ಶಿಲೆಯಲ್ಲ ಈ ಗುಡಿಯು…


Team Udayavani, Oct 19, 2019, 4:06 AM IST

shileyalla

ಹೊಸನಗರದ ಉಮಾ ಮಹೇಶ್ವರ ದೇಗುಲದ ಶಿಲ್ಪಲೋಕದಲ್ಲಿ ಜೀವಂತರೂಪಗಳೇ ಇವೆಯೇನೋ! ಕೆತ್ತನೆಗಳಲ್ಲಿಯೇ ಕಥೆ ಹೇಳುತ್ತಾ, ಮೋಡಿಗೊಳಿಸುತ್ತವೆ…

ಕೊಡಚಾದ್ರಿಯ ಚಾಚಿಕೊಂಡ ಹಸಿರು. ನಡುವೆ ಪುಟ್ಟ ದೇಗುಲ. ಅದರ ಕಂಬಗಳಲ್ಲಿ, ಗೋಡೆಗಳಲ್ಲಿ ಶಿಲ್ಪಗಳದ್ದೇ ಕಥಾವೈಭವ. ಗಣಪತಿ, ಪಾರ್ವತಿ, ಸುಂದರ ದ್ವಾರಪಾಲಕರು, ಕಲ್ಲಿನ ಮೇಲೆ ಚಿತ್ರಿತಗೊಂಡು, ಏನನ್ನೋ ಹೇಳುತ್ತಿದ್ದಾರೆ. ಹೊಸನಗರದ ಉಮಾ ಮಹೇಶ್ವರಿ ದೇಗುಲದ ಆ ಶಿಲ್ಪಲೋಕದಲ್ಲಿ ಜೀವಂತರೂಪಗಳೇ ಇವೆಯೇನೋ!

ವಿಜಯನಗರ- ಕೆಳದಿ ವಾಸ್ತುಶಿಲ್ಪದ ಕೊಡುಗೆ ಈ ದೇಗುಲ. 3 ಆಡಿ ಎತ್ತರದ ಜಗತಿಯ ಮೇಲೆ 18 ಆಡಿ ಉದ್ದದಷ್ಟು ವಿಸ್ತಾರ. ಗರ್ಭಗುಡಿ, ಅಂತರಾಳ ಹಾಗೂ ಮುಖಮಂಟಪದ ಚೆಲುವು ಹೃದಯಸ್ಪರ್ಶಿಯಾಗಿದೆ. ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದ್ದು, ದ್ವಾರದಲ್ಲಿ ಗಣಪತಿ ತನ್ನ ರೂಪವೈಭವದಿಂದಲೇ ಸೆಳೆಯುತ್ತಾನೆ. ಎಡಭಾಗದಲ್ಲಿ ಪಾರ್ವತಿಯ ಶಿಲಾಕೃತಿ. ವಿತಾನದಲ್ಲಿ ಕಮಲದ ಕೆತ್ತನೆ ಇದೆ. ಪ್ರವೇಶ ದ್ವಾರದಲ್ಲಿ ಮೂರೂವರೆ ಅಡಿ ಎತ್ತರದ ಸುಂದರ ಶೈವ ದ್ವಾರಪಾಲಕರು ರಾಜಭಕ್ತಿ ಮೆರೆಯುತ್ತಿರುವಂತೆ ತೋರುತ್ತಾರೆ.

ದೇವಾಲಯದ ಸೌಂದರ್ಯ ಅಡಗಿರುವುದೇ ಮುಖಮಂಟಪ ಹಾಗೂ ಹೊರಭಿತ್ತಿಯಲ್ಲಿನ ಕೆತ್ತನೆಗಳಲ್ಲಿ. ಪ್ರವೇಶ ದ್ವಾರದ ಎರಡೂ ಬದಿಯ ಮೂಲೆಯಲ್ಲಿ, ವಿಜಯನಗರ ಶೈಲಿಯ ಹಿಂಗಾಲಿನ ಮೇಲೆ ನಿಂತಿರುವ ಸಿಂಹದ ಕೆತ್ತನೆ ಇದ್ದರೆ, ಇದಕ್ಕೆ ಹೊಂದಿಕೊಂಡಂತೆ ಇರುವ ಪ್ರತ್ಯೇಕ ಎರಡು ಕಂಬಗಳ ನಾಲ್ಕು ದಿಕ್ಕಿನಲ್ಲಿ ಸಿಂಹದ ಕೆತ್ತನೆ, ಚೆಲುವು ತುಂಬಿಕೊಂಡಿದೆ. ಮುಖಮಂಟಪದಲ್ಲಿ ಭುವನೇಶ್ವರಿ, ಭವ್ಯರೂಪಿ. ಅಷ್ಟ ದಿಕ್ಬಾಲಕರ ಉಬ್ಬು ಶಿಲ್ಪದ ಕೆತ್ತನೆಗೆ, ಕಣ್ಮನ ಸೋಲದೇ ಇರದು. ಕೆಳದಿ ಅರಸರ ಕಾಲದ ವಾಸ್ತುಶೈಲಿಗೆ ಇವೆಲ್ಲ ಸಾಕ್ಷಿಯಂತಿವೆ.

