ಚಮತ್ಕಾರಿ ಚಪ್ಪಟೆ ಹುಳು!


Team Udayavani, Oct 3, 2019, 9:56 AM IST

x-54

ಮನೆಯ ಕುಂಡದ ಕೆಳಗೆ ಆಗಾಗ ಈ ಹುಳುವನ್ನು ನೀವು ನೋಡಿರುತ್ತೀರಿ. ಪ್ರಪಂಚದಾದ್ಯಂತ ಹರಡಿರುವ ಸಂಬಂಧಿಗಳನ್ನು ಹೊಂದಿರುವ ಎಕೈಕ ಹುಳು ಇದು. ಹೆಸರು ಚಪ್ಪಟೆ ಹುಳು. ಹಗಲೆಲ್ಲಾ ನಿದ್ರಿಸುವ ಇಲ್ಲವೆ ತಟಸ್ಥವಾಗಿರುವ ಈ ಹುಳು ರಾತ್ರಿ ಕ್ರಿಯಾಶೀಲವಾಗುತ್ತದೆ.

ಮನೆಯ ಅಂಗಳದಲ್ಲಿ ಜೋಡಿಸಿರುವ ಹೂಕುಂಡಗಳ ಕೆಳಗಿನ ತೇವಾಂಶಯುಕ್ತ ಜಾಗದಲ್ಲಿ ಚಪ್ಪಟೆ ದೇಹ ಮತ್ತು ಸುತ್ತಿಗೆಯಾಕಾರದ ತಲೆ ಇರುವ ಹುಳುವೊಂದು ಆಗಾಗ ನೀವು ಗಮನಿಸಿದ್ದೀರಾ? ಥಟ್ಟನೆ ನೋಡಿದರೆ ನಾಗರಹಾವಿನ ಮರಿ ಇರಬಹುದು ಎಂಬ ಭಾವನೆ ಬರುತ್ತದಾದರೂ ಲೋಳೆಯುಕ್ತ ಮೈ ಮತ್ತು ಎರೆಹುಳುವಿನಂತೆ ನಿಧಾನಗತಿಯ ಚಲನೆ ಹೊಂದಿರುವುದರಿಂದ ಹಾವಿನ ಜಾತಿಗೆ ಸೇರಿದ್ದಲ್ಲ ಎಂಬುದು ದೃಢವಾಗುತ್ತದೆ. ಇದನ್ನು ಬೈಪೇಲಿಯಮ್‌, ಪ್ಲನೇರಿಯನ್‌ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಚಪ್ಪಟೆ ಹುಳು ಇಲ್ಲವೇ ಸುತ್ತಿಗೆ ಹುಳು ಎಂಬಿತ್ಯಾದಿ ಹೆಸರುಗಳಿವೆ.

ಪ್ರಪಂಚವ್ಯಾಪಿ ಸುತ್ತಿಗೆ ಹುಳು
ಇದು ಪ್ರಪಂಚದ ಎಲ್ಲ ವಾಯುಗುಣಕ್ಕೆ ಹೊಂದಿಕೊಳ್ಳಬಲ್ಲ ಗುಣ ಹೊಂದಿರುವುದರಿಂದ ವಿಶ್ವದ ಮೂಲೆ ಮೂಲೆಯಲ್ಲೂ ಕಾಣಸಿಗುತ್ತದೆ. ಇಡೀ ಫ್ರಾನ್ಸ್‌ ದೇಶದಾದ್ಯಂತ ಇರುವ ಇವು, ಜೀವಶಾಸ್ತ್ರಜ್ಞರಿಗೇ ಅಚ್ಚರಿಯುಂಟುಮಾಡಿವೆ. ಹೊಸ ಜಾಗದಲ್ಲಿ ಯಾವ ಶತ್ರುವನ್ನೂ ಹೊಂದಿರದ ಇವು ಬೇಗನೆ ಅಲ್ಲಿಗೆ ಹೊಂದಿಕೊಂಡು ಅಸಂಖ್ಯ ಸಂಖ್ಯೆಯಲ್ಲಿ ಜಮೆಯಾಗುತ್ತವೆ. ಅಂಟಾರ್ಕ್‌ಟಿಕಾ ಪ್ರದೇಶದಲ್ಲಿ ಮಾತ್ರ ಇವು ಕಂಡು ಬಂದಿಲ್ಲ. ಸುಮಾರು 80ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಕಂದು, ಹಳದಿ, ಹಸಿರು ಮತ್ತು ಕಪ್ಪು ಬಣ್ಣಗಳಲ್ಲಿ ಇದು ಕಂಡು ಬರುತ್ತದೆ. ನಿಮ್ಮ ಮನೆಯಂಗಳದ ಪಾಟ್‌ಗಳ ಕೆಳಗೆ ಇದು ಸಿಕ್ಕರೆ ನೋಡಿ ಆನಂದಿಸಿ. ಹಾನಿ ಮಾಡಬೇಡಿ.

