ಗೂಗಲ್‌ ಮ್ಯಾಪ್ಸ್‌ನಲ್ಲಿ ಅವಘಡಗಳು!


Team Udayavani, Nov 4, 2019, 4:08 AM IST

google-map

ಗೂಗಲ್‌ ಮ್ಯಾಪ್ಸ್‌ ನಕಾಶೆ ರೂಪದಲ್ಲಿ ಆಂಡ್ರಾಯ್ಡ್ಗೆ ಪರಿಚಯವಾದ ದಿನಗಳು ಬಹಳ ಹಳೆಯವು. ಆಗ ಲೈವ್‌ ಟ್ರಾಫಿಕ್‌ ಅಪ್‌ಡೇಟ್‌ಗಳು ಬಳಕೆದಾರರಿಗೆ ಸಿಗುತ್ತಿರಲಿಲ್ಲ. ಅಂದರೆ, ಬಳಕೆದಾರ ಯಾವ ಸಮಯದಲ್ಲಿ ಮ್ಯಾಪ್ಸ್‌ ತೆರೆಯುತ್ತಾನೋ ಆ ಸಮಯದ ಟ್ರಾಫಿಕ್‌ ವಿವರಗಳು ಲಭ್ಯವಿರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ. ಲೈವ್‌ ಟ್ರಾಫಿಕ್‌ ಅಪ್‌ಡೇಟ್‌ಗಳು ಸಿಗುತ್ತವೆ.

ಬಳಕೆದಾರ ಹೋಗುತ್ತಿರುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದರೆ ಗೂಗಲ್‌ ಮ್ಯಾಪ್ಸ್‌ ಸಂಚಾರ ದಟ್ಟಣೆ ಕಡಿಮೆ ಇರುವ ಬದಲಿ ಮಾರ್ಗವನ್ನು ಸೂಚಿಸುತ್ತದೆ. ಆದರೆ ಗೂಗಲ್‌ ಮ್ಯಾಪ್‌ನ ಸವಲತ್ತುಗಳು ಅಷ್ಟಕ್ಕೇ ನಿಲ್ಲುವುದಿಲ್ಲ. ಅನೇಕ ಮಂದಿಗೆ ಗೊತ್ತಿರಲಿಕ್ಕಿಲ್ಲ, ಅದರಲ್ಲಿ “ಆ್ಯಡ್‌ ಎ ರಿಪೋರ್ಟ್‌’ ಎಂಬ ಆಯ್ಕೆಯೊಂದಿದೆ. ಬಳಕೆದಾರ ತಾನು ಹೋಗುತ್ತಿರುವ ರಸ್ತೆಯಲ್ಲಿ ಏನಾದರೂ ಅವಘಡ ಸಂಭವಿಸಿರುವುದು ಕಂಡರೆ, ಅದನ್ನು ದಾಖಲಿಸಬಹುದು.

ಅಷ್ಟೇ ಅಲ್ಲ, ಸ್ಪೀಡ್‌ ಟ್ರ್ಯಾಪ್‌, ರಸ್ತೆ ರಿಪೇರಿ, ಡೈವರ್ಷನ್‌ನಂಥ ಮಾಹಿತಿಯನ್ನೂ ದಾಖಲಿಸಬಹುದು. ಇದರಿಂದಾಗಿ, ಅದೇ ರಸ್ತೆಯಲ್ಲಿ ಓಡಾಡುವ ಬಳಕೆದಾರರು ಮುಂಚಿತವಾಗಿ ಇಂಥ ಸಂಗತಿಗಳತ್ತ ಗಮನ ಹರಿಸಲು, ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ. ಇಷ್ಟು ದಿನ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದ “ಆ್ಯಡ್‌ ಎ ರಿಪೋರ್ಟ್‌’ ಸವಲತ್ತು ಇನ್ನುಮುಂದೆ ಐಫೋನ್‌ ಬಳಕೆದಾರರಿಗೂ ಸಿಗುತ್ತಿದೆ. ಅಂದಹಾಗೆ, ಆಂಡ್ರಾಯ್ಡ್ 10.27.2 ವರ್ಷನ್‌ನ ನಂತರ ಓಎಸ್‌ ಆವೃತ್ತಿಗಳಲ್ಲಿ ಮಾತ್ರವೇ ಈ ಸವಲತ್ತು ಲಭ್ಯ ಇರುವುದು.

ಸವಲತ್ತಿನ ಬಳಕೆ ಹೇಗೆ?: ಅವಘಡವನ್ನು ದಾಖಲಿಸಲು ಬಳಕೆದಾರ ಮಾಡಬೇಕಿರುವುದಿಷ್ಟೆ. ಗೂಗಲ್‌ ಮ್ಯಾಪ್ಸ್‌ ತೆರೆದು ತಾನು ಹೋಗುತ್ತಿರುವ ರೂಟನ್ನು ಎಂಟ್ರಿ ಮಾಡಬೇಕು. ಅಂದರೆ, ಹೊರಟಿರುವ ಸ್ಥಳ ಮತ್ತು ತಲುಪಬೇಕಾದ ಸ್ಥಳ, ಎರಡನ್ನೂ ನಮೂದಿಸಬೇಕು. ನಂತರ ನ್ಯಾವಿಗೇಷನ್‌ ಬಟನ್‌ ಒತ್ತಬೇಕು.

ಈಗ ಮೇಲೆ, ಬಲ ಬದಿಯಲ್ಲಿ ಮೈಕ್ರೊಫೋನ್‌ ಆಯ್ಕೆಯ ಪಕ್ಕದಲ್ಲಿ ಪ್ಲಸ್‌ ಚಿಹ್ನೆಯನ್ನು ಹೊಂದಿರುವ “ಆ್ಯಡ್‌ ಎ ರಿಪೋರ್ಟ್‌’ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ, ಒಂದು ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ಅನೇಕ ರೀತಿಯ ಅವಘಡಗಳ ಆಯ್ಕೆಗಳಿರುತ್ತವೆ. ಕಾಮಗಾರಿ, ರಸ್ತೆ ಮುಚ್ಚುವಿಕೆ, ಕೆಟ್ಟು ನಿಂತ ವಾಹನ, ನಿಧಾನಗತಿಯ ಟ್ರಾಫಿಕ್‌ ಹೀಗೆ… ಇವುಗಳಲ್ಲಿ ಬಳಕೆದಾರ ತನಗೆ ಬೇಕಾದ ಆಯ್ಕೆಯನ್ನು ಆರಿಸಿಕೊಳ್ಳಬಹುದು.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.