ನವರಾತ್ರಿಗೆ ಹೊಸತು ಮನೆ ತುಂಬಿಸುವ ಕಾತರ


Team Udayavani, Sep 29, 2019, 5:15 AM IST

t-19

ನಾಡಹಬ್ಬ ದಸರಾ ಆಚರಣೆಗೆ ಈಗಾಗಲೇ ಸಿದ್ಧತೆ ಜೋರಾಗಿ ನಡೆದಿದೆ. ಹಬ್ಬದ ನೆನಪು ಮತ್ತು ಶುಭ ಘಳಿಗೆ ಎಂಬ ನಂಬಿಕೆಯಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯ. ಏತನ್ಮಧ್ಯೆ ಗ್ರಾಹಕರು ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ಸಿಗುವ ರಿಯಾಯಿತಿ ದರವನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌, ಕಾರು, ಬೈಕ್‌ ಖರೀದಿಗೆ ಮುಂದಾಗಿರುವುದು ಮಂಗಳೂರಿನಲ್ಲಿ ಕಂಡು ಬಂದಿದೆ. ಹಬ್ಬದ ಪ್ರಯುಕ್ತ ವ್ಯಾಪಾರ, ಬೆಲೆ ಹಾಗೂ ಬೇಡಿಕೆ ಕುರಿತು ಮಾಹಿತಿ ಇಲ್ಲಿದೆ.

ನವರಾತ್ರಿ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಹಬ್ಬ. ರವಿವಾರದಿಂದಲೇ ನವರಾತ್ರಿ ರಂಗು ಕಳೆಗಟ್ಟಲಿದ್ದು, ದಸರಾ ವೈಭವಕ್ಕೆ ಇಡೀ ನಾಡು ಸಾಕ್ಷಿಯಾಗಲಿದೆ. ಮಂಗಳೂರಿನಲ್ಲಿಯೂ ಮಂಗಳೂರು ದಸರಾವನ್ನು ಕಣ್ತುಂಬಿಕೊಳ್ಳಲು ಜನ ಉತ್ಸುಕರಾಗಿದ್ದಾರೆ. ಈ ನಡುವೆ ನವರಾತ್ರಿಗೆಂದೇ ಖರೀದಿ ಭರಾಟೆಯೂ ಜೋರಾಗಿದೆ. ಈ ನವರಾತ್ರಿಗೆ ಹೊಸತನ್ನು ಮನೆ ತುಂಬಿಸುವ ಆಲೋಚನೆಯಲ್ಲಿ ಜನರಿದ್ದಾರೆ.

ಪ್ರತಿ ಹಬ್ಬಕ್ಕೂ ಹೊಸತನ್ನು ಖರೀದಿಸಿದರೆ ಶುಭಕಾರಕ ಎಂಬ ನಂಬಿಕೆ ನಮ್ಮಲ್ಲಿದೆ. ದಸರಾ ಸಂದರ್ಭದ ಹತ್ತು ದಿನಗಳಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿರುತ್ತದೆ. ಅದಕ್ಕಾಗಿ ಕೆಲವು ಶೋರೂಂಗಳಲ್ಲಿ ಮುಂಗಡ ಬುಕ್ಕಿಂಗ್‌ ಕೂಡ ನಡೆಯುತ್ತಿವೆ. ಈ ಹಬ್ಬವನ್ನು ರಂಗು ರಂಗಾಗಿಸಿ, ಖುಷಿಯಿಂದ ಕಳೆಯಬೇಕೆಂಬುದು ಪ್ರತಿಯೊಬ್ಬರ ಆಲೋಚನೆಯಿದೆ. ಕಾರು, ಬೈಕ್‌, ಮೊಬೈಲ್‌ ಫೋನ್‌, ಹೊಸ ಬಟ್ಟೆ, ಆಭರಣಗಳ ಶೋರೂಂ, ಅಂಗಡಿಗಳತ್ತ ಜನರ ಚಿತ್ತ ಹರಿದಿದೆ.

