ಬಾಗಿಲು ತೆರೆದ “ಹಾಸನಾಂಬೆ’


Team Udayavani, Oct 26, 2019, 4:06 AM IST

baagilu

ಪುರಾಣ ಪ್ರಸಿದ್ಧ ಶಕ್ತಿ ದೇವತೆ, ಹಾಸನದ ಹಾಸನಾಂಬೆಯ ದರ್ಶನ ಸಿಗುವುದು ವರ್ಷಕ್ಕೊಮ್ಮೆ ಮಾತ್ರ. ಅಶ್ವಯುಜ ಮಾಸದ ಪೌರ್ಣಮೀ ನಂತರ ಬರುವ ಮೊದಲ ಗುರುವಾರ ಹಾಸನಾಂಬ ದೇಗುಲದ ಬಾಗಿಲು ತೆರೆದರೆ, ಬಲಿಪಾಡ್ಯಮಿಯ ಅಂದರೆ, ದೀಪಾವಳಿ ಹಬ್ಬದ ಮರುದಿನ ಬಾಗಿಲು ಮುಚ್ಚುವುದು ಸಂಪ್ರದಾಯ. ವರ್ಷದಲ್ಲಿ 7 ದಿನಕ್ಕಿಂತ ಕಡಿಮೆ ಇಲ್ಲದಂತೆ, 14 ದಿನ ಮೀರದಂತೆ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುವುದು ಇಲ್ಲಿನ ವಿಶೇಷ.

ಹಾಸನಾಂಬೆ ದೇಗುಲವನ್ನು ಚೋಳ ಅರಸ ಅಧಿಪತಿ ಬುಕ್ಕನಾಯಕನ ವಂಶಸ್ಥರಾದ ಕೃಷ್ಣಪ್ಪ ನಾಯಕ ಮತ್ತು ಸಂಜೀವ ನಾಯಕ ನಿರ್ಮಿಸಿದರೆಂಬ ಐತಿಹ್ಯವಿದೆ. ಹುತ್ತದ ರೂಪದ ನಿರಾಕಾರಿ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರ ದೇಗುಲದ ಸುತ್ತ ಕೋಟೆಯ ನಿರ್ಮಾಣವಿತ್ತು. ದೇಗುಲಕ್ಕೆ ಆಧುನಿಕತೆಯ ಸ್ಪರ್ಶ ಸಿಕ್ಕಿದ್ದು, ಗರ್ಭಗುಡಿಯ ಹೊರತಾಗಿ ಕೆಲವು ಮಾರ್ಪಾಡುಗಳಾಗಿವೆ. ರಾಜಗೋಪುರವೂ ಚೆಂದದ ಆಕರ್ಷಣೆ.

ಪೌರಾಣಿಕ ಕತೆಯೇನು?: ಹಾಸನಾಂಬೆ ಸಪ್ತ ಮಾತೃಕೆಯರ ಒಂದು ರೂಪ. ಸಪ್ತ ಮಾತೃಕೆಯರಾದ ಬ್ರಾಹ್ಮೀದೇವಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಿ ವಾರಾಣಸಿಯಿಂದ ದಕ್ಷಿಣಕ್ಕೆ ವಿಹಾರಾರ್ಥವಾಗಿ ಬಂದರಂತೆ. ಆಗಿನ ಸಿಂಹಾಸನಪುರಿಗೆ (ಹಾಸನ) ಬಂದಾಗ, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆ ನಿಂತರೆಂಬುದು ಪುರಾಣದ ಹಿನ್ನೆಲೆ. ಸಪ್ತ ಮಾತೃಕೆಯರ ಪೈಕಿ ವೈಷ್ಣವಿ, ಮಹೇಶ್ವರಿ, ಕೌಮಾರಿ ಹುತ್ತದ ಮಾದರಿಯಲ್ಲಿ ನೆಲೆಸಿದ ಸ್ಥಳವೇ ಹಾಸನಾಂಬೆ ದೇಗುಲ. ಈ ನಂಬಿಕೆಗೆ ಪುಷ್ಟಿ ನೀಡುವಂತೆ ಹಾಸನಾಂಬೆಯ ಗರ್ಭಗುಡಿಯಲ್ಲಿ ಮೂರು ಹುತ್ತದ ರೂಪಗಳಿವೆ.