ದೇಗುಲದ ಸುತ್ತಲಿನ 9 ಕಂಬಗಳಲ್ಲಿ, ಪ್ರತಿ ಕಂಬದ ಮೇಲೂ ಹಿಂಗಾಲಿನ ಮೇಲೆ ನಿಂತ ಭಂಗಿಯ ಸುಂದರ ಸಿಂಹದ ಕೆತ್ತನೆಗಳಿವೆ. ವಿಷ್ಣುವಿನ ದಶಾವತಾರದ ಬೃಹತ್‌ ಕೆತ್ತನೆಗಳ ವೈಭವವಂತೂ ಅಪಾರ ಚೆಲುವಿನಿಂದ ಕೂಡಿದೆ. ಇಲ್ಲಿನ ವರಾಹ ಮೂರ್ತಿಯ ಪ್ರಭಾವಳಿ ಕಲಾತ್ಮಕವಾಗಿದ್ದು, ಮತ್ಸಾéವತಾರದ ಮೇಲೆ ಸುಂದರ ತೋರಣವನ್ನು ಗುರುತಿಸಬಹುದು. ಶಿವಲಿಂಗದ ರಚನೆಯೂ ಇಲ್ಲಿದ್ದು, ಪರಶುರಾಮನ ಪಕ್ಕದಲ್ಲಿ ನಾಟ್ಯ ಭಂಗಿಯಲ್ಲಿರುವ ಸುಂದರ ಸ್ತ್ರೀ ನಿಜಕ್ಕೂ ಕಲಾಸುಂದರಿ.

ಶಿಲ್ಪ ರಚನೆಯಿಂದಲೇ ಸೆಳೆಯುವ, ಈ ದೇಗುಲ ನಿರ್ಮಾಣದ ಕಾಲ ಯಾರಿಗೂ ತಿಳಿದಿಲ್ಲ. ಆದರೂ, ಇದರ ವಾಸ್ತುಶಿಲ್ಪದ ಶೈಲಿ, 15 ಅಥವಾ 16ನೇ ಶತಮಾನದ ಕಾಲಘಟ್ಟಕ್ಕೆ ಹೋಲಿಕೆಯಾಗುವಂತಿವೆ.

ದರುಶನಕೆ ದಾರಿ…: ಹೊಸನಗರದಿಂದ ಕುಂದಾಪುರ ರಸ್ತೆಯಲ್ಲಿ ಸಾಗುವಾಗ, 2 ಕಿ.ಮೀ. ದೂರದಲ್ಲಿ ಬಲಕ್ಕೆ ತಿರುಗಿದರೆ ಸಿಗುವುದೇ “ಸುತ್ತ’ ಎಂಬ ಗ್ರಾಮ. ಈ ದೇಗುಲವಿರುವುದು ಇಲ್ಲಿಯೇ. ಸಮೀಪದಲ್ಲಿಯೇ ಕಾರಣಗಿರಿ ಇದ್ದು, ಸಿದ್ಧಿ ವಿನಾಯಕನನ್ನೂ ದರ್ಶಿಸಬಹುದು.

* ಶ್ರೀನಿವಾಸ ಮೂರ್ತಿ ಎನ್‌.ಎಸ್‌.

ಟಾಪ್ ನ್ಯೂಸ್

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!

LS Polls: ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರಾ ಪ್ರಿಯಾಂಕಾ ಗಾಂಧಿ…? ವರದಿ ಹೇಳೋದೇನು

Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Sandalwood: ಧೀರೇನ್‌ ರೀ ಇಂಟ್ರೊಡಕ್ಷನ್‌

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.