ಹಳೇ ಬ್ಯಾಟು ಹಳೇ ಚೆಂಡು


Team Udayavani, Dec 28, 2019, 6:03 AM IST

benki

ಬೆಂಕಿ ಚೆಂಡಿಗೆ ಬಿರುಗಾಳಿ ಉತ್ತರ
80ರ ದಶಕವನ್ನೂ, ಕ್ರಿಕೆಟ್‌ ಲೋಕದ ಸ್ವರ್ಣಯುಗ ಎಂದು ಕರೆಯುವುದುಂಟು. ಏಕೆಂದರೆ ಕ್ರಿಕೆಟ್‌ ಜಗತ್ತು ಕಂಡಂಥ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌, ಬೌಲರ್‌, ವಿಕೆಟ್‌ ಕೀಪರ್‌ಗಳೆಲ್ಲ ಆ ದಿನಗಳಲ್ಲಿ ಪ್ರತಿ ತಂಡದಲ್ಲೂ ಇದ್ದರು. ವೇಗದ ಬೌಲರ್‌ಗಳು ಎಕ್ಸ್‌ಪ್ರೆಸ್‌ ವೇಗದಲ್ಲಿ ಎಸೆದ ಚೆಂಡಿನ ವೇಗ ಎಷ್ಟಿರುತ್ತಿತ್ತು ಎಂದರೆ ಎಷ್ಟೋ ಸಲ ವಿಕೆಟ್‌ಗಳು ಎರಡು ತುಂಡಾಗಿರುತ್ತಿದ್ದವು. ಇಂಥ ಬಿರುಗಾಳಿ ವೇಗದ ಬೌಲಿಂಗ್‌ಗೆ ಕೇರ್‌ ಮಾಡದೆ ಆಡುವ ಪ್ರಚಂಡರೂ ಇದ್ದರು. ಅಂಥವರ ಪೈಕಿ ನಮ್ಮ ಸಂದೀಪ್‌ ಪಾಟೀಲ್‌ಗೆ ಮೊದಲ ಸ್ಥಾನ. 1980 ರಿಂದ 86ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದ ಪಾಟೀಲ್‌, ಬಿಡುಬೀಸಿನ ಹೊಡೆತಗಳಿಂದಲೇ ಪ್ರಸಿದ್ಧರಾಗಿದ್ದರು. ಅವತ್ತಿನ ಸಂದರ್ಭದಲ್ಲಿ ಇಂಗ್ಲೆಂಡಿನ ಬಾಬ್‌ ವಿಲ್ಲೀಸ್‌ಗೆ ಬೆಂಕಿ ಚೆಂಡಿನ ಬೌಲರ್‌ ಎಂಬ ಹೆಸರಿತ್ತು.

ಆತ ವೇಗವಾಗಿ ಎಸೆದ ಚೆಂಡು ವಿಕೆಟ್‌ಗಳನ್ನು ಮುರಿದು ಹಾಕುವುದು ಮಾಮೂಲಿಯಾಗಿತ್ತು. ಹೆಚ್ಚಿನ ಬ್ಯಾಟ್ಸ್‌ಮನ್‌ಗಳು ಆತನಿಗೆ ಹೆದರಿಕೊಂಡೇ ಬ್ಯಾಟ್‌ ಮಾಡುತ್ತಿದ್ದರು. ಈ ಕಾರಣದಿಂದಲೇ ಬಾಬ್‌ ವಿಲ್ಲೀಸ್‌ಗೆ ಒಂದು ಓವರ್‌ನಲ್ಲಿ ಎರಡಕ್ಕಿಂತ ಹೆಚ್ಚು ಬೌಂಡರಿ ಹೊಡೆಯುವ ಸಾಹಸವನ್ನೂ ಯಾರು ಮಾಡುತ್ತಿರಲಿಲ್ಲ. ಆದರೆ ಅಂಥದೊಂದು ನಂಬಿಕೆಯನ್ನು ಉಲ್ಟಾ ಮಾಡಿದಾತ ಸಂದೀಪ್‌ ಪಾಟೀಲ್‌, 1982ರಲ್ಲಿ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ವಿಲ್ಲೀಸ್‌ ಅವರ ಒಂದು ಓವರ್‌ನ ಎಲ್ಲ ಎಸೆತಗಳನ್ನೂ ಬೌಂಡರಿ ಗೆರೆ ದಾಟಿಸಿದರು. ಈ ಮೂಲಕ ಟೆಸ್ಟ್‌, ಕ್ರಿಕೆಟ್‌ನಲ್ಲಿ 1 ಓವರ್‌ನ ಎಲ್ಲ ಎಸೆತಗಳನ್ನು ಬೌಂಡರಿ ಬಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಅನ್ನಿಸಿಕೊಂಡರು.

