2,000 ರೂ. ಮುಖಬೆಲೆಯ ನಕಲಿ ನೋಟು ಹೆಚ್ಚಳ
ಮುದ್ರಣಗೊಂಡ 53 ದಿನಗಳಲ್ಲಿ ದೇಶಾದ್ಯಂತ ನಕಲಿ ನೋಟು
Team Udayavani, Jan 18, 2020, 5:44 AM IST
ದೇಶದಲ್ಲಿ 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳನ್ನು 2016ರ ನವೆಂಬರ್ 8ರಂದು ಅಮಾನ್ಯಿಕರಣ ಗೊಳಿಸಲಾಗಿತ್ತು. ಬದಲಿಗೆ 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿ ಸಲಾಗಿತ್ತು. ಇದರಲ್ಲಿ ಭದ್ರತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುಲಭವಾಗಿ ನಕಲಿ ಮಾಡಲು ಸಾಧ್ಯವಿಲ್ಲ. ಮಾತ್ರವಲ್ಲದೇ ಇದರಿಂದ ಕಳ್ಳನೋಟುಗಳ ಹಾವಳಿ ಮತ್ತು ಕಪ್ಪುಹಣ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಸರಕಾರ ಮಧ್ಯರಾತ್ರಿ ಮಾಡಿದ ಭಾಷಣದಲ್ಲಿ ಉಲ್ಲೇಖೀಸಿತ್ತು. ಆದರೆ ಕೇಂದ್ರ ಸರಕಾರದ ಎನ್ಸಿಆರ್ಬಿ ವರದಿ ಪ್ರಕಾರ 2017- 18ರಲ್ಲಿ ವಶಪಡಿಸಿಕೊಳ್ಳಲಾದ ಅತೀ ಹೆಚ್ಚು ನಕಲಿ ನಗದಿನಲ್ಲಿ 2 ಸಾವಿರದ ನೋಟುಗಳೇ ಹೆಚ್ಚು ಎಂದು ಹೇಳಿದೆ.
46.06 ಕೋಟಿ
2017-18ರ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ನಕಲಿ ನೋಟುಗಳ ಮೌಲ್ಯ ಒಟ್ಟು 46.06 ಕೋಟಿ.
ಶೇ. 56.31
ವಶಪಡಿಸಿಕೊಳ್ಳಲಾದ ಒಟ್ಟು ನೋಟು ಗಳಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟು ಶೇ. 56.31.
ಯಾವ ರಾಜ್ಯಗಳಲ್ಲಿ ಶೂನ್ಯ
ಝಾರ್ಖಂಡ್, ಮೇಘಾಲಯ, ಸಿಕ್ಕಿಂ. ಆಗಿನ 6 ಕೇಂದ್ರಾಡಳಿತ ಪ್ರದೇಶಗಳು.
ಶೇ. 26.28
ದೇಶದಲ್ಲಿ ವಶಪಡಿಸಿಕೊಳ್ಳಲಾದ 2000 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ. 26.28ರಷ್ಟು ಪಾಲು ಗುಜರಾತ್ನದ್ದು.
28.10 ಕೋಟಿ
2017ರಲ್ಲಿ ವಶಪಡಿಸಿಕೊಳ್ಳಲಾದ ನೋಟುಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಶೇ. 53.30. ಇವುಗಳ ಒಟ್ಟು ಮೌಲ್ಯ 28.10 ಕೋಟಿ.
ಶೇ. 61.01
2018ರಲ್ಲಿ ಶೇ. 61.01ರಷ್ಟು ನಕಲಿ ನೋಟುಗಳು 2 ಸಾವಿರ ರೂ. ಮುಖಬೆಲೆಯದ್ದಾಗಿತ್ತು. ಇದು 2017ರ ಗಾತ್ರಕ್ಕಿಂತ ಹೆಚ್ಚು.
ಗುಜರಾತ್ನಲ್ಲಿ ಅತೀ ಹೆಚ್ಚು
ಗುಜರಾತ್ನಲ್ಲಿ ಅತೀ ಹೆಚ್ಚು ನಕಲಿ ನೋಟುಗಳು ಕಂಡುಬಂದಿದ್ದವು. 2000 ರೂ. ಮುಖಬೆಲೆಯ ಸುಮಾರು 34,680 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಒಟ್ಟು ಮೌಲ್ಯ 6.93 ಕೋಟಿ.
ನೋಟ್ಬ್ಯಾನ್ನ “ಆ 53 ದಿನ’
ಪ್ರಮುಖವಾಗಿ 5 ರಾಜ್ಯಗಳಲ್ಲಿ ನೋಟ್ಬ್ಯಾನ್ ಆದ 53 ದಿನದಲ್ಲಿ ನಕಲಿ ನೋಟುಗಳು ಚಲಾವಣೆಯಲ್ಲಿದ್ದವು. ವಶಪಡಿಸಿಕೊಳ್ಳಲಾದ 2,272 ನಕಲಿ ನೋಟುಗಳ ಪೈಕಿ ಶೇ. 1,300 ನೋಟುಗಳು ಗುಜರಾತ್ನಲ್ಲಿದ್ದವು. ಪಂಜಾಬ್ನಲ್ಲಿ 548, ಕರ್ನಾಟಕ 254, ತೆಲಂಗಾಣ 114, ಮಹಾರಾಷ್ಟ್ರ 27 ಮತ್ತು ಇತರ ರಾಜ್ಯಗಳಲ್ಲಿ ಒಟ್ಟು 29 ನೋಟುಗಳು ನಕಲಿಯಾಗಿದ್ದವು. ನೋಟು ಬ್ಯಾನ್ ಆದ 10 ದಿನದಲ್ಲಿ ನಕಲಿ ನೋಟುಗಳು ಓಡಾಡುತ್ತಿದ್ದವು.
ಟಾಪ್ 4 ರಾಜ್ಯಗಳು
ಗುಜರಾತ್ ಬಳಿಕ ಪಶ್ಚಿಮ ಬಂಗಾಲ ದ್ವಿತೀಯ ಸ್ಥಾನದಲ್ಲಿದೆ. ಇದು ಸುಮಾರು 3.5 ಕೋಟಿ, ತಮಿಳುನಾಡು 2.8 ಕೋಟಿ, ಉತ್ತರ ಪ್ರದೇಶ 2.6 ಕೋಟಿ ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳನ್ನು ಹೊಂದಿದ್ದವು.
2000 ನೋಟು ಮುದ್ರಣ (ಆರ್ಬಿಐ ಅಂಕಿ-ಅಂಶ)
2016-173,542.991 ಮಿಲಿಯನ್
2017-18111.507 ಮಿಲಿಯನ್
2018-1946.690 ಮಿಲಿಯನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ
Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್ಬಾಲ್ನ ತೆಂಡುಲ್ಕರ್ ಚೆಟ್ರಿ
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್!: ಟಿಕೆಟ್ ವಂಚಿತ ರಘುಪತಿ ಭಟ್ ಬಿರುನುಡಿ
POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್ ಆಕ್ರಮಿತ ಕಾಶ್ಮೀರ ಜನ
Karachi ಭಾರತೀಯ ಮಹಿಳೆಯ ವಡಾಪಾವ್, ಪಾವ್ಭಾಜಿ ಕಮಾಲ್!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