

k-2

ಬೆಳ್ತಂಗಡಿ: ನಾಡಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯ ಹೊರರಾಜ್ಯಗಳಿಂದಲೂ ಅಪಾರ ಸಂಖ್ಯೆ ಭಕ್ತರು ಭೇಟಿ ನೀಡುವುದರಿಂದ ಕೆಎಸ್‌ಆರ್‌ಟಿಸಿಗೆ ಅತೀ ಹೆಚ್ಚು ಆದಾಯ ತರುವ ಪ್ರವಾಸಿ ತಾಣವಾಗಿ ಕೈಹಿಡಿದಿದೆ.

ಇದೀಗ ಪ್ರಯಾಣಿಕರ ಅನುಕೂಲಕ್ಕೆಂದು ಧರ್ಮಸ್ಥಳ ಕೆಎಸ್‌ಟರ್‌ಟಿಸಿ ಘಟಕಕ್ಕೆ ಹೆಚ್ಚುವರಿ 6 ಸ್ಲೀಪರ್‌ ಕೋಚ್‌ ಬಸ್‌ಗಳು ಮಂಜೂರಾಗಿದ್ದು, ದಸರಾ ಸಂದರ್ಭ ಓಡಾಟ ನಡೆಸುವ ನಿರೀಕ್ಷೆಯಲ್ಲಿದೆ.

ರಾಜ್ಯ ಕೆಸ್‌ಆರ್‌ಟಿಸಿ ವಿಭಾಗಕ್ಕೆ ಅತ್ಯಾಧುನಿಕ ಸೌಲಭ್ಯವುಳ್ಳ ಒಟ್ಟು 12 ಸ್ಲೀಪರ್‌ ಕೋಚ್‌ ಬಸ್‌ಗಳು ಮಂಜೂರಾಗಿದ್ದು, ಈ ಪೈಕಿ 6 ಸ್ಲೀಪರ್‌ ಕೋಚ್‌ ಬಸ್‌ಗಳು ಧರ್ಮಸ್ಥಳ ಘಟಕಕ್ಕೆ ಸೇರ್ಪಡೆಗೊಳ್ಳುವ ಮೂಲಕ ಕರ್ನಾಟಕ ಸಾರಿಗೆ ಪ್ರಯಾಣಿಕರಿಗೆ ಮತ್ತಷ್ಟು ಸೇವೆ ವಿಸ್ತರಿಸಿದೆ.

ಪ್ರತಿನಿತ್ಯ 72 ಬಸ್‌ ಓಡಾಟ
ಸದ್ಯ ಧರ್ಮಸ್ಥಳ ಹಾಸನ ಮಾರ್ಗವಾಗಿ ಪ್ರತಿನಿತ್ಯ ಪ್ರತಿ 15 ನಿಮಿಷಕ್ಕೊಂದರಂತೆ ಬೆಳಿಗ್ಗೆ 4.30ರಿಂದ ರಾತ್ರಿ 11ರವರೆಗೆ 72 ಬಸ್‌ ಓಡಾಟ ನಡೆಸುತ್ತಿದೆ. 4 ನಾನ್‌ ಎಸಿ ಸ್ಲೀಪರ್‌, 5 ರಾಜಹಂಸ, 1 ಐರಾವತ ಕ್ಲಬ್‌ ಕ್ಲಾಸ್‌ ಸೇರಿದಂತೆ 64 ಕರ್ನಾಟಕ ಸುವರ್ಣ ಸಾರಿಗೆ ಟ್ರಿಪ್‌ಗ್ಳು ದಿನನಿತ್ಯ ಪ್ರಯಾಣಿಕರ ಅನುಕೂಲಕ್ಕೆ ಲಭ್ಯವಿದೆ. ವಾರಾಂತ್ಯ ರಜಾ ದಿನ ಹಾಗೂ ಶಿವರಾತ್ರಿ, ಲಕ್ಷ ದೀಪೋತ್ಸವ ಸೇರಿದಂತೆ ವಿಶೇಷ ಹಬ್ಬಗಳಂದು ಹೆಚ್ಚುವರಿ ಬಸ್‌ ನಿಯೋಜಿಸಲಾಗುತ್ತಿದೆ. ಇದರ ಜತೆಗೆ ಹೆಚ್ಚುವರಿ 6 ಸ್ಲೀಪರ್‌ ಬಸ್‌ ಸೇವೆ ಲಭ್ಯವಾಗಿರುವುದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್‌ ಶಿವರಾಂ ನಾಯ್ಕ ತಿಳಿಸಿದ್ದಾರೆ.