ಹೋದಲ್ಲೆಲ್ಲಾ ಗುರುತು
ಸುತ್ತಿಗೆಯಾಕಾರದ ತಲೆಯಲ್ಲಿ ಸೂಕ್ಷ್ಮಗಾತ್ರದ ತಂತುಗಳಿದ್ದು ತಲೆಯ ಮಂಭಾಗಕ್ಕೂ ಚಾಚಿಕೊಂಡ ಸ್ಪರ್ಶ ಮತ್ತು ರಾಸಾಯನಿಕ ವಸ್ತುವಿನ ಸಂಪರ್ಕವನ್ನು ತೀಕ್ಷ್ಣವಾಗಿ ಗ್ರಹಿಸುತ್ತವೆ. ವಿಕಾಸದ ಹಂತದಲ್ಲಿ ತೀರಾ ಕೆಳಮಟ್ಟದಲ್ಲಿರುವ ಇವುಗಳಿಗೆ ಯಾವುದೇ ರಕ್ತ ಪರಿಚಲನೆ, ಉಸಿರಾಟ ಮತ್ತು ಅಸ್ಥಿಪಂಜರ ವ್ಯವಸ್ಥೆಯಾಗಲೀ ಇರುವುದಿಲ್ಲ. ಇಡೀ ದೇಹ ಲೋಳೆ ಪದಾರ್ಥವನ್ನು ಹೊಂದಿರುವುದರಿಂದ ಹುಳು ನೆಲದ ಮೇಲೆಯೇ ತೆವಳುತ್ತಾ ಮುಂದುವರಿದಂತೆಲ್ಲಾ ಬೆಳ್ಳಿ ಬಿಳಿಯ ಲೋಳೆಯ ಅಚ್ಚನ್ನು ಬಿಡುತ್ತದೆ.

ರೈತನ ಮಿತ್ರರೇ ಇವುಗಳಿಗೆ ಆಹಾರ
ರೈತನ ಮಿತ್ರ ಎಂದೇ ಕರೆಯಲ್ಪಡುವ ಎರೆಹುಳುಗಳೇ ಇದರ ಆಹಾರ. ಎರೆಹುಳು ಕಂಡೊಡನೆ ಆಕ್ರಮಣ ಮಾಡಿ, ಮೈಯ ಅಂಟಿನಿಂದ ಬಂಧಿಸಿ ಅವನ್ನು ನುಂಗುತ್ತವೆ. ವಿನೇಗರ್‌ ಮತ್ತು ಉಪ್ಪು ಇದರ ಶತ್ರು. ಈ ಜೀವಿ ಒಂದು ವರ್ಷದವರೆಗೂ ಆಹಾರ ಇಲ್ಲದೆ ಜೀವಿಸಬಲ್ಲದು. ಉತ್ತರ ಅಮೇರಿಕ, ಯುರೋಪ್‌ಗ್ಳ ಜೀವಿ ಆವಾಸಗಳಲ್ಲಿ ಇದು ದೊಂಬಿ ಎಂಬಿಸಿದೆ. ಅಲ್ಲಿನ ಮೂಲ ನಿವಾಸಿಗಳಾದ ಗೊಣ್ಣೆ ಹುಳು, ಶಂಖದ ಹುಳು ಮತ್ತು ಎರೆಹುಳುಗಳ ವಂಶವನ್ನೇ ನಿರ್ನಾಮ ಮಾಡಿದ ಅಪಕೀರ್ತಿ ಇದರದ್ದು. ನಮ್ಮ ಪಶ್ಚಿಮಘಟ್ಟ, ಮಲೆನಾಡು ಪ್ರದೇಶ, ಉತ್ತರ ಭಾರತದ ಪರ್ವತಶ್ರೇಣಿ ಮತ್ತು ಪಶ್ಚಿಮ ಭಾರತದ ಬಹುತೇಕ ಭಾಗಗಳಲ್ಲಿ ಇವನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು.

-ಗುರುರಾಜ್‌ ಎಸ್‌. ದಾವಣಗೆರೆ

ಟಾಪ್ ನ್ಯೂಸ್

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.