ನವರಾತ್ರಿಗೆ ಹೊಸ ಮೊಬೈಲ್‌
ಮಂಗಳೂರಿನ ಮಾರುಕಟ್ಟೆಗಳಲ್ಲಿ ಕಾರು, ಬೈಕ್‌ ಜತೆಗೆ ಮೊಬೈಲ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜನ ವಿಚಾರಿಸುತ್ತಿರುವುದು ಹೆಚ್ಚುತ್ತಿದೆ. ಹೊಸ ಫೀಚರ್ಗಳನ್ನು ಒಳಗೊಂಡ ಮೊಬೈಲ್‌ ಫೋನ್‌ಗಳಿಗಾಗಿ ಜನರು ಹುಡುಕಾಡುತ್ತಿದ್ದಾರೆ. ಮಂಗಳೂರಿನ ಪ್ಲಾನೆಟ್‌ ಜಿ ಸಂಸ್ಥೆಯ ಸಿಬಂದಿ ಹೇಳುವ ಪ್ರಕಾರ, ವಿವೋ ವಿ17 ಪ್ರೊ ಮೊಬೈಲ್‌ ಫೋನ್‌ ಬಗ್ಗೆ ಯುವಕರು ಹೆಚ್ಚಾಗಿ ವಿಚಾರಿಸುತ್ತಾರಂತೆ. ಫ್ರಂಟ್‌ ಡ್ಯುವಲ್‌ ಕೆಮ ರಾ ಹೊಂದಿರುವ ಈ ಮೊಬೈಲ್‌ನಲ್ಲಿ ಮುಂಭಾಗದಲ್ಲಿ 32, 8 ಎಂಪಿ ಮತ್ತು ಹಿಂಭಾಗದಲ್ಲಿ 48, 13 ಮೆಗಾ ಫಿಕ್ಸೆಲ್‌ ಕೆಮ ರಾಗಳಿವೆ. ಉತ್ತಮ ಪ್ರೋಸೆಸರ್‌, ರ್ಯಾಮ್‌, ಸ್ಟೋರೇಜ್‌ ಸಾಮರ್ಥ್ಯ, ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮೊಬೈಲ್‌ ಖರೀದಿಗೆ ಈಗಾಗಲೇ ಜನ ಮುಗಿಬೀಳುತ್ತಿದ್ದಾರೆ.

ಹರ್ಷ ಮಳಿಗೆಯ ಸಿಬಂದಿ ಹೇಳುವ ಪ್ರಕಾರ ಈ ಸ್ಮಾರ್ಟ್‌ಫೋನ್‌ನೊಂದಿಗೆ ಐಫೋನ್‌ 11 ಕೂಡ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಅದರ ಬಗ್ಗೆಯೂ ಯುವಕರ ಕುತೂಹಲ ಹೆಚ್ಚುತ್ತಿದೆ ಎನ್ನುತ್ತಾರೆ.

ಗೂಡುದೀಪ, ಲೈಟಿಂಗ್ಸ್‌ಗೂ ಬೇಡಿಕೆ
ಇವೆಲ್ಲ ಕಾರು, ಬೈಕು, ಮೊಬೈಲ್‌ಗ‌ಳ ಮಾತಾದರೆ, ನವರಾತ್ರಿ, ದೀಪಾವಳಿಗೆ ಮನೆಯ ಸುತ್ತಮುತ್ತ ಲೈಟಿಂಗ್ಸ್‌ ಅಳವಡಿಕೆಗೂ ಪೇಟೆ ಮಂದಿ ಉತ್ಸುಕರಾಗಿದ್ದು, ಈಗಾಗಲೇ ವೈವಿಧ್ಯ ಲೈಟಿಂಗ್ಸ್‌ಗಳನ್ನು ಖರೀದಿಸುತ್ತಿದ್ದಾರೆ. ಈ ನಡುವೆ ವಿವಿಧ ಅಂಗಡಿಗಳ ಮುಂಭಾಗದಲ್ಲಿ ವೈವಿಧ್ಯ ಗೂಡುದೀಪಗಳ ಹೊಸ ಲೋಕವೇ ತೆರೆದುಕೊಂಡು ನವರಾತ್ರಿಯ ರಂಗನ್ನು ಹೆಚ್ಚಿಸಿದೆ. ವಿವಿಧ ಶೈಲಿಯಲ್ಲಿರುವ ಈ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಕಾರುಗಳಿಗೆ ಭರ್ಜರಿ ಡಿಸ್ಕೌಂಟ್‌
ದಸರಾ, ದೀಪಾವಳಿಗೆಂದೇ ಮಾರುತಿ, ಟಾಟಾ, ಹುಂಡೈ ಕಾರು ಸಂಸ್ಥೆಗಳಿಂದ ಭಾರೀ ಆಫರ್‌ಗಳನ್ನು ಪ್ರಕಟಿಸಲಾಗಿದ್ದು, 1.50 ಲಕ್ಷ ರೂ. ಗಳವರೆಗೂ ರಿಯಾಯಿತಿಯನ್ನು ಕಲ್ಪಿಸಲಾಗುತ್ತಿದೆ. ಆಲ್ಟೋ 800, ಆಲ್ಟೋ ಕೆ10, ಸ್ವಿಪ್ಟ್ ಡೀಸೆಲ್‌, ಸೆಲೆರಿಯೋ ಮುಂತಾದ ಕಾರುಗಳ ಮೇಲೆ ದರ ತಗ್ಗಿಸಲಾಗಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರು ವಿಚಾರಿ ಸುತ್ತಿದ್ದು, ಕೆಲವರು ತಮ್ಮಿಷ್ಟದ ಕಾರುಗಳನ್ನು ಮುಂಗಡ ಬುಕ್ಕಿಂಗ್‌ ಮಾಡಿ ದ್ದಾರೆ ಎನ್ನುತ್ತಾರೆ ಮಂಗಳೂರಿನ ಮಾರುತಿ ಸುಝುಕಿ ಸಿಬಂದಿ.