1.50 ಕೊ.ರೂ.ವೆಚ್ಚದಲ್ಲಿ ಡಿಪ್ಪೊ ನವೀಕರಣ
ಧರ್ಮಸ್ಥಳ, ಮಂಗಳೂರು, ಕುಂದಾಪುರ ಡಿಪ್ಪೊಗಳು 1984, 85ರಲ್ಲಿ ನಿರ್ಮಿಸಿದ್ದರಿಂದ 35ವರ್ಷಕ್ಕೂ ಹಳೆಯದ್ದಾಗಿವೆ. ಧರ್ಮಸ್ಥಳ ಡಿಪ್ಪೊ ಕಾರ್ಯಕ್ಷಮತೆ ಅಧಿಕವಾಗಿರುವುದರಿಂದ ಮೊದಲ ಹಂತದಲ್ಲಿ 1.50 ಕೋ.ರೂ. ವೆಚ್ಚದಲ್ಲಿ ಡಿಪ್ಪೋ ನವೀಕರಣಕ್ಕೆ ಇ-ಟೆಂಡರ್‌ ಕರೆಯಲಾಗಿದೆ. ಈ ಮೂಲಕ ಪೆಟ್ರೋಲ್‌ ಬಂಕ್‌, ವಿದ್ಯುತ್‌ ಸಂಪರ್ಕ, ಬಸ್‌ ಗರಾಜ್‌ ಸ್ಥಳ ವಿಸ್ತರಣೆ ನಡೆಯಲಿದ್ದು, ಆಧುನಿಕ ಟಚ್‌ ನೀಡುವ ಉದ್ದೇಶ ಹೊಂದಲಾಗಿದೆ ಎಂದು ತಾಂತ್ರಿಕ ಅಧಿಕಾರಿ ತಿಳಿಸಿದ್ದಾರೆ.

1.39 ಕೋ.ರೂ.ವೆಚ್ಚದಲ್ಲಿ ನೌಕರರಿಗೆ ವಸತಿಗೃಹ
ಧರ್ಮಸ್ಥಳ ಕರ್ನಾಟಕ ಸಾರಿಗೆ ನೌಕರರಿಗಾಗಿ 12 ಕೊಠಡಿ ಹೊಂದಿರುವ 1.35 ಕೋ.ರೂ.ನ ನೂತನ ವಸತಿ ಗೃಹ ಪ್ರಸಕ್ತ ಡಿಪ್ಪೋ ಮುಂಭಾಗ ನಿರ್ಮಾಣವಾಗುತ್ತಿದೆ. ಜನವರಿಯಲ್ಲಿ ಕಾಮಗಾರಿ ಆರಂಭಗೊಂಡಿದ್ದು, ಶೀಘ್ರದಲ್ಲಿ ನೌಕರರ ಬಳಕೆಗೆ ಲಭ್ಯವಾಗಲಿದೆ. ಸಮೀಪದಲ್ಲೆ ಇರುವ 32 ಕೊಠಡಿಯುಳ್ಳ ಹಳೇ ವಸತಿಗೃಹ ನವೀಕರಣಕ್ಕೂ 81 ಲಕ್ಷ ರೂ. ಮಂಜೂರಾಗಿದ್ದು, ನೀರಿನ ಸಂಪರ್ಕ, ರಸ್ತೆ, ಡ್ರೈನೇಜ್‌, ವಿದ್ಯುತ್‌ ಸಲಕರಣೆ ಜೋಡೆಣೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಿದೆ.

ರಾಜ್ಯ ಹಾಗೂ ಹೊರರಾಜ್ಯದ ಯಾತ್ರಾರ್ಥಿಗಳು ಹಾಗೂ ಪ್ರಯಾಣಿಕರ ಬೇಡಿಕೆಗಣುಗುಣವಾಗಿ ಧರ್ಮಸ್ಥಳ ಘಟಕಕ್ಕೆ 6ಹೊಸ ಸ್ಲಿàಪರ್‌ ಕೋಚ್‌ ಬಸ್‌ಗಳು ಮಂಜೂರಾಗಿವೆ. ದಸರ ಮುನ್ನವೇ ಬಸ್‌ ಓಡಾಟ ನಡೆಸುವ ನಿರೀಕ್ಷೆಯಿದೆ.
ನಾಗೇಂದ್ರ, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ

ಧರ್ಮಸ್ಥಳ ಘಟಕದಿಂದ ಅತೀ ಹೆಚ್ಚು ಬಸ್‌ ಓಡಾಟ ನಡೆಸುತ್ತಿರುವುದರಿಂದ ಸುಧಾರಿತ ತಂತ್ರಜ್ಞಾನವುಳ್ಳ ಡಿಪ್ಪೊಗಳು ಅವಶ್ಯವಾಗಿವೆ. ನೂತನ ವಸತಿ ಗೃಹ ನಿರ್ಮಾಣ ಹಂತದಲ್ಲಿದ್ದು, ಡಿಪ್ಪೊ ಹಾಗೂ ಹಳೇ ವಸತಿಗೃಹ ನವೀಕರಣ ಟೆಂಡರ್‌ ಕರೆಯಲಾಗಿದ್ದು, ಒಪ್ಪಂದ ಪತ್ರ ಲಭಿಸಿದಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಶರತ್‌ ಕುಮಾರ್‌ ಎನ್‌., ವಿಭಾಗ ಇಂಜಿನಿಯರ್‌

ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

Sullia: ವಿದ್ಯುತ್‌ ಲೈನ್‌ ದುರಸ್ತಿ ವೇಳೆ ಲೈನ್ ಚಾರ್ಜ್‌ ಮಾಡಲು ಯತ್ನ ತಪ್ಪಿದ ದುರಂತ

Sullia: ವಿದ್ಯುತ್‌ ಲೈನ್‌ ದುರಸ್ತಿ ವೇಳೆ ಲೈನ್ ಚಾರ್ಜ್‌ ಮಾಡಲು ಯತ್ನ ತಪ್ಪಿದ ದುರಂತ

31

Sullia: ಅಪಘಾತ ಎಸಗಿ ಪರಾರಿಯಾಗಲು ಯತ್ನಿಸಿದ ಪಿಕಪ್‌ಗೆ ತಡೆ

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

6

Puttur: ಕತ್ತಿಯಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.