ಕರೆಯದೇ ಬಂದ ನೆಂಟ…


Team Udayavani, Nov 19, 2019, 4:53 AM IST

cc-7

ನಮ್ಮ ವಿಶ್ವವಿದ್ಯಾಲಯದಲ್ಲಿ ಶಕ್ತಿ ಸಂಭ್ರಮ ಕಾರ್ಯಕ್ರಮವಿತ್ತು. ಹೀಗಾಗಿ, ಕಾರ್ಯಕ್ರಮದ ಪೋಟೋಗ್ರಫಿ ಮತ್ತು ವರದಿಯನ್ನು ಮಾಡಬೇಕಿತ್ತು. ಸಂಜೆ ಕಾಲೇಜಿನಲ್ಲಿಯೇ ಏಳು ಘಂಟೆ ಆಗಿ ಹೋಯ್ತು. ಆ ಸಮಯದಲ್ಲಿ ನಮ್ಮ ವಿಶ್ವವಿದ್ಯಾಲಯದಲ್ಲಿ ಯಾವುದೆ ಆಟೋ ಆಗಲಿ, ಬಸ್‌ ಆಗಲಿ ಬರುವುದಿಲ್ಲ. ಇದನ್ನು ನಾನೂ ಕೂಡ ಮರೆತು ಹೋದೆ. ಪುಣ್ಯಕ್ಕೆ, ಜೊತೆಗೆ ನನ್ನ ಇಬ್ಬರು ಗೆಳತಿಯರು ಕೂಡ ಇದ್ದರು.

ನಮ್ಮ ಮೂರು ಜನರ ಹಾಸ್ಟೆಲ್‌ ಸಿಟಿಯಲ್ಲಿ ಇತ್ತು. ಸುಮಾರು ಮೂರು, ನಾಲ್ಕು ಕಿ.ಮೀ ದೂರ. ಹೀಗಾಗಿ, ತೊರವಿಯವರೆಗೂ ನಡೆದುಕೊಂಡು ಹೋಗಿ, ಅಲ್ಲಿಂದ ಬಸ್‌ ಹಿಡಿಯುವುದು ಅನಿವಾರ್ಯ. ಹಾಗಾಗಿ, ಹೊರಟೆವು. ಒಂದಷ್ಟು ದೂರ ಹೋದ ನಂತರ ಒಂದು ರಿಕ್ಷಾ ಬಂದು ನಮ್ಮ ಮುಂದೆ ನಿಂತಿತು. ಚಾಲಕ, “ನಾನು, ತೊರವಿವರೆಗೂ ಹೊರಟ್ಟಿದ್ದಿನಿ. ಬನ್ನಿ’ ಎಂದು ಕರೆದ. ಅಪರಿಚಿತ ಮುಖ, ನಾವು ಆಟೋ ಬೇಕು ಅಂತಲೂ ಕೇಳಿರಲಿಲ್ಲ. ತಾನಾಗೇ ಏಕೆ ಕೇಳುತ್ತಿದ್ದಾನೆ? ಇದರ ಹಿಂದೆ ಏನೋ ಮರ್ಮ ಇರಬೇಕು… ಅನ್ನೋ ಅನುಮಾನ ಮೂವರಲ್ಲಿ ಮೂಡಿತು. “ಬೇಡ, ಇನ್ನೇನು ಸ್ವಲ್ಪ ದೂರ ಇದೆ. ನಡೆದುಕೊಂಡೇ ಹೋಗೀ¤ವಿ’ ಎಂದು ಹೇಳಿದೆವು. ಆದರೂ ಕೂಡಾ ಅವರು-” ಯಾಕೆ ನಡೆದುಕೊಂಡು ಹೋಗ್ತಿàರಾ? ಕತ್ತಲೆ ಬೇರೆ ಆಗಿದೆ, ಬನ್ನಿ’ ಎಂದು ಆಟೋ ಹತ್ತಲು ಒಪ್ಪುವವರೆಗೂ ಆತ ಹೋಗಲೇ ಇಲ್ಲ. ಕೊನೆಗೆ ಒಲ್ಲದ ಮನಸ್ಸಿನಿಂದ ಆಟೋದಲ್ಲಿ ಕುಳಿತುಕೊಂಡೆವು. ತೊರವಿಗೆ ಬರುತ್ತಿದಂತೆಯೇ ಇಳಿದು, ದುಡ್ಡು ಕೊಡಲು ಹೋದರೆ, ರಿಕ್ಷಾ ಡ್ರೈವರ್‌ ತೆಗೆದುಕೊಳ್ಳಲು ನಿರಾಕರಿಸಿದರು. ಆದರೂ, ನಾವು ಬಿಡದೆ ತುಂಬಾ ಒತ್ತಾಯ ಮಾಡಿ ದುಡ್ಡು ಕೊಟ್ಟೆವು. ಆಗ ಅವರು ಹೇಳಿದ್ದು ; “ನಾನು ನಿಮ್ಮನ್ನು ದುಡ್ಡಿಗೋಸ್ಕರ ಕರೆದುಕೊಂಡು ಬಂದಿಲ್ಲ. ನಾನು ಕೂಡಾ ಈ ಕಡೆ ಹೊರಟ್ಟಿದ್ದೆ. ನೀವು ಕತ್ತಲೆಯಲ್ಲಿ ನಡೆದುಕೊಂಡು ಬರುತ್ತಿರುವುದರನ್ನು ನೋಡಿ ಬನ್ನಿ ಅಂದಿದ್ದು ‘ ಎಂದು ಹೇಳಿ ಹೊರಟುಹೋದರು. ಅವರ ಮಾತು ಕೇಳಿ, ನಮ್ಮ ಊಹೆಗಳೆಲ್ಲವೂ ತಲೆಕೆಳಗು ಆಯಿತು. ಜೊತೆಗೆ, ನಮಗೆ ಒಂದು ಥರ ಮುಜುಗರ ಅನಿಸಿತು. ಈ ಘಟನೆ ನಮಗೆ ಕಲಿಸಿದ ಪಾಠ ಏನೆಂದರೆ, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಎಲ್ಲರನ್ನೂ ಅನುಮಾನದಿಂದ ನೋಡುವುದು ತರವಲ್ಲ ಅನ್ನುವುದು.

ಏನೇ ಆದರೂ, ಕರೆಯದೇ ಬಂದ ನೆಂಟನಂತೆ ಬಂದು, ನಮಗೆ ನೆರವಾದ ಆಟೋ ಚಾಲಕನಿಗೆ ನಮೋನಮಃ.

ದೀಪಾ ಮಂಜರಗಿ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.