ಬರಹಗಾರ್ತಿಯಾಗಿಸಿದ ಪತ್ರಿಕೆ
Team Udayavani, Jan 18, 2020, 6:29 AM IST
ಉದಯವಾಣಿ ಪತ್ರಿಕೆಯನ್ನು ಬಹಳ ವರ್ಷಗಳಿಂದ ಓದುತ್ತಿದ್ದೇನೆ. ನನಗೆ ಇಷ್ಟವಾಗಲು ಹಲವು ಕಾರಣಗಳಿವೆ. ಉದಯವಾಣಿಯ ಅಕ್ಷರ ಹಾಗೂ ಪುಟ ವಿನ್ಯಾಸ ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಆಕರ್ಷಕ. ಕನ್ನಡ ಭಾಷೆಯ ಯಾವುದಾ ದರೂ ಪದ ಬರೆಯುವಾಗ ಅದರ ಸರಿ ಯಾದ ರೂಪ ಏನು ಎಂಬ ಬಗ್ಗೆ ಗೊಂದಲ ಬಂದಾಗ ಉದಯವಾಣಿಯನ್ನು ಪರಾಮರ್ಶಿಸುತ್ತಿದ್ದೆ. ಯಾಕೆಂದರೆ ಬಳಸುವ ಪದಗಳು ಭಾಷಾ ಶುದ್ಧತೆಯಿಂದ ಕೂಡಿರುತ್ತವೆ.
ನಾನು ಮೊದಲು ಪುಸ್ತಕಗಳ ಜತೆ ಉದಯವಾಣಿಯನ್ನೂ ಓದುತ್ತಿದ್ದೆ. ವಿದ್ಯಾರ್ಥಿಯಾಗಿದ್ದಾಗ ಪ್ರಬಂಧ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನಗಳಿಸುತ್ತಿದ್ದೆ. ಆದರೆ ಇತರ ರೀತಿಯ ಸಾಹಿತ್ಯದ ಬರವ ಣಿಗೆ ನನಗೆ ಅಪರಿಚಿತವಾಗಿತ್ತು. ಅಂತಹ ಬರಹಕ್ಕೆ ನಾನು ಪ್ರಯತ್ನಿ ಸಿಯೇ ಇರಲಿಲ್ಲ. ನನ್ನನ್ನು ಬರಹ ಲೋಕಕ್ಕೆ ಕೈಹಿಡಿದು ನಡೆಸಿದ್ದು ಉದಯವಾಣಿ. ಸಾಪ್ತಾಹಿಕ ಸಂಪದದಲ್ಲಿ “ನೀವೂ ಬರೆಯಿರಿ’ ಎಂಬ ಸೂಚನೆಯನ್ನು ಓದಿ (ಅದರಲ್ಲಿ ತಿಳಿಸಿದ ಮಾದರಿಯಲ್ಲಿ) ನಾನು ಬರೆದ ಹಾಗೂ ಕಳಿಸಿದ ಪ್ರಥಮ ಬರಹ ಒಂದು ಅತಿ ಸಣ್ಣ ಕತೆ ಪ್ರಕಟ ವಾಯಿತು. ನನಗಾದ ಖುಷಿ ಅಷ್ಟಿಷ್ಟಲ್ಲ. ಅದಕ್ಕೆ ಸಂಭಾವನೆಯೂ ಬಂತು. ನಾನೂ ಬರೆಯಬಲ್ಲೆ ಎಂಬ ನಂಬಿಕೆ ನನ್ನಲ್ಲಿ ಮೂಡಿಸಿದ್ದು ಉದಯವಾಣಿ. ಅನಂತರ ಮಹಿಳಾ ಸಂಪದ, ಸಾಪ್ತಾಹಿಕ, ಚಿನ್ನಾರಿ, ಅವಳು, ಸುದಿನ, ಜೋಶ್ ಹೀಗೆ ವಿವಿಧ ಪುರವಣಿಗಳಿಗೆ ಬರಹಗಳನ್ನು ಕಳಿಸುತ್ತಾ ಬಂದೆ. ಹೆಚ್ಚಿನ ಎಲ್ಲವೂ ಪ್ರಕಟವಾದವು. ಈಗ ನಾನು ವಿವಿಧ ಪತ್ರಿಕೆಗಳಿಗೆ ಬರೆಯುತ್ತೇನೆ. ಸಂಪಾದಕೀಯ ಪುಟದಲ್ಲೂ ನನ್ನ ಬರಹಗಳು ಪ್ರಕಟವಾದವು. ಮಹಿಳಾ ಸಂಪದದಲ್ಲಿ ಒಂದು ಅಂಕಣ ಬರೆಯುವ ಅವಕಾಶವನ್ನೂ ಪತ್ರಿಕೆ ನನಗೆ ನೀಡಿತು. ವಿವಿಧ ರೀತಿಯ ಬರಹಗಳ ನನ್ನ ಆರು ಪುಸ್ತಕಗಳು ಹೊರಬಂದಿವೆ. ಅಂದರೆ ನಾನು ಸಾಹಿತ್ಯ ಲೋಕ ಪ್ರವೇಶಿಸಲು ಕಾರಣವಾದ, ಪ್ರೇರಣೆಯಾದ ಉದಯವಾಣಿ ನನ್ನನ್ನು ಒಂದು ಲೇಖಕಿಯಾಗುವ ಮಟ್ಟಿಗೆ ಬೆಳೆಸಿದೆ. ನನ್ನ ಬಿಡುವಿನ ವೇಳೆಯನ್ನು ಮೌಲ್ಯಯುತವಾಗಿಸಿದ, ಬರಹದ ಮೂಲಕ ಹೊಸದೊಂದು ಲೋಕವನ್ನು ಪ್ರವೇಶಿಸಲು ಅನುವು ಮಾಡಿ ಕೊಟ್ಟ ಉದಯವಾಣಿಯನ್ನು ಮರೆಯಲು ಸಾಧ್ಯವಿಲ್ಲ. ಹೊಸ ಬರಹ ಗಾರರಿಗೆ ಅವಕಾಶ ನೀಡಿ, ಬೆಳೆಸಿದ ಪತ್ರಿಕೆಗೆ ತುಂಬಾ ಧನ್ಯವಾದಗಳು. ಮುಂದೆ ಇನ್ನಷ್ಟೂ ಜನರನ್ನು ಆಕರ್ಷಿಸಿ, ಬೆಳೆಯಲಿ, ಬೆಳಗಲಿ.
ಜೆಸ್ಸಿ ಪಿ.ವಿ. ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smiling Buddha; ಬುದ್ಧ ನಕ್ಕ ಗಳಿಗೆಗೆ ಸ್ವರ್ಣ ಸಂಭ್ರಮ; ಮೊದಲ ಪರಮಾಣು ಪರೀಕ್ಷೆಗೆ 50 ವರ್ಷ
Sunil Chhetri ಸರಿಸಾಟಿಯಿಲ್ಲದ ಆಟಗಾರ; ಭಾರತ ಫುಟ್ಬಾಲ್ನ ತೆಂಡುಲ್ಕರ್ ಚೆಟ್ರಿ
ಈಗಿನ ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್!: ಟಿಕೆಟ್ ವಂಚಿತ ರಘುಪತಿ ಭಟ್ ಬಿರುನುಡಿ
POK ಆಜಾದಿ ರಣಕಹಳೆ! ಪಾಕಿಸ್ಥಾನ ದೌರ್ಜನ್ಯ ವಿರುದ್ಧ ಬೀದಿಗಿಳಿದ ಪಾಕ್ ಆಕ್ರಮಿತ ಕಾಶ್ಮೀರ ಜನ
Karachi ಭಾರತೀಯ ಮಹಿಳೆಯ ವಡಾಪಾವ್, ಪಾವ್ಭಾಜಿ ಕಮಾಲ್!
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Gundmi Toll Plaza ಸ್ಥಳೀಯರಿಗೆ ಟೋಲ್ ಬರೆ; ಟೋಲ್ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ
Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ
D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ; ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್’
Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ ರಕ್ಷಣೆ
Chhattisgarh; ನಿಲ್ಲದ ನಕ್ಸಲ್ ಬೇಟೆ: ಓರ್ವನ ಹತ್ಯೆ