ರಿಯಾಯಿತಿಗಳ ಸುರಿಮಳೆ
ಎಲೆಕ್ಟ್ರಾನಿಕ್‌ ಅಂಗಡಿಗಳು, ಬಟ್ಟೆ ಅಂಗಡಿಗಳು, ಕಾರು, ಬೈಕ್‌, ಸ್ಮಾರ್ಟ್‌ ಫೋನ್‌ ಶೋರೂಂಗಳು ವಿವಿಧ ರಿಯಾಯಿತಿ ಮಾರಾಟಗಳನ್ನು ದಸರಾ ಹಬ್ಬಕ್ಕೆಂದೇ ಪ್ರಕಟಿಸಿವೆ. ಶೇ.5, ಶೇ. 10ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ಗಳು, ಎಲೆಕ್ಟ್ರಾನಿಕ್‌ ಐಟಂಗಳ ಮೇಲೆ ಶೇ.5ರಿಂದ ಶೇ.25ರವರೆಗೆ ರಿಯಾಯಿತಿ, ಬಟ್ಟೆಗಳ ಮೇಲೆ ಶೇ. 50ರ ವರೆಗೂ ರಿಯಾಯಿತಿಗಳನ್ನು ಈಗಾಗಲೇ ಪ್ರಕಟಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಚಿನ್ನಾಭರಣದ ಬೆಲೆ ಸದ್ಯಕ್ಕೆ ಕೊಂಚ ಇಳಿಕೆಯಾಗಿದ್ದು, ಪ್ರತಿ ಗ್ರಾಂ ಮೇಲೆ 100 ರೂ. ಗಳನ್ನು ಇಳಿಸುವ ಮೂಲಕ ಹೆಚ್ಚಾದ ಬೆಲೆಯನ್ನು ತಗ್ಗಿಸಿ ಗ್ರಾಹಕರನ್ನು ಸೆಳೆಯಲು ಚಿನ್ನದಂಗಡಿಗಳು ಮುಂದಾಗಿವೆ. ಎಲ್ಲವೂ ನವರಾತ್ರಿಯ ನವರಂಗನ್ನು ಜನಸಾಮಾನ್ಯರೂ ಅನುಭವಿಸಬೇಕೆಂಬ ಕಾರಣದಿಂದ ಆಗಿದೆ.

-  ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

13-doctor

Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

Basavakalyana; ಬ್ಯಾಂಕ್ ಗೆ ಜಮೆ ಮಾಡಲು ತಂದಿದ್ದ 1.37 ಲಕ್ಷ ರೂ‌ ಎಗರಿಸಿದ ಖದೀಮ

12-

Heat Weather: ಹಬೆಯಾಡುತ್ತಿರುವ ವಸುಂಧರೆ

11-candle

UV Fusion: ಆಯಸ್ಸು ಅಳಿಯುವ ಮುನ್ನ

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Davanagere; ಭಾರೀ ಮಳೆಗೆ ನೆಲಕಚ್ಚಿದ ಭತ್ತದ ಬೆಳೆ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

Breach Of Privacy….; ಐಪಿಎಲ್ ಪ್ರಸಾರಕರ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ

15-rain

Rain: ಕಳಸ ತಾಲೂಕಿನಾದ್ಯಂತ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸಂಪರ್ಕ ಕಡಿತ

ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

Hubli; ರಾಜ್ಯ ಯಾವ ದಿಕ್ಕಿನತ್ತ ಸಾಗುತ್ತಿದೆ…: ಪ್ರದೀಪ ಶೆಟ್ಟರ

14-panaji

Panaji: ಅಪಾಯಕಾರಿ ಮರ ಕಡಿಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.