ಬೆಳಕಿನ ಜೊತೆಜೊತೆಗೇ ಬೆರಗಿನ ಹಾಡೂ ಇದೆ!


Team Udayavani, Nov 9, 2019, 5:11 AM IST

belakina

ಪ್ರತಿದಿನವೂ ಒಂದಿಲ್ಲೊಂದು ಹೊಸತನ್ನು ಸೃಜಿಸುವ ಪ್ರಕೃತಿ ಬಹಳ ದೊಡ್ಡ ಕಲೆಗಾರ. ಅನಂತ ಬಣ್ಣಗಳು ಇದರ ಜೋಳಿಗೆಯಲ್ಲಿ ಅಡಗಿದೆ. ಪ್ರಕೃತಿಯೆಂಬ ಈ ಕಿಲಾಡಿ, ಭೂಮಿ- ಆಕಾಶವನ್ನೇ ಕ್ಯಾನ್ವಾಸ್‌ ಮಾಡಿಕೊಂಡು ಅಪ್ರತಿಮ ಕಲಾಕೃತಿಗಳನ್ನು ನಮ್ಮ ಮುಂದಿಡುತ್ತದೆ ಮತ್ತು ನಮ್ಮೆಲ್ಲಾ ಹುಂಬತನ ಗಳನ್ನು, ಸೊಕ್ಕುಗಳನ್ನು, ಕ್ಷುಲ್ಲಕ ಎನ್ನಿಸುವಂತೆ ಮಾಡುತ್ತದೆ.

ಸಕಲ ಜೀವಾತ್ಮಗಳಿಗೆ ಆಶ್ರಯ ಕೊಟ್ಟು ಸಲಹುವ ತಾಯಿ, ಪ್ರತಿದಿನವೂ ಹೊಸತನ್ನು ಕಲಿಸುವ ಗುರು, ಬೇಸರಗಳನ್ನು ನುಂಗುವ ಸ್ನೇಹಿತ, ಎದೆ ಭಾರವನ್ನು ಕರಗಿಸಬಲ್ಲ ಆತ್ಮಸಖೀ ಎಲ್ಲವೂ ಆಗಿರುತ್ತದೆ. ದೂರದಿಂದ ಬರುವ ಬೆಳಕು ಕೇವಲ ಬಣ್ಣಗಳನ್ನು ಮಾತ್ರ ಹೊತ್ತು ತರುವುದಿಲ್ಲ . ಇಡೀ ಜೀವ ಸಂಕುಲಕ್ಕೆ ಚೈತನ್ಯವನ್ನು, ಲವಲವಿಕೆಯನ್ನು, ಬದುಕಿನ ನಂಬಿಕೆ ಯನ್ನೂ ತರುತ್ತದೆ.

ಬೆಳಕಿಲ್ಲದ ಜಗತ್ತನ್ನು ಊಹಿಸುವುದೂ ಅಸಾಧ್ಯ. ಸಂಜೆ ಮುಂಜಾವುಗಳಲ್ಲಂತೂ ಬೆಳಕೆಂಬುದು ಮಾಯೆಯಂತೆ, ಮಾಯಾವಿಯಂತೆ ದರ್ಶನ ಕೊಡುತ್ತದೆ. ಸ್ವರ್ಗಸೀಮೆ ಅಂದರೆ ಇದೇ ಏನೋ ಎಂಬಂಥ ದೃಶ್ಯ ವೈಭವವನ್ನು ತೆರೆದಿಡುತ್ತದೆ. ನಮ್ಮ ಎದೆ ಬಡಿತವನ್ನು ನಮ್ಮದೇ ಕಿವಿಗೆ ಕೇಳಿಸುವಂತೆ ಮಾಡುತ್ತದೆ.

ಅಲ್ಲೆಲ್ಲೋ ದೂರದಲ್ಲಿ ಹುಟ್ಟುತ್ತಿರುವಂತೆ, ಮುಳುಗುತ್ತಿರುವಂತೆ ಕಾಣಿಸುವ ಸೂರ್ಯನ ಹಳದಿ ಮಿಶ್ರಿತ ಕೆಂಪು ಕಿರಣ ಗಳು ಮೋಡ, ಮರ, ನೆಲ ನೀರನ್ನು ತಾಕಿ ದಾಗಿನ ದೃಶ್ಯಗಳನ್ನು ಸೆರೆ ಹಿಡಿಯಲು ಫೋಟೊಗ್ರಾಫ‌ರ್‌ಗಳು ಕಾದು ಕುಳಿತಿರು ತ್ತಾರೆ. ಒಂದು ಸುಂದರ ಸಂಜೆ- ಮುಂಜಾವುಗಳನ್ನು ಕ್ಲಿಕ್ಕಿಸುವ ಕನಸು ಪ್ರತೀ ಫೋಟೊಗ್ರಾಫ‌ರ್‌ನಿಗೆ ಇದ್ದೇ ಇರುತ್ತದೆ.

* ಪ್ರವರ ಕೊಟ್ಟೂರು

ಟಾಪ್ ನ್ಯೂಸ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.