ವರ್ಷಕ್ಕೊಮ್ಮೆ ದರ್ಶನವೇಕೆ?: ಇದಕ್ಕೂ ಒಂದು ಕತೆಯಿದೆ. ಕಾಶಿಯಿಂದ ಸಪ್ತ ಮಾತೃಕೆಯರ ಜೊತೆ ಅವರ ಕಿರಿಯ ಸಹೋದರ ಸಿದ್ದೇಶ್ವರನೂ ಬಂದ. ಸಪ್ತ ಮಾತೃಕೆಯರು ಕಟ್ಟುನಿಟ್ಟಿನ ವ್ರತ ಆಚರಿಸುತ್ತಾ ಮಡಿಯಲ್ಲಿದ್ದರೆ, ಸಿದ್ದೇಶ್ವರ ಮಡಿಯನ್ನು ಆಚರಿಸದೆ ಮೈಲಿಗೆಯವರಿಂದಲೂ ನೈವೇದ್ಯ ಸ್ವೀಕರಿಸುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸಪ್ತ ಮಾತೃಕೆಯರು “ನಮ್ಮ- ನಿನ್ನ ಭೇಟಿ ವರ್ಷಕ್ಕೊಮ್ಮೆ ಮಾತ್ರ’ ಎಂದು ದೂರವಾದರಂತೆ.

ಈ ಕಾರಣಕ್ಕಾಗಿ ಇಲ್ಲಿ ವರ್ಷಕ್ಕೊಮ್ಮೆ ದರ್ಶನ. ಬಾಗಿಲು ಮುಚ್ಚುವ ದಿನ ಮಾತ್ರ ದೇಗುಲದ ಬಳಿ ಕೆಂಡೋತ್ಸವದ ವೇಳೆ, ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರನ ಉತ್ಸವ ಮೂರ್ತಿಗಳ ಮೂಲಕ ಭೇಟಿಯಾಗುವರು. ಬಾಗಿಲು ಮುಚ್ಚುವಾಗ ಗರ್ಭಗುಡಿಯಲ್ಲಿ ದೇವಿಗೆ ಮುಡಿಸಿದ ಹೂವು, ಇರಿಸಿದ ನೈವೇದ್ಯ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ತಾಜಾವಾಗಿದ್ದು, ಹಚ್ಚಿದ ಹಣತೆಯೂ ಆರದೆ, ಉರಿಯುತ್ತಿರುತ್ತದೆ. ಇದು ಇಲ್ಲಿನ ವಿಶೇಷ.

ದರುಶನಕೆ ದಾರಿ…: ಹಾಸನಕ್ಕೆ ಬೆಂಗಳೂರಿನಿಂದ 180 ಕಿ.ಮೀ., ಮೈಸೂರಿನಿಂದ 120 ಕಿ.ಮೀ., ಮಂಗಳೂರಿನಿಂದ 160 ಕಿ.ಮೀ. ಶಿವಮೊಗ್ಗದಿಂದ 120 ಕಿ.ಮೀ. ಸಾಕಷ್ಟು ಬಸ್ಸುಗಳು, ರೈಲುಗಳ ಸಂಪರ್ಕವಿದೆ.

ಸೂಚನೆ: ಹಾಸನಾಂಬೆಯ ದರ್ಶನ ಅ.29ರವರೆಗೆ ಇರುತ್ತೆ. ಬಾಗಿಲು ಮುಚ್ಚುವುದು, ಅ.30ರ ಮಧ್ಯಾಹ್ನವೇ ಆದರೂ ಅಂದು ದರ್ಶನ ಇರುವುದಿಲ್ಲ.

* ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.