ಅಹಂ ತಲೆಗೇರಿದಾಗ !
ಕೆಲವೊಮ್ಮೆ ದಿಢೀರ್‌ ಸಿಗುವ ಯಶಸ್ಸು , ಕೆಲವರಿಗೆ ಶಾಪದಂತೆ ಪರಿಣಮಿಸುವುದಿದೆ. ಹೇಗಿದ್ದರೂ ಗೆದ್ದಿದ್ದೇನೆ, ಇದೇ ಜಗತ್ತು ನನ್ನನ್ನು ಬೆರಗಿನಿಂದ, ಅಭಿಮಾನದಿಂದ ನೋಡುತ್ತದೆ. ನನ್ನ ಆಟಕ್ಕೆ ಮಾಂತ್ರಿಕ ಶಕ್ತಿಯಿದೆ. ನಾನು ಚೆಂಡೆಸೆದರೆ ಸಾಕು: ವಿಕೆಟ್‌ ಬೀಳುತ್ತದೆ ಎಂಬ ಭ್ರಮೆಯಲ್ಲಿ ಆಟಗಾರರು ಮೈ ಮೆರೆಯುವುದುಂಟು. ಆದರೆ ಕಾಲವೆಂಬುದು ಯಾರಿಗೂ ಕಾಯುವುದಿಲ್ಲ. ಯಾರ ವಿಷಯದಲ್ಲೂ ರೀಯಾಯಿತಿ ತೋರಿಸುವುದಿಲ್ಲ. ಅಹಂಕಾರದ ಮಧ್ಯ ಉಳಿದವನನ್ನು ಒಮ್ಮೆ ತಿರಸ್ಕಾರದಿಂದ ನೋಡಿ ಮುಂದೆ ಹೋಗುತ್ತದೆ, ಅಷ್ಟೆ.

ಹೀಗೆಲ್ಲ ಅಂದುಕೊಂಡಾಗಲೇ ನೆನಪಾಗುವಾತ ನರೇಂದ್ರ ಹಿರ್ವಾನಿ. 1988ರಿಂದ 1996ರವರಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಹಿರ್ವಾನಿಗೆ ಸಿಕ್ಕಿತ್ತು. ಆರಂಭದಲ್ಲಿ ಈತ ಲೆಗ್‌ಸ್ಪಿನ್‌ ಬೌಲಿಂಗ್‌ನಿಂದ ಆ ದಿನಗಳ ಪ್ರಚಂಡ ಬೌಲರ್‌ಗಳನ್ನು ಔಟ್‌ ಮಾಡಿದ್ದರು. ಮೇಲಿಂದ ಮೇಲೆ 3,4 ವಿಕೆಟ್‌ ಪಡೆದದ್ದು ನಿಜ. ಆದರೆ ಈ ಯಶಸ್ಸು ಆತನ ತಲೆ ತಿರುಗುವಂತೆ ಮಾಡಿತು. ಎಷ್ಟೇ ಹೆಸರು ಮಾಡಿದರು ನಿರಂತರವಾಗಿ ಅಭ್ಯಾಸ ಮಾಡಲೇಬೇಕು ಎಂಬುದನ್ನು ಈತ ಮರೆತೇಬಿಟ್ಟ. ಪರಿಣಾಮ ಏನಾಯಿಂತೆಂದರೆ, ಅದುವರೆಗೂ ಟೆಸ್ಟ್‌ನಲ್ಲಿ ಐದೈದು ವಿಕೆಟ್‌ ಪಡೆಯುತ್ತಿದ್ದ ಆತ, ನಂತರದಲ್ಲಿ ತಂಡದಿಂದಲೇ ಹೊರಬಿದ್ದರು.

ಟಾಪ್ ನ್ಯೂಸ್